ಸರಕಾರಕ್ಕೆ ಸಂಪರ್ಕಿತರ ಪತ್ತೆ, ನಿಗಾ ತಲೆನೋವು: ಗ್ರಾಮಗಳಲ್ಲಿ ಸೋಂಕು ಪೀಡಿತರ ಸಂಪರ್ಕ ಹೆಚ್ಚು
Team Udayavani, May 30, 2021, 7:20 AM IST
ಬೆಂಗಳೂರು: ಹಳ್ಳಿಗಳಲ್ಲಿ ಕೊರೊನಾ ತೀವ್ರತೆ ಮಾತ್ರವಲ್ಲದೆ ಸೋಂಕು ಪೀಡಿತರ ಸಂಪರ್ಕ ಹೊಂದಿದವರ ಪ್ರಮಾಣ ಹೆಚ್ಚುತ್ತಿರುವುದು ಆರೋಗ್ಯ ಇಲಾಖೆಗೆ ತಲೆನೋವಾಗಿದೆ.
ಕೊರೊನಾ ಹೆಚ್ಚಿರುವ ನಗರಗಳಲ್ಲಿ ಸದ್ಯ ಒಬ್ಬ ಸೋಂಕುಪೀಡಿತನಿಗೆ ಮೂವರು ಸಂಪರ್ಕಿತರು ಸಿಗುತ್ತಿದ್ದಾರೆ. ಆದರೆ ಆಪ್ತತೆ ಹೆಚ್ಚಿರುವ, ಕೊರೊನಾ ಅರಿವಿನ ಕೊರತೆ ಕಡಿಮೆ ಇರುವ ಹಳ್ಳಿಗಳಲ್ಲಿ ಸಂಪರ್ಕಿತರು ನಾಲ್ಕು ಪಟ್ಟು ಹೆಚ್ಚಿದ್ದಾರೆ. ಕಳೆದ ಒಂದು ವಾರದಲ್ಲಿ ರಾಜ್ಯದ 17 ಜಿಲ್ಲೆಗಳಲ್ಲಿ ತಲಾ ಒಬ್ಬ ಸೋಂಕು ಪೀಡಿತನಿಗೆ 10ಕ್ಕೂ ಅಧಿಕ ಸಂಪರ್ಕಿತರು ಪತ್ತೆಯಾಗಿದ್ದಾರೆ. ಮಂಡ್ಯ, ದಾವಣಗೆರೆ ಜಿಲ್ಲೆಗಳಲ್ಲಿ ಈ ಪ್ರಮಾಣ ಶೇ. 20ರಷ್ಟಿದೆ.
ಕೊರೊನಾ ವಾರ್ ರೂಮ್ ಅಂಕಿಅಂಶಗಳ ಪ್ರಕಾರ, ಕಳೆದ ಒಂದು ವಾರದಲ್ಲಿ ಒಬ್ಬ ಕೊರೊನಾ ಪೀಡಿತನಿಗೆ ಮಂಡ್ಯದಲ್ಲಿ 21, ದಾವಣಗೆರೆ 20, ಗದಗ, ಧಾರವಾಡ ಮತ್ತು ಬೀದರ್ ತಲಾ 17, ರಾಯಚೂರು 15, ಚಾಮರಾಜನಗರ 14, ಹಾವೇರಿ 13, ಕೋಲಾರ ಮತ್ತು ತುಮಕೂರು ತಲಾ 12, ಚಿಕ್ಕಬಳ್ಳಾಪುರ ಮತ್ತು ಕೊಡಗು ತಲಾ 11, ಕಲಬುರಗಿ, ಉತ್ತರ ಕನ್ನಡ, ಶಿವಮೊಗ್ಗ, ಚಿತ್ರದುರ್ಗ ಮತ್ತು ದಕ್ಷಿಣ ಕನ್ನಡದಲ್ಲಿ ತಲಾ 10 ಮಂದಿ ಸಂಪರ್ಕಿತರು ಪತ್ತೆಯಾಗಿದ್ದಾರೆ.
ಕ್ವಾರಂಟೈನ್ ದೊಡ್ಡ ಸವಾಲು
ಈ ಸಂಪರ್ಕಿತರು 14 ದಿನ ಕ್ವಾರಂಟೈನ್ನಲ್ಲಿರಬೇಕು. ಆದರೆ ಗ್ರಾಮೀಣ ಭಾಗದಲ್ಲಿ ಸೋಂಕು ಪೀಡಿತರಿಗೆ ಆರೈಕೆ, ಚಿಕಿತ್ಸೆ, ಸಂಪರ್ಕಿತರಿಗೆ ಕಡ್ಡಾಯ ಕ್ವಾರಂಟೈನ್ ಕಷ್ಟವಾಗುತ್ತಿದೆ. ಮನೆಗಳೇ ಇಲ್ಲದ ಅನೇಕರಿದ್ದು, ನಿಗಾ ಕಷ್ಟವಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪರೀಕ್ಷೆಯೂ ಸಾಧ್ಯವಾಗುತ್ತಿಲ್ಲ
ಸಂಪರ್ಕಿತರ ಕಡ್ಡಾಯ ಪರೀಕ್ಷೆ ನಡೆಯಬೇಕು ಎಂದು ಕೇಂದ್ರ ಸರಕಾರ ತಿಳಿಸಿದೆ. ಪ್ರಯೋಗಾಲಯ ಮತ್ತು ರ್ಯಾಪಿಡ್ ಕಿಟ್ ಕೊರತೆಯಿಂದ ಬಹುತೇಕ ಜಿಲ್ಲೆಗಳಲ್ಲಿ ಇದಾಗುತ್ತಿಲ್ಲ. ಸಂಪರ್ಕಿತರ ಕ್ವಾರಂಟೈನ್ ಮತ್ತು ಪರೀಕ್ಷೆ ಸಾಧ್ಯವಾಗದಿದ್ದರೆ ಸೋಂಕು ಹೆಚ್ಚಳವಾಗುತ್ತದೆ. ಶೀಘ್ರವೇ ಈ ಬಗ್ಗೆ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lokayukta; 25 ಸಾವಿರ ರೂ.ಲಂಚ ಪಡೆಯುವಾಗ ಬಲೆಗೆ ಬಿದ್ದ ಎಡಿಎಲ್ಆರ್!!
Railway: ಶೀಘ್ರವೇ ಬೆಂಗಳೂರು-ಮೈಸೂರು, ತುಮಕೂರು ನಮೋ ರ್ಯಾಪಿಡ್ ರೈಲು: ರೈಲ್ವೆ ಸಚಿವ
R. Ashoka ಪ್ರಕರಣವನ್ನು ಮುಡಾಕ್ಕೆ ಹೋಲಿಸಿದ್ದು ಸರಿಯಲ್ಲ:ಜಗದೀಶ ಶೆಟ್ಟರ್
Bidar; ತೊಗರಿ ಹೊಲದಲ್ಲಿ 700ಕ್ಕೂ ಹೆಚ್ಚು ಗಾಂಜಾ ಗಿಡಗಳು!; ಪೊಲೀಸ್ ದಾಳಿ
Hindalga Jail: ಕೈದಿ ಮೇಲೆ ನಾಲ್ವರು ವಿಚಾರಣಾಧೀನ ಕೈದಿಗಳಿಂದ ಹಲ್ಲೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Sulya: ಅವಾಚ್ಯ ಮಾತು: ಮಹಿಳೆಯಿಂದ ಪೊಲೀಸರಿಗೆ ದೂರು
Udupi; ಗೀತಾರ್ಥ ಚಿಂತನೆ 57: ದುರ್ಯೋಧನನಲ್ಲಿ ಮಾನಸಿಕ ಸ್ಥೈರ್ಯ ಕುಸಿತ
Gwalior T20: ಬಾಂಗ್ಲಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ
BBK11: ಮೊದಲ ವಾರದಲ್ಲೇ ಬಿಗ್ ಬಾಸ್ ಆಟ ಮುಗಿಸಿದ ಯಮುನಾ ಶ್ರೀನಿಧಿ!
By Polls Fight: ಡಿಸಿಎಂ ಪದೇ ಪದೇ ಬರ್ತಿರೋದು ಕುರ್ಚಿಗಾಗಿ ಅಲ್ವಾ?: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.