ಗರಿಷ್ಠ ರಾಜಸ್ವ ಸಂಗ್ರಹವಿದ್ದರೂ ತೀವ್ರ ಸಿಬಂದಿ ಕೊರತೆ: ಇದು ಮಂಗಳೂರು ಆರ್‌ಟಿಒ ವ್ಯಥೆ

ಮೈಸೂರಿನಿಂದ ಬರಬೇಕು ಪ್ರಭಾರ ಆರ್‌ಟಿಒ

Team Udayavani, Feb 3, 2023, 7:55 AM IST

ಗರಿಷ್ಠ ರಾಜಸ್ವ ಸಂಗ್ರಹವಿದ್ದರೂ ತೀವ್ರ ಸಿಬಂದಿ ಕೊರತೆ: ಇದು ಮಂಗಳೂರು ಆರ್‌ಟಿಒ ವ್ಯಥೆ

ಮಂಗಳೂರು: ಮೈಸೂರಿನಿಂದ ವಾರಕ್ಕೊಮ್ಮೆ ಇಲ್ಲಿಗೆ ಬರುವ ಆರ್‌ಟಿಒ ಅಧಿಕಾರಿ, ಬಹುತೇಕ ಹುದ್ದೆಗಳು ಖಾಲಿಯಾಗಿಯೇ ಇರುವ ಕಚೇರಿ, ರಾಶಿ ಬೀಳುತ್ತಿರುವ ಕಡತಗಳು… ಕೆಲಸಕ್ಕಾಗಿ ಪದೇ ಪದೇ ಎಡತಾಕಬೇಕಾಗಿ ಬರುವ ಸಾರ್ವಜನಿಕರು…

ಅತ್ಯಧಿಕ ರಾಜಸ್ವ ಸಂಗ್ರಹ ಮಾಡಿಕೊಡುವ ಸಾರಿಗೆ ಕಚೇರಿ ಎಂಬ ಹೆಗ್ಗಳಿಕೆ ಪಡೆದ ಮಂಗಳೂರು ಆರ್‌ಟಿಒ ಕಚೇರಿಯ ಪರಿಸ್ಥಿತಿ ಇದು. ಜಿಲ್ಲೆಯ ಇತರ ಎರಡು ಕಚೇರಿಗಳಾಗಿರುವ ಪುತ್ತೂರು, ಬಂಟ್ವಾಳದ ಪರಿಸ್ಥಿತಿಯೂ ಭಿನ್ನವೇನಿಲ್ಲ.

ಅತಿ ಮುಖ್ಯ ಹುದ್ದೆ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ)ಯದ್ದು. ನವೆಂಬರ್‌ನಿಂದೀಚೆಗೆ ಮಂಗಳೂರಿಗೆ ಪೂರ್ಣಕಾಲಿಕ ಆರ್‌ಟಿಒ ಬಂದಿಲ್ಲ. ಆರಂಭದಲ್ಲಿ ಉಡುಪಿಯ ಅಧಿಕಾರಿಯನ್ನು ಪ್ರಭಾರ ಆಗಿ ನಿಯೋಜಿಸಲಾಯಿತು. ಈಗ ಮೈಸೂರಿನ ಅಧಿಕಾರಿಯನ್ನು ನಿಯೋಜಿಸಲಾಗಿದೆ. ಅವರು ವಾರಕ್ಕೊಮ್ಮೆ ಬಂದು ಮೂರು ದಿನ ಇಲ್ಲಿರುತ್ತಾರೆ. ಅವರಿಲ್ಲದಾಗ ಕಡತಗಳು ರಾಶಿ ಬೀಳುತ್ತವೆ.

ಪೂರ್ಣಕಾಲಿಕ ಅಧಿಕಾರಿ ಅಗತ್ಯ
ಮುಖ್ಯವಾಗಿ ಆಡಳಿತದ ಮುಖ್ಯಾಧಿಕಾರಿ, ಸಹಿ ಅಧಿಕಾರಿಯೂ ಆರ್‌ಟಿಒ ಅವರೇ ಆಗಿರುವುದರಿಂದ ಅವರೇ ಪ್ರಭಾರವಾದರೆ ಮಹತ್ವದ ಕೆಲಸಗಳು ಬಾಕಿಯಾಗುತ್ತವೆ. ಅಲ್ಲದೆ ಜಿಲ್ಲಾ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಯೂ ಅವರೇ ಆಗಿರುವುದರಿಂದ ಅವರಿಗೆ ಜವಾಬ್ದಾರಿ ಹೆಚ್ಚಿರುತ್ತದೆ. ಅವೆಲ್ಲವೂ ಸುಸೂತ್ರವಾಗಿ ನಡೆಯಲು ಪೂರ್ಣಕಾಲಿಕ ಅಧಿಕಾರಿಯ ನಿಯೋಜನೆಯಾಗಬೇಕಿದೆ.

ಇದೇ ರೀತಿ ಲೆಕ್ಕ ಪತ್ರಾಧಿಕಾರಿ 1 ಹುದ್ದೆ, ತೆರಿಗೆ/ಖಜಾನಾಧಿಕಾರಿ (1), ಲೆಕ್ಕಾಧೀಕ್ಷಕರು (1), ಪ್ರಥಮ ದರ್ಜೆ ಸಹಾಯಕ (9), ಲೆಕ್ಕಪರಿಶೋಧಕ (1) ಅಲ್ಲದೆ 28 ದ್ವಿತೀಯ ದರ್ಜೆ ಸಹಾಯಕ ಹುದ್ದೆ ಸಹಿತ 73 ಹುದ್ದೆಗಳು ಖಾಲಿ ಬಿದ್ದಿವೆ. 6 ಮಂದಿಯನ್ನು ಇದೇ ಕಚೇರಿಯಿಂದ ಬೇರೆ ಕಚೇರಿಗಳಿಗೆ ನಿಯೋಜನೆ ಮಾಡಿದ್ದರೆ ಐವರು ಇತರ ಕಚೇರಿಗಳಿಂದ ಇಲ್ಲಿ ನಿಯೋಜನೆಯಲ್ಲಿದ್ದಾರೆ.

ಚಾಲನಾ ಪರೀಕ್ಷೆ ಇತ್ಯಾದಿಗೆ ಬೇಕಾಗುವ ಮೋಟಾರು ವಾಹನ ನಿರೀಕ್ಷಕರ ಹುದ್ದೆ 12ರಲ್ಲಿ 9 ಖಾಲಿ ಇವೆ. ಹಿರಿಯ ಮೋಟಾರು ವಾಹನ ನಿರೀಕ್ಷಕರ 6 ಹುದ್ದೆ ಖಾಲಿ. ಖಜಾನೆ ಕಾವಲುಗಾರರೂ ಇಲ್ಲ, ರಾತ್ರಿ ಕಾವಲುಗಾರರೂ ಇಲ್ಲ.

ಗರಿಷ್ಠ ರಾಜಸ್ವ ಸಂಗ್ರಹ
ಬೆಂಗಳೂರು ಬಿಟ್ಟರೆ ಗರಿಷ್ಠ ರಾಜಸ್ವ ಸಂಗ್ರಹವಾಗುವ ಕಚೇರಿ ಮಂಗಳೂರು ಆರ್‌ಟಿಒ. ಕಳೆದ 5 ವರ್ಷಗಳ ಅಂಕಿ-ಅಂಶ ನೋಡಿದರೆ ಸರಾಸರಿ 190 ಕೋಟಿ ರೂ. ರಾಜಸ್ವ ಬರುತ್ತಿದೆ. ಹಾಗಿರುವಾಗ ಸೌಲಭ್ಯ ಕೊರತೆ ಯಾಕೆ ಎನ್ನುವುದು ನಾಗರಿಕರ ಪ್ರಶ್ನೆ.

ನಾವು ರಾಜ್ಯದಲ್ಲಿ ಗರಿಷ್ಠ, ಎಂದರೆ ಶೇ. 99ರಷ್ಟು ಗುರಿ ಸಾಧಿಸುತ್ತೇವೆ, ಈ ಬಾರಿ ನಮ್ಮ ಇಲಾಖೆಯಲ್ಲಿ 8 ಸಾವಿರ ಕೋಟಿ ರೂ. ರಾಜಸ್ವ ಸಂಗ್ರಹವಾಗಿದೆ. ಆದರೆ ಸಿಬಂದಿ ಕೊರತೆ ತೀವ್ರ ಇರುವುದು ನಿಜ. ಮುಖ್ಯಮಂತ್ರಿಯವರು ಈ ಬಾರಿ ಸಿಬಂದಿ ನೇಮಕಾತಿಗೆ ಒಪ್ಪಿದ್ದಾರೆ. ಮಂಗಳೂರಿನ ಸ್ಥಿತಿಯ ಅರಿವಿದೆ, ರೆಗ್ಯುಲರ್‌ ಆರ್‌ಟಿಒ ನಿಯೋಜನೆಗೆ ಕ್ರಮ ಕೈಗೊಳ್ಳುವೆ.
– ಶ್ರೀರಾಮುಲು, ಸಾರಿಗೆ ಸಚಿವರು

ಪುತ್ತೂರು ಕಚೇರಿ
2022 -23ರ ರಾಜಸ್ವ ಗುರಿ: 59.73 ಕೋಟಿ ರೂ.
ಸಾಧನೆ: 44.52 ಕೋಟಿ ರೂ. (ಡಿಸೆಂಬರ್‌ ವರೆಗೆ)
ಮಂಜೂರಾದ ಹುದ್ದೆ: 25
ಖಾಲಿ ಹುದ್ದೆ: 16
ಭರ್ತಿಯಾದ ಹುದ್ದೆ: 8

ಬಂಟ್ವಾಳ ಕಚೇರಿ
2020-21ರ ರಾಜಸ್ವ ಗುರಿ 36.48 ಕೋ.ರೂ.
ಸಂಗ್ರಹ-25.62 ಕೋಟಿ ರೂ.
2021-22 ರಾಜಸ್ವ ಗುರಿ-39.47 ಕೋಟಿ ರೂ.
ಸಂಗ್ರಹ-29.43 ಕೋಟಿ ರೂ.
2022-23 ರಾಜಸ್ವ ಗುರಿ-45.40 ಕೋ.ರೂ.
ಸಂಗ್ರಹ 27.11 ಕೋ.ರೂ. (ಜನವರಿ ವರೆಗೆ)
ಮಂಜೂರಾದ ಹುದ್ದೆಗಳು – 14
ಪ್ರಸ್ತುತ ಇರುವುದು – 5 ಮಂದಿ

– ವೇಣುವಿನೋದ್‌ ಕೆ.ಎಸ್‌.

ಟಾಪ್ ನ್ಯೂಸ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Dinesh-Gundurao

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

13

Uv Fusion: ಅಪ್ಪ ಅಂದರೆ ಅನಂತ ಪ್ರೀತಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.