![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jul 12, 2021, 7:36 PM IST
ಶ್ರೀನಗರ: ಲಡಾಖ್ನ ದೆಮ್ಚುಕ್ ಪ್ರದೇಶದಲ್ಲಿ ಭಾರತದ ಯೋಧರು ಟಿಬೆಟಿಯನ್ ಧರ್ಮಗುರು ದಲೈಲಾಮಾ ಹುಟ್ಟಿದ ಹಬ್ಬ ಆಚರಿಸುತ್ತಿದ್ದಕ್ಕೆ ಚೀನಾ ಯೋಧರು ಆಕ್ಷೇಪ ಮಾಡಿದ್ದಾರೆ. ಜತೆಗೆ ಅವರು, ದೆಮ್ಚುಕ್ ಪ್ರದೇಶಕ್ಕೆ ಪ್ರವೇಶ ಮಾಡಿ ತಕರಾರು ತೆಗೆದಿದ್ದಾರೆ. ಸಿಂಧೂ ನದಿ ವ್ಯಾಪ್ತಿಯಲ್ಲಿ ಜು.6ರಂದು ಈ ಘಟನೆ ನಡೆದಿದೆ.
ಸಿಂಧೂ ನದಿಯ ದೆಮ್ಚುಕ್ ಭಾಗದ ಭಾರತಕ್ಕೆ ಸೇರಿದ ಪ್ರದೇಶದಲ್ಲಿ ಯೋಧರು ದಲೈಲಾಮಾ ಹುಟ್ಟಿದ ಹಬ್ಬ ಆಚರಿಸುತ್ತಿದ್ದ ವೇಳೆ, ಐದು ವಾಹನಗಳಲ್ಲಿ ಚೀನಾದ ಯೋಧರು ಮತ್ತು ನಾಗರಿಕರು ಆಗಮಿಸಿದ್ದಾರೆ. ಕಾರ್ಯಕ್ರಮ ಆಯೋಜನೆ ಮಾಡಿದ್ದಕ್ಕೆ ಕೂಡ ತಗಾದೆ ತೆಗೆದಿದ್ದಾರೆ.
ಕಳೆದ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರು ದಲೈಲಾಮಾ ಹುಟ್ಟಿದ ಹಬ್ಬದ ಪ್ರಯುಕ್ತ ಟಿಬೆಟನ್ ಧರ್ಮಗುರುವಿಗೆ ನೇರವಾಗಿ ಫೋನ್ ಮಾಡಿ ಮಾತುಕತೆ ನಡೆಸಿದ್ದರು ಮತ್ತು ಶುಭಾಶಯ ಕೋರಿದ್ದರು. ಚೀನಾ ವಿರುದ್ಧ ಸೆಡ್ಡು ಹೊಡೆಯುವ ನಿಟ್ಟಿನಲ್ಲಿಯೇ ಈ ಕ್ರಮ ಅನುಸರಿಸಲಾಗುತ್ತಿದೆ ಎಂದು ರಾಜತಾಂತ್ರಿಕ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ : ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟು ‘ಮಿಷನ್ ಯುಪಿ’ಗೆ ಪ್ರಿಯಾಂಕ ಟೀಮ್ ಸಿದ್ಧತೆ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.