Deepavali Bonus: ಚುನಾವಣೆ ಘೋಷಣೆಗೂ ಮುನ್ನ ʼಮಹಾʼ ಸರಕಾರದಿಂದ ನೌಕರರಿಗೆ ಬೋನಸ್‌!

ಮಹಿಳಾ ಮತದಾರರ ಮನ ಸೆಳೆಯಲು ನೀತಿ ಸಂಹಿತೆ ಜಾರಿಗೂ ಮೊದಲೇ ಸಹಾಯಧನ ನೀಡಿದ ಏಕನಾಥ ಶಿಂಧೆ ಸರಕಾರ

Team Udayavani, Oct 15, 2024, 7:12 PM IST

CM-Shinde

ಮುಂಬಯಿ: ಕೇಂದ್ರ ಚುನಾವಣ ಆಯೋಗ (CEC) ವಿಧಾನಸಭಾ ಚುನಾವಣೆಗೆ (Assembly Election) ದಿನಾಂಕ ಘೋಷಿಸುವ ಮೊದಲೇ ಮಹಾರಾಷ್ಟ್ರ(Maharashtra) ಸರ್ಕಾರವು ಕೆಳ ಹಂತದ ಸರ್ಕಾರಿ ನೌಕರರು, ಶಿಶುವಿಹಾರದ ಶಿಕ್ಷಕರು, ಆಶಾ ಕಾರ್ಯಕರ್ತೆಯರಿಗೆ ದೀಪಾವಳಿ ಬೋನಸ್ ಘೋಷಿಸಿದೆ.

ಚುನಾವಣ ಆಯೋಗ ದಿನಾಂಕ ಘೋಷಿಸುವ  ಕೆಲವೇ ನಿಮಿಷಗಳ ಮೊದಲು ಈ ಬೆಳವಣಿಗೆ ನಡೆದಿದ್ದು ಬೃಹನ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಯ ಎಲ್ಲಾ ಉದ್ಯೋಗಿಗಳಿಗೆ 28,000 ರೂ.ಗಳ ದೀಪಾವಳಿ ಬೋನಸನ್ನು ನೀತಿ ಸಂಹಿತೆ ಜಾರಿಯಾಗುವ ಮೊದಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಘೋಷಿಸಿದ್ದಾರೆ. ಇದು ಕಳೆದ ವರ್ಷ ಘೋಷಿಸಿದ ಬೋನಸ್‌ಗಿಂತ 3,000 ರೂ. ಹೆಚ್ಚಳವಾಗಿದೆ.

ಲಡ್ಕಿ ಬೆಹನ್‌ ಫಲಾನುಭವಿಗಳಿಗೆ ಹೆಚ್ಚುವರಿ ಹಣ: 
ಲಡ್ಕಿ ಬೆಹನ್ ಯೋಜನೆಯ ಮಹಿಳಾ ಫಲಾನುಭವಿಗಳಿಗೆ 2024ರ ದೀಪಾವಳಿ ಬೋನಸ್ ಅಂಗವಾಗಿ 4 ಮತ್ತು 5 ನೇ ಕಂತಿನಲ್ಲಿ ರೂ. 3,000 ಬ್ಯಾಂಕ್ ಖಾತೆಗಳಿಗೆ ನೇರ ಜಮಾ ಮಾಡುವುದಾಗಿ ಸರ್ಕಾರ ಹೇಳಿದೆ. ಲಡ್ಕಿ ಬೆಹನ್ ಯೋಜನೆಯು ವಾರ್ಷಿಕ 2.5 ಲಕ್ಷ ರೂ.ಕ್ಕಿಂತ ಕಡಿಮೆ ಆದಾಯವಿರುವ ಕುಟುಂಬದ ಮಹಿಳೆಯರು ಮಾಸಿಕವಾಗಿ 1,500 ರೂ. ಸಹಾಯಧನ ಪಡೆಯುತ್ತಿದ್ದರು.

ಶಿಂಧೆ ಸರಕಾರದಿಂದ ಮಹಿಳಾ ಮತದಾರರ ಗುರಿ:   
ಆಡಳಿತಾರೂಢ ಮಹಾಯುತಿ ಮತ್ತು ವಿರೋಧ ಪಕ್ಷವಾದ ಮಹಾ ವಿಕಾಸ್ ಅಘಾಡಿ (ಎಂವಿಎ) ನಡುವೆ ತೀವ್ರ ಪೈಪೋಟಿ ಏರ್ಪಟ್ಟಿರುವುದರಿಂದ ಚುನಾವಣೆ ವರ್ಷದಲ್ಲಿ ಏಕನಾಥ್ ಶಿಂಧೆ ಸರಕಾರವು ಮಹಿಳೆಯರು, ವೃದ್ಧರು ಮತ್ತು ಯುವಕರ ಗುರಿಯಾಗಿಸಿ ಸರ್ಕಾರ ಎಂಟು ಪ್ರಮುಖ ಕಲ್ಯಾಣ ಯೋಜನೆಗಳ ಅನಾವರಣಗೊಳಿಸಿದೆ. ವರ್ಷಕ್ಕೆ ಮೂರು ಉಚಿತ ಸಿಲಿಂಡರ್‌ ಹಾಗೂ ತೀರ್ಥಕ್ಷೇತ್ರಗಳಿಗೆ ಹಿರಿಯ ನಾಗರಿಕರಿಗೆ ಉಚಿತ ಪ್ರಯಾಣ, ಆರ್ಥಿಕವಾಗಿ ಸಬಲರಲ್ಲದ  ಉಚಿತ  ಔದ್ಯೋಗಿಕ ಶಿಕ್ಷಣವನ್ನು ಘೋಷಿಸಿದೆ.

ಮಹಾನಗರದ ಮತದಾರರ ಸೆಳೆಯಲು ರಾಜ್ಯ ಸರಕಾರವು ಮುಂಬೈಗೆ ಪ್ರವೇಶಿಸುವ ಲಘು ಮೋಟಾರು ವಾಹನಗಳು ಇನ್ನು ಮುಂದೆ ಯಾವುದೇ ಟೋಲ್ ಪಾವತಿಸುವ ಅಗತ್ಯವಿಲ್ಲ ಎಂದು ಸೋಮವಾರ ಮುಖ್ಯಮಂತ್ರಿ ಶಿಂಧೆ ಘೋಷಿಸಿದ್ದರು. ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೂಡ  ಪ್ರಸ್ತಾವಿತ ಶೇ.10 ಪ್ರಯಾಣ ದರ ಏರಿಕೆ ರದ್ದುಗೊಳಿಸಿದೆ.

ಲೋಕಸಭೆ ಚುನಾವಣೆಯಲ್ಲಿ  ರಾಜ್ಯದ 48 ಸ್ಥಾನಗಳಲ್ಲಿ 31 ಸ್ಥಾನ  ಮಹಾ ವಿಕಾಸ್‌ ಅಘಾಡಿ (ಎಂವಿಎ) ಗೆದ್ದಿತ್ತು.  ಈ ಸೋಲಿನ ನಂತರ ಮಹಾಯುತಿ ಮೈತ್ರಿಕೂಟಕ್ಕೆ ವಿಧಾನಸಭೆ ಚುನಾವಣೆಯು ನಿರ್ಣಾಯಕವಾಗಿವೆ. ಮಹಾರಾಷ್ಟ್ರದ ವಿಧಾನಸಭೆಗೆ ನ.20ರಂದು ಮತದಾನ ನಡೆಯಲಿದೆ.

ಟಾಪ್ ನ್ಯೂಸ್

priyanaka

Kerala By Poll: ವಯನಾಡ್‌ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿ ಘೋಷಿಸಿದ ಎಐಸಿಸಿ

Waqf issue: Letter from Opposition Leader to Speaker

Waqf issue: ಸ್ಪೀಕರ್‌ಗೆ ವಿಪಕ್ಷ ನಾಯಕರಿಂದ ಪತ್ರ

MUDA Case: ಸಾಕ್ಷ್ಯನಾಶ ಮಾಡಲು ಅದೇನು ಕೊಲೆ ಕೇಸಾ?: ಎಂ.ಲಕ್ಷ್ಮಣ್‌

MUDA Case: ಸಾಕ್ಷ್ಯನಾಶ ಮಾಡಲು ಅದೇನು ಕೊಲೆ ಕೇಸಾ?: ಎಂ.ಲಕ್ಷ್ಮಣ್‌

Heavy Rain: ರಾಜ್ಯಾದ್ಯಂತ ಇನ್ನೂ 4 ದಿನ ಭಾರೀ ಮಳೆ: 18 ಜಿಲ್ಲೆಗೆ ಆರೆಂಜ್‌ ಅಲರ್ಟ್‌

Heavy Rain: ರಾಜ್ಯಾದ್ಯಂತ ಇನ್ನೂ 4 ದಿನ ಭಾರೀ ಮಳೆ: 18 ಜಿಲ್ಲೆಗೆ ಆರೆಂಜ್‌ ಅಲರ್ಟ್‌

Janardhana Reddy: ಮುಡಾ ದಾಖಲೆ ಬಹಿರಂಗ ಮಾಡಿದ್ದು ಡಿಕೆಶಿ

Janardhana Reddy: ಮುಡಾ ದಾಖಲೆ ಬಹಿರಂಗ ಮಾಡಿದ್ದು ಡಿಕೆಶಿ

CM Siddaramaiah: ಡ್ರಗ್ಸ್‌ ನಿಯಂತ್ರಣಕ್ಕೆ ಕಾನೂನಲ್ಲಿ ತಿದ್ದುಪಡಿ ತರಲು ಚಿಂತನೆ

CM Siddaramaiah: ಡ್ರಗ್ಸ್‌ ನಿಯಂತ್ರಣಕ್ಕೆ ಕಾನೂನಲ್ಲಿ ತಿದ್ದುಪಡಿ ತರಲು ಚಿಂತನೆ

11-mudhol

ಕ್ಷೇತ್ರದ ಅಭಿವೃದ್ಧಿಗೆ ಶಕ್ತಿಮೀರಿ‌‌ ಪ್ರಯತ್ನಿಸುವೆ: ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

priyanaka

Kerala By Poll: ವಯನಾಡ್‌ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿ ಘೋಷಿಸಿದ ಎಐಸಿಸಿ

Waqf issue: Letter from Opposition Leader to Speaker

Waqf issue: ಸ್ಪೀಕರ್‌ಗೆ ವಿಪಕ್ಷ ನಾಯಕರಿಂದ ಪತ್ರ

Delhi Govt: ಮಾಲಿನ್ಯ ತಡೆಗೆ ಹೆಜ್ಜೆಯಿಟ್ಟ ದಿಲ್ಲಿ ಸರ್ಕಾರ: 99 ತಂಡ ಸಿದ್ಧ

Delhi Govt: ಮಾಲಿನ್ಯ ತಡೆಗೆ ಹೆಜ್ಜೆಯಿಟ್ಟ ದಿಲ್ಲಿ ಸರ್ಕಾರ: 99 ತಂಡ ಸಿದ್ಧ

let there be ballot paper: Congress appeal to EC

Congress: ಈ ಬಾರಿ ಇವಿಎಂ ಬೇಡ, ಮತಪತ್ರವೇ ಇರಲಿ: ಇಸಿಗೆ ಕಾಂಗ್ರೆಸ್‌ ಮನವಿ?

Ayyappa Darshan even without online registration

Sabarimala Temple: ಆನ್‌ಲೈನ್‌ ನೋಂದಣಿ ಇಲ್ಲದಿದ್ದರೂ ಅಯ್ಯಪ್ಪನ ದರ್ಶನಕ್ಕೆ ಅವಕಾಶ

MUST WATCH

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

ಹೊಸ ಸೇರ್ಪಡೆ

priyanaka

Kerala By Poll: ವಯನಾಡ್‌ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿ ಘೋಷಿಸಿದ ಎಐಸಿಸಿ

Waqf issue: Letter from Opposition Leader to Speaker

Waqf issue: ಸ್ಪೀಕರ್‌ಗೆ ವಿಪಕ್ಷ ನಾಯಕರಿಂದ ಪತ್ರ

POlice

Sullia: ಅಕ್ರಮ ದನ ಸಾಗಾಟ ವೇಳೆ ಪೊಲೀಸ್‌ ದಾಳಿ  

Delhi Govt: ಮಾಲಿನ್ಯ ತಡೆಗೆ ಹೆಜ್ಜೆಯಿಟ್ಟ ದಿಲ್ಲಿ ಸರ್ಕಾರ: 99 ತಂಡ ಸಿದ್ಧ

Delhi Govt: ಮಾಲಿನ್ಯ ತಡೆಗೆ ಹೆಜ್ಜೆಯಿಟ್ಟ ದಿಲ್ಲಿ ಸರ್ಕಾರ: 99 ತಂಡ ಸಿದ್ಧ

4

Kundapura: ಕಡಿಮೆ ರಕ್ತದೋತ್ತಡ; ಮಹಿಳೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.