Desi Swara: ಬೆರಗಿನ ಬಿಗ್‌ ಬೇಸಿನ್‌ ಪಾರ್ಕ್‌-ಬೆಂದು ಹೋದ ಕಾಡಿನ ಸ್ಫೂರ್ತಿಯ ಕತೆ…

ಬಿಗ್‌ ಬೇಸಿನ್‌ ಪಾರ್ಕ್‌ ಈಗ ಮತ್ತೆ ಪ್ರವಾಸಿಗರಿಗೆ ತನ್ನ ಬಾಗಿಲನ್ನು ನಿಧಾನವಾಗಿ ತೆರೆದಿದೆ

Team Udayavani, Sep 18, 2023, 11:15 AM IST

Desi Swara: ಬೆರಗಿನ ಬಿಗ್‌ ಬೇಸಿನ್‌ ಪಾರ್ಕ್‌-ಬೆಂದು ಹೋದ ಕಾಡಿನ ಸ್ಫೂರ್ತಿಯ ಕತೆ…

ಒಮ್ಮೆ ಸೋಲಿನ ಹೊಡೆತವನ್ನು ತಿಂದು ಮತ್ತೆ ಪುಟಿದೇಳುವ ಧೈರ್ಯವಿದೆಯಲ್ಲ ಅದು ಸಾಹಸವೇ. ಹಾಗೇಯೇ ಬಂದ ಕಷ್ಟಗಳೆಲ್ಲವನ್ನು ಎದುರಿಸಿ ಮತ್ತೆ ಬದುಕನ್ನು ಕಟ್ಟಿಕೊಳ್ಳುವುದಕ್ಕು ಜೀವನದೆಡೆಗಿನ ಉತ್ಸಾಹವೇ ಸ್ಫೂರ್ತಿ. ಪ್ರಾಕೃತಿಕ ವಿಕೋಪಗಳಂತ ಭೂಕಂಪ, ಸುನಾಮಿಗಳನ್ನು ಎದುರಿಸಿದ ನಗರಗಳು, ಊರುಗಳು ಬದುಕನ್ನು ಮತ್ತೆ ರೂಪಿಸಿಕೊಂಡ ಕತೆಯನ್ನು ಕೇಳಿದರೆ ಮೈ ಜುಂ ಎನ್ನುತ್ತದೆ. ಈ ವಾರದ ಅಂಕಣದಲ್ಲಿಯೂ ಹೇಳ ಹೊರಟಿರುವುದು ಇಂತಹದ್ದೇ ಒಂದು ಘಟನೆಯನ್ನು. ಬೆಂಕಿಯ ಜ್ವಾಲೆಗೆ ಇಡೀ ಕಾಡಿಗೇ ಕಾಡೇ ಆಹುತಿಯಾಗಿ, ಇನ್ನು ಇಲ್ಲಿ ಕಾಣಸಿಗುವುದು ಬರೀ ಅವಶೇಷವಷ್ಟೇ ಎಂದು ಎಲ್ಲರೂ ಭಾವಿಸಿದ್ದಾಗ ಅಲ್ಲಿನ ಮರಗಳು ತಮ್ಮೊಳಗೆ ಭರವಸೆಯ ಹಸುರಿನ ಚಿಗುರನ್ನು ಹೊತ್ತು ನಿಂತಿದ್ದವು. ಇಂದು ಅರ್ಧದಷ್ಟು ಕಾಡು ಮತ್ತೆ ನಲಿಯುತ್ತಿದೆ. ಬದುಕಬೇಕೆಂಬ ಛಲಕ್ಕೆ ಇದಕ್ಕಿಂತ ಪ್ರೇರಣೆ ಬೇಕೆ ಹೇಳಿ……

“ಕಷ್ಟಗಳು ಮನುಷ್ಯನಿಗೆ ಬರದೇ ಮರಕ್ಕೆ ಬರುತ್ತವೆಯೇ’ ಎಂಬ ಮಾತೊಂದಿದೆ. ಮನುಷ್ಯನೇ ಹೇಳಿದ ಮಾತಿದು. ಅಂದರೆ ಈ ಭೂಮಿಯಲ್ಲಿ ಕಷ್ಟಗಳು ತನಗೊಬ್ಬನಿಗೆ ಮಾತ್ರ ಬರುತ್ತವೆ ಎಂದು ತನಗೆ ತಾನೇ ತಿಳಿದುಕೊಂಡು ಬಿಟ್ಟಿ¨ªಾನೆ. ಅದು ಸಮಾಧಾನ ಹಂಚಿಕೊಳ್ಳುವ ಮಾರ್ಗವೇ ಆಗಿದ್ದರೂ ನನಗೇ ಎಲ್ಲ ಕಷ್ಟಗಳು ಎಂದು ಅಂದುಕೊಳ್ಳುವುದಾಗಲೀ ಅಥವಾ ವೈಯ್‌ ಮೀ ಎಂದು ಪ್ರಶ್ನಿಸುವುದಾಗಲೀ ತಿಳುವಳಿಕೆಯ ಕೊರತೆಯಂತೆ ಕಾಣಿಸುತ್ತದೆ.

ಯಾಕೆಂದರೆ ಕಷ್ಟಗಳು ಮನುಷ್ಯನಿಗೆ ಮಾತ್ರವಲ್ಲ, ಎಲ್ಲ ಪ್ರಾಣಿ, ಪಕ್ಷಿ, ಕೀಟಗಳಿಗೂ ಬರುತ್ತವೆ. ಅಷ್ಟೇ ಯಾಕೆ ಮರಗಳಿಗೂ ಬರುತ್ತದೆ. ನೆಲದೊಳಗೆ ಬೇರೂರಿ ಎಂತಹ ಬಿರುಗಾಳಿ ಬಂದರೂ ಎದೆಗೊಟ್ಟು ನಿಲ್ಲುವ ಮರಗಳು ಸಿಡಿಲು ಬಡಿದು, ಸುಟ್ಟು ಬೂದಿಯಾಗುತ್ತವೆ. ಯಾರೋ ಬಂದು ಕತ್ತರಿಸಿದರೆ ಇಷ್ಟು ದಿನಗಳ ಅಸ್ತಿತ್ವವೇ ಇಲ್ಲದಂತೆ ಒಂದೇ ಪೆಟ್ಟಿಗೆ ನೆಲಕ್ಕುರುಳುತ್ತವೆ. ಶರತ್ಕಾಲದಲ್ಲಿ ಎಲೆಗಳನ್ನುದುರಿಸಿ ಬರಡಾಗುತ್ತವೆ. ಬಿಸಿಲಿನಲ್ಲಿ ನೀರಿಲ್ಲದೇ ಒಣಗಿ ಶುಷ್ಕವಾಗುತ್ತವೆ. ಹುಳ ತಿನ್ನತೊಡಗಿದರೆ ಒಳಗಿನಿಂದಲೇ ಶಿಥಿಲವಾಗುತ್ತ ದೈತ್ಯ ಮರವೂ ಪುಡಿಪುಡಿಯಾಗುತ್ತದೆ. ಹೀಗೆ ಪಟ್ಟಿ ಮಾಡುತ್ತ ಹೋದರೆ ಮರಗಳಿಗೆ ಬರುವ ಕಷ್ಟ ಒಂದೇ ಎರಡೇ! ಆದರೆ ಈಗ ನಾನು ಹೇಳಹೊರಟಿರುವುದು ಒಂದು ಅಥವಾ ಒಂದೆರಡು ಮರದ ಕತೆಯಲ್ಲ. ಒಂದು ದೊಡ್ಡ ಕಾಡು ಬೆಂಕಿಗೆ ಆಹುತಿಯಾಗಿ ಬೆಂದು ಹೋದ ಕತೆ.

ಇದು ಕ್ಯಾಲಿಫೋರ್ನಿಯಾ ರಾಜ್ಯದಲ್ಲಿಯೇ ಅತ್ಯಂತ ಹಳೆಯದಾದ ಕಾಡು. 1902ರಲ್ಲಿ ಅಂದರೆ 122 ವರ್ಷಗಳ ಹಿಂದೆ ಬಿಗ್‌ ಬೇಸಿನ್‌ ರೆಡ್ ವುಡ್ಸ್‌ ಎಂಬ ಹೆಸರಿನಲ್ಲಿ ಸ್ಥಾಪಿತವಾದ ಈ ಕಾಡಿನಲ್ಲಿ ಸುಮಾರು 1000ದಿಂದ 1800 ವರ್ಷಗಳಷ್ಟು ಹಳೆಯದಾದ ಮರಗಳಿವೆ! ರೋಮನ್‌ ಸಾಮ್ರಾಜ್ಯಕ್ಕಿಂತಲೂ ಹೆಚ್ಚಿನ ಇತಿಹಾಸ ಈ ಮರಗಳಿಗಿದೆ ಎಂಬುದಂತೂ ಸತ್ಯ. ಅವೂ ಸಾಧಾರಣ ಮರಗಳಲ್ಲ! ಆಕಾಶಕ್ಕೆ ಮುತ್ತಿಡುವಂತಹ ಗಗನಚುಂಬಿ ಮರಗಳು. ಅದೆಷ್ಟು ಎತ್ತರವೆಂದರೆ ಸ್ಟ್ಯಾಚ್ಯೂ ಆಫ್ ಲಿಬರ್ಟಿ ಮೂರ್ತಿಯಷ್ಟು ಎತ್ತರವಿರುವ ಮರಗಳು. ಅಂಕಿ ಅಂಶಗಳ ಆಧಾರದಲ್ಲಿ ಹೇಳಬೇಕೆಂದರೆ ಈ ಮರಗಳ ಎತ್ತರ ಐವತ್ತು ಅಡಿಗಳಿಗಿಂತಲೂ ಹೆಚ್ಚಿದೆ. ಆರಂಭದಲ್ಲಿ 3,800 ಎಕ್ರೆಗಳ ವಿಸ್ತಾರದಲ್ಲಿದ್ದ ಈ ಕಾಡು ಈಗ ಸದ್ಯಕ್ಕೆ 18,000 ಎಕ್ರೆಗಳಷ್ಟು ವ್ಯಾಪ್ತಿಯಲ್ಲಿ ಆವರಿಸಿಕೊಂಡಿದೆ. ಒಂದು ಕಡೆಗೆ ಫೆಸಿಫಿಕ್‌ ಸಮುದ್ರ, ಇನ್ನೊಂದು ಕಡೆಗೆ ಸ್ಯಾಂಟಾ ಕ್ರೂಜ್‌ ಪರ್ವತಗಳ ಸಾಲನ್ನು ಹೊಂದಿರುವ ಈ ಕಾಡು ಯಾವ ದಿಕ್ಕಿನಿಂದಲೂ ನೋಡಿದರೂ ನಯನ ಮನೋಹರ.

ಹೀಗೆ ನೂರಾರು ವರ್ಷಗಳ ಬೆರಗನ್ನು, ಇತಿಹಾಸವನ್ನು, ಸಾವಿರಾರು ಜೀವಸಂಕುಲವನ್ನು ಹೊತ್ತು ತನ್ನೊಳಗೆ ಅದ್ಭುತವನ್ನೇ ಕಟ್ಟಿಕೊಂಡಿದ್ದ ಈ ಕಾಡು ಒಂದು ದಿನ ಬೆಂಕಿಯಲ್ಲಿ ಧಗಧಗ ಉರಿಯಿತೆಂದು ಹೇಳಿದರೆ ನಂಬಲಾಗುವುದಿಲ್ಲ. 2020ರಲ್ಲಿ ಗುಡುಗು, ಮಿಂಚು, ಸಿಡಿಲಿನಿಂದ ಬೆಂಕಿ ಹತ್ತಿಕೊಂಡು ಸ್ಯಾನ್‌ ಮೆತಿಯೋ ಮತ್ತು ಸ್ಯಾಂಟಾ ಕ್ರೂಜ್‌ ಜಿಲ್ಲೆಗಳು ಧಗಧಗ ಉರಿದವು. ಆ ಬೆಂಕಿಗೆ ಆಹುತಿಯಾಗಿದ್ದು ಬಿಗ್‌ ಬೇಸಿನ್‌ ಕಾಡು.

ಕಾಡಿನ ಹೃದಯ ಭಾಗಕ್ಕೆ ಬೆಂಕಿ ಹತ್ತಿ, ಅಗ್ನಿಶಾಮಕ ತಂಡಕ್ಕೆ ಅದನ್ನು ಹತೋಟಿಗೆ ತರುವುದು ಅಸಾಧ್ಯವಾಗಿ ಒಂದಾದ ಒಂದರಂತೆ ಮರಗಳು ಬೆಂಕಿಯ ಸ್ಪರ್ಶಕ್ಕೆ ಮುಳುವಾಗುತ್ತ ಸುಟ್ಟು ಬೂದಿಯಾದವು. ಶೇಕಡಾ 90ರಷ್ಟು ಭಾಗಕ್ಕೆ ಬೆಂಕಿ ಆವರಿಸಿಕೊಂಡು ಕಾಡು ತಿಂಗಳಾನುಗಟ್ಟಲೇ ಧಗ ಧಗ ಉರಿಯಿತು. ಸಾವಿರಾರು ವರ್ಷಗಳ ಆಯಸ್ಸನ್ನು ಹೊಂದಿದ ಮರಗಳು ಬೂದಿಯಾಗತೊಡಗಿದವು. ಆಕಾಶದತ್ತ ಮುಖ ಮಾಡಿ ಸೂರ್ಯನ ಕಿರಣವನ್ನು ಆಸ್ವಾದಿಸುತ್ತಿದ್ದ ದೈತ್ಯ ಮರಗಳು ನೆಲಕ್ಕೆ ದೊಪ್ಪನೆ ಉರುಳಿದವು. ನಿಸರ್ಗ ಪ್ರಿಯರಿಂದ, ಹೈಕ್‌ ಪ್ರೇಮಿಗಳಿಂದ ತುಂಬಿ ತುಳುಕುತ್ತಿದ್ದ ಈ ತಾಣ ಬಾಗಿಲು ಹಾಕಿಕೊಂಡು ತನ್ನೊಡಲನ್ನು ಸುಟ್ಟುಕೊಂಡಿತು.

ಬಾಲ್ಯದಿಂದಲೂ ಈ ಕಾಡನ್ನು ನೋಡುತ್ತ, ಅದರೊಳಗೆ ಹೈಕ್‌ ಹೋಗುತ್ತ, ಜಲಪಾತಗಳನ್ನು ಕಣ್ಣು ತುಂಬಿಸಿಕೊಂಡು ಬೆಳೆದಿದ್ದ ಅದೆಷ್ಟೋ ಜನ ಕಣ್ಣೀರು ಹಾಕಿದರು. ಬಿಗ್‌ ಬೇಸಿನ್‌ ಅಕ್ಕ ಪಕ್ಕದಲ್ಲಿಯೂ ಸಣ್ಣ ಪುಟ್ಟ ಕಾಡುಗಳಿವೆ. ಹುಚ್ಚೆದ್ದು ಕುಣಿಯುತ್ತಿದ್ದ ಬೆಂಕಿಯನ್ನು ನಂದಿಸುವುದು ದೂರದ ಮಾತು, ಅದು ಇನ್ನಷ್ಟು ಹಬ್ಬದಂತೆ ನಿಯಂತ್ರಿಸುವುದು ಬಹು ದೊಡ್ಡ ಸವಾಲಾಗಿತ್ತು. ಆ ಸಮಯದಲ್ಲಿ ಆಹುತಿಯಾಗಿದ್ದು ಇದೊಂದೇ ಕಾಡಲ್ಲ! ಸೇತುವೆಗಳು, ರಸ್ತೆಗಳು, ಪ್ರವಾಸಿ ಕೇಂದ್ರಗಳು ಹೀಗೆ ಬಹಳಷ್ಟು ಸಂಪತ್ತು ನಾಶವಾಗಿತ್ತು.

ಇಷ್ಟೆಲ್ಲ ಕೇಳಿದ ಮೇಲೆ ಮನಸ್ಸಿಗೆ ಬೇಸರವಾಗುವುದು ಸಹಜ. ಎಲ್ಲ ಕ್ಷೇತ್ರಗಳಲ್ಲಿಯೂ ಪರಿಣಿತನಾಗಿರುವ ಮಾನವನಿಗೆ ಬಹು ಕಷ್ಟವಾದ (ಆದರೆ ಅಸಾಧ್ಯವಲ್ಲದ!) ಒಂದು ಕೆಲಸವೆಂದರೆ ನಿಸರ್ಗವನ್ನು ಮರುಸೃಷ್ಟಿಸುವುದು. ಒಂದು ಮರವನ್ನು ಕಡಿಯಲೇಬೇಕಾದಂತಹ ಪರಿಸ್ಥಿತಿ ಬಂದರೆ ಇನ್ನೆಲ್ಲೋ ಹತ್ತು ಸಸಿಗಳನ್ನು ನೆಡಬೇಕು. ಆಗ ಮಾತ್ರ ನಮಗೆ ಈ ನಿಸರ್ಗವೆಂಬ ಅಮೂಲ್ಯ ನಿಧಿಯನ್ನು ಕಾಪಾಡಿಕೊಂಡು ಹೋಗಲು ಸಾಧ್ಯ. ಹೀಗಿರುವಾಗ ಸಾವಿರಾರು ಎಕ್ರೆಗಟ್ಟಲೇ ಹರಡಿದ್ದ ಕಾಡು, ಲಕ್ಷಾಂತರ ಮರಗಳು ಸುಟ್ಟು ಬೂದಿಯಾದರೆ ಅವುಗಳನ್ನು ಮತ್ತೆ ಮೊದಲಿನ ರೂಪಕ್ಕೆ ಮರಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದುಕೊಂಡರೆ ತಪ್ಪಾದೀತು. ತನ್ನ ಸುಟ್ಟ ಮೈಚರ್ಮವನ್ನು ಉದುರಿಸಿಕೊಂಡು ಹೊಸ ಚರ್ಮವನ್ನು ಹುಟ್ಟಿಸುವ ತಾಕತ್ತು ನಿಸರ್ಗಕ್ಕಿದೆ. ಮಾಯದ ಗಾಯದಿಂದ ಹೊರಬಂದು ಮತ್ತೆ ನಳನಳಿಸುವ ಚೈತನ್ಯವನ್ನು ತುಂಬಿಕೊಳ್ಳುವ ಆತ್ಮಸ್ಥೆçರ್ಯ ನಿಸರ್ಗಕ್ಕಿದೆ. ಸುಮಾರು ಮೂರು ವರ್ಷಗಳ ಕಾಲ ಮುಚ್ಚಿದ್ದ ಬಿಗ್‌ ಬೇಸಿನ್‌ ಪಾರ್ಕ್‌ ಈಗ ಮತ್ತೆ ಪ್ರವಾಸಿಗರಿಗೆ ತನ್ನ ಬಾಗಿಲನ್ನು ನಿಧಾನವಾಗಿ ತೆರೆದಿದೆ. ಮೊನ್ನೆ ಜುಲೈ 2023ರಿಂದ ನೋಂದಣಿ ಆಧಾರದ ಮೇಲೆ ದಿನಕ್ಕೆ ಇಂತಿಷ್ಟೇ ನೋಡುಗರಿಗೆ ತೆರೆದಿದೆ. ಒಳ ಹೋಗಿ ನೋಡಿದರೆ ಖಂಡಿತವಾಗಿಯೂ ಮೈ ನವಿರೇಳುತ್ತದೆ. ನೋವಿನಿಂದ ಹೊರ ಬರಲು ಯತ್ನಿಸುತ್ತಿರುವ ಈ ಕಾಡನ್ನು ನೋಡಿದರೆ ಕಣ್ಣು ತುಂಬಿ ಬರುತ್ತದೆ.

ಹೌದು. ಬಿಗ್‌ ಬೇಸಿನ್‌ ಕಾಡು ಮತ್ತೆ ಚೇತರಿಸಿಕೊಳ್ಳುತ್ತಿದೆ. ಅಗ್ನಿಜ್ವಾಲೆಯಲ್ಲಿ ಸುಟ್ಟು ಬೂದಿಯಾದ ಮರಗಳೆದಷ್ಟೋ….ಆದರೆ ಅರೆಬೆಂದ ಮರಗಳಿವೆಯಲ್ಲ…ಅವುಗಳ ತುದಿಗೆ ಹಸುರು ಚಿಗುರು ಕಾಣಿಸುತ್ತಿದೆ. ಬಣ್ಣ ಕಳೆದುಕೊಂಡು ಕಪ್ಪಾಗಿ, ಬಿರುಕು ಬಿಟ್ಟ ಈ ಮರಗಳ ಮಧ್ಯದಿಂದ ಗಿಳಿ ಹಸುರು ಬಣ್ಣದ ಎಲೆಗಳು ಇಣುಕಿ ಹಾಕುತ್ತಿವೆ. ಈ ಮರಗಳು ಮತ್ತೆ ಮೊದಲಿನಂತಾಗಲು ಇನ್ನೂ ಬಹಳ ಸಮಯ ಬೇಕು. ನೂರು ವರ್ಷಗಳೇ ಆಗಬಹುದು. ಆದರೆ ಮತ್ತೆ ಹುಟ್ಟಬೇಕು, ಬದುಕಬೇಕು, ಗಾಳಿಗೆ ಜೀಕಬೇಕು ಎಂಬ ಚೈತನ್ಯ ಇದೆಯಲ್ಲ ಅದು ನಮಗೆ, ಮಾನವರಿಗೆ ಸ್ಫೂರ್ತಿಯಾಗಬೇಕು. ಮೊದಲು ಕಾಡಿನ ತುಂಬ ಒತ್ತಾಗಿ ಮರಗಳಿದ್ದರಿಂದ ಸೂರ್ಯನ ಕಿರಣಗಳು ಭೂಮಿಯನ್ನು ಅಷ್ಟಾಗಿ ತಲುಪುತ್ತಿರಲಿಲ್ಲ. ಆದರೆ ಈಗ ಇಡೀ ಕಾಡು ಸೂರ್ಯನಿಗಾಗಿ ಬಾಯಿ ತೆರೆದುಕೊಂಡು ನಿಂತಿದೆ. ಇದರ ಪರಿಣಾಮವಾಗಿ ಹೊಸ ಬಗೆಯ ಹುಲ್ಲು, ಸಸಿಗಳು ಇಲ್ಲಿನ ನೆಲದಿಂದ ಟಿಸಿಲೊಡೆಯುತ್ತಿವೆ. ಬಿದ್ದು ಹೋದ ಮರಗಳ ಬೊಡ್ಡೆಗಳ ಮೇಲೂ ಹಸುರು ಚಿಗುರೊಡೆಯುತ್ತಿದೆ.

ಸದ್ಯಕ್ಕೆ ಇಡೀ ಕಾಡಿನಲ್ಲಿ ಓಡಾಡಲಿಕ್ಕೆ ಆಸ್ಪದವಿಲ್ಲ. ಒಂದು ಸಣ್ಣ ಸುತ್ತಿಗೆ ಮಾತ್ರ ಅವಕಾಶ. ಕೆಲವು ಮರಗಳು ಹೊಟ್ಟೆ ಬಿರಿದುಕೊಂಡು ಬೆಂಕಿಗೆ ಪೊಳ್ಳಾಗಿ ನಿಂತಿರುವುದನ್ನು ನೋಡಿದರೆ ಆ ಸಮಯದಲ್ಲಿ ಅದೆಷ್ಟು ನೋವನ್ನು ಅನುಭವಿಸಿದವೋ ಎಂದು ನೆನೆದು ಸಂಕಟವಾಗುತ್ತದೆ. ಮುಟ್ಟಿದರೆ ಎಲ್ಲಿ ಬೂದಿಯಾಗಿ ಕೈಯ್ಯೊಡನೆ ನೆಲಕ್ಕೆ ಉದುರುವವೇನೋ ಎಂಬಂತೆ ಇದ್ದಲಿನ ಹಾಗಾಗಿವೆ ಕೆಲವು ಮರಗಳು. ಈ ಕಾಡನ್ನು ಮತ್ತೆ ಮೊದಲಿನ ಹಾಗೆ ಮಾಡುವಲ್ಲಿ ಸಾಕಷ್ಟು ಪರಿಶ್ರಮ ಮತ್ತು ಹಣದ ಆವಶ್ಯಕತೆಯಿದೆ. ಮನುಷ್ಯ ಅದೆಷ್ಟೇ ಪ್ರಯತ್ನಿಸಿದರೂ ಈ ಕಾಡನ್ನು ಮತ್ತೆ ಮೊದಲಿನ ಹಾಗೆ ಮಾಡಲಿಕ್ಕೆ ಸಾಧ್ಯವಿಲ್ಲ. ಆ ವೈಭವ ಇನ್ನು ಮೇಲೆ ಬರಿಯ ಕಲ್ಪನೆಯಷ್ಟೇ. ಆದರೆ ಮನಸ್ಸಿಟ್ಟು ಕೆಲಸ ಮಾಡಿದರೆ ಮೊದಲಿದ್ದ ಕಾಡಿನ ಅರ್ಧದಷ್ಟನ್ನಾದರೂ ಮತ್ತೆ ಬದುಕಿಸಬಹುದು.

ಯಾವುದು ಅಸಾಧ್ಯವಿಲ್ಲ ಎಂದು ಈ ಮರಗಳೇ ನಮಗೆ ಪಾಠ ಹೇಳಿ ಕೊಡುತ್ತಿರುವಾಗ ಅಸಾಧ್ಯ ಎಂದು ಕೈ ಕಟ್ಟಿ ಕೂರುವುದು ಹೇಗೆ? ದೈತ್ಯ ಮರಗಳು ಬೆಂಕಿಯಲ್ಲಿ ಉರಿದು ನೆಲಕ್ಕೆ ಉರುಳದೇ, ಸೋಲನ್ನೊಪ್ಪಿಕೊಳ್ಳದೇ ಅರ್ಧ ಬೆಂದಿದ್ದರೂ ತಲೆಯೆತ್ತಿ ನಿಂತಿವೆ. ಅಂತಹ ಮರಗಳೇ ಈಗ ಭರವಸೆಯನ್ನು ಮೂಡಿಸಿರುವುದು. ನೂರಾರು ವರ್ಷಗಳಾದರೂ ಪರವಾಗಿಲ್ಲ ಆದರೆ ಈ ಕಾಡಿನ ಜೀವ ಮತ್ತೆ ಮರಳಿ ಬರುತ್ತದೆ ಎಂದರೆ ಖುಷಿಯ ಸಂಗತಿಯೇ ಅಲ್ಲವೇ!

*ಸಂಜೋತಾ ಪುರೋಹಿತ್‌

ಟಾಪ್ ನ್ಯೂಸ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರ್ನಾಟಕ ಸಂಘ ಕತಾರ್‌: ಮಹಿಳಾ ಮತ್ತು ಮಕ್ಕಳ ಪ್ರತಿಭಾನ್ವೇಷಣೆ-2025

ಕರ್ನಾಟಕ ಸಂಘ ಕತಾರ್‌: ಮಹಿಳಾ ಮತ್ತು ಮಕ್ಕಳ ಪ್ರತಿಭಾನ್ವೇಷಣೆ-2025

ಮನದ ಮಾತು ಎಂದರೇನು:ಅರಿವಿರುವುದು ಗೋಚರ, ಅರಿವಿಲ್ಲದ್ದು ಅಗೋಚರ!

ಮನದ ಮಾತು ಎಂದರೇನು:ಅರಿವಿರುವುದು ಗೋಚರ, ಅರಿವಿಲ್ಲದ್ದು ಅಗೋಚರ!

ಈ ಬಾರಿ ಫ್ಲೋರಿಡಾದ ಲೇಕ್‌ಲ್ಯಾಂಡ್‌ನ‌ಲ್ಲಿ ನಾವಿಕೋತ್ಸವ

ಈ ಬಾರಿ ಫ್ಲೋರಿಡಾದ ಲೇಕ್‌ಲ್ಯಾಂಡ್‌ನ‌ಲ್ಲಿ ನಾವಿಕೋತ್ಸವ

Desi Swara: ವಿಮಾನ ಪ್ರಯಾಣಗಳಲ್ಲಿ ನವರಸಾನುಭವಗಳು ಮತ್ತು ಫ‌ಜೀತಿಯ ಕ್ಷಣ!!

Desi Swara: ವಿಮಾನ ಪ್ರಯಾಣಗಳಲ್ಲಿ ನವರಸಾನುಭವಗಳು ಮತ್ತು ಫ‌ಜೀತಿಯ ಕ್ಷಣ!!

ಲಂಡನ್‌: ವಿಶ್ವದಲ್ಲೇ ಪ್ರಥಮ ಬಾರಿಗೆ “ಪುರಂದರ ನಮನ’

ಲಂಡನ್‌: ವಿಶ್ವದಲ್ಲೇ ಪ್ರಥಮ ಬಾರಿಗೆ “ಪುರಂದರ ನಮನ’

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.