Desi Swara: ಹೊನ್ನುಡಿ – ಆಯ್ಕೆಯಲ್ಲಿಯೇ ನಿಮ್ಮ ಪ್ರತಿಭೆ

ಆಯ್ಕೆ ಮಾಡುವುದರಲ್ಲಿಯೇ ಜೀವನ ಕರಗಿ ಹೋಗಬಾರದು

Team Udayavani, Aug 3, 2024, 2:23 PM IST

Desi Swara: ಹೊನ್ನುಡಿ – ಆಯ್ಕೆಯಲ್ಲಿಯೇ ನಿಮ್ಮ ಪ್ರತಿಭೆ

ನಮ್ಮ ದೇಶದ ಮೊದಲ ರಾಷ್ಟ್ರಪತಿ ಡಾ| ಬಾಬು ರಾಜೇಂದ್ರ ಪ್ರಸಾದರು 1956ರಲ್ಲಿ ಬರೆದ ಲೇಖನವೊಂದನ್ನು ಇಲ್ಲಿ ಪ್ರಸ್ತಾವಿಸುತ್ತಿದ್ದೇವೆ. ಇಂದು ಅವರ ಜನ್ಮದಿನವೂ ಅಲ್ಲ. ಪುಣ್ಯಸ್ಮರಣೆಯ ದಿನವೂ ಅಲ್ಲ. ನಿತ್ಯ ನೆನಪಿನಲ್ಲಿ ಉಳಿಯುವವರು ಬಾಬೂಜಿ. ಆ ವರ್ಷ ನಮ್ಮ ಭಾಷಾವಾರು ಪ್ರಾಂತ ರಚನೆಯಾದ ಸಂದರ್ಭವದು. ದೇಶದ ಐಕ್ಯತೆಗೆ ಧಕ್ಕೆ ಬರಬಾರದೆಂಬ ಮಾತನ್ನು ಮನದಟ್ಟು ಮಾಡುವಾಗ ಅವರು ಲೇಖನದಲ್ಲಿ ಪ್ರತಿಪಾದಿಸಿದ ಮಾತೊಂದು ಸೂಜಿಗಲ್ಲಿನಂತೆ ಸೆಳೆಯುತ್ತದೆ.

ನೀವು ದಟ್ಟ ಅಡವಿಯಲ್ಲಿ ನಡೆಯುತ್ತಿರುವಾಗ ಒಂದು ಸುಂದರವಾದ ಮರ ನಿಮ್ಮ ಮನಸ್ಸನ್ನು ಆಕರ್ಷಿಸುತ್ತದೆ. ಅದನ್ನೇ ನೋಡುತ್ತ ನಿಂತ ನಿಮಗೆ ಸಮಯ ಕಳೆದು ಹೋದದ್ದೇ ಗೊತ್ತಾಗುವುದಿಲ್ಲ. ನಮ್ಮ ನೆರಳು ಉದ್ದವಾಗ ತೊಡಗಿದಾಗ ಸಂಜೆ ಆವರಿಸುವ ಮುನ್ಸೂಚನೆ ದೊರಕುತ್ತದೆ. ಇದ್ದ ಸಮಯವನ್ನೆಲ್ಲ ಒಂದೇ ಮರ ನೋಡುವುದರಲ್ಲಿ ಕಳೆದು ದಟ್ಟವಾದ ಅಡವಿಯನ್ನೆಲ್ಲ ಸುತ್ತಾಡಿ ಬರುವಾಗ ನಿಮಗೆ ಹೆಚ್ಚಿನ ಸುಂದರ ಮರಗಳು, ಗಿಡ, ಬಳ್ಳಿಗಳನ್ನು ನೋಡುವ ಅವಕಾಶ ತಪ್ಪಿ ಹೋಗುತ್ತದೆ. ಬದುಕು ಕೂಡಾ ಹೀಗೆ ಅಲ್ಲವೇ? ಯಾವುದೋ ಒಂದು ಸಣ್ಣ ಆಯ್ಕೆಯಿಂದ ಆಕರ್ಷಿತರಾಗಿ ಇನ್ನೂ ದೊರೆಯಬಹುದಾಗಿದ್ದ ಅನೇಕ ಅವಕಾಶಗಳನ್ನು ಕಳೆದುಕೊಂಡು ಬಿಡುತ್ತೇವೆ.

ಈ ಮಾತನ್ನು ಬಹಳ ಎಚ್ಚರದಿಂದ ಹೇಳುತ್ತಿದ್ದೇನೆ. ಆಯ್ಕೆ ಮಾಡುವುದರಲ್ಲಿಯೇ ಜೀವನ ಕರಗಿ ಹೋಗಬಾರದು. ಯಾವುದನ್ನು ಆಯ್ದುಕೊಳ್ಳುವುದರಿಂದ ಜೀವನ ಹೆಚ್ಚು ಸಫಲವಾಗುತ್ತದೆ ಎಂಬುದನ್ನು ನಮ್ಮ ಸೂಕ್ಷ್ಮ ಸಂವೇದನೆಯಿಂದ ಅರಿತುಕೊಂಡು ಕಾರ್ಯಪ್ರವೃತ್ತರಾಗಬೇಕು. ಈಗ ಬದುಕು ಮೊದಲಿನಂತಿಲ್ಲ. ನಮ್ಮ ಯುವಕರ ಎದುರು ಅನೇಕ ಆಯ್ಕೆಗಳಿವೆ. ಅದರಲ್ಲಿ ಅವರ ಯೋಗ್ಯತೆ, ಸಾಮರ್ಥ್ಯ ಅನುಸರಿಸಿ ಒಂದನ್ನು ಆಯ್ಕೆ ಮಾಡಿಕೊಳ್ಳಲಿ. ಬಿಟ್ಟು ಬಿಡದೇ ಅದರ ಹಿಂದೆ ಬಿದ್ದು ಅದನ್ನೆ ಧ್ಯಾನಿಸಿ, ಚಿಂತಿಸಲಿ.

ಪರಿಶ್ರಮಪಡಲಿ. ನಿಮ್ಮ ಆಯ್ಕೆ ಸುಪ್ತ ಪ್ರಜ್ಞೆಯಿಂದಲೂ ಜಾರಿಹೋಗದಿರಲಿ. ಜಾಗೃತಾವಸ್ಥೆಯಲ್ಲೂ ಅದೇ ಕಣ್ಣಿನ ಮುಂದೆ ಇರಲಿ. ಯಾವ ಹಿರಿದಾದ ಆಯ್ಕೆಯೂ ಸುಮ್ಮನೇ ಸಾಕಾರಗೊಳ್ಳುವುದಿಲ್ಲ. ಯಶಸ್ಸಿನ ಹಾದಿ ಅಂದವಾದ ಸಿಮೆಂಟಿನ ದಾರಿಯಲ್ಲ. ಅದು ಕಲ್ಲು ಮುಳ್ಳಿನ ದಾರಿ. ಸಾಧಿಸುವ ಛಲವೊಂದಿದ್ದರೆ ಏನೆಲ್ಲವೂ ಸಾಧ್ಯ!

ಟಾಪ್ ನ್ಯೂಸ್

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

aatishi

Delhi CM;5 ಸಚಿವರೊಂದಿಗೆ ನಾಳೆ ಆತಿಷಿ ಪ್ರಮಾಣ ವಚನ ಸ್ವೀಕಾರ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಬುಧಾಬಿ: ಯು.ಎ.ಇ: ಸಿ.ಬಿ.ಎಸ್.ಸಿ.ಕ್ಲಸ್ಟರ್ ವಿಭಾಗದ ಚೆಸ್ ಟೂರ್ನಮೆಂಟ್ ಉದ್ಘಾಟನೆ

ಅಬುಧಾಬಿ: ಯು.ಎ.ಇ: ಸಿ.ಬಿ.ಎಸ್.ಸಿ.ಕ್ಲಸ್ಟರ್ ವಿಭಾಗದ ಚೆಸ್ ಟೂರ್ನಮೆಂಟ್ ಉದ್ಘಾಟನೆ

Desi Swara: “ಅಕ್ಕ’ ಅರಮನೆಯ ರಚನೆಯ ನೆನ್ನೆ, ಇಂದು, ನಾಳೆಗಳು

Desi Swara: “ಅಕ್ಕ’ ಅರಮನೆಯ ರಚನೆಯ ನೆನ್ನೆ, ಇಂದು, ನಾಳೆಗಳು

Desi Swara: 12ನೆಯ ಅಕ್ಕ ಸಮ್ಮೇಳನ: ವೀರಶೈವ 10 ಸಾವಿರ ವರ್ಷಗಳ ಪ್ರಾಚೀನ ಧರ್ಮ

Desi Swara: 12ನೆಯ ಅಕ್ಕ ಸಮ್ಮೇಳನ: ವೀರಶೈವ 10 ಸಾವಿರ ವರ್ಷಗಳ ಪ್ರಾಚೀನ ಧರ್ಮ

Desi Swara: ಮಸ್ಕತ್‌- 40ನೇ ವರ್ಷದ ಗಣೇಶೋತ್ಸವ-ಮೂರು ದಿನದ ಉತ್ಸವ

Desi Swara: ಮಸ್ಕತ್‌- 40ನೇ ವರ್ಷದ ಗಣೇಶೋತ್ಸವ-ಮೂರು ದಿನದ ಉತ್ಸವ

Desi Swara: ಹೊನ್ನುಡಿ-ಜ್ಞಾನ ಬಳಸಿದರಷ್ಟೇ ಶ್ರೇಷ್ಠ..ಗರ್ವದಿಂದ ಹೊತ್ತು ತಿರುಗಬಾರದು…

Desi Swara: ಹೊನ್ನುಡಿ-ಜ್ಞಾನ ಬಳಸಿದರಷ್ಟೇ ಶ್ರೇಷ್ಠ..ಗರ್ವದಿಂದ ಹೊತ್ತು ತಿರುಗಬಾರದು…

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

aatishi

Delhi CM;5 ಸಚಿವರೊಂದಿಗೆ ನಾಳೆ ಆತಿಷಿ ಪ್ರಮಾಣ ವಚನ ಸ್ವೀಕಾರ

kangana-2

Emergency ಚಿತ್ರ; 25ರೊಳಗೆ ಬಿಡುಗಡೆ ನಿರ್ಧರಿಸಿ: ಕೋರ್ಟ್‌

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

Pannu Singh

Khalistani; ಭಾರತದ ವಿರುದ್ಧ ಅಮೆರಿಕ ಕೋರ್ಟ್‌ಗೆ ಪನ್ನು ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.