Environment Report:ಭಾರತ ಸೇರಿದಂತೆ ವಿಶ್ವದಲ್ಲಿ ಇನ್ನೇನಿದ್ದರೂ ಹವಾಮಾನ ಅನಿಶ್ಚಿತ ಕಾಲ !

ಕಳೆದ ವರ್ಷ (2023) ಇತಿಹಾಸದಲ್ಲೇ ಅತಿ ಹೆಚ್ಚು ಹವಾಮಾನ ವೈಫರೀತ್ಯ ದಿನಗಳನ್ನು ಕಂಡಿದೆ

Team Udayavani, Feb 29, 2024, 11:39 AM IST

Environment Report:ಭಾರತ ಸೇರಿದಂತೆ ವಿಶ್ವದಲ್ಲಿ ಇನ್ನೇನಿದ್ದರೂ ಹವಾಮಾನ ಅನಿಶ್ಚಿತ ಕಾಲ !

ಜೈಪುರ್: ಭಾರತವೂ ಸೇರಿದಂತೆ ವಿಶ್ವದಲ್ಲಿ ಇನ್ನೇನಿದ್ದರೂ ಹವಾಮಾನ ಅನಿಶ್ಚಿತ ಕಾಲ ! ಇದನ್ನು ಈಗಾಗಲೇ ಅನುಭವಿಸುತ್ತಿದ್ದೇವೆ.‌ಮಳೆ ಬರುವ ಕಾಲಕ್ಕೆ ಮಳೆ ಬಾರದು, ಚಳಿ ಕರೆಯದೇ ದಿಢೀರ್ ಅತಿಥಿಯಂತೆ ಬರುವುದು, ಬಹುತೇಕ ವರ್ಷಪೂರ್ತಿ ಉರಿ, ಸೆಕೆ , ಬಿಸಿಲುಗಾಲ ಎನಿಸುವುದು.ಕರ್ನಾಟಕದಲ್ಲೂ ಕಳೆದ ವರ್ಷ ಹಿಂದಿನ ವರ್ಷಗಳಿಗಿಂತ ಹೆಚ್ಚು ಅತಿ ತಾಪಮಾನ ದಿನಗಳನ್ನು ಅನುಭವಿಸಿದ್ದೇವೆ.

ಹವಾಮಾನ ವೈಪರೀತ್ಯ ಮನೆ ಬಾಗಿಲಿನಲ್ಲಿ ಬಂದು ನಿಂತಿದೆ. ನಾವು ಅಪರಿಚಿತ ಮತ್ತು ಅನಗತ್ಯ ಅತಿಥಿಗೆ ಬಾಗಿಲು ತೆಗೆಯದಿದ್ದರೂ ನಮ್ಮ ಅವೈಜ್ನಾನಿಕ ಅಭಿವೃದ್ದಿ, ಪರಿಸರ ಮಾಲಿನ್ಯ ಇತ್ಯಾದಿ ಅಂಶಗಳು ಬಾಗಿಲು ತೆಗೆಯತೊಡಗಿವೆ.

ಸಿಎಸ್ಇ (ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ ವಾಯಿರ್ ಮೆಂಟ್) ಬಿಡುಗಡೆ ಮಾಡಿದ ದೇಶದ ವಾರ್ಷಿಕ ಪರಿಸರ ವರದಿಯ ಅಂಕಿ ಅಂಶಗಳ ಪ್ರಕಾರ ಕಳೆದ ವರ್ಷ (2023) ಇತಿಹಾಸದಲ್ಲೇ ಅತಿ ಹೆಚ್ಚು ಹವಾಮಾನ ವೈಫರೀತ್ಯ ದಿನಗಳನ್ನು ಕಂಡಿದೆ. 1850-1900 (ಕೈಗಾರಿಕಾ ಯುಗ ಪೂರ್ವ) ರ ದಾಖಲೆಯನ್ನೂ ಹಿಂದಿಕ್ಕಿರುವ 2023 ಅತಿ ಹೆಚ್ಚು ತಾಮಾನ ವರ್ಷವಾಗಿ ದಾಖಲಾಗಿದೆ.

ಹಿಂದಿನ‌ ದಾಖಲೆಗಿಂತ 1.48 ಡಿಗ್ರಿ ಹೆಚ್ಚು ತಾಪಮಾನವನ್ನು ಅನುಭವಿಸಲಾಗಿದೆ. ವರ್ಷದ 365 ರಲ್ಲಿ 318 ದಿನಗಳು ವಿವಿಧ ಹವಾಮಾನ ‌ವೈಪರೀತ್ಯಕ್ಕೆ ಸಾಕ್ಷಿಯಾಗಿವೆ. ಅಂದರೆ ಕೇವಲ 47 ದಿನಗಳು ಮಾತ್ರ ಹಿತಾನುಭವ ನೀಡುವ ದಿನಗಳಾಗಿದ್ದವು. ಇದರರ್ಥ ಮಳೆಗಾಲ, ಚಳಿಗಾಲ, ಸೆಕೆಗಾಲ ಎನ್ನುವುದನ್ನು ಗಾಳಿಗೆ ತೂರಿ ಒಂದೂವರೆ ತಿಂಗಳು‌ ಮಾತ್ರ ಹವಾಮಾನ ಹಿತಕರವೆನಿಸಿತ್ತು.

122 ವರ್ಷಗಳ ಪೈಕಿ ಕಳೆದ ವರ್ಷದ ಆಗಸ್ಟ್ ಮತ್ತು ಸೆಪ್ಟೆಂಬರ್ ಅತಿ ಹೆಚ್ಚು ತಾಪಮಾನದಿಂದ ಕೂಡಿತ್ತು. ಒಟ್ಟೂ ಹವಾಮಾನ ವೈಪರೀತ್ಯದ ಬೆಳವಣಿಗೆಗಳಿಂದ‌ 3287 ಪ್ರಾಣಹಾನಿ ಸಂಭವಿಸಿದ್ದರೆ, 2.21 ದಶಲಕ್ಷ ಹೆಕ್ಟೇರ್ ಪ್ರದೇಶ ಬೆಳೆ ಹಾನಿಯಾಗಿತ್ತು. 1,24, 813 ಜಾನುವಾರುಗಳು ಸತ್ತಿದ್ದವು. ವಿಚಿತ್ರವೆಂದರೆ ಎಲ್ಲ 36 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳೂ‌ ಈ ಹವಾಮಾನ ವೈಪರೀತ್ಯವನ್ನು‌ ಅನುಭವಿಸಿವೆ. ಹಿಮಾಚಲ ‌ಪ್ರದೇಶದಲ್ಲಿ 149, ಮಧ್ಯ ಪ್ರದೇಶ141, ಕೇರಳ ಹಾಗೂ ಉತ್ತರ ಪ್ರದೇಶ 119 ದಿನಗಳನ್ನು ಅನುಭವಿಸುವ ಮೂಲಕ ಅತಿ ಹೆಚ್ಚು ಸಮಸ್ಯೆ ಎದುರಿಸಿದ ರಾಜ್ಯಗಳ ಸಾಲಿನಲ್ಲಿವೆ ಎಂದಿದೆ ವರದಿ.

ಹವಾಮಾನ ವೈಪರೀತ್ಯ ಘಟನೆಗಳನ್ನು ಪ್ರತ್ಯೇಕಿಸಿ ನೋಡುವುದಾದರೆ, ದೇಶದ ಯಾವುದಾದರೂ ಒಂದು ಪ್ರದೇಶದಲ್ಲಿ 208 ದಿನಗಳಲ್ಲಿ ಅತಿ ಮಳೆ, ನೆರೆ, ಭೂಕುಸಿತವಾಗಿದ್ದರೆ, 202 ದಿನಗಳಲ್ಲಿ ಮಿಂಚು, ತೀವ್ರವಾದ ಗಾಳಿ, 49 ದಿನಗಳು‌ ಬಿಸಿಗಾಳಿಯ ತೀವ್ರತೆ ಹೆಚ್ಚಿತ್ತು. ಜತೆಗೆ ಶೀತಗಾಳಿಯ ತೀವ್ರತೆ, ಮೇಘಸ್ಪೋಟಗಳ ದಿನಗಳೂ ಇದ್ದವು.

ಜಾಗತಿಕವಾಗಿ ಭಾರತವೂ ಸೇರಿದಂತೆ 109 ದೇಶಗಳು‌ ಹವಾಮಾನ ವೈಪರೀತ್ಯದ ಬೆಳವಣಿಗೆ/ಘಟನೆಗಳಿಂದ ವಿವಿಧ‌ ರೀತಿಯ ನಷ್ಟವನ್ನು ಅನುಭವಿಸಿವೆ. ಈ ಪೈಕಿ ಆಫ್ರಿಕಾ, ಯುರೊಪ್ ಹಾಗೂ ಪಶ್ಚಿಮ ಏಷ್ಯಾದ 59 ರಾಷ್ಟ್ರಗಳು ಅತಿ ಹೆಚ್ಚು ನಷ್ಟ ಅನುಭವಿಸಿದ್ದರೆ, ಇಂಡೋನೇಶಿಯಾದಲ್ಲಿ ಅತಿಹೆಚ್ಚು ಮಂದಿ ನಷ್ಟಕ್ಕೆ ಗುರಿಯಾಗಿದ್ದಾರೆ. ಲಿಬಿಯಾದಲ್ಕಿ ಅತಿ ಹೆಚ್ಚು ಪ್ರಾಣಹಾನಿ ಸಂಭವಿಸಿದೆ ಎನ್ನುತ್ತದೆ ವರದಿ.

ಸಿಎಸ್ಇ ಯ ಅನಿಲ್ ಅಗರವಾಲ್ ವಾರ್ಷಿಕ ಪರಿಸರ ಮತ್ತು ಅಭಿವೃದ್ದಿ ಸಂವಾದದಲ್ಲಿ ಅರ್ಥಶಾಸ್ತ್ರಜ್ಞರಾದ ನಿತಿನ್ ದೇಸಾಯಿ,‌ಹಿರಿಯ ಪತ್ರಕರ್ತ ಟಿಎನ್ ನಿನಾನ್, ಸಿಎಸ್ಇ ಡಿಜಿ ಸುನೀತಾ ನಾರಾಯಣ್ ವಾರ್ಷಿಕ ವರದಿಯನ್ನು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸುನಿತಾ, ಹವಾಮಾನ ವೈಪರೀತ್ಯದಿಂದ ವಲಸೆಗೆ ಗುರಿಯಾಗುತ್ತಿರುವವರ‌ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ ಎಂದರು. ಅಲ್ಲದೇ, ಹವಾಮಾನ ವೈಪರೀತ್ಯ ಪರಿಣಾಮಗಳನ್ನು ಎದುರಿಸಲು ಕೇವಲ ತಾಂತ್ರಿಕವಾಗಿ ಸಬಲರಾದರೆ ಸಾಲದು. ನೀತಿ‌ ನಿರೂಪಣೆ ಹಾಗೂ ಪರಿಸರ ನಿಯಮ ಅನುಷ್ಠಾನ ಸಂಸ್ಥೆಗಳನ್ನು ಬಲಿಷ್ಠಗೊಳಿಸಬೇಕಿದೆ ಎಂದು ಹೇಳಿದರು.
ಸಿಎಸ್ಇ ಪರಿಸರ ಮತ್ತು ಅಭಿವೃದ್ದಿ ನೀತಿ ನಿರೂಪಣೆಯಲ್ಲಿ ತೊಡಗಿದ್ದು, ಅಧ್ಯಯನ ಕೃತಿಗಳನ್ನು ಪ್ರಕಟಿಸುವುದರ ಜತೆಗೆ ವಿವಿಧ ಕಾರ್ಯಾಗಾರಗಳು, ತರಬೇತಿಗಳನ್ನು‌ ನಿರಂತರವಾಗಿ ಹಮ್ಮಿಕೊಳ್ಳುತ್ತದೆ.

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

NDA-Meet

NDA CMs Meet: ರಾಷ್ಟ್ರದ ಅಭಿವೃದ್ಧಿಗೆ ಎನ್‌ಡಿಎ ಬದ್ಧ: ಪ್ರಧಾನಿ ಮೋದಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.