Fact Check: ಇರಾನ್ ಕ್ಷಿಪಣಿ ದಾಳಿಯಿಂದ ರಕ್ಷಣೆಗಾಗಿ ಬೆಂಜಮಿನ್ ಬಂಕರ್ ನತ್ತ ಓಡಿದ್ದರೇ?
ಹೈಪರ್ ಸಾನಿಕ್ ಮಿಸೈಲ್ಸ್ ಗಳು ಇಸ್ರೇಲ್ ವಾಯುನೆಲೆ ಮೇಲೆ ಬಂದು ಬಿದ್ದಿದೆ...
Team Udayavani, Oct 2, 2024, 5:06 PM IST
ಟೆಲ್ ಅವಿವ್: ಇರಾನ್ ಸೇನಾ(Irna Military) ಪಡೆ ಮಂಗಳವಾರ(ಅ.01) ರಾತ್ರಿ ಇಸ್ರೇಲ್(Israel) ಮೇಲೆ ಭಾರೀ ಪ್ರಮಾಣದ ರಾಕೆಟ್ ದಾಳಿ ನಡೆಸಿತ್ತು. ಏತನ್ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ತುಣುಕಿನಲ್ಲಿ, ಇರಾನ್ ರಾಕೆಟ್ ದಾಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬಂಕರ್ ನತ್ತ ಓಡುತ್ತಿರುವ ದೃಶ್ಯ ವೈರಲ್ ಆಗಿದೆ…ಇದು ನಿಜಕ್ಕೂ ಅಸಲಿಯೋ ಅಥವಾ ನಕಲಿಯೋ?
ಇರಾನ್ ನ ಕೆಲವು ಹೈಪರ್ ಸಾನಿಕ್ ಮಿಸೈಲ್ಸ್ ಗಳು ಇಸ್ರೇಲ್ ವಾಯುನೆಲೆ ಮೇಲೆ ಬಂದು ಬಿದ್ದಿದ್ದು, ಸಾವಿರಾರು ಜನರು ರಕ್ಷಣೆಗಾಗಿ ಪರದಾಡುತ್ತಿರುವುದಾಗಿ ವರದಿ ತಿಳಿಸಿದೆ.
ಇರಾನ್ ಪರವಾದ ಸಾಮಾಜಿಕ ಜಾಲತಾಣ ಹ್ಯಾಂಡಲ್ಸ್ ನಲ್ಲಿ ಈ ವಿಡಿಯೋ ಕ್ಲಿಪ್ ಅನ್ನು ಶೇರ್ ಮಾಡಿದ್ದು, “ಬೆಂಜಮಿನ್ ನೆತನ್ಯಾಹು ಬಂಕರ್ ನತ್ತ ಓಡುತ್ತಿರುವುದು ಎಂಬುದಾಗಿ ಉಲ್ಲೇಖಿಸಲಾಗಿದೆ”.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕ್ಷಣಗಳು… ಇರಾನ್ ಪ್ರತೀಕಾರ ಎದುರಿಸಿದ ನೆತನ್ಯಾಹು ಬಂಕರ್ ನತ್ತ ಓಡಿಹೋಗುತ್ತಿರುವುದು ಎಂಬುದಾಗಿ ಮತ್ತೊಂದು ಪೋಸ್ಟ್ ನಲ್ಲಿ ವ್ಯಂಗ್ಯವಾಡಲಾಗಿದೆ.
One of the most memorable scenes from Israel – Netanyahu flees to the bunker! pic.twitter.com/uAlcIwi87T
— S p r i n t e r (@SprinterFamily) October 1, 2024
ಫ್ಯಾಕ್ಟ್ ಚೆಕ್:
ಇರಾನ್ ಕ್ಷಿಪಣಿ ದಾಳಿಯಿಂದ ರಕ್ಷಿಸಿಕೊಳ್ಳಲು ಇಸ್ರೇಲ್ ಪ್ರಧಾನಿ ನೆತನ್ಯಾಹು ಬಂಕರ್ ನತ್ತ ಓಡುತ್ತಿರುವ ವಿಡಿಯೋ ವೈರಲ್ ಆಗಿದೆ. ಆದರೆ ಈ ವಿಡಿಯೋ ಸುಮಾರು ಮೂರು ವರ್ಷ ಹಳೆಯದ್ದು. ಈ ವಿಡಿಯೋವನ್ನು 2021ರಲ್ಲಿ Fact Corroborated ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿತ್ತು.
ಒರಿಜಿನಲ್ ವಿಡಿಯೋದಲ್ಲಿ ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲ್ ಸಂಸತ್ತಿನ ನೆಸೆಟ್ ಕಾರಿಡಾರ್ ನಲ್ಲಿ ಓಡುತ್ತಿರುವ ದೃಶ್ಯ ಇದಾಗಿದ್ದು, ಅದನ್ನೇ ಇರಾನ್ ದಾಳಿಗೆ ಬಳಸಿಕೊಂಡು ವ್ಯಂಗ್ಯವಾಡಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Narrowly Escape: ಕುಸಿದು ಬಿದ್ದ ನೂರು ವರ್ಷ ಹಳೆಯ ಕಟ್ಟಡ… ಓಡಿ ಪಾರಾದ ತಾಯಿ, ಮಗು
Video: ಮನೆಗೆ ನುಗ್ಗಲು ಯತ್ನಿಸಿದ ಮೂವರು ಕಳ್ಳರನ್ನು ಬಾಗಿಲಲ್ಲೇ ತಡೆದು ನಿಲ್ಲಿಸಿದ ಮಹಿಳೆ!
Gujarat; ಸೆ*ಕ್ಸ್ ನಂತರ ಗುಪ್ತಾಂಗದಿಂದ ತೀವ್ರ ರಕ್ತಸ್ರಾ*ವವಾಗಿ ಯುವತಿ ಸಾ*ವು
Sleep Champion; ನಿದ್ದೆ ಮಾಡಿ 9 ಲಕ್ಷ ರೂ ಗೆದ್ದ ಬೆಂಗಳೂರಿನ ಯುವತಿ
Fake Currency: 500 ರೂ. ನಕಲಿ ನೋಟುಗಳಲ್ಲಿ ಗಾಂಧಿ ಬದಲು ಅನುಪಮ್ ಖೇರ್ ಫೋಟೊ!
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Gudibande: ದಪ್ಪರ್ತಿ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಕನ್ನ…
Sandalwood: ಶೀಘ್ರಮೇವ ಗೆಲುವು ಪ್ರಾಪ್ತಿರಸ್ತು
Gandhi Jayanthi:ರಾಷ್ಟ್ರಧ್ವಜ ಹಿಡಿದೇ ಸಿಎಂ ಸಿದ್ದರಾಮಯ್ಯ ಶೂ ಲೇಸ್ ಬಿಚ್ಚಿದ ಕಾರ್ಯಕರ್ತ!
Vettaiyan Trailer: ಪಾಪಿಗಳ ಎನ್ಕೌಂಟರ್ ಮಾಡಲು ಖಾಕಿ ತೊಟ್ಟು ಬಂದ ʼತಲೈವಾʼ
Chincholi: ಬಟ್ಟೆ ಒಗೆಯುವ ವೇಳೆ ನದಿ ನೀರಿನ ಪ್ರವಾಹಕ್ಕೆ ಕೊಚ್ಚಿ ಹೋದ ಮಹಿಳೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.