ಡಿಜಿಟಲ್‌ ಫ್ಲುಯೆನ್ಸಿ ಪರೀಕ್ಷೆಗೆ ಹಗ್ಗಜಗ್ಗಾಟ; ನಮಗೆ ಅವಕಾಶ ಕೊಡಿ: ಕಾಲೇಜುಗಳು

ನಮ್ಮಿಂದಲೇ ನಡೆಸಲು ಚಿಂತನೆ: ವಿವಿ

Team Udayavani, Mar 7, 2022, 7:15 AM IST

ಡಿಜಿಟಲ್‌ ಫ್ಲುಯೆನ್ಸಿ ಪರೀಕ್ಷೆಗೆ ಹಗ್ಗಜಗ್ಗಾಟ; ನಮಗೆ ಅವಕಾಶ ಕೊಡಿ: ಕಾಲೇಜುಗಳು

ಮಂಗಳೂರು: ಬಹುನಿರೀಕ್ಷಿತ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದ ಬಳಿಕ ನಡೆ ಯುವ ಮೊದಲ ಪದವಿಯ “ಡಿಜಿಟಲ್‌ ಫ್ಲುಯೆನ್ಸಿ’ ವಿಷಯದ ಪರೀಕ್ಷೆ ಈಗ ವಿವಿಧ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಮಧ್ಯೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ.

“ಡಿಜಿಟಲ್‌ ಫ್ಲುಯೆನ್ಸಿ’ ವಿಷಯವನ್ನು ಕಾಲೇಜಿನಲ್ಲಿ ಬಹಳ ತಡವಾಗಿ ಬೋಧಿಸಲಾಗಿದೆ ಹಾಗೂ ಸಂಬಂಧಿಸಿದ ಉಪ ನ್ಯಾಸಕರಿಗೆ ತರಬೇತಿಯನ್ನೂ ಸರಕಾರ ನೀಡಿಲ್ಲ. ಪ್ರಶ್ನೆಗಳಿಗೆ ವಿವರಣೆಯೂ ದೊರಕಿಲ್ಲ. ಉಪನ್ಯಾಸ ಕರ ನೇಮಕ ತಡವಾಗಿದ್ದುದು ಒಂದೆಡೆ ಯಾದರೆ, ಅತಿಥಿ ಉಪನ್ಯಾಸಕರ ಪ್ರತಿ ಭಟನೆಯಿಂದ “ಡಿಜಿಟಲ್‌ ಫ್ಲುಯೆನ್ಸಿ’ ಬೋಧನೆ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಹೀಗಾಗಿ ಈ ವರ್ಷ ಈ ಪರೀಕ್ಷೆಯನ್ನು ಕಾಲೇಜು ಮಟ್ಟದಲ್ಲೇ ನಡೆಸಲು ಅವಕಾಶ ನೀಡುವಂತೆ ವಿವಿಯನ್ನು ಕೋರ ಲಾಗಿದೆ. ಆದರೆ ನೂತನ ಶಿಕ್ಷಣ ನೀತಿ ಕಾರಣ ದಿಂದ ಪರೀಕ್ಷೆಯನ್ನು ಕಾಲೇಜು ಮಟ್ಟದಲ್ಲಿ ನಡೆಸುವುದು ಸೂಕ್ತವಲ್ಲದ ಕಾರಣ ತಾನೇ ನಡೆಸಲು ವಿವಿ ಆಸಕ್ತಿ ವಹಿಸಿದೆ. ಒಂದು ವೇಳೆ ಅನುತ್ತೀರ್ಣರಾದರೆ ಕೃಪಾಂಕ (ಗ್ರೇಸ್‌ ಮಾರ್ಕ್‌) ನೀಡುವ ಬಗ್ಗೆಯೂ ವಿವಿ ಚಿಂತನೆ ನಡೆಸಿದೆ.

36 ಕಾಲೇಜಿನಿಂದ ವಿವಿಗೆ ಪತ್ರ
ಡಿಜಿಟಲ್‌ ಫ್ಲುಯೆನ್ಸಿಗೆ ಸಂಬಂಧಿಸಿ ಈ ಬಾರಿ ಬಹುತೇಕ ಕಾಲೇಜಿನಲ್ಲಿ ಪಾಠಗಳು ಸಮರ್ಪಕವಾಗಿ ನಡೆದಿಲ್ಲ.ಜತೆಗೆ ಅದು ಅತ್ಯಂತ ಕಠಿನ ವಿಷಯವಾಗಿದ್ದು, ಅದರ ಬೋಧನೆಗೆ ಬಹುತೇಕ ಕಾಲೇಜಿನಲ್ಲಿ ಉಪನ್ಯಾಸಕರಿಲ್ಲ. ಜತೆಗೆ ಬಹುತೇಕ ಕಾಲೇಜಿನಲ್ಲಿ ಅರ್ಹ ಉಪನ್ಯಾಸಕರು ಬೋಧಿಸಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಮನದಟ್ಟಾಗಿಲ್ಲ. ಇದರಿಂದಾಗಿ ಕಾಲೇಜು ಮಟ್ಟದಲ್ಲಿ ನಾವು ಬೋಧಿಸಿರುವ ಸ್ವರೂಪದಲ್ಲೇ ಪರೀಕ್ಷೆ ನಡೆಸುತ್ತೇವೆ ಎಂದು 36 ಕಾಲೇಜಿನ ಪ್ರಾಂಶುಪಾಲರು ಮಂಗಳೂರು ವಿವಿಗೆ ಪತ್ರದ ಮೂಲಕ ಕೋರಿಕೊಂಡಿದ್ದಾರೆ.

ಆಂತರಿಕವಾಗಿಯೇ ನಡೆಯಲಿದೆ ಪ್ರಾಯೋಗಿಕ ಪರೀಕ್ಷೆ
ಪದವಿ ಪರೀಕ್ಷೆಯನ್ನು 1 ತಿಂಗಳು ಮುಂದೂಡುವಂತೆ ಸರಕಾರ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಈ ಅವಧಿಯೊಳಗೆ ಎಲ್ಲ ಕಾಲೇಜಿನ ಪ್ರಾಯೋಗಿಕ ಪರೀಕ್ಷೆಯನ್ನು ಮುಗಿಸಬೇಕಾದ ಅನಿವಾರ್ಯತೆ ವಿವಿಗೆ ಎದುರಾಗಿದೆ. ಆದರೆ ಇದು ಕಷ್ಟದಾಯಕ. ಯಾಕೆಂದರೆ ಈ ಹಿಂದೆ ಪ್ರಾಯೋಗಿಕ ಪರೀಕ್ಷೆಯನ್ನು ಆಂತರಿಕ ಹಾಗೂ ಬಾಹ್ಯ ವೀಕ್ಷಕರ ಮೂಲಕ ನಡೆಸಲಾಗುತ್ತಿತ್ತು. ಇದಕ್ಕಾಗಿ ಒಂದು ಪ್ರೊಫೆಸರ್‌ ಮತ್ತೊಂದು ಕಾಲೇಜಿಗೆ ಮೂರು ವಾರ ಹೋಗಬೇಕಾಗಿದೆ. ಇದು ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳ ಕಲಿಕೆಗೆ ಹೊಡೆತ ಬೀಳಲಿದೆ. ಹೀಗಾಗಿ ಈ ಬಾರಿಯೂ ಪ್ರಾಯೋಗಿಕ ಪರೀಕ್ಷೆ ಆಯಾ ಕಾಲೇಜಿನ ಆಂತರಿಕವಾಗಿಯೇ ನಡೆಸಲು ತೀರ್ಮಾನಿಸಲಾಗಿದೆ. ಸ್ನಾತಕೋತ್ತರ ವಿದ್ಯಾರ್ಥಿಗಳಿಗೂ ಇದೇ ಮಾದರಿ ಅನುಸರಿಸಲು ಆಗ್ರಹ ಕೇಳಿಬಂದಿದೆ.

ಏನಿದು “ಡಿಜಿಟಲ್‌ ಫ್ಲುಯೆನ್ಸಿ’?
ಸದ್ಯ ಜಾಗತಿಕವಾಗಿ ಡಿಜಿಟಲ್‌ ಕ್ಷೇತ್ರ ದಲ್ಲಿ ಆಮೂಲಾಗ್ರ ಅವಕಾಶಗಳ ಹಿನ್ನೆಲೆ ಯಲ್ಲಿ ಕಂಪ್ಯೂಟರ್‌ ಕೇಂದ್ರಿತ ವಿವಿಧ ಆಯಾಮ ಗಳಲ್ಲಿ ಡಿಜಿಟಲ್‌ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ನೂತನ ಶಿಕ್ಷಣ ನೀತಿಯಡಿ “ಡಿಜಿಟಲ್‌ ಫ್ಲುಯೆನ್ಸಿ’ ವಿಷಯವನ್ನು ಪದವಿಯ ಪ್ರಥಮ ಸೆಮಿಸ್ಟರ್‌ ಮಕ್ಕಳಿಗೆ ಇದೇ ಮೊದಲ ಬಾರಿಗೆ ಬೋಧಿಸಲಾಗಿದೆ. ಸುಮಾರು 25 ಸಾವಿರ ವಿದ್ಯಾರ್ಥಿಗಳು ಮಂಗಳೂರು ವಿವಿ ವ್ಯಾಪ್ತಿಯಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಒಟ್ಟು 50 ಮಾರ್ಕ್‌ನ ಪರೀಕ್ಷೆಯಿದು.

ಒಂದೆರಡು ದಿನದಲ್ಲಿ
ಅಂತಿಮ ತೀರ್ಮಾನ
“ಡಿಜಿಟಲ್‌ ಫ್ಲುಯೆನ್ಸಿ’ ವಿಷಯದ ಪರೀಕ್ಷೆ ಯನ್ನು ಈ ಬಾರಿ ಕಾಲೇಜು ಮಟ್ಟದಲ್ಲೇ ಮಾಡಲು ಅವಕಾಶ ಕಲ್ಪಿಸುವಂತೆ ವಿವಿಧ ಕಾಲೇಜಿನಿಂದ ಪತ್ರ ಬಂದಿದೆ. ಆದರೆ ಶೈಕ್ಷಣಿಕ ಹಿತದೃಷ್ಟಿಯಿಂದ ವಿವಿ ವತಿಯಿಂದಲೇ ಮಾಡುವ ಬಗ್ಗೆಯೂ ಚಿಂತನೆ ನಡೆದಿದೆ. ಮೂರು ದಿನದೊಳಗೆ ಮಂಗಳೂರು ವಿವಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಜತೆಗೆ ಪದವಿ ಪ್ರಾಯೋಗಿಕ ಪರೀಕ್ಷೆಯನ್ನು ಈ ಬಾರಿ ಆಂತರಿಕವಾಗಿ ನಡೆಸಲು ಈಗಾಗಲೇ ಸೂಚನೆ ನೀಡಲಾಗಿದೆ.
– ಪ್ರೊ| ಪಿ.ಎಲ್‌. ಧರ್ಮ,
ಕುಲಸಚಿವರು (ಪರೀಕ್ಷಾಂಗ) ಮಂಗಳೂರು ವಿವಿ

-ದಿನೇಶ್‌ ಇರಾ

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Dinesh-Gundurao

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.