![Maharashtra: ಲವ್ ಜೆಹಾದ್ ವಿರುದ್ಧ ಕಾನೂನಿಗೆ ಮಹಾ ಸಜ್ಜು](https://www.udayavani.com/wp-content/uploads/2025/02/maharastra-415x233.jpg)
![Maharashtra: ಲವ್ ಜೆಹಾದ್ ವಿರುದ್ಧ ಕಾನೂನಿಗೆ ಮಹಾ ಸಜ್ಜು](https://www.udayavani.com/wp-content/uploads/2025/02/maharastra-415x233.jpg)
Team Udayavani, Jan 29, 2025, 7:30 AM IST
ಹುಬ್ಬಳ್ಳಿ: “ಪುಣ್ಯಸ್ನಾನ ಮಾಡಿದರೆ ಬಡತನ ಹೋಗುತ್ತದೆಯೇ’ ಎಂದು ಕೇಳುವ ಮೂಲಕ ಮಲ್ಲಿಕಾರ್ಜುನ ಖರ್ಗೆ ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ. ಇದೇ ರೀತಿ ಮೆಕ್ಕಾ ಮತ್ತು ರೋಮ್ಗೆ ತೆರಳುವ ಮುಸ್ಲಿಂ ಮತ್ತು ಕ್ರೈಸ್ತರನ್ನು ಪ್ರಶ್ನಿಸುವರೇ? ಆ ತಾಕತ್ತು ಅವರಿಗಿದೆಯೇ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಾಕುಂಭ ಮೇಳಕ್ಕೆ ಪ್ರಪಂಚದಾದ್ಯಂತ 40 ಕೋಟಿಗೂ ಹೆಚ್ಚು ಜನರು ಶ್ರದ್ಧಾಭಾವನೆಯಿಂದ ತಮ್ಮ ಸ್ವಂತ ಖರ್ಚಿನಲ್ಲಿ ಬರುತ್ತಿದ್ದಾರೆ. ಸನಾತನ ಧರ್ಮದ ಪ್ರಕಾರ ಇದು ದೊಡ್ಡ ಅವಕಾಶ. ಸರಕಾರ ಮೆಕ್ಕಾಗೆ ಹೋಗಿ ಬರುವವರಿಗೆ ವಿಶೇಷ ಪ್ಯಾಕೇಜ್ ಕೊಡುತ್ತದೆ. ಅಲ್ಲಿಗೆ ಹೋಗಿ ಬಂದರೆ ಬಡತನ ಪರಿಹಾರವಾಗುತ್ತದೆಯೇ ಎಂದು ಕೇಳುವೀರಾ, ಆ ಧೈರ್ಯವಿದೆಯೇ? ಹಾಗಾದರೆ ಅವರಿಗೆ ಕೊಡುವ ಅನುದಾನ ಸ್ಥಗಿತಗೊಳ್ಳುತ್ತಾ? ಎಂದು ಪ್ರಶ್ನಿಸಿದರು.
ಸಚಿವ ಸಂತೋಷ ಲಾಡ್ ಸಹ ಖರ್ಗೆ ಮಾತು ಕೇಳಿ ಬೇಜವಾಬ್ದಾರಿ ಹೇಳಿಕೆ ಕೊಟ್ಟಿದ್ದಾರೆ. ಅವರು ಹಿಂದೂ ಸಾಮ್ರಾಜ್ಯದ ಸಂಸ್ಥಾಪಕ ಶಿವಾಜಿ ಮಹಾರಾಜರ ವಂಶಸ್ಥರು. ಮುಸ್ಲಿಮರ ಓಲೈಕೆಗಾಗಿ ಈ ರೀತಿಯ ಹೇಳಿಕೆ ನಿರೀಕ್ಷಿಸಲ್ಲ. ಎಐಸಿಸಿ ಅಧ್ಯಕ್ಷರೆಂಬ ಕಾರಣಕ್ಕೆ ಅವರನ್ನು ಓಲೈಸಲು ನಿಮ್ಮ ಹಿನ್ನೆಲೆ ಮರೆಯಬೇಡಿ ಎಂದು ಕುಟುಕಿದರು.
ಸೋನಿಯಾ, ರಾಹುಲ್, ಪ್ರಿಯಾಂಕ್ ರೋಮನ್ ಕ್ಯಾಥೋಲಿಕ್ ಚರ್ಚ್ಗೆ ನಡೆದುಕೊಳ್ಳುತ್ತಾರಲ್ಲ. ಅದರ ಬಗ್ಗೆ ಏಕೆ ಪ್ರಶ್ನಿಸಲ್ಲ. ಅಲ್ಪಸಂಖ್ಯಾತರಿಗೆ ಈ ಬಗ್ಗೆ ಕೇಳುವ ಧೈರ್ಯ ಖರ್ಗೆ ಮತ್ತು ಕಾಂಗ್ರೆಸ್ನವರಿಗೆ ಇದೆಯೇ? ಕಾಂಗ್ರೆಸ್ನವರಿಗೆ ಹಿಂದೂಗಳ ಭಾವನೆಗೆ ಬೆಲೆಯಿಲ್ಲವೇ? ಡಿಸಿಎಂ ಗಂಗಾದಲ್ಲಿ ಪುಣ್ಯಸ್ನಾನ ಮಾಡುವುದಾಗಿ ಹೇಳಿದ್ದಾರಲ್ಲ. ಅವರಿಗೆ ಹೋಗಬೇಡಿ ಎಂದು ಹೇಳಿಕೆ ಕೊಡಲಿ. ಕಾಂಗ್ರೆಸ್ನವರು ಯಾರೂ ಪ್ರಯಾಗ್ರಾಜ್ಕ್ಕೆ ಹೋಗಲ್ಲವೆಂದು ಖರ್ಗೆ ಆದೇಶ ಹೊರಡಿಸಲಿ ಎಂದರು.
ಸಿಎಂಗೆ ಪತ್ರ:
ಮುಂದಿನ ತಿಂಗಳು ಬೆಂಗಳೂರಿನಲ್ಲಿ ವಿಶ್ವ ಬಂಡವಾಳ ಹೂಡಿಕೆದಾರರ ಸಮ್ಮೇಳನ ನಡೆಯಲಿದ್ದು, ಈ ವೇಳೆ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸುವ ಕಾರ್ಯ ರಾಜ್ಯ ಸರ್ಕಾರ ಮಾಡಬೇಕು. ಈ ಬಗ್ಗೆ ಸಿಎಂಗೆ ಪತ್ರ ಬರೆದಿರುವೆ ಎಂದರು.
ಮುಡಾ ಹಗರಣವು ಪೂರ್ಣ ವಿಚಾರಣೆಯಾಗಲಿ. ಇದರಲ್ಲಿ ಯಾರ್ಯಾರು ಇದ್ದಾರೆ ಎಲ್ಲರ ಮೇಲೆ ಕ್ರಮ ಆಗಲಿ. ಲೋಕಾಯುಕ್ತರು ತಮಗೆ ಬೇಕಾದಂತೆ ವರದಿ ಪಡೆಯುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಏನೇ ಆದರೂ ಸಿಎಂಗೆ ಉಳಿಗಾಲವಿಲ್ಲ. ಶ್ರೀರಾಮುಲು-ರೆಡ್ಡಿ ಅವರ ನಡುವಿನ ಭಿನ್ನಮತ ಶಮನಗೊಳ್ಳಲು ಕೆಲ ಸಮಯ ಹಿಡಿಯುತ್ತದೆ. ಅದು ಕೆಲ ದಿನಗಳಲ್ಲಿ ಬಗೆಹರಿಯಲಿದೆ ಎಂದು ಹೇಳಿದರು.
DK Shivakumar: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ?- ಡಿಕೆಶಿ
ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಕೆಳಗೆ ಬಿದ್ದ ಟಿಪ್ಪರ್… ಓರ್ವ ಮೃತ್ಯು. ಇನ್ನೋರ್ವ ಗಂಭೀರ
Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ
Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…
Bengaluru; ನಗರದಿಂದ ವಿಮಾನ ನಿಲ್ದಾಣಕ್ಕೆ ರೈಲು ಸಂಪರ್ಕ: ಅಶ್ವಿನಿ ವೈಷ್ಣವ್
You seem to have an Ad Blocker on.
To continue reading, please turn it off or whitelist Udayavani.