![1-aaaa](https://www.udayavani.com/wp-content/uploads/2024/07/1-aaaa-1-415x265.jpg)
Election 2023: ಪುತ್ತೂರು ಬಿಜೆಪಿಯಲ್ಲಿ ಹಾಲಿಯವರ ಬದಲು ಹೊಸ ಮುಖ ಶೋಧ?
ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ಚಿತ್ರಣ
Team Udayavani, Apr 7, 2023, 7:13 AM IST
![bjp flag](https://www.udayavani.com/wp-content/uploads/2023/04/bjp-flag-620x372.jpg)
ಪುತ್ತೂರು: ಕ್ಷಿಪ್ರ ಬೆಳವಣಿಗೆಯೊಂದರಲ್ಲಿ ರಾಜ್ಯದ ಗಮನ ಸೆಳೆದಿರುವ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ವರಿಷ್ಠರು ಹೊಸ ಮುಖದ ಪ್ರಯೋಗಕ್ಕೆ ಮುಂದಾಗಿದ್ದಾರೆಂಬ ಖಚಿತ ಮಾಹಿತಿ ಲಭ್ಯವಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷರ ತವರು ಕ್ಷೇತ್ರವೂ ಇದಾಗಿದ್ದು, ಅನಗತ್ಯ ವಿವಾದಕ್ಕೆಡೆ ಮಾಡದೆ ಹಾಗೂ ಬಣ ರಾಜಕೀಯಕ್ಕೂ ಅವಕಾಶ ಕೊಡದೆ ಸಂಘಟನ ಸಾಮರ್ಥ್ಯವಿರುವ ಹೊಸ ಮುಖವನ್ನು ಕಣಕ್ಕಿಳಿಸಲು ಪಕ್ಷದ ವರಿಷ್ಠರು ಸೂತ್ರ ರೂಪಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಹಾಲಿ ಶಾಸಕ ಸಂಜೀವ ಮಠಂದೂರು ಅವರಿಗೆ ಮತ್ತೂಮ್ಮೆ ಅವಕಾಶ ಸಿಗುವ ಸಾಧ್ಯತೆ ಕ್ಷೀಣಿಸತೊಡಗಿದೆ. ಪಕ್ಷದೊಳಗಿನ ಭಿನ್ನ ಧ್ವನಿಯಿಂದ ಹಗ್ಗಜಗ್ಗಾಟದಲ್ಲಿ ಹೊಯ್ದಾಡುತ್ತಿದ್ದ ಹಾಲಿ ಶಾಸಕರು ಮೂರನೇ ಬಾರಿ ಸ್ಪರ್ಧಿಸಲು ಅವಕಾಶ ಕೋರಿದ್ದರು. ಆದರೆ ಹೈಕಮಾಂಡ್ ಒಲವು ತೋರಿಲ್ಲ. ಈ ಬಗ್ಗೆ ಬಿಜೆಪಿ ವರಿಷ್ಠರೂ ಶಾಸಕರಿಗೆ ಬದಲಾವಣೆಯ ಸುಳಿವು ನೀಡಿದೆ ಎನ್ನಲಾಗಿದೆ.
ಜಾತಿಯ ನೆಲೆಯಲ್ಲೂ ಸಮ ತೋಲನ ಕಂಡುಕೊಳ್ಳಲು ತಾಲೂಕು, ಜಿಲ್ಲೆ ಆಧಾರಿತವಾಗಿ ಜಾತಿ ಲೆಕ್ಕ ಹಾಕದೇ, ರಾಜ್ಯದಲ್ಲಿ ಪ್ರಬಲ ಸಮು ದಾಯದ ಒಟ್ಟು ಜನಸಂಖ್ಯೆ ಆಧರಿಸಿ ಅವಕಾಶ ಕಲ್ಪಿಸಿರುವುದಾಗಿ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹಾಲಿ ಶಾಸಕರಿಗೆ ಜಾತಿ ಆಧಾರಿತ ಎಳೆಯ ಸಹಾಯವೂ ತಪ್ಪುವಂತಿದೆ.
ಹೊಸ ಅಭ್ಯರ್ಥಿ ತಣ್ತೀಸಿದ್ಧಾಂತ ಆಧಾರಿತವಾಗಿಯೇ ಟಿಕೆಟ್ ನೀಡಲು ವರಿಷ್ಠರು ನಿರ್ಧರಿ ಸಿದ್ದಾರೆ ಎನ್ನಲಾಗಿದೆ. ಪಕ್ಷ ನಿಷ್ಠೆಗೆ ಆದ್ಯತೆ ನೀಡುವ ಮೂಲಕ ಅಚ್ಚರಿಯ ಆಯ್ಕೆಗೆ ಮುಂದಾಗುವುದಲ್ಲದೇ ಸಾಮಾಜಿಕ ನ್ಯಾಯ ಪಾಲನೆಯ ಸಂದೇಶ ರವಾನಿಸುವ ತಂತ್ರಗಾರಿಕೆಗೆ ಬಿಜೆಪಿ ಮುಂದಾಗಿದೆ ಎನ್ನುತ್ತವೆ ಸ್ಥಳೀಯ ಮೂಲಗಳು.
ಹೊರಗಿನವರಿಗೆ ಅವಕಾಶವಿಲ್ಲ
ಕ್ಷೇತ್ರಕ್ಕೆ ಹೊರಗಿನಿಂದ ಅಭ್ಯರ್ಥಿಯನ್ನು ತರುವ ಲೆಕ್ಕಾಚಾರದಲ್ಲಿ ಬಿಜೆಪಿ ವರಿಷ್ಠರು ಇಲ್ಲ. ಇತ್ತೀಚೆಗೆ ಪಕ್ಷದ ಹಿರಿಯರ ನೇತೃತ್ವದಲ್ಲಿ ನಡೆದ ಸಭೆಯೊಂದರಲ್ಲಿ ಹೊರಗಿನವರಿಗೆ ಅವಕಾಶ ನೀಡದಂತೆ ಒತ್ತಾಯಿಸುವ ನಿರ್ಣಯ ಕೈಗೊಂಡು ವರಿಷ್ಠರಿಗೆ ತಲುಪಿಸಲಾಗಿದೆ. ಒಟ್ಟೂ ಬೆಳವಣಿಗೆಯಿಂದ ಮತ್ತೆ ಕೆಲವು ಹೆಸರುಗಳು ಚಾಲ್ತಿಗೆ ಬಂದಿದ್ದು, ಮೆಸ್ಕಾಂ ನಿರ್ದೇಶಕ ಕಿಶೋರ್ ಬೊಟ್ಯಾಡಿ, ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ, ದ.ಕ. ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಆರ್.ಸಿ. ನಾರಾಯಣ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಜಗನ್ನಿವಾಸ ರಾವ್, ಆರ್ಎಸ್ಎಸ್ ಮುಂದಾಳು ಯತೀಶ್ ಆರುವಾರು ಅವರ ಹೆಸರು ಮುಂಚೂಣಿಯಲ್ಲಿವೆ. ದಿನೇಶ್ ಮೆದು ಅವರ ಹೆಸರೂ ಕೇಳಿ ಬಂದಿದ್ದು, ಅವರು ಕ್ಷೇತ್ರದವರಲ್ಲ ಎನ್ನುವ ಅಂಶವೂ ಚರ್ಚೆಯಲ್ಲಿದೆ.
ಟಾಪ್ ನ್ಯೂಸ್
![1-aaaa](https://www.udayavani.com/wp-content/uploads/2024/07/1-aaaa-1-415x265.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!](https://www.udayavani.com/wp-content/uploads/2023/05/Nelogi-150x83.jpg)
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
![dk shivakumar](https://www.udayavani.com/wp-content/uploads/2023/05/dk-shiv-150x83.jpg)
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
![dk shivakumar siddaramaiah rahul gandhi](https://www.udayavani.com/wp-content/uploads/2023/05/raul-150x83.jpg)
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
![Ramanath-rai](https://www.udayavani.com/wp-content/uploads/2023/05/Ramanath-rai-150x83.jpg)
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
![1-wwe](https://www.udayavani.com/wp-content/uploads/2023/05/1-wwe-150x90.jpg)
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ಹೊಸ ಸೇರ್ಪಡೆ
![1-aaaa](https://www.udayavani.com/wp-content/uploads/2024/07/1-aaaa-1-150x96.jpg)
Ex-Minister ಬಿ.ಸಿ.ಪಾಟೀಲ್ ಅಳಿಯ ವಿಷ ಸೇವಿಸಿ ಆತ್ಮಹತ್ಯೆ
![Ramanivas Rawat took oath as minister twice within 15 minutes](https://www.udayavani.com/wp-content/uploads/2024/07/rwat-150x83.jpg)
Bhopal; 15 ನಿಮಿಷದೊಳಗೆ ಎರಡು ಬಾರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ರಾಮನಿವಾಸ್ ರಾವತ್
![ಗಂಗಾವತಿ: ಕೃಷಿ ಸೇವಾ ಸಹಕಾರಿ ಸಂಘಗಳಿಗೆ ಮುಚ್ಚುವ ಭೀತಿ?](https://www.udayavani.com/wp-content/uploads/2024/07/Gangavati-150x76.jpg)
ಗಂಗಾವತಿ: ಕೃಷಿ ಸೇವಾ ಸಹಕಾರಿ ಸಂಘಗಳಿಗೆ ಮುಚ್ಚುವ ಭೀತಿ?
![Rain Heavy](https://www.udayavani.com/wp-content/uploads/2024/07/Rain-Heavy-150x100.jpg)
Heavy Rain ಅಬ್ಬರ; ಜು.9 ರಂದು ಉಡುಪಿ ಜಿಲ್ಲಾದ್ಯಂತ ಪಿಯುಸಿವರೆಗೆ ರಜೆ
![1-asaas](https://www.udayavani.com/wp-content/uploads/2024/07/1-asaas-150x100.jpg)
Manipur; ಪರಿಹಾರ ಶಿಬಿರಗಳಿಗೆ ರಾಹುಲ್ ಗಾಂಧಿ ಭೇಟಿ: ಅಚಲ ಬದ್ಧತೆ ಎಂದ ಕಾಂಗ್ರೆಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.