Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್‌ ದರ ಏರಿಕೆ ಶಾಕ್‌?

ದರ ಹೆಚ್ಚಳಕ್ಕೆ ಬೆಸ್ಕಾಂ ಸೇರಿ ಎಲ್ಲ ವಿದ್ಯುತ್‌ ಸರಬರಾಜು ಕಂಪೆನಿಗಳ ಸಿದ್ಧತೆ, ಮಾಸಾಂತ್ಯಕ್ಕೆ ಕೆಇಆರ್‌ಸಿಗೆ ದರ ಏರಿಕೆ ಸಂಬಂಧ ಪ್ರಸ್ತಾವನೆ

Team Udayavani, Nov 8, 2024, 7:45 AM IST

Price-Hike

ಬೆಂಗಳೂರು: ರಾಜ್ಯಾದ್ಯಂತ ಸಮೃದ್ಧ ಮಳೆಯಾಗಿ ಎಲ್ಲ ಜಲಾಶಯಗಳೂ ಭರ್ತಿಯಾಗಿವೆ. ಮುಂದಿನ ಮುಂಗಾರು ವರೆಗೂ ಜಲವಿದ್ಯುತ್‌ ಉತ್ಪಾದನೆಗೆ ಸಮಸ್ಯೆ ಇಲ್ಲವೆನ್ನಲಾಗುತ್ತಿದೆ. ಆದಾಗ್ಯೂ ಈ ಬಾರಿಯೂ ಗ್ರಾಹಕರ ಮೇಲೆ “ವಿದ್ಯುತ್‌ ದರ ಏರಿಕೆ ಬರೆ’ ಮಾತ್ರ ತಪ್ಪದು!

ಈಗಾಗಲೇ ಬೆಸ್ಕಾಂ ಸೇರಿದಂತೆ ಎಲ್ಲ ವಿದ್ಯುತ್‌ ಸರಬರಾಜು ಕಂಪೆನಿಗಳು ದರ ಹೆಚ್ಚಳಕ್ಕೆ ಸಿದ್ಧತೆ ನಡೆಸಿದ್ದು, ಮಾಸಾಂತ್ಯಕ್ಕೆ ಈ ಪ್ರಸ್ತಾವನೆ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಸಲ್ಲಿಕೆಯಾಗಲಿದೆ.

ರಾಜ್ಯದಲ್ಲಿ ಜಲ ವಿದ್ಯುದಾಗಾರಗಳ ಪೈಕಿ ಗರಿಷ್ಠ ಕೊಡುಗೆ ನೀಡುತ್ತಿರುವ ಲಿಂಗನಮಕ್ಕಿ ಸೇರಿದಂತೆ ಸೂಪಾ, ಮಾಣಿ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನ ಮಟ್ಟದ ಅಂಕಿ-ಅಂಶಗಳ ಪ್ರಕಾರವೇ ಮುಂದಿನ ಜೂನ್‌ವರೆಗೂ ವಿದ್ಯುತ್‌ ಉತ್ಪಾದನೆಗೆ ಯಾವುದೇ ಕೊರತೆ ಇಲ್ಲ. ಸ್ವತಃ ಇಂಧನ ಇಲಾಖೆ ಹೇಳುವಂತೆ ಜಲವಿದ್ಯುತ್‌ ಉತ್ಪಾದನೆ ವೆಚ್ಚ ಉಳಿದ ಮೂಲಗಳಿಗೆ ಹೋಲಿಸಿದರೆ, ಅತ್ಯಂತ ಕಡಿಮೆ ಆಗಿದೆ. ಪ್ರತೀ ಯೂನಿಟ್‌ಗೆ ಸರಾಸರಿ 2.05 ರೂ. ಆಗುತ್ತದೆ. ಆದರೂ ಬೇಸಗೆಯಲ್ಲಿ ಹೆಚ್ಚಾಗಬಹುದಾದ ವಿದ್ಯುತ್‌ ಬೇಡಿಕೆ ಪೂರೈಸಲು ಖರೀದಿ ಅನಿವಾರ್ಯ ಆಗಲಿದ್ದು, ಅದನ್ನು ದರ ಹೆಚ್ಚಳ ರೂಪದಲ್ಲಿ ಗ್ರಾಹಕರ ಮೇಲೆ ಹಾಕುವುದು ಖಚಿತ ಎಂದು ಮೂಲಗಳು ತಿಳಿಸಿವೆ.

ಹಿಂದಿನ ಮತ್ತು ಈಗಿನ ವಿದ್ಯುತ್‌ ಬೇಡಿಕೆ ಹಾಗೂ ಪೂರೈಕೆ, ಕಳೆದ ಬೇಸಗೆಯಲ್ಲಿ ಮಳೆ ಕೈಕೊಟ್ಟಿದ್ದರಿಂದ ಹಿಂದೆಂದಿಗಿಂತ ಗರಿಷ್ಠ ಬೇಡಿಕೆ ಕಂಡುಬಂದಿತ್ತು. ಅದನ್ನು ಗಮನದಲ್ಲಿಟ್ಟುಕೊಂಡು ಬರುವ ಬೇಸಗೆಯಲ್ಲಿ ಆಗಬಹುದಾದ ವಿದ್ಯುತ್‌ ಬೇಡಿಕೆ ಪ್ರಮಾಣ ಲೆಕ್ಕಹಾಕಿ ಪರಿಷ್ಕರಣೆಗೆ ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ. ಜತೆಯಲ್ಲೇ ಖರೀದಿಗೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆದರೆ ಪ್ರತೀ ಯೂನಿಟ್‌ಗೆ ಎಷ್ಟು ಪೈಸೆ ಹೆಚ್ಚಳದ ಬೇಡಿಕೆ ಇಡಲಾಗುತ್ತದೆ ಎಂಬುದನ್ನು ಈಗಲೇ ಹೇಳುವುದು ಕಷ್ಟ ಎಂದು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ (ಬೆಸ್ಕಾಂ) ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.

ಉತ್ತಮ ಮಳೆಯಿಂದ ಅಂತರ್ಜಲಮಟ್ಟ ಏರಿಕೆಯಾಗಿದ್ದರೂ ಬೋರ್‌ವೆಲ್‌ಗ‌ಳ ಬಳಕೆ ಹಿಂದಿನ ವರ್ಷಗಳಿಗಿಂತ ಹೆಚ್ಚಾಗಲಿದೆ. ಕೈಗಾರಿಕೆಗಳು, ಕೃಷಿ ವಿಸ್ತರಣೆ ಮತ್ತಿತರ ಕಾರಣಗಳಿಂದ ವಾರ್ಷಿಕ ವಿದ್ಯುತ್‌ ಬೇಡಿಕೆ ಶೇ. 6-10ರಷ್ಟು ಏರಿಕೆ ಆಗುತ್ತಿದೆ. ಇದನ್ನು ನೀಗಿಸಲು ಈಗ ಲಭ್ಯವಿರುವ ರಾಜ್ಯದ ವಿದ್ಯುತ್‌ ಉತ್ಪಾದನೆ ಮೂಲಗಳ ಜತೆಗೆ ಖಾಸಗಿ ಉತ್ಪಾದಕರಿಂದಲೂ ಖರೀದಿಸಬೇಕಾಗುತ್ತದೆ.

ಇದು ದುಬಾರಿಯಾಗಿದ್ದು, ಮುಂಚಿತವಾಗಿಯೇ ಒಪ್ಪಂದ ಮಾಡಿಕೊಂಡರೆ ಅದು ತುಸು ಕಡಿಮೆ ದರದಲ್ಲಿ ಸಿಗುತ್ತದೆ. ಎಲ್ಲೆಡೆ ಬೇಡಿಕೆ ಇದ್ದಾಗ, ಮಾರುಕಟ್ಟೆ ಪ್ರವೇಶಿಸಿದರೆ ಮತ್ತಷ್ಟು ದುಬಾರಿಯಾಗಿ ಪರಿಣಮಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಸಹಜವಾಗಿ ಈಗಿನಿಂದಲೇ ಖರೀದಿಗೂ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ ಎಂದು ಇಂಧನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ರಾಜ್ಯದಲ್ಲಿ ಜಲವಿದ್ಯುತ್‌ ಉತ್ಪಾದನೆ ಅಗ್ಗ ಮಾತ್ರವಲ್ಲ ಪೀಕ್‌ ಅವರ್‌ (ಗರಿಷ್ಠ ಬೇಡಿಕೆ ಅವಧಿ) ಒತ್ತಡ ಕೂಡ ತಗ್ಗಿಸಬಹುದಾದ ಸಾಮರ್ಥ್ಯ ಹೊಂದಿವೆ. ಆದರೆ ಸಂಪೂರ್ಣವಾಗಿ ಇವುಗಳ ಮೇಲೆಯೇ ಅವಲಂಬನೆ ಆಗಲು ಸಾಧ್ಯವಿಲ್ಲ. ಶಾಖೋತ್ಪನ್ನ ವಿದ್ಯುತ್‌ ಕೇಂದ್ರಗಳು ಕೂಡ ಮುಖ್ಯವಾಗುತ್ತವೆ. ಇವುಗಳ ದರ ಪ್ರತೀ ಯೂನಿಟ್‌ಗೆ ಸರಾಸರಿ 7.88 ರೂ. ಇದಕ್ಕೆ ಅಗತ್ಯವಿರುವ ಕಲ್ಲಿದ್ದಲು ಹೊರರಾಜ್ಯದಿಂದ ಬರಬೇಕು. ಆಗ ಪ್ರಸರಣ ವೆಚ್ಚ ಕೂಡ ಸೇರುವುದರಿಂದ ಅದು ಪ್ರತೀ ಯೂನಿಟ್‌ಗೆ ಇನ್ನೂ ಹೆಚ್ಚಾಗುತ್ತದೆ. ಅಲ್ಲದೆ ಕೇಂದ್ರ ಸರಕಾರ ಈಗ ಕಲ್ಲಿದ್ದಲು ಆಧರಿತ ವಿದ್ಯುತ್‌ ಯೋಜನೆಗಳಿಗೆ ಉತ್ತೇಜನ ನೀಡುತ್ತಿಲ್ಲ. ಕೇಂದ್ರೀಯ ವಿದ್ಯುತ್‌ ಜಾಲದಿಂದ ಬರುವ ವಿದ್ಯುತ್‌ಗೆ ಪ್ರತೀ ಯೂನಿಟ್‌ಗೆ ಸರಾಸರಿ 5.03 ರೂ. ಆಗುತ್ತದೆ.


– ವಿಜಯ ಕುಮಾರ ಚಂದರಗಿ

ಟಾಪ್ ನ್ಯೂಸ್

Vidaamuyarchi: ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ‘ವಿಡಾಮುಯಾರ್ಚಿ’ ಫುಲ್‌ ಮೂವಿ ಲೀಕ್.!

Vidaamuyarchi: ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ‘ವಿಡಾಮುಯಾರ್ಚಿ’ ಫುಲ್‌ ಮೂವಿ ಲೀಕ್.!

Dolly Dhananjay spoke about his Marriage

Dhananjay: ಡಾಲಿ ಮ್ಯಾರೇಜ್‌ ಸ್ಟೋರಿ: ನೆನಪಿನ ಬುತ್ತಿಯಲ್ಲೊಂದು ಸಂಭ್ರಮ ಇರಲಿ..

Bellary ಬಿಜೆಪಿ ಕಚೇರಿಯಲ್ಲಿ ಬರ್ತ್‌ಡೇಪಾರ್ಟಿ! ಜಿಲ್ಲಾಧ್ಯಕ್ಷರ ವಿರುದ್ದ ಸ್ವಪಕ್ಷೀಯರ ಆರೋಪ

Bellary ಬಿಜೆಪಿ ಕಚೇರಿಯಲ್ಲಿ ಬರ್ತ್‌ಡೇಪಾರ್ಟಿ! ಜಿಲ್ಲಾಧ್ಯಕ್ಷರ ವಿರುದ್ದ ಸ್ವಪಕ್ಷೀಯರ ಆರೋಪ

ಹೇಗಿದೆ ಅಜಿತ್‌ ಕುಮಾರ್‌ ಬಹು ನಿರೀಕ್ಷಿತ ‘Vidaamuyarchi’? ; ಇಲ್ಲಿದೆ ಟ್ವಿಟರ್‌ ರಿವ್ಯೂ

ಹೇಗಿದೆ ಅಜಿತ್‌ ಕುಮಾರ್‌ ಬಹು ನಿರೀಕ್ಷಿತ ‘Vidaamuyarchi’? ; ಇಲ್ಲಿದೆ ಟ್ವಿಟರ್‌ ರಿವ್ಯೂ

3-hunsur

Hunsur: ನೀರು ಕೇಳುವ ನೆಪದಲ್ಲಿ ಮಾಂಗಲ್ಯದ ಸರ ಕಸಿದು ಪರಾರಿ

WPL 2025: Gujarat Giants appoint new captain for third season

WPL 2025: ಮೂರನೇ ಸೀಸನ್‌ ಗೆ ನೂತನ ನಾಯಕಿಯನ್ನು ನೇಮಿಸಿದ ಗುಜರಾತ್‌ ಜೈಂಟ್ಸ್

ಶೇಖ್ ಹಸೀನಾ ಭಾಷಣದ ಬೆನ್ನಲ್ಲೇ ಭುಗಿಲೆದ್ದ ಹಿಂಸಾಚಾರ… ಶೇಖ್ ಮುಜಿಬುರ್ ಮನೆ ಧ್ವಂಸ

Dhaka: ಶೇಖ್ ಹಸೀನಾ ಭಾಷಣದ ವೇಳೆ ಭುಗಿಲೆದ್ದ ಹಿಂಸಾಚಾರ… ಶೇಖ್ ಮುಜಿಬುರ್ ಮನೆ ಧ್ವಂಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bellary ಬಿಜೆಪಿ ಕಚೇರಿಯಲ್ಲಿ ಬರ್ತ್‌ಡೇಪಾರ್ಟಿ! ಜಿಲ್ಲಾಧ್ಯಕ್ಷರ ವಿರುದ್ದ ಸ್ವಪಕ್ಷೀಯರ ಆರೋಪ

Bellary ಬಿಜೆಪಿ ಕಚೇರಿಯಲ್ಲಿ ಬರ್ತ್‌ಡೇಪಾರ್ಟಿ! ಜಿಲ್ಲಾಧ್ಯಕ್ಷರ ವಿರುದ್ದ ಸ್ವಪಕ್ಷೀಯರ ಆರೋಪ

Haveri-Boy

Duty Neglect: ಹೊಲಿಗೆ ಬದಲು ಫೆವಿಕ್ವಿಕ್‌ ಹಾಕಿದ್ದ ನರ್ಸ್‌ ಅಮಾನತು

Roopa-Rohini

Court: ರೂಪಾ ಮೌದ್ಗಿಲ್‌- ರೋಹಿಣಿ ಸಿಂಧೂರಿಗೆ “ಒನ್‌ ಮಿನಿಟ್‌ ಅಪಾಲಜಿ’ ಓದಲು ಸಲಹೆ

Yatnal-Team

BJP Crisis: ಲಿಂಗಾಯತ ದಾಳಕ್ಕೆ ಶಾಸಕ ಯತ್ನಾಳ್‌ ನೇತೃತ್ವದ ಭಿನ್ನರ ತಂಡ ಯತ್ನ

MP-Renuka

BJP Crisis: ಬಂಡೆದ್ದ ಯತ್ನಾಳ್‌ ತಂಡ ಉಚ್ಚಾಟಿಸಿ: ಬಿ.ವೈ.ವಿಜಯೇಂದ್ರ ಬಣ ಆಗ್ರಹ

MUST WATCH

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

ಹೊಸ ಸೇರ್ಪಡೆ

3

Mangaluru: ಶೀಘ್ರವೇ ರಂಗ ಮಂದಿರ ಕಾಮಗಾರಿ

Fake brand: 1.75 ಕೋಟಿ ಮೌಲ್ಯದ ವಸ್ತುಗಳು ಸಿಸಿಬಿ ವಶಕ್ಕೆ

Fake brand: 1.75 ಕೋಟಿ ಮೌಲ್ಯದ ವಸ್ತುಗಳು ಸಿಸಿಬಿ ವಶಕ್ಕೆ

2

Bantwal: ಸಚಿವರಿಗೆ 121 ಸಮಸ್ಯೆ ದರ್ಶನ

Bengaluru: ಪತ್ನಿಯ ಕೊಂದು ಮಂಚದಿಂದ ಬಿದ್ದು ಸಾವು ಎಂದ ಪತಿ.!

Bengaluru: ಪತ್ನಿಯ ಕೊಂದು ಮಂಚದಿಂದ ಬಿದ್ದು ಸಾವು ಎಂದ ಪತಿ.!

10-uv-fusion

Grandmother: ಅಜ್ಜಿ ಗಂಟಿನ ರಹಸ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.