ಆನೆ ನಡೆದದ್ದೇ ದಾರಿ.. ರೈಲ್ವೆ ಕಂಬಿಗೂ ಬಗ್ಗಲ್ಲ, ಸೋಲಾರ್‌ಗೂ ಜಗ್ಗಲ್ಲ


Team Udayavani, Feb 10, 2022, 9:07 PM IST

ಆನೆ ನಡೆದದ್ದೇ ದಾರಿ.. ರೈಲ್ವೆ ಕಂಬಿಗೂ ಬಗ್ಗಲ್ಲ, ಸೋಲಾರ್‌ಗೂ ಜಗ್ಗಲ್ಲ

ಹುಣಸೂರು : ನಾಗರಹೊಳೆ ಉದ್ಯಾನವನದಂಚಿನ ಗ್ರಾಮಗಳಲ್ಲಿ ನಿಲ್ಲದ ಕಾಡಾನೆಗಳ ಕಾಟದಿಂದ ಕೃಷಿಕರು ಹೈರಾಣಾಗಿದ್ದರೆ, ಅರಣ್ಯ ಸಿಬ್ಬಂದಿಗಳಿಗೆ ಹಗಲು-ರಾತ್ರಿ ಎನ್ನದೆ ನೆಮ್ಮದಿ ನೀಡದೆ ನಿತ್ಯ ಕಾಡುತ್ತಿವೆ.

ಬುಧವಾರ ರಾತ್ರಿ ನಾಗರಹೊಳೆ ಉದ್ಯಾನದ ವೀರನಹೊಸಹಳ್ಳಿ ವಲಯದ ಜಾರ್‌ಗಲ್ ಬಳಿ ರೈಲ್ವೆ ಹಳಿ ಬೇಲಿ ಬಳಿ ಅಳವಡಿಸಿದ್ದ ಸೋಲಾರ್ ಕಂಬಗಳನ್ನು ಮುರಿದು ರೈಲ್ವೆಕಂಬಿ ತಡೆಗೋಡೆಯನ್ನೇ ದಾಟಿ ಬಂದಿರುವ 9 ಆನೆಗಳ ಹಿಂಡು ಅಲ್ಲಲ್ಲಿ ಬೆಳೆ ತಿಂದು-ತುಳಿದು ನಾಶಪಡಿಸಿ, ಹನಗೋಡು ಹೋಬಳಿಯ ನಾಗಪುರ ಗಿರಿಜನ ಪುನರ್ವಸತಿ ಕೇಂದ್ರದ ಸರಕಾರಿ ಫ್ರೌಢಶಾಲೆ ಹಿಂಬದಿಯ ವುಡ್‌ಲಾಟ್‌ನಲ್ಲಿ ಬೀಡು ಬಿಟ್ಟಿದ್ದ ಆನೆಗಳ ಹಿಂಡನ್ನು ಬುಧವಾರ ಮುಂಜಾನೆ ಕಂಡ ಆದಿವಾಸಿಗಳು ಅರಣ್ಯ ಇಲಾಖೆಗೆ ಮಾಹಿತಿ ಮುಟ್ಟಿಸಿದ್ದಾರೆ.

ಐದು ಆನೆಗಳು ಕಾಡಿಗೆ: ಅರ್‌ಎಫ್‌ಓ ನಮನ್ ನಾರಾಯಣನಾಯಕ, ಡಿ.ಆರ್.ಎಫ್.ಓ ಚಂದ್ರೇಶ್, ದ್ವಾರಕನಾಥ್ ಹಾಗೂ ಸಿಬ್ಬಂದಿಗಳು ಮತ್ತು ಎಸ್‌ಟಿಪಿಎಫ್ ಸಿಬ್ಬಂದಿಗಳು ಹುಣಸೂರು-ನಾಗರಹೊಳೆ ರಸ್ತೆಯನ್ನು ಬಂದ್ ಮಾಡಿ ಆನೆಗಳನ್ನು ಕಾಡಿಗಟ್ಟಲು ಮುಂದಾದರು. ಈ ವೇಳೆ ಐದು ಆನೆಗಳು ಹಿಂಡಿನಿಂದ ಬೇರ್ಪಟ್ಟು ನಾಗರಹೊಳೆ ಮುಖ್ಯರಸ್ತೆಯಲ್ಲೇ ಹಾದು ಬಂದ ಸ್ಥಳದಿಂದಲೇ ರೈಲ್ವೆ ಕಂಬಿ ತಡೆಗೋಡೆಯನ್ನು ದಾಟಿ ಕಾಡು ಸೇರಿಕೊಂಡವು. ಉಳಿದ ನಾಲ್ಕು ಆನೆಗಳ ಹಿಂಡು ಅರಣ್ಯ ಸಿಬ್ಬಂದಿಗಳ ಕಣ್ಗಾವಲಿನಲ್ಲಿ ವುಡ್‌ಲಾಟ್‌ನಲ್ಲೇ ಬೀಡು ಬಿಟ್ಟಿದ್ದು. ಸಂಜೆ ನಂತರ ಕಾಡಿಗಟ್ಟಲಾಗುವುದೆಂದು ಆರ್.ಎಫ್.ಓ.ನಮನ್ ನಾರಾಯಣ ನಾಯಕ ತಿಳಿಸಿದರು.

ನಿತ್ಯದ ಹಾವಳಿ: ಈ ಭಾಗದಲ್ಲಂತೂ ಕಾಡಾನೆಗಳ ಕಾಟ ನಿತ್ಯ ಇದ್ದದ್ದೆ. ರಾತ್ರಿ ಇರಲಿ ಹಗಲು ವೇಳೆಯೇ ಕಾಣಿಸಿಕೊಳ್ಳುವುದರಿಂದ ರೈತರು, ಕೂಲಿ ಕಾರ್ಮಿಕರು, ಶಾಲೆಗೆ ತೆರಳುವ ವಿದ್ಯಾರ್ಥಿಗಳು ಓಡಾಡಲು ಭಯಪಡುವಂತಾಗಿದೆ. ಇನ್ನಾದರೂ ರಾತ್ರಿವೇಳೆ ಕಾಡಾನೆಗಳಿ ಕಾಡಿನಿಂದ ಹೊರಬರದಂತೆ ಬಿಗಿ ಕ್ರಮವಹಿಸಬೇಕೆಂದು ಅರಣ್ಯ ಇಲಾಖೆಯನ್ನು ಒತ್ತಾಯಿಸಿರುವ ಗ್ರಾಮಸ್ಥರು, ಸೂಕ್ತ ಕ್ರಮವಹಿಸದಿದ್ದಲ್ಲಿ ಅರಣ್ಯ ಇಲಾಖೆವಿರುದ್ದ ಉಗ್ರ ಪ್ರತಿಭಟನೆ ನಡೆಸುವುದಾಗಿ ರೈತರು ಎಚ್ಚರಿಸಿದ್ದಾರೆ.

ಆನೆ ನಡೆದದ್ದೇ ದಾರಿ: ಈ ಭಾಗದಲ್ಲಿ ರೈಲ್ವೆ ಕಂಬಿ ಹಳಿಯ ತಡೆಗೋಡೆಯೂ ನಿರ್ಮಿಸಲಾಗಿದೆ, ಕೆಲವು ಕಡೆಗಳಲ್ಲಿ ಸೋಲಾರ್ ಬೇಲಿ, ಸೋಲಾಂರ್ ಹ್ಯಾಂಗಿನ್ಸ್ ಹಾಕಲಾಗಿದೆ. ಆದರೆ ಈ ಕಾಡಾನೆಗಳು ಪ್ರತಿವರ್ಷವೂ ಡಿಸೆಂಬರ್-ಜನವರಿ ತಿಂಗಳಿನಲ್ಲಿ ಯಾವುದೇ ತಡೆಗೋಡೆ ಇದ್ದರೂ ಒಂದಿಲ್ಲೊಂದುಕಡೆಯಿಂದ ಉಪಾಯವಾಗಿ ಹೊರಬಂದು ಹೊಸಬೆಳೆ ತಿಂದು, ಆರಾಮವಾಗಿ ಬಂದದಾರಿಯಲ್ಲೇ ಮತ್ತೆ ಕಾಡುಸೇರಿಕೊಳ್ಳುತ್ತಿವೆ. ಇದು ಕಳೆದ 8-10 ವರ್ಷಗಳಿಂದಲೂ ನಡೆಯುತ್ತನೇ ಇದ್ದು, ಆನೆ ನಡೆದದ್ದೇ ದಾರಿ ಎಂಬಂತಾಗಿದೆ.

ಟಾಪ್ ನ್ಯೂಸ್

1-zeeka

Shivamogga; ಝಿಕಾ ವೈರಸ್ ಸೋಂಕಿಗೆ 74 ವರ್ಷದ ವೃದ್ಧ ಬಲಿ

1-shiv-mogga

Shimoga; ಕಾರುಗಳ ಮುಖಾಮುಖಿಯಲ್ಲಿ ಮೂವರು ಸಾವು!

Pratapgarh; ಪಂಚಾಯತ್ ನಲ್ಲಿ ಪರಿಹಾರ ಸಿಗದ ಪ್ರಕರಣ ಬೇಧಿಸಿದ ಎಮ್ಮೆ! ವಿಚಿತ್ರವಾದರೂ ಸತ್ಯ

Pratapgarh; ಪಂಚಾಯತ್ ನಲ್ಲಿ ಪರಿಹಾರ ಸಿಗದ ಪ್ರಕರಣ ಬೇಧಿಸಿದ ಎಮ್ಮೆ! ವಿಚಿತ್ರವಾದರೂ ಸತ್ಯ

1-rev

Kerala; ಮಿದುಳು ತಿನ್ನುವ ಅಮೀಬಾ ಸೋಂಕಿನ ನಾಲ್ಕನೇ ಪ್ರಕರಣ ಪತ್ತೆ

ಇನ್ನು ಮೂರೂವರೆ ನಿಮಿಷಕ್ಕೊಂದು ಮೆಟ್ರೋ: ರೈಲುಗಳ ಸಂಖ್ಯೆ 9ರಿಂದ 15ಕೆ ಏರಿಕೆ

ಇನ್ನು ಮೂರೂವರೆ ನಿಮಿಷಕ್ಕೊಂದು ಮೆಟ್ರೋ: ರೈಲುಗಳ ಸಂಖ್ಯೆ 9ರಿಂದ 15ಕ್ಕೆ ಏರಿಕೆ

1-shetl

Badminton: ವಿಶ್ವದ 4ನೇ ಶ್ರೇಯಾಂಕದ ಆಂಟೊನ್ಸೆನ್ ಗೆ ಶಾಕ್ ನೀಡಿದ ಪ್ರಿಯಾಂಶು ರಾಜಾವತ್

sanjay-raut

Lalu Yadav ಹೇಳಿದ್ದು ಸರಿ; ಅಲೆಗಳು ಇನ್ನೂ ರಾಹುಲ್ ಪರವಿದೆ: ಸಂಜಯ್ ರಾವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CM-SC-Meeting

Government Decision; ದಲಿತ ವಿದ್ಯಾರ್ಥಿಗಳಿಗೆ ಬಂಪರ್‌: 15,000 ಸ್ಟೈ ಫಂಡ್‌

Link Aadhaar ಕೃಷಿಕರ ಪಂಪ್‌ಸೆಟ್‌ಗಳಿಗೆ ಆಧಾರ್‌ ಜೋಡಣೆ ಕಡ್ಡಾಯ

Link Aadhaar ಕೃಷಿಕರ ಪಂಪ್‌ಸೆಟ್‌ಗಳಿಗೆ ಆಧಾರ್‌ ಜೋಡಣೆ ಕಡ್ಡಾಯ

State Government ಎಸ್‌ಸಿ, ಎಸ್‌ಟಿ ಕಾಸು ಮತ್ತೆ ಗ್ಯಾರಂಟಿಗೆ!

State Government ಎಸ್‌ಸಿ, ಎಸ್‌ಟಿ ಕಾಸು ಮತ್ತೆ ಗ್ಯಾರಂಟಿಗೆ!

SIT

Valmiki ನಿಗಮ ಹಗರಣ: ಮಾಜಿ ಸಚಿವ ನಾಗೇಂದ್ರಗೆ ಎಸ್‌ಐಟಿ ಬುಲಾವ್‌

Dengue ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಸಿವಿಕ್‌ ಬೈಲಾ!

Dengue ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಸಿವಿಕ್‌ ಬೈಲಾ!

MUST WATCH

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

udayavani youtube

ಅಬ್ಬಬ್ಬಾ ನೀವೆಂದೂ ಕಂಡಿರದ Coin Collection ನೋಡಿ

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

ಹೊಸ ಸೇರ್ಪಡೆ

1-zeeka

Shivamogga; ಝಿಕಾ ವೈರಸ್ ಸೋಂಕಿಗೆ 74 ವರ್ಷದ ವೃದ್ಧ ಬಲಿ

1-shiv-mogga

Shimoga; ಕಾರುಗಳ ಮುಖಾಮುಖಿಯಲ್ಲಿ ಮೂವರು ಸಾವು!

Pratapgarh; ಪಂಚಾಯತ್ ನಲ್ಲಿ ಪರಿಹಾರ ಸಿಗದ ಪ್ರಕರಣ ಬೇಧಿಸಿದ ಎಮ್ಮೆ! ವಿಚಿತ್ರವಾದರೂ ಸತ್ಯ

Pratapgarh; ಪಂಚಾಯತ್ ನಲ್ಲಿ ಪರಿಹಾರ ಸಿಗದ ಪ್ರಕರಣ ಬೇಧಿಸಿದ ಎಮ್ಮೆ! ವಿಚಿತ್ರವಾದರೂ ಸತ್ಯ

1-rev

Kerala; ಮಿದುಳು ತಿನ್ನುವ ಅಮೀಬಾ ಸೋಂಕಿನ ನಾಲ್ಕನೇ ಪ್ರಕರಣ ಪತ್ತೆ

buda

Bellary; ಬುಡಾ ಬಗ್ಗೆ ಲೋಕಾಯುಕ್ತಕ್ಕೆ ದೂರು ಕೊಡುತ್ತೇನೆ: ಎನ್.ಪ್ರತಾಪ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.