ಟಿಲ್ಲರ್‌ ಯುಗದಲ್ಲೂ ಕೋಣಗಳಿಗೆ ಉಳುಮೆ ತರಬೇತಿಯೂ ಉಂಟು!


Team Udayavani, Jun 20, 2024, 12:33 PM IST

ಟಿಲ್ಲರ್‌ ಯುಗದಲ್ಲೂ ಕೋಣಗಳಿಗೆ ಉಳುಮೆ ತರಬೇತಿಯೂ ಉಂಟು!

ಬಜಪೆ: ಎತ್ತ ಒ…. ಬೊಲ್ಲ, ಒ ….ಕಾಟಿ… ಟುರ್‌ ಟುರ್‌…: ಇದು ಗದ್ದೆಯಲ್ಲಿ ಎತ್ತು ಇಲ್ಲವೇ ಕೋಣಗಳ ಮೂಲಕ ಉಳುಮೆ ಮಾಡುವಾಗ ಕೇಳುವ ಪದಗಳು. ಆದರೆ ಈಗ ಎಲ್ಲ ಕಡೆ ಟಿಲ್ಲರ್‌ ಉಳುಮೆಯೇ ಹೆಚ್ಚಾಗಿರುವುದರಿಂದ ಇಂಥ ದನಿಗಳು ಕೇಳಿಸುವುದಿಲ್ಲ. ಆದರೆ ಅಲ್ಲೊಬ್ಬ, ಇಲ್ಲೊಬ್ಬ ರೈತರು ಇಂದಿಗೂ ನೇಗಿಲ ಉಳುಮೆಯನ್ನೇ ಮಾಡುತ್ತಿದ್ದಾರೆ. ಅಂಥವರಲ್ಲಿ
ಒಬ್ಬರು ಬಜಪೆ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಮಳವೂರಿನ ಕಲ್ಲೋಡಿ ನಿವಾಸಿ ಲೋಕನಾಥ್‌. ರಿಕ್ಷಾ ಚಾಲಕರೂ ಆಗಿರುವ
ಇವರು ಕೋಣಗಳಿಂದ ಉಳುಮೆ ಮಾಡುವುದು ಮಾತ್ರವಲ್ಲ, ಕೋಣಗಳಿಗೆ ಉಳುಮೆಯ ತರ ಬೇತಿ ನೀಡುತ್ತಾರೆ!

ಹೊಸ ಕೋಣಗಳಿಗೆ ಏಕಾಏಕಿ ನೇಗಿಲು ಕಟ್ಟಿ, ಇಲ್ಲವೇ ಹಲಗೆ ಕಟ್ಟಿ ಉಳುಮೆಗೆ ಇಳಿಸಿದರೆ ಆಗುವುದಿಲ್ಲ. ಅವುಗಳಿಗೆ ಅವು
ಸಾಗಬೇಕಾದ ರೀತಿ ಮತ್ತು ದಾರಿ ಎರಡರ ತರಬೇತಿ ಬೇಕಾಗುತ್ತದೆ. ಅವುಗಳು ಅಡ್ಡಾದಿಡ್ಡಿ ಸಾಗಿದರೆ ಗದ್ದೆ ಹದ ಆಗುವುದಿಲ್ಲ. ಜತೆಗೆ ನೇಗಿಲು ಕಾಲಿಗೆ ತಾಗಿ ಅಪಾಯವಾಗುವ ಸಾಧ್ಯತೆಯೂ ಇದೆ. ಹೀಗಾಗಿ ಕೋಣಗಳಿಗೆ ಸುಮಾರು 10 ದಿನಗಳ ತರಬೇತಿಯನ್ನು ನೀಡಲಾಗುತ್ತದೆ. ಆ ಕೆಲ ಸವನ್ನು ಲೋಕನಾಥ್‌ ಶ್ರದ್ಧೆಯಿಂದ ಮಾಡುತ್ತಾರೆ.

ಈ ಬಾರಿ ಹೊಸ ಕೋಣಗಳಿಂದ ಉಳುಮೆ
ಲೋಕನಾಥ್‌ ಅವರು ಈ ಬಾರಿ ತಮ್ಮ ಹಳೆಯ ಕೋಣಗಳನ್ನು ನೀಡಿ, 3 ವರ್ಷ ಪ್ರಾಯದ ಎರಡು ಕೋಣಗಳನ್ನು ಖರೀದಿ
ಮಾಡಿದ್ದಾರೆ. ಈ ಬಾರಿ ಇವುಗಳದೇ ಉಳುಮೆ ಕಾಯಕ. ಹೊಸ ಕೋಣಗಳಿಗೆ 10 ದಿನ ಉಳುಮೆಯ ತರಬೇತಿಯನ್ನು ಇವರು ನೀಡಿದ್ದಾರೆ.

35 ವರ್ಷದ ಅನುಭವ
ಲೋಕ ನಾಥ್‌ ಅವರು ಹತ್ತನೇ ತರಗತಿಯಿಂದಲೇ ಉಳುಮೆ ಮಾಡಿ ಕೊಂಡು ಬಂದಿದ್ದಾರೆ. ಸುಮಾರು 35 ವರ್ಷಗಳ
ಅನುಭವ ಅವರದು. ಕೋಣದಿಂದ ಉಳುಮೆ ಮಾಡಿದಷ್ಟು ಟಿಲ್ಲರ್‌ನಿಂದ ಖುಷಿ ಕೊಡುವುದಿಲ್ಲ. ಕೋಣ ಮತ್ತು ನಮ್ಮ ಸಂಬಂಧ ಬೆಲೆ ಕಟ್ಟಲಾಗದ್ದು ಎನ್ನುತ್ತಾರೆ ಲೋಕನಾಥ್‌. ಅಣ್ಣ ಶುಭಕರ ಅವರು ಕೂಡ ಉಳುಮೆಗೆ, ಕೃಷಿಗೆ ಸಹಕಾರ ನೀಡುತ್ತಿದ್ದಾರೆ. ನಮ್ಮದೇ ಕೋಣವಿದ್ದರೆ ನಮ್ಮ ಸಮಯಕ್ಕೆ ಉಳುಮೆ ಮಾಡಬಹುದು, ಟಿಲ್ಲರ್‌ ಗೆ ಕಾಯಬೇಕಾಗುತ್ತದೆ ಎನ್ನುತ್ತಾರೆ ಲೋಕನಾಥ್‌.

ಲೋಕನಾಥ್‌ ಡಬಲ್‌ ರೋಲ್‌
ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಕೃಷಿಕನಾಗಿ ಹೊಲದಲ್ಲಿ ದುಡಿಯುವ ಲೋಕನಾಥ್‌ ಮಧ್ಯಾಹ್ನದ ಅನಂತರ ರಿಕ್ಷಾ ಚಾಲಕನಾಗಿ ದುಡಿಯುತ್ತಾರೆ. ಕೃಷಿಕನಾಗಿ ಭತ್ತ ಬೇಸಾಯದ ಜತೆ ಬದನೆ, ತೊಂಡೆ, ಕುಂಬಳಕಾಯಿ ಕೂಡ ಬೆಳೆಸುತ್ತಾರೆ.

ತರಬೇತಿ ಹೇಗೆ? ಏನೇನು ಮಾಹಿತಿ?
*ಕೋಣಗಳಿಗೆ ಮೊದಲು ಯಾವ ದಾರಿಯಲ್ಲಿ ಸಾಗಬೇಕು ಎಂದು ತಿಳಿಸಲಾಗುತ್ತದೆ. ಕೋಣದ ಎದುರು ಹಗ್ಗ ಹಿಡಿದು ಸಾಗಿದಾಗ ಅವುಗಳಿಗೆ ಇದರ ಅರಿವಾಗುತ್ತದೆ. ಯಾರಾದರೂ ಒಬ್ಬರು ಕೋಣದ ಮುಂದೆ ನಡೆದುಕೊಂಡು ಹೋಗುತ್ತಾರೆ.

*ತಿರುಗುವಾಗ ಬಳಸುವ ಭಾಷೆ, ನಿಲ್ಲಬೇಕು ಎಂದಾಗ ಬಳಸುವ ಭಾಷೆ, ವೇಗವಾಗಿ ಹೋಗಲು.. ಹೀಗೆ ನಾನಾ ಭಾಷೆಗಳನ್ನು ಹೇಳಿ ಕೊಡಲಾಗುತ್ತದೆ. ಅರ್ಥವಾಗುವ ಮೊದಲು ಸಣ್ಣಗೆ ಬೆತ್ತ ಬೀಸುವುದೂ ಉಂಟು.

* ಕೋಣಗಳಿಗೆ ಹಲಗೆಯ ಉಳುಮೆಗೆ ತರಬೇತಿಯನ್ನೂ ನೀಡಲಾಗುತ್ತದೆ. ಮೂರು ವರ್ಷದ ಕೋಣವಾದ ಕಾರಣ ಹಲಗೆಯ
ಮೇಲೆ ನಿಂತು ಉಳುಮೆಯನ್ನು ಮಾಡಲು ಸಾಧ್ಯವಿಲ್ಲ.ಅದಕ್ಕೆ ಹಲಗೆಗೆ ಒಂದು ಕಲ್ಲನ್ನುಕಟ್ಟಿ ಉಳುಮೆ ಮಾಡಲಾಗುತ್ತದೆ.

*ಕೋಣಗಳು ದಿಕ್ಕು ತಪ್ಪಿ ಎಲ್ಲೆಲ್ಲೋ ಹೋಗದಂತೆ ನೋಡುವುದು ಇಲ್ಲಿ ಮುಖ್ಯ.

*ಸುಬ್ರಾಯ ನಾಯಕ್‌ ಎಕ್ಕಾರು

ಟಾಪ್ ನ್ಯೂಸ್

ಪ್ರವಾಸಿಗರ ಕಣ್ಣೆದುರೇ ಕೊಚ್ಚಿಹೋದ ಒಂದೇ ಕುಟುಂಬದ ಏಳು ಮಂದಿ ಸದಸ್ಯರು.. ಭಯಾನಕ ದೃಶ್ಯ ಸೆರೆ

ಪ್ರವಾಸಿಗರ ಕಣ್ಣೆದುರೇ ಕೊಚ್ಚಿಹೋದ ಒಂದೇ ಕುಟುಂಬದ ಏಳು ಮಂದಿ ಸದಸ್ಯರು.. ಭಯಾನಕ ದೃಶ್ಯ ಸೆರೆ

Box office: ರಿಲೀಸ್‌ ಆದ ನಾಲ್ಕೇ ದಿನದಲ್ಲಿ 500 ಕೋಟಿ ರೂ. ಗಳಿಸಿದ ʼಕಲ್ಕಿ 2898ಎಡಿ’

Box office: ರಿಲೀಸ್‌ ಆದ ನಾಲ್ಕೇ ದಿನದಲ್ಲಿ 500 ಕೋಟಿ ರೂ. ಗಳಿಸಿದ ʼಕಲ್ಕಿ 2898 ಎಡಿ’

ಮೋಜು-ಮಸ್ತಿಯ ಅಡ್ಡವಾಯ್ತಾ ಶ್ರೀ ಕ್ಷೇತ್ರ ದೇವರಮನೆ! ರಸ್ತೆ ಮಧ್ಯೆ ವಾಹನ ನಿಲ್ಲಿಸಿ ಡ್ಯಾನ್ಸ್

ಮೋಜು-ಮಸ್ತಿಯ ಅಡ್ಡವಾಯ್ತಾ ಶ್ರೀ ಕ್ಷೇತ್ರ ದೇವರಮನೆ! ರಸ್ತೆ ಮಧ್ಯೆ ವಾಹನ ನಿಲ್ಲಿಸಿ ಡ್ಯಾನ್ಸ್

Untitled-1

World Doctor’s Day: ನನ್ನ ಆರೋಗ್ಯ ನನ್ನ ಕೈಯ್ಯಲ್ಲಿ!

Panipuri ಅಸುರಕ್ಷಿತ ಪಾನಿಪೂರಿ ನಿಷೇಧ: ಇಂದು ಅಂತಿಮ ನಿರ್ಣಯ

Panipuri ಅಸುರಕ್ಷಿತ ಪಾನಿಪೂರಿ ನಿಷೇಧ: ಇಂದು ಅಂತಿಮ ನಿರ್ಣಯ

Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ ಸಿಗಲಿದೆ

Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ ಸಿಗಲಿದೆ

Warning… ಶವರ್ಮಾದಲ್ಲೂ ಬ್ಯಾಕ್ಟೀರಿಯಾ ಈಸ್ಟ್‌ ! ತಯಾರಕರ ವಿರುದ್ಧ ಕಾನೂನು ಕ್ರಮ

Warning… ಶವರ್ಮಾದಲ್ಲೂ ಬ್ಯಾಕ್ಟೀರಿಯಾ ಈಸ್ಟ್‌ ! ತಯಾರಕರ ವಿರುದ್ಧ ಕಾನೂನು ಕ್ರಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru ವಿಮಾನ ನಿಲ್ದಾಣ: ಪರಿಹಾರ ಕಾಣದ ಕಾರ್ಗೋ ಸಮಸ್ಯೆ

Mangaluru ವಿಮಾನ ನಿಲ್ದಾಣ: ಪರಿಹಾರ ಕಾಣದ ಕಾರ್ಗೋ ಸಮಸ್ಯೆ

Kambala ಓಟಗಾರನಿಗೆ “ಕೋಣ’ ನಿಗದಿ; ಕಂಬಳ ಸಮಿತಿಯಿಂದ ಹೊಸ ನಿಯಮಾವಳಿ

Kambala ಓಟಗಾರನಿಗೆ “ಕೋಣ’ ನಿಗದಿ; ಕಂಬಳ ಸಮಿತಿಯಿಂದ ಹೊಸ ನಿಯಮಾವಳಿ

Rain ಉಡುಪಿ,ದಕ್ಷಿಣ ಕನ್ನಡದಲ್ಲಿ ಸಾಧಾರಣ ಮಳೆ; ಕಾಂಕ್ರೀಟ್‌ ತೋಡು ಕುಸಿತ

Rain ಉಡುಪಿ,ದಕ್ಷಿಣ ಕನ್ನಡದಲ್ಲಿ ಸಾಧಾರಣ ಮಳೆ; ಕಾಂಕ್ರೀಟ್‌ ತೋಡು ಕುಸಿತ

Ullal ಮದನಿ ನಗರ ದುರಂತ: ಮೃತರ ಕುಟುಂಬಕ್ಕೆ ಪರಿಹಾರ ವಿತರಣೆ

Ullal ಮದನಿ ನಗರ ದುರಂತ: ಮೃತರ ಕುಟುಂಬಕ್ಕೆ ಪರಿಹಾರ ವಿತರಣೆ

Ullal ಕಡಲ್ಕೊರೆತ ಪ್ರದೇಶಗಳಿಗೆ ಸಂಸದ ಬ್ರಿಜೇಶ್‌ ಚೌಟ ಭೇಟಿ

Ullal ಕಡಲ್ಕೊರೆತ ಪ್ರದೇಶಗಳಿಗೆ ಸಂಸದ ಬ್ರಿಜೇಶ್‌ ಚೌಟ ಭೇಟಿ

MUST WATCH

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

ಹೊಸ ಸೇರ್ಪಡೆ

ಪ್ರವಾಸಿಗರ ಕಣ್ಣೆದುರೇ ಕೊಚ್ಚಿಹೋದ ಒಂದೇ ಕುಟುಂಬದ ಏಳು ಮಂದಿ ಸದಸ್ಯರು.. ಭಯಾನಕ ದೃಶ್ಯ ಸೆರೆ

ಪ್ರವಾಸಿಗರ ಕಣ್ಣೆದುರೇ ಕೊಚ್ಚಿಹೋದ ಒಂದೇ ಕುಟುಂಬದ ಏಳು ಮಂದಿ ಸದಸ್ಯರು.. ಭಯಾನಕ ದೃಶ್ಯ ಸೆರೆ

Box office: ರಿಲೀಸ್‌ ಆದ ನಾಲ್ಕೇ ದಿನದಲ್ಲಿ 500 ಕೋಟಿ ರೂ. ಗಳಿಸಿದ ʼಕಲ್ಕಿ 2898ಎಡಿ’

Box office: ರಿಲೀಸ್‌ ಆದ ನಾಲ್ಕೇ ದಿನದಲ್ಲಿ 500 ಕೋಟಿ ರೂ. ಗಳಿಸಿದ ʼಕಲ್ಕಿ 2898 ಎಡಿ’

ಮೋಜು-ಮಸ್ತಿಯ ಅಡ್ಡವಾಯ್ತಾ ಶ್ರೀ ಕ್ಷೇತ್ರ ದೇವರಮನೆ! ರಸ್ತೆ ಮಧ್ಯೆ ವಾಹನ ನಿಲ್ಲಿಸಿ ಡ್ಯಾನ್ಸ್

ಮೋಜು-ಮಸ್ತಿಯ ಅಡ್ಡವಾಯ್ತಾ ಶ್ರೀ ಕ್ಷೇತ್ರ ದೇವರಮನೆ! ರಸ್ತೆ ಮಧ್ಯೆ ವಾಹನ ನಿಲ್ಲಿಸಿ ಡ್ಯಾನ್ಸ್

Untitled-1

World Doctor’s Day: ನನ್ನ ಆರೋಗ್ಯ ನನ್ನ ಕೈಯ್ಯಲ್ಲಿ!

Panipuri ಅಸುರಕ್ಷಿತ ಪಾನಿಪೂರಿ ನಿಷೇಧ: ಇಂದು ಅಂತಿಮ ನಿರ್ಣಯ

Panipuri ಅಸುರಕ್ಷಿತ ಪಾನಿಪೂರಿ ನಿಷೇಧ: ಇಂದು ಅಂತಿಮ ನಿರ್ಣಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.