ಲಾಕ್‌ಡೌನ್‌ ಯಶಸ್ಸಿಗೆ ಶ್ರಮಿಸೋಣ : ಸರಕಾರದ ಉದ್ದೇಶವನ್ನು ಯಶಸ್ವಿಗೊಳಿಸೋಣ


Team Udayavani, May 9, 2021, 7:20 AM IST

ಲಾಕ್‌ಡೌನ್‌ ಯಶಸ್ಸಿಗೆ ಶ್ರಮಿಸೋಣ : ಸರಕಾರದ ಉದ್ದೇಶವನ್ನು ಯಶಸ್ವಿಗೊಳಿಸೋಣ

ಕರಾವಳಿ ಸೇರಿದಂತೆ ರಾಜ್ಯಾದ್ಯಂತ ಸೋಮವಾರದಿಂದ ಸಂಪೂರ್ಣ ಲಾಕ್‌ಡೌನ್‌. ಸರಕಾರದ ಉದ್ದೇಶವನ್ನು ಯಶಸ್ವಿಗೊಳಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಅದಕ್ಕೆ ನೂರಾರು ಉಪಾಯಗಳಿವೆ. ಅವುಗಳನ್ನು ಪ್ರಯತ್ನಿಸೋಣ.

ನಾವು ಏನು ಮಾಡಬಹುದು?
1. ಪ್ರತೀ ಗ್ರಾಮದ‌ಲ್ಲೂ ಯುವ ಸಂಘಟನೆ ಗಳಿವೆ, ಸಮುದಾಯ ಸಂಘಟನೆಗಳಿವೆ. ಅವುಗಳು ತಮ್ಮ ಸದಸ್ಯರ ಹಾಗೂ ಊರಿನ ಕುಟುಂಬಗಳ ಗುಂಪುಗಳನ್ನು ರಚಿಸಿ, ಅಗತ್ಯ ಸಾಮಗ್ರಿಗಳನ್ನು ಮನೆಗೇ ಪೂರೈಸಬಹುದು.

2. ಇಬ್ಬರು ಸದಸ್ಯರ ಒಂದು ತಂಡಕ್ಕೆ ನಿಗದಿತ ಸಂಖ್ಯೆಯ ಮನೆಗಳನ್ನು ನೀಡಿ, ವಾಟ್ಸಪ್‌ ಗುಂಪು ರಚಿಸಿ, ಸಾಮಗ್ರಿ ಬೇಕಾದವರ ಮಾಹಿತಿ ಪಡೆದು ಮನೆ ಬಾಗಿಲಿಗೇ ಒದಗಿಸಬಹುದು.

3. ಸಾಮಾನ್ಯವಾಗಿ ಬೇಕಾಗುವ ದಿನ‌ಸಿ ಸಾಮಗ್ರಿ ಹಾಗೂ ಔಷಧಗಳಿಗೆ ಪ್ರತ್ಯೇಕ ಸದಸ್ಯರನ್ನು ನಿಯೋಜಿಸಿದರೆ ಒಳ್ಳೆಯದು.

4. ವಸತಿ ಸಮುತ್ಛಯಗಳ ಸೊಸೈಟಿಗಳು, ಸಂಘಗಳೂ ಇದನ್ನು ಕೈಗೊಂಡರೆ, ಎಲ್ಲ ರನ್ನೂ ಸೋಂಕಿನಿಂದ ರಕ್ಷಿಸಬಹುದು.

5. ಒಂದುವೇಳೆ ಕೆಲವು ಮನೆಗಳಿಗೆ ಈ ವ್ಯವಸ್ಥೆ ಸೀಮಿತಗೊಳಿಸಿಕೊಂಡರೂ ನೆರೆಹೊರೆಯವರು ವಾಟ್ಸಪ್‌ ಗುಂಪು ರಚಿಸಿ, ಎಲ್ಲರ ಪರವಾಗಿ ಒಬ್ಬಿಬ್ಬರೇ ಮಾರುಕಟ್ಟೆ ಹೋಗಿ ಸಾಮಾನುಗಳನ್ನು ತರುವುದೂ ಒಳ್ಳೆಯದೇ.

6. ಒಂದು ವಾರ, 15 ದಿನ, ತಿಂಗಳಿಗೆ ಬೇಕಾಗುವ ವಸ್ತುಗಳನ್ನು ಒಮ್ಮೆಲೆ ಖರೀದಿಸುವುದು ಸೂಕ್ತ. ಕಷ್ಟ ಎನಿಸುವವರು ಪ್ರತೀ ದಿನವೂ ಹೋಗದೆ ಮೂರು ದಿನಕ್ಕೊಮ್ಮೆ ಹೋಗುವುದು ಅಥವಾ ಇದಕ್ಕಾಗಿ ಅಕ್ಕಪಕ್ಕದವರ ಸಹಾಯ ಪಡೆಯುವುದು ಸೂಕ್ತ.

ವರ್ತಕರು, ವ್ಯಾಪಾರ ಮಳಿಗೆ ಗಳು ಏನು ಮಾಡಬಹುದು?
1. ವಾಟ್ಸಪ್‌, ಫೋನ್‌ ಮೂಲಕ ವಸ್ತುಗಳ ಪಟ್ಟಿ ಪಡೆದು ಮನೆಗೇ ಪೂರೈಸಬಹುದು.
2.ವಸ್ತುಗಳ ಪಟ್ಟಿಯನ್ನು ಮೊದಲೇ ಪಡೆದು ಕಟ್ಟಿಟ್ಟರೆ, ಗ್ರಾಹಕರು ಅಂಗಡಿ ಎದುರು ಕಾಯುವುದು ತಪ್ಪಲಿದೆ. ಇದರಿಂದ ಸೋಂಕಿಗೆ ಒಡ್ಡಿಕೊಳ್ಳುವ ಸಂದರ್ಭ ಕ್ಷೀಣಿಸಲಿದೆ.
3.ಗ್ರಾಹಕರು ಸರತಿ ಸಾಲಿನಲ್ಲಿ ಸಾಮಾಜಿಕ ಅಂತರ ಪಾಲಿಸುವಂತೆ ಹೇಳಿ. “ಮಾಸ್ಕ್ ಧರಿಸಿದವರೊಂದಿಗೆ ಮಾತ್ರ ವ್ಯವಹಾರ’ ಎಂದು ಹೇಳಿ. ನಿಯಮ ಪಾಲಿಸಿದರೆ ನೀವೂ ಕ್ಷೇಮ, ನಾವೂ ಕ್ಷೇಮ ಎಂಬುದನ್ನು ಖಚಿತಪಡಿಸಿ.

ಜನಪ್ರತಿನಿಧಿಗಳು ಏನು ಮಾಡಬೇಕು?
1.ತಮ್ಮ ವಿಧಾನಸಭಾ ಕ್ಷೇತ್ರ, ಪಂಚಾಯತ್‌ ಕ್ಷೇತ್ರವಾರು ಪೇಟೆ, ಮಾರುಕಟ್ಟೆಗಳಲ್ಲಿ ಜನರು, ಸಾಮಾಜಿಕ ಅಂತರ ನಿಯಮ ಪಾಲಿಸು ವಂತೆ ಕಟ್ಟುನಿಟ್ಟಾಗಿ ಎಚ್ಚರವಹಿಸಬೇಕು.
2. ತಮ್ಮ ಕಾರ್ಯಕರ್ತರ ತಂಡ ರಚಿಸಿ ನಿಗಾ ವಹಿಸುವುದಲ್ಲದೇ, ತಾವೂ ಆಗಾಗ್ಗೆ ಭೇಟಿ ನೀಡಿ ಹಾಗೂ ಸಹಾಯವಾಣಿ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿರಬೇಕು.
3. ಜನಪ್ರತಿನಿಧಿಗಳೇ ತಮ್ಮ ಕಾರ್ಯಕರ್ತರ ತಂಡಗಳ ಮೂಲಕ, ಸಂಘಟನೆಗಳ ಸದಸ್ಯರ ಮೂಲಕ ಜನರಿಗೆ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೇ ಮುಟ್ಟಿಸಿ.

ಪಾಲಿಕೆ, ಪಂಚಾಯತ್‌ಗಳು, ಜಿಲ್ಲಾಡಳಿತ ಏನು ಮಾಡಬೇಕು?
1. ಪಾಲಿಕೆ ಮತ್ತು ಪಂಚಾಯತ್‌ಗಳು ತಮ್ಮ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಗುಂಪುಗಳನ್ನು ರಚಿಸಿ, ಸ್ಥಳೀಯರ ದೈನಂದಿನ ಅಗತ್ಯಗಳನ್ನು ಪೂರೈಸಬೇಕು. ಮಂಗಳೂರು ಮಹಾನಗರಪಾಲಿಕೆ ಹಿಂದಿನ ಬಾರಿ ವಾರ್ಡ್‌ ಮಟ್ಟದಲ್ಲಿ ಹೋಮ್‌ ಡೆಲಿವರಿಗೆ ಪ್ರಯತ್ನಿಸಿತ್ತು. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಅಗತ್ಯವಿದೆ.
2. ಅನಗತ್ಯವಾಗಿ ಪೇಟೆಯಲ್ಲಿ ಓಡಾಡು ವರನ್ನು ಪತ್ತೆ ಹಚ್ಚಿ ಮನವೊಲಿಸಿ ವಾಪಸು ಕಳುಹಿಸಬೇಕು. ಅದಕ್ಕಾಗಿ ಗ್ರಾಮೀಣ ಕಾರ್ಯಪಡೆಯ ಸದಸ್ಯರು, ಸಂಘಟನೆಗಳ ಸದಸ್ಯರು ಕ್ರಿಯಾಶೀಲವಾಗಬೇಕು.
3. ಪೇಟೆಯ ಬಾಗಿಲಲ್ಲೇ ತಡೆಗಳನ್ನು ಹಾಕಿ, ವಾಹನಗಳನ್ನು ನಿರ್ಬಂಧಿಸಿ, ಸರಕು ಪೂರೈಕೆ ವಾಹನಗಳಿಗಷ್ಟೇ ಅನುಮತಿ ಇರಬೇಕು. ಜತೆಗೆ ಮಾರುಕಟ್ಟೆ ಪ್ರವೇಶಿಸುವಲ್ಲೇ ಸ್ಯಾನಿ ಟೈಸರ್‌ ಬಳಕೆ ಕಡ್ಡಾಯಗೊಳಿಸಬೇಕು. ಮಾಸ್ಕ್ ಧರಿಸದವರಿಗೆ ಪ್ರವೇಶ ನಿಷೇಧಿಸಬೇಕು.
4. ನಗರದ ಪ್ರತೀ ವಾರ್ಡ್‌ನಲ್ಲಿ ಮೀನು -ಮಾಂಸ, ತರಕಾರಿ, ದಿನಸಿ ಸಹಿತ ಅಗತ್ಯ ವಸ್ತುಗಳನ್ನು ನೇರವಾಗಿ ಮನೆಗಳಿಗೆ ತಲುಪಿಸ ಬಲ್ಲ ಸಾಮಾನ್ಯ ಹಾಗೂ ಸಣ್ಣ ಗಾತ್ರದ ಅಂಗಡಿ ಗಳ ಪಟ್ಟಿಯನ್ನು ಸ್ಥಳೀಯಾಡಳಿತದವರು ಜನರಿಗೆ ನೀಡಬೇಕು. ಅದರಿಂದ ಜನರು ತಮಗೆ ಬೇಕಾ ದವರಲ್ಲೇ ಸಾಮಗ್ರಿ ಪಡೆಯಬಹುದು. ಹೆಚ್ಚು ದರ ವಸೂಲಿಯಾಗದಂತೆ ಪಾಲಿಕೆ ಮತ್ತು ಪಂ.ಗಳು ಉಸ್ತುವಾರಿ ವಹಿಸಬೇಕು.

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.