Famous Goddess Temple: ನೀಲಪರ್ವತ ತೀರ್ಥ ಚಂಡಿದೇಗುಲ
ನವರಾತ್ರಿ- ನವದೇವಿ; ಶುಂಭ-ನಿಶುಂಭರ ಸಂಹಾರದ ಬಳಿಕ ಚಂಡಿಕಾ ವಿರಮಿಸಿದ್ದ ನೀಲ ಪರ್ವತ, ಭಕ್ತರ ಬೇಡಿಕೆ ಈಡೇರಿಸುವ ಸಿದ್ಧಪೀಠ
Team Udayavani, Oct 3, 2024, 7:12 AM IST
ಇಂದಿನಿಂದ ನಾಡಿನೆಲ್ಲೆಡೆ ನವರಾತ್ರಿಯ ಸಂಭ್ರಮ. ಆಶ್ವಯುಜ ಶುದ್ಧ ಪ್ರತಿಪದೆಯಂದು ಆರಂಭವಾಗುವ ಈ ಹಬ್ಬ ದೇಶದೆಲ್ಲೆಡೆ ಅತ್ಯಂತ ವೈಭವ, ಸಡಗರಗಳಿಂದ ಆಚರಿಸಲ್ಪಡುತ್ತದೆ. ದೇಶಾದ್ಯಂತ ಇರುವ ದುರ್ಗಾದೇವಿಯ ದೇವಾಲಯಗಳಲ್ಲಿ ಈ ಹಬ್ಬವನ್ನು ವಿಶೇಷ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ. ನವರಾತ್ರಿಯ ಈ ಸಂದರ್ಭದಲ್ಲಿ ದೇಶದ ಒಂಬತ್ತು ಪ್ರಸಿದ್ಧ ದೇವಿ ದೇವಾಲಯಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸುವ “ನವರಾತ್ರಿ- ನವದೇವಿ’ ಲೇಖನ ಮಾಲಿಕೆ ಇಂದಿನಿಂದ.
ಉತ್ತರಾಖಂಡದ ಪವಿತ್ರ ಯಾತ್ರಾಸ್ಥಳವಾದ ಹರಿದ್ವಾರದಲ್ಲಿರುವ ಚಂಡಿ ದೇಗುಲ ದೇವೀ ಆರಾಧನೆಯ ಪ್ರಸಿದ್ಧ ತಾಣವಾಗಿದೆ. ಪ್ರತೀ ವರ್ಷ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿನ ಚಂಡಿ ದೇವಿಯ ದರುಶನ ಪಡೆಯುವುದರ ಜತೆಯಲ್ಲಿ ಹರಕೆ, ವಿಶೇಷ ಪೂಜೆ, ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ.
ದಕ್ಷಿಣ ಹಿಮಾಲಯದ ಸಾಲಿನ ಪೂರ್ವ ಭಾಗದ ಶಿವಾಲಿಕ ಪರ್ವತದ ಸಾಲಿನಲ್ಲಿರುವ ನೀಲ ಪರ್ವತದ ಬಳಿ ಈ ದೇವಸ್ಥಾನವಿದೆ. 1029ರಲ್ಲಿ ಕಾಶ್ಮೀರದ ರಾಜನಾಗಿದ್ದ ಸುಚತ್ ಸಿಂಗ್ ಈ ದೇವಾಲಯವನ್ನು ನಿರ್ಮಿಸಿದನು ಎನ್ನಲಾಗುತ್ತದೆ. ಆದರೆ ಇಲ್ಲಿರುವ ಚಂಡಿ ದೇವಿಯ ಮುಖ್ಯ ದೇವಿಯ ಮೂರ್ತಿಯನ್ನು 8ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರು ಪ್ರತಿಷ್ಠಾಪಿಸಿದರು ಎನ್ನಲಾಗುತ್ತದೆ. ಹರಿದ್ವಾರದ ಪಂಚತೀರ್ಥ ಪುಣ್ಯಕ್ಷೇತ್ರಗಳಲ್ಲಿ ಈ ದೇವಾಲಯವು ಒಂದಾಗಿದೆ. ಹಾಗಾಗಿ ಇದನ್ನು ನೀಲ ಪರ್ವತ ತೀರ್ಥ ಎಂದು ಹೇಳಲಾಗುತ್ತದೆ.
ಚಂಡಿಕಾ ದೇವಿಯು ಶುಂಭ-ನಿಶುಂಭರನ್ನು ಸಂಹರಿಸಿದ ಬಳಿಕ ನೀಲ ಪರ್ವತದಲ್ಲಿ ಸ್ವಲ್ಪ ಸಮಯ ವಿರಮಿಸಿದಳು ಎನ್ನುವ ಪುರಾಣ ಈ ಕ್ಷೇತ್ರಕ್ಕಿದೆ. ಭಕ್ತರು ಈ ಕ್ಷೇತ್ರವನ್ನು ತಮ್ಮ ಬೇಡಿಕೆಗಳನ್ನು ಈಡೇರಿಸುವ ಸಿದ್ಧ ಪೀಠವಾಗಿ ಕಾಣುತ್ತಾರೆ. ಇಲ್ಲಿನ ಮಾನಸ ದೇವಿ ಹಾಗೂ ಮಾಯಾ ದೇವಿ ದೇಗುಲದಲ್ಲೂ ಈ ಸಿದ್ಧಪೀಠವನ್ನು ಕಾಣಬಹುದು. ನವರಾತ್ರಿ ಹಾಗೂ ಹರಿದ್ವಾರದಲ್ಲಿ ನಡೆಯುವ ಕುಂಭಮೇಳದ ಸಮಯದಲ್ಲಿ ಸಾವಿರಾರು ಭಕ್ತರು ಈ ದೇಗುಲಕ್ಕೆ ಭೇಟಿ ನೀಡುತ್ತಾರೆ. ಧಾರ್ಮಿಕ ಪ್ರವಾಸಿ ತಾಣವಾಗಿಯೂ ಇದು ಗುರುತಿಸಿಕೊಂಡಿದ್ದು, ಚಂಡಿ ದೇಗುಲದ ಸುತ್ತಮುತ್ತಲಿನ ವಿಹಂಗಮ ದೃಶ್ಯಾವಳಿ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Navaratri: ನವ ಮಹಾಭಾರತ- ದ್ರೌಪದಿಯ ನಿಟ್ಟುಸಿರಿಗೆ ಕೊನೆ ಎಂದು…? ಬದಲಾಗದ ಹೆಣ್ಣಿನ ಬವಣೆ
Womens T20 World Cup: ಪುರುಷರು ಆಯ್ತು ಈಗ ವನಿತಾ ಕ್ರಿಕೆಟ್ ಸಮರ
Dasara: ನವರೂಪ ಧಾರಿಣಿ ದೇವಿ ಆರಾಧನೆಯ ಪುಣ್ಯಕಾಲ ನವರಾತ್ರಿ
Demand Gold: ಚಿನ್ನ ನೀನೇಕೆ ಇಷ್ಟು ತುಟ್ಟಿ?; ಬಂಗಾರ ಖರೀದಿ ಸಾಂಸ್ಕೃತಿಕ ಪರಂಪರೆಯ ಭಾಗ
Shastriji Jayanthi: ಮಕ್ಕಳಿಗೆ ಲಾಲ್ ಬಹದ್ದೂರ್ ಶಾಸ್ತ್ರೀಜಿ ಹಾಕಿಕೊಟ್ಟ ಬುನಾದಿ…
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Sirawara ಬಂದ್ ಗೆ ಕರೆ: ಪಟ್ಟಣ ಸ್ತಬ್ಧ
ಷಡಕ್ಷರಿ ಮಠದ ಸ್ವಾಮೀಜಿಗೆ 6 ಕೋಟಿ ರೂ. ಹನಿಟ್ರ್ಯಾಪ್ ಕೇಸ್: ಮೂವರು ಸಿಸಿಬಿ ವಶಕ್ಕೆ
Bengaluru: ಬರ್ತ್ಡೇ ಪಾರ್ಟಿ ವೇಳೆ ಗಾಳಿಯಲ್ಲಿ 6 ಸುತ್ತು ಗುಂಡು; ಉದ್ಯಮಿ ಬಂಧನ
MUDA Case: ಕೈ ಕಾಲು ಸುಟ್ಟುಕೊಂಡಿದ್ದು ಸಾಕು, ಇನ್ನಾದರು ರಾಜೀನಾಮೆ ನೀಡಿ… ವಿ.ಸೋಮಣ್ಣ
Bengaluru: ಮ್ಯಾನೇಜರ್ಗೆ ಇರಿಯಲು ಬಂದು ಕಂಡಕ್ಟರ್ಗೆ ಇರಿದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.