Food Adulteration: ನೀವೇ ಮನೆಯಲ್ಲಿ ಆಹಾರ ಕಲಬೆರಕೆಯನ್ನು ಪತ್ತೆ ಹಚ್ಚಿ!

ಲಾಭದ ಆಸೆಗೆ ಆಹಾರದ ಕಲಬೆರಕೆ; ಆರೋಗ್ಯಕ್ಕೆ ಮಾರಕ, ಕಲಬೆರಕೆ ತಡೆಗೆ ಪ್ರಬಲವಾದ ಕಾನೂನುಗಳು ಜಾರಿಯಲ್ಲಿವೆ

Team Udayavani, Sep 28, 2024, 6:25 PM IST

Food-1

ಅಂಗಡಿಯಿಂದ ಖರೀದಿಸಿದ ದಿನನಿತ್ಯ ಬಳಕೆಯ ಸಾಮಗ್ರಿಗಳಲ್ಲಿ ಯಾವುದನ್ನು ನಂಬಬೇಕು, ಯಾವುದನ್ನು ಬಿಡಬೇಕು ಎನ್ನುವ ಜಿಜ್ಞಾಸೆ ಎಲ್ಲರದೂ. ಅದರಲ್ಲೂ ತಿರುಪತಿ ದೇಗುಲದ ಪ್ರಸಾದ ಲಡ್ಡುವಿನಲ್ಲಿ ದನದ ಕೊಬ್ಬುಯುಕ್ತ ತುಪ್ಪ ಇತ್ತು ಎಂದು ವರದಿಯಾದ ಮೇಲಂತೂ ಕಲಬೆರಕೆ ಬಗ್ಗೆ ಎಲ್ಲರೂ ಚಿಂತಿತರಾಗಿದ್ದಾರೆ. ಯಾರಿಗೆ ಗೊತ್ತು, ಯಾವ್ಯಾವ ಆಹಾರ(Food)ದಲ್ಲಿ ಏನೇನು ಸೇರಿಸಿದ್ದಾರೆ ಎಂದು? ಅದನ್ನು ತಿಳಿಯಲಿಕ್ಕಾಗಿಯೇ ಕೆಲವು ಕಲಬೆರಕೆಯನ್ನು ಮನೆಯಲ್ಲೇ  ಪತ್ತೆ ಹಚ್ಚುವ ಕೆಲವು ವಿಧಾನ ಇಲ್ಲಿ ನೀಡಲಾಗಿದೆ.

ಸರಳವಾಗಿ ಹೇಳುವುದಾದರೆ, ಶುದ್ಧ ಆಹಾರ ಪದಾರ್ಥಗಳಿಗೆ ಕೆಲವು ಕಳಪೆ ವಸ್ತುಗಳು ಅಥವಾ ಉತ್ಪನ್ನಗಳನ್ನು ಸೇರಿಸುವುದನ್ನು ಆಹಾರ ಕಲಬೆರಕೆ ಎಂದು ವ್ಯಾಖ್ಯಾನಿಸಬಹುದು. ಹೆಚ್ಚಿನ ಲಾಭದ ಆಸೆಗೋಸ್ಕರ ಶುದ್ಧ ಆಹಾರಗಳಿಗೆ ಕಳಪೆ ಪದಾರ್ಥಗಳನ್ನು ಸೇರಿಸಲಾಗುತ್ತದೆ. ಆಹಾರ ಕಲಬೆರಕೆಯಿಂದ ಅವುಗಳ ಪೌಷ್ಟಿಕಾಂಶ ತಗ್ಗುತ್ತದೆ. ಇಂಥ  ಕಲಬೆರಕೆಯುಕ್ತ ಆಹಾರವನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವೂ ಹೌದು. ಡೇರಿ ಉತ್ಪನ್ನಗಳು, ಕಾಳುಗಳು, ಧಾನ್ಯಗಳು, ಮಾಂಸ, ತರಕಾರಿಗಳು, ಹಣ್ಣುಗಳು, ಎಣ್ಣೆಗಳು, ಪಾನೀಯಗಳು ಇತ್ಯಾದಿಗಳನ್ನು ಒಳಗೊಂಡಂತೆ ನಾವು ಪ್ರತಿದಿನ ಸೇವಿಸುವ ಎಲ್ಲ ಆಹಾರ ಉತ್ಪನ್ನಗಳಲ್ಲಿ ಈ ಕಲಬೆರಕೆಗಳು ಇರುತ್ತವೆ.

ಕೆಲವು ಕಲಬೆರಕೆ ಪದಾರ್ಥಗಳ ಪತ್ತೆಗೆ ಹೀಗೆ ಮಾಡಿ..

1. ಸಕ್ಕರೆ: ಸುಣ್ಣ ಪುಡಿ, ವಾಷಿಂಗ್‌ ಸೋಡಾ, ಯೂರಿಯಾ ಮಿಕ್ಸ್‌. 

ಇದನ್ನು ಪತ್ತೆ ಹಚ್ಚಲು 1 ಗ್ಲಾಸ್‌ ನೀರಿನಲ್ಲಿ ಸಕ್ಕರೆ ಹಾಕಿ. ಕೂಡಲೇ ಸಕ್ಕರೆ ಕರಗಿ, ಸೀಮೆ ಸುಣ್ಣ,  ಬಿಳಿ ಮರಳು, ಕಲ್ಲಿನ ಪುಡಿ ಇತ್ಯಾದಿ ತಳದಲ್ಲಿ ಉಳಿಯುತ್ತಿದೆ. ಅಮೋನಿಯಾ ವಾಸನೆ ಬಂದರೆ ಯೂರಿಯಾ ಬಳಸಿದ್ದಾರೆ ಎಂದರ್ಥ.

2. ಪನೀರ್‌: ಪಿಷ್ಠ ಮತ್ತು ಆಲೂಗಡ್ಡೆ ಮೂಲಕ ಕಲಬೆರಕೆ. 

ಇದನ್ನು ಪತ್ತೆ ಹಚ್ಚಲು ನೀವು ಎರಡ್ಮೂರು ಚಿಕ್ಕ ತುಣುಕುಗಳನ್ನು ಸಣ್ಣ ಪಾತ್ರೆಗೆ ಹಾಕಿ. ನೀರು ಸೇರಿಸಿ ಕುದಿಸಿ. ಕೋಣೆಯ ಉಷ್ಣಾಂಶದಲ್ಲಿ ಅದನ್ನು ಆರಿಸಿ. ಬಳಿಕ, ಪಾತ್ರೆಗೆ ಒಂದೆರಡು ಹನಿ ಅಯೋಡಿನ್‌ ಸೇರಿಸಿ. ನೀರು ನೀಲಿ ಬಣ್ಣಕ್ಕೆ ತಿರುಗಿದರೆ ಕಲಬೆರಕೆಯಾಗಿದೆ ಎಂದರ್ಥ.

3. ಐಸ್‌ಕ್ರೀಮ್‌: ಕಲಬೆರಕೆಗೆ ವಾಷಿಂಗ್‌ ಪೌಡರ್‌ ಬಳಕೆ. 

ಈ ಕಲಬೆರಕೆ ಪತ್ತೆ ಹಚ್ಚಲು ಐಸ್‌ಕ್ರೀಮ್‌ ಮೇಲೆ ನಿಂಬೆ ಹಣ್ಣಿನ ರಸ ಸುರಿಯಿರಿ. ಆಗ ಗುಳ್ಳೆಗಳು ಕಾಣಿಸಿಕೊಂಡರೆ ಕಲಬೆರಕೆಯಾಗಿರುವುದು ಪಕ್ಕಾ.

4. ಹಸುರು ತರಕಾರಿ(ಬಟಾಣಿ, ಪಾಲಕ್‌,  ಕ್ಯಾಪ್ಸಿಕಮ್‌) ಹಸುರು ತರಕಾರಿಗಳಿಗೆ ಮಲಾಕೈಟ್‌ ಬಣ್ಣ ಸೇರ್ಪಡೆ. 

ಇದನ್ನು ಪತ್ತೆ ಹಚ್ಚಲು ಸ್ಯಾಂಪಲ್‌ಗ‌ಳನ್ನು ತೇವಾಂಶಯುಕ್ತ ಬ್ಲಾಟಿಂಗ್‌ ಪೇಪರ್‌ ಮೇಲೆ ಇಡಿ. ಕೃತಕ ಬಣ್ಣವು ಅಂಟಿಕೊಂಡರೆ ಕಲಬೆರಕೆಯಾಗಿದೆ ಎಂದರ್ಥ.

5. ಕಾಫಿ: ಕಾಫಿ ಪುಡಿಗೆ ಚಿಕೋರಿ ಇತ್ಯಾದಿ ಕಲಬೆರಕೆ 

ಇದನ್ನು ಪತ್ತೆ ಹಚ್ಚಲು, ಒಂದು ಗ್ಲಾಸ್‌ ನೀರಿನ ಮೇಲೆ ನಿಧಾನವಾಗಿ ಕಾಫಿ ಪುಡಿಯನ್ನು ಎರಚಿ. ಆಗ ಕಾಫಿ ತೇಲಲಾರಂಭಿಸುತ್ತದೆ ಮತ್ತು ಚಿಕೋರಿ ಕೆಲವೇ ಸೆಕೆಂಡ್‌ಗಳಲ್ಲಿ ಮುಳುಗಲಾರಂಭಿಸುತ್ತದೆ.

6. ಟೀ ಪುಡಿ: ಟೀಗೆ ಬಣ್ಣದ ಎಲೆಗಳು, ಬಳಸಿದ ಟೀ ಪುಡಿ, ಕಬ್ಬಿಣದ ಚೂರು ಇತ್ಯಾದಿ ಮೂಲಕ ಕಲಬೆರಕೆ. 

ಪತ್ತೆ  ಹಚ್ಚಲು ಬಿಳಿ ಕಾಗದದ ಮೇಲೆ ಟೀ ಪುಡಿಯನ್ನು ತಿಕ್ಕಬೇಕು. ಕೃತಕ ಬಣ್ಣವು ಬಿಳಿ ಕಾಗದಕ್ಕೆ ಅಂಟಿಕೊಳ್ಳುತ್ತದೆ. ಇನ್ನು ಬಳಸಿದ ಟೀ ಪುಡಿ ಪತ್ತೆ ಹಚ್ಚಲು ಹಸಿ ಫಿಲ್ಟರ್‌ ಕಾಗದದ ಮೇಲೆ ಟೀ ಪುಡಿಯನ್ನು ಚಿಮುಕಿಸಿ. ಕಲಬೆರಕೆಯಾಗಿದ್ದರೆ ಕಾಗದದ ಮೇಲೆ ಕೆಂಪು ಅಥವಾ ಗುಲಾಬಿ ಕಲೆಗಳು ಕಾಣುತ್ತವೆ. ಕಬ್ಬಿಣದ ಅಂಶಗಳನ್ನು ಪತ್ತೆ ಹಚ್ಚಲು ಟೀ ಪುಡಿಯನ್ನು ಹರಡಿ ಅದರ ಮೇಲೆ ಮ್ಯಾಗ್ನೇಟ್‌ ತೆಗೆದುಕೊಂಡು ಹೋದರೆ ಕಬ್ಬಿಣ ಅದಕ್ಕೆ ಅಂಟಿಕೊಳ್ಳುತ್ತದೆ.

7. ರಾಗಿ: ರಾಗಿಯಲ್ಲೂ ಕಲಬೆರಕೆ 

ನೀರಿನಲ್ಲಿ ಅದ್ದಿದ ಹತ್ತಿಯನ್ನು ತೆಗೆದುಕೊಂಡು ರಾಗಿ ಮೇಲೆ ಉಜ್ಜಿ. ಕಲಬೆರಕೆಯಾಗಿದ್ದರೆ ಹತ್ತಿಯು ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ಅದೇ ರೀತಿ ಕೃತಕ ಬಣ್ಣ ಬಳಸಿದ್ದರೆ, ಹತ್ತಿಯ ಉಂಡೆಯನ್ನು ವೆಜಿಟೆಬಲ್‌ ಎಣ್ಣೆಯಲ್ಲಿ ಅದ್ದಿದಾಗ ಅದು ಅದರ ಬಣ್ಣದಲ್ಲಿ ಬದಲಾವಣೆಯಾದರೆ ರಾಗಿ ಕಲಬೆರಕೆಯಾಗಿದೆ ಎಂದರ್ಥ.

8. ಕೆಂಪು ಖಾರದ ಪುಡಿ:  ಇಟ್ಟಿಗೆ ಪುಡಿ, ಕೃತಕ ಬಣ್ಣ ಬೆರಕೆ
ಇದನ್ನು ಪತ್ತೆ ಹಚ್ಚಲು, ಖಾರದ ಪುಡಿಯನ್ನು ಒಂದು ಗ್ಲಾಸ್‌ ನೀರಿನೊಳಗೆ ಹಾಕಿದಾಗ, ಕಲಬೆರಕೆಯಾಗಿದ್ದರೆ ಇಟ್ಟಿಗೆ ಪುಡಿ ವೇಗವಾಗಿ ತಳವನ್ನು ಸೇರುತ್ತದೆ ಮತ್ತು ಖಾರ ನಿಧಾನವಾಗಿ ತಳ ಸೇರುತ್ತದೆ. ಗಾಜಿನ ಲೋಟದ ನೀರಿನ ಮೇಲೆ ಸ್ವಲ್ವ ಮೆಣಸಿನ ಪುಡಿಯನ್ನು ಎರಚಿ. ಕೃತಕ ಬಣ್ಣವನ್ನು ಬಳಸಿದ್ದರೆ, ಅದು ಗೆರೆಗಳು ಎಳೆದಂತೆ ಕಾಣುತ್ತದೆ.
9. ಕಾಳು ಮೆಣಸು:  ಪಪಾಯ ಬೀಜಗಳನ್ನು ಬೆರೆಸಿ ಕಾಳುಮೆಣಸು ಕಲಬೆರಕೆ ಮಾಡಲಾಗುತ್ತದೆ. 

ಇದನ್ನು ಪತ್ತೆ ಹಚ್ಚಲು ಅಲ್ಕೋಹಾಲ್‌ನಲ್ಲಿ ಕಾಳುಮೆಣಸುಗಳನ್ನು ಹಾಕಿ. ಕೂಡಲೇ ಅಸಲಿ ಕಾಳುಮೆಣಸು ಮುಳುಗುತ್ತದೆ ಮತ್ತು ಪಪಾಯ ಬೀಜಗಳು ತೇಲಲು ಆರಂಭಿಸುತ್ತವೆ. ಬಲಿಯದ ಕಾಳುಮೆಣಸು ಕೂಡ ಮುಳುಗುವುದಿಲ್ಲ.

10. ತುಪ್ಪ:  ದನದ ಕೊಬ್ಬು, ಅಡುಗೆ ಎಣ್ಣೆ ಮತ್ತು ವನಸ್ಪತಿ ಕಲಬೆರಕೆ.

ಇದರ ಪತ್ತೆಗಾಗಿ ನೀವು ಒಂದು ಗ್ಲಾಸ್‌ ತಣ್ಣೀರು ತೆಗೆದುಕೊಳ್ಳಿ ಮತ್ತು  ಒಂದು ಸ್ಪೂನ್‌ ತುಪ್ಪನ್ನು ಸುರಿಯಿರಿ. ಶುದ್ಧ ತುಪ್ಪವಾದರೆ ತೇಲುತ್ತದೆ. ಇಲ್ಲದಿದ್ದರೆ ಅದು ನೀರಿನೊಂದಿಗೆ ಬೆರೆಯುತ್ತದೆ.

ಮುನ್ನೆಚ್ಚರಿಕೆ ವಹಿಸಿ..

ಕಡು ಬಣ್ಣದ, ಜಂಕ್‌ ಮತ್ತು ಇತರ ಸಂಸ್ಕರಿತ ಆಹಾರ ಪದಾರ್ಥ ಸೇವಿಸಬೇಡಿ

 

ಎಲ್ಲ ಕಾಳು, ಧಾನ್ಯ ಸೇರಿ ಇತರ ಆಹಾರ ಪದಾರ್ಥಗಳನ್ನು ಸ್ವತ್ಛವಾಗಿಯೇ ಎಂದು ಖಾತ್ರಿಪಡಿಸಿಕೊಳ್ಳಿ

 

ಬಳಕೆಗೂ ಮೊದಲು ಎಲ್ಲ ತರಕಾರಿ ಮತ್ತು ಹಣ್ಣುಗಳನ್ನು ಸ್ವತ್ಛವಾಗಿ ತೊಳೆಯಿರಿ

ಹಾಲು, ಎಣ್ಣೆ ಸೇರಿದಂತೆ ಇತರ ವಸ್ತುಗಳನ್ನು ಖರೀದಿಸುವಾಗ ಸೀಲ್‌ ಮಾಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಯಾವಾಗಲೂ ಎಫ್ಎಸ್‌ಎಐ(ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ)ನ ಅಧಿಕೃತ ಲೇಬಲ್‌ ಜತೆಗೆ ಲೈಸನ್ಸ್‌ ನಂಬರ್‌, ಬಳಕೆಯಾಗಿರುವ ವಸ್ತುಗಳ ಮಾಹಿತಿ, ಉತ್ಪಾದನ ದಿನಾಂಕ ಸೇರಿ ಇತರ ಮಾಹಿತಿ ಇರುವ ವಸ್ತುಗಳನ್ನು ಖರೀದಿಸಿ.

ಯಾವುದೇ ವಸ್ತುವನ್ನು ಖರೀದಿಸುವಾಗ ಅದರ ಗುಣಮಟ್ಟ ಪರೀಕ್ಷಿಸುವುದನ್ನು ಮರೆಯಬಾರದು.


ಬಹುತೇಕ ಸಂಸ್ಕರಿತ ಆಹಾರ ಪದಾರ್ಥಗಳನ್ನು ದೂರ ಮಾಡುವುದೇ ಒಳ್ಳೆಯದು.

ಆರೋಗ್ಯದ ಮೇಲೆ ತೊಂದರೆ
ಕಲಬೆರಕೆ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಮಾನವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಪೌಷ್ಟಿಕಾಂಶ ಕೊರತೆ, ಕಿಡ್ನಿ ಸಮಸ್ಯೆ, ಲಿವರ್‌, ಹೃದಯ ಸೇರಿದಂತೆ ದೇಹದ ಹಲವು ಅಂಗಾಂಗ ವೈಫ‌ಲ್ಯಗಳಿಗೂ ಕಾರಣವಾಗುತ್ತದೆ.

ಕಲಬೆರಕೆ ತಡೆಗೆ ಎಫ್ಎಸ್‌ಎಸ್‌ಎಐ ಕ್ರಮ
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರ(ಎಫ್ಎಸ್‌ಎಸ್‌ಎಐ)ವು ಆಹಾರ ಕಲಬೆರಕೆ ತಡೆಯಲು ಹಲವು ಕ್ರಮಗಳನ್ನು ಕೈಗೊಂಡಿದ್ದು, ಆನ್‌ಲೈನಲ್ಲಿ ಚೆಕ್‌ ಮಾಡಬಹುದು.
ರ್ಯಾಪಿಡ್‌ ಟೆಸ್ಟ್‌ ಬುಕ್‌ ಮೂಲಕ ಕಲಬೆರಕೆ ಪತ್ತೆ(ಡಾರ್ಟ್‌): ಗೃಹ ಬಳಕೆ ವಸ್ತುಗಳ ಕಲಬೆರಕೆ ಪತ್ತೆಗೆ ರೂಪಿಸಲಾದ ಕೈಪಿಡಿ. ಹಾಲು, ಎಣ್ಣೆ, ಸಕ್ಕರೆ ಸೇರಿದಂತೆ ಮನೆ ಬಳಕೆಯ ವಸ್ತುಗಳ ಕಲಬೆರಕೆ ಪತ್ತೆ ಹಚ್ಚುವ ಕ್ರಮಗಳನ್ನು ಈ ಪುಸ್ತಕ ಒಳಗೊಂಡಿದೆ.

ಚಕ್ರದ ಮೇಲೆ ಆಹಾರ ಸುರಕ್ಷತೆ(ಎಫ್ಎಸ್‌ಡಬ್ಲ್ಯು): ಆಹಾರ ಸುರಕ್ಷತೆಯನ್ನು ಕೈಗೊಳ್ಳುವ ವಾಹನವಿದು. ಸುಸಜ್ಜಿತ ಪ್ರಯೋಗಾಲಯವನ್ನು ಇದು ಹೊಂದಿರುತ್ತದೆ. ಶಾಲೆ, ಸಾರ್ವಜನಿಕ ಸಮಾರಂಭಗಳು ಸೇರಿ ವಿವಿಧೆಡೆ ಸಂಚರಿಸುತ್ತದೆ.

ಆಹಾರ ಸುರಕ್ಷತೆಯ ಜಾದೂ ಪೆಟ್ಟಿಗೆ:
ಇದು ಶಾಲಾ ಮಕ್ಕಳಿಗೆ ರೂಪಿಸಲಾದ ಕಿಟ್‌. ಪೋರ್ಟೆಬಲ್‌ ಬಾಕ್ಸ್‌ನಲ್ಲಿ ವಿವಿಧ ಆಹಾರ ಪದಾರ್ಥಗಳನ್ನು ಪತ್ತೆ ಹಚ್ಚುವ ಮಾಹಿತಿ ಇರುತ್ತದೆ.
ಕಲಬೆರಕೆ ತಡೆಗೆ ಕಾನೂನಿನ ಬಲ

ಭಾರತದಲ್ಲಿ ಆಹಾರ ಕಲಬೆರಕೆ ತಡೆಗೆ ಪ್ರಬಲವಾದ ಕಾನೂನುಗಳು ಜಾರಿಯಲ್ಲಿವೆ. 1954ರ ಆಹಾರ ಕಲಬೆರಕೆ ತಡೆ ಕಾಯ್ದೆಯು ಇಡೀ ದೇಶಕ್ಕೆ ಅನ್ವಯವಾಗುತ್ತದೆ. ಈ ಕಾಯ್ದೆ 1954 ಜೂನ್‌ 15ರಿಂದ ಜಾರಿಗೆ ಬಂದಿದೆ. ಸ್ವಾತಂತ್ರ್ಯ ಪೂರ್ವ 1923ರ ಕಲ್ಕತ್ತಾ ಮುನ್ಸಿಪಲ್‌ ಕಾಯ್ದೆ, ಯುಪಿ ಪರಿಶುದ್ಧ ಆಹಾರ ಕಾಯ್ದೆ, 1929ರ ಪಂಜಾಬ್‌ ಪರಿಶುದ್ಧ ಆಹಾರ ಕಾಯ್ದೆ, 1948ರ ಬಿಹಾರ ಆಹಾರ ಕಲಬೆರಕೆ ತಡೆ ಕಾಯ್ದೆಗಳು ಜಾರಿಯಲ್ಲಿದ್ದವು.

ಈಗ ಸದ್ಯ 1954ರ ಕಲಬೆರಕೆ ಆಹಾರ ತಡೆ ಕಾಯ್ದೆಯು ಜಾರಿಯಲ್ಲಿದೆ. ಆಹಾರ ಕಲಬೆರಕೆಯನ್ನು ವ್ಯಾಖ್ಯಾನಿಸುವ ಈ ಕಾಯ್ದೆಯು, ನಿಯಮಗಳನ್ನು ಉಲ್ಲಂ ಸುವವರಿಗೆ ಕಠಿಣ ಶಿಕ್ಷೆಯನ್ನು ವಿಧಿಸುತ್ತದೆ. ಆಗಾಗ ಫ‌ುಡ್‌ ಇನ್ಸ್‌ಪೆಕ್ಟರ್‌ಗಳು ಹೊಟೇಲ್‌, ಆಹಾರ ಮಳಿಗೆಗಳ ಮೇಲೆ ದಾಳಿ ನಡೆಸಿ ಆಹಾರ ಗುಣಮಟ್ಟವನ್ನು ಪರೀಕ್ಷಿಸುತ್ತಾರೆ. ಒಂದು ವೇಳೆ ಕಳಪೆ ಎಂದು ಕಂಡು ಬಂದರೆ ದಂಡವನ್ನು ವಿಧಿಸುತ್ತಾರೆ.

– ಮಲ್ಲಿಕಾರ್ಜುನ ತಿಪ್ಪಾರ

ಟಾಪ್ ನ್ಯೂಸ್

snemahamayi-Krishna

MUDA Case: ಸಿದ್ದರಾಮಯ್ಯ 2011ರ ಹೇಳಿಕೆ ವಿಡಿಯೋ ಹಾಕಿ ಟಾಂಗ್‌ ಕೊಟ್ಟ ಸ್ನೇಹಮಯಿ ಕೃಷ್ಣ!

1-qweewq

Shiruru ದುರಂತ; ಹುಟ್ಟೂರಲ್ಲಿ ಅರ್ಜುನ್ ಅಂತಿಮ ವಿಧಿ: ಹರಿದು ಬಂದ ಜನಸಾಗರ

BBK11: ಬಿಗ್‌ ಬಾಸ್‌ ಮನೆಯ 2ನೇ ಸ್ಪರ್ಧಿ ರಿವೀಲ್.. ಯಾರೂ ನಿರೀಕ್ಷೆ ಮಾಡದ ಸ್ಪರ್ಧಿ ಇವರು..

BBK11: ಬಿಗ್‌ ಬಾಸ್‌ ಮನೆಯ 2ನೇ ಸ್ಪರ್ಧಿ ರಿವೀಲ್.. ಯಾರೂ ನಿರೀಕ್ಷೆ ಮಾಡದ ಸ್ಪರ್ಧಿ ಇವರು

IPL retention: IPL new rule gave good news to Chennai-Mumbai Franchise

IPL retention: ಚೆನ್ನೈ-ಮುಂಬೈಗೆ ಗುಡ್‌ ನ್ಯೂಸ್‌ ನೀಡಿದ ಐಪಿಎಲ್‌ ಹೊಸ ನಿಯಮ

1-HDK

Documents ಬಿಡುಗಡೆಯಾದರೆ 6-7 ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ: ಎಚ್ ಡಿಕೆ

Food-1

Food Adulteration: ನೀವೇ ಮನೆಯಲ್ಲಿ ಆಹಾರ ಕಲಬೆರಕೆಯನ್ನು ಪತ್ತೆ ಹಚ್ಚಿ!

001

BBK11: ಬಿಗ್‌ ಬಾಸ್‌ ಕನ್ನಡ-11ರ ಮೊದಲ ಅಧಿಕೃತ ಸ್ಪರ್ಧಿ ಇವರೇ ನೋಡಿ..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Manorama-Bhat

Theater, Stage Artist: ನಗುವಿನ ಸವಿ ಹಂಚಿದ ಅಮ್ಮ ಮನೋರಮಾ

Tour: ಹೊಳೆ ಆಂಜನೇಯ,ಸೋಮನಾಥಪುರ ದೇವಾಲಯ… ಸ್ನೇಹಿತರೊಂದಿಗಿನ ಏಕದಿನದ ನವೋಲ್ಲಾಸ

Tour: ಹೊಳೆ ಆಂಜನೇಯ,ಸೋಮನಾಥಪುರ ದೇವಾಲಯ… ಸ್ನೇಹಿತರೊಂದಿಗಿನ ಏಕದಿನದ ನವೋಲ್ಲಾಸ

Google 25th Birthday! ಗ್ಯಾರೇಜ್‌ನಿಂದ ಮೌಂಟ್‌ವಿವ್‌ವರೆಗೆ….ಗೂಗಲ್‌ ರಜತ ಸಂಭ್ರಮ

Google 25th Birthday! ಗ್ಯಾರೇಜ್‌ನಿಂದ ಮೌಂಟ್‌ವಿವ್‌ವರೆಗೆ….ಗೂಗಲ್‌ ರಜತ ಸಂಭ್ರಮ

Laapataa Ladies

Laapataa Ladies: ಕಾಣೆಯಾದ ಮಹಿಳೆಯರ ಆಸ್ಕರ್‌ ಪ್ರಯಾಣ

1(5)

World Tourism Day: ಹನುಮಗಿರಿಯಲ್ಲಿ ನೆಲೆ ನಿಂತ 11 ಅಡಿ ಎತ್ತರದ ಭವ್ಯ ಪಂಚಮುಖಿ ಆಂಜನೇಯ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

crime (2)

Hunsur: ಹಂದಿಫಾರ್ಮ್ ನಲ್ಲಿ ಕಾರ್ಮಿಕನಿಂದ ಮ್ಯಾನೇಜರ್ ಬರ್ಬರ ಹ*ತ್ಯೆ

snemahamayi-Krishna

MUDA Case: ಸಿದ್ದರಾಮಯ್ಯ 2011ರ ಹೇಳಿಕೆ ವಿಡಿಯೋ ಹಾಕಿ ಟಾಂಗ್‌ ಕೊಟ್ಟ ಸ್ನೇಹಮಯಿ ಕೃಷ್ಣ!

1-qweewq

Shiruru ದುರಂತ; ಹುಟ್ಟೂರಲ್ಲಿ ಅರ್ಜುನ್ ಅಂತಿಮ ವಿಧಿ: ಹರಿದು ಬಂದ ಜನಸಾಗರ

1-frrr

Food street ನಲ್ಲಿ ಅರೆಬಟ್ಟೆಯಲ್ಲಿ ಸುತ್ತಾಡಿದ ಯುವತಿ ವಿರುದ್ಧ ಪ್ರಕರಣ ದಾಖಲು!

BBK11: ಬಿಗ್‌ ಬಾಸ್‌ ಮನೆಯ 2ನೇ ಸ್ಪರ್ಧಿ ರಿವೀಲ್.. ಯಾರೂ ನಿರೀಕ್ಷೆ ಮಾಡದ ಸ್ಪರ್ಧಿ ಇವರು..

BBK11: ಬಿಗ್‌ ಬಾಸ್‌ ಮನೆಯ 2ನೇ ಸ್ಪರ್ಧಿ ರಿವೀಲ್.. ಯಾರೂ ನಿರೀಕ್ಷೆ ಮಾಡದ ಸ್ಪರ್ಧಿ ಇವರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.