Abu Dhabi:ವಿದೇಶ ಪ್ರವಾಸ ಕಥನ-ಅಬುಧಾಬಿ ಹಿಂದು ಮಂದಿರ ಸರ್ವ ಧರ್ಮದ ಸೌಹಾರ್ದತೆಯ ಸಂಕೇತ
Team Udayavani, Sep 10, 2024, 6:11 PM IST
ಈ ಬಾರಿಯ ಗಣೇಶ ಚತುರ್ಥಿಯ ಸಡಗರ ಸಂಭ್ರಮ ನೇೂಡುವ ಸೌಭಾಗ್ಯ ದೊರಕಿದ್ದು ವಿದೇಶಿ ನೆಲದಲ್ಲಿ..ಅದು ಕೂಡಾ ಅಬುಧಾಬಿಯ ಪವಿತ್ರವಾದ ಹಿಂದು ಮಂದಿರದ ಆಕಷ೯ಣಿಯ ನೆಲದಲ್ಲಿ. ಇಲ್ಲಿ ನಮ್ಮ ಗಣಪತಿಯ ದರ್ಶನದ ಜೊತೆಗೆ ಇಡೀ ಹಿಂದು ಮಂದಿರದ ಒಳಗಿರುವ ವಿಶ್ವ ಭಾತೃತ್ವದ ದರ್ಶನವೂ ಆಯಿತು. ದು ಮಂದಿರದ ಲೇೂಕಾಪ೯ಣೆಯ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೇೂದಿಯವರು ನೀಡಿದ ಸಂದೇಶದ ನುಡಿಯಂದರೆ “Hindu Mandir is the symbol of shared haritage of humanity” ಅಬುಧಾಬಿಯ ಹಿಂದು ಮಂದಿರ ಪ್ರವೇಶಿಸಿದ ತಕ್ಷಣವೇ ವಿಶ್ವ ಭಾತೃತ್ವದ ವಸುದೈವ ಕುಟುಂಬಕಂ ಅನ್ನುವ ಸಂದೇಶ ಎದ್ದು ಕಾಣುತ್ತದೆ.
ಭಾರತದ ವಿವಿಧ ರಾಜ್ಯಗಳಿಂದ ಸರ್ವ ಧರ್ಮದ ಯಾತ್ರಾರ್ಥಿ ಪ್ರವಾಸಿಗರ ಜೊತೆ ಜೊತೆಗೆ ವಿಶ್ವದ ವಿವಿಧ ರಾಷ್ಟ್ರಗಳಿಂದ ಈ ಹಿಂದು ಮಂದಿರದ ಸೌಂದರ್ಯತೆಯ ವಾಸ್ತು ವಿನ್ಯಾಸ ನೇೂಡಿ ಕಣ್ಣು ತುಂಬಿಸಿಕೊಳ್ಳಬೇಕು ಎನ್ನುವ ಲಕ್ಷೇೂಪ ಲಕ್ಷ ಪ್ರವಾಸಿಗರನ್ನು ಸೆಳೆಯು ಶಕ್ತಿ ಈ ಭವ್ಯ ಹಿಂದು ಮಂದಿರಕ್ಕಿರುವ ವಿಶೇಷ ಆಕರ್ಷಕ ವ್ಯಕ್ತಿತ್ವವೂ ಹೌದು.
ಈ ಹಿಂದು ಮಂದಿರದ ಒಳಗೆ ಹಿಂದುಗಳು ಆರಾಧಿಸುವ ವಿವಿಧ ದೇವರುಗಳ ಕಳೆ ತುಂಬಿದ ವಿಗ್ರಹಗಳನ್ನು ನೇೂಡ ಬಹುದು.ಹಾಲು ಬಿಳುಪಿನ ಮಾರ್ಬಲುಗಳಲ್ಲಿ ಕೆತ್ತಿದ ದೇವತಾ ವಿಗ್ರಹಗಳನ್ನು ನೇೂಡುವುದೆ ಒಂದು ಸುವರ್ಣಾ ವಕಾಶ. ರಾಧಾಕೃಷ್ಣ, ರಾಮ ಸೀತಾ, ಲಕ್ಷ್ಮಣ ಹನುಮಂತ, ಶಿವ ಪಾರ್ವತಿ, ಗಣೇಶ ಕಾತೆ೯ಕೆಯ, ಇದರ ಜೊತೆಗೆ ಶ್ರೀನಿವಾಸ ಅಯ್ಯಪ್ಪ.. ನೆನಪಿಸುವ ಶಿಲೆಯ ಮೂರ್ತಿಗಳನ್ನು ನೇೂಡಿ ಆನಂದಿಸ ಬಹುದು.
ಪಶ್ಚಿಮ ಏಷ್ಯಾದಲ್ಲಿಯೇ ಅತಿ ದೊಡ್ಢದಾದ ಹಿಂದು ಮಂದಿರ ಅನ್ನುವುದರ ಹೆಗ್ಗಳಿಕೆಯ ಜೊತೆಗೆ ಮಧ್ಯಪ್ರಾಚ್ಯದಲ್ಲಿ ಸಾಂಪ್ರದಾಯಿಕವಾಗಿ ರೂಪಿತವಾದ ಮೊದಲ ಹಿಂದು ಮಂದಿರ ಅನ್ನುವ ಕೀರ್ತಿಯೂ ಇದೆ. ಎರಡು ಭವ್ಯ ಗೇೂಪುರಗಳು ಏಳು ಶಿಖರಗಳನ್ನು ಹೊಂದಿರುವ ಈ ಹಿಂದು ಮಂದಿರ ಯು.ಎ.ಇ.ಯ ಏಳು ಎಮಿರೇಟ್ಸ್ ಗಳನ್ನು ಸಂಕೇತಿಸುವ ರೀತಿಯಲ್ಲಿ ರಾಜಧಾನಿ ಅಬುಧಾಬಿ ಕೇಂದ್ರದಲ್ಲಿ ಮೈದೆಳೆದು ನಿಂತಿದೆ.
ಮಂದಿರದ ಒಳಾಂಗಣದಲ್ಲಿ ರಾಮಾಯಣ ಮಹಾಭಾರತ, ಶಿವ ಪುರಾಣ, ಭಾಗವತಂ ಮುಂತಾದ, ಪುರಾಣಗಳನ್ನು ಪರಿಚಯಿಸುವ ಸುಂದರವಾದ ಛಾಯಾಂಕಣದಿಂದ ಅಲಂಕೃತ ಗೇೂಡೆಗಳನ್ನು ನೇೂಡಿ ಕಣ್ಣು ತುಂಬಿಸಿಕೊಳ್ಳ ಬಹುದು.
ಆಬುಧಾಬಿಯ ಹಿಂದು ಮಂದಿರದ ಹಿಂದೆ ಸರ್ವ ಧರ್ಮೀಯರ ಪ್ರೀತಿಯ ಶ್ರಮವಿದೆ ಸೌಹಾರ್ದತೆಯ ಮನಸ್ಸು ಇದೆ. ಈ ಮಂದಿರದ ನಿರ್ಮಾಣಕ್ಕೆ ಸುಮಾರು 27 ಎಕ್ರೆ ಜಾಗ ನೀಡಿದ್ದು ಯು ಎ.ಇ ಸರ್ಕಾರ ಅಂದರೆ ಮುಸ್ಲಿಂ ರಾಜರು, ಆರ್ಕಿಟೆಕ್ಟ್ ಕೆಥೇೂಲಿಕ್ ಕ್ರಿಶ್ಚಿಯನ್, ರಚನಾ ನಿರ್ಮಾಣ ನಿರ್ವಹಣಾ ಜವಾಬ್ದಾರಿ ಸಿಖ್ ಸಮುದಾಯ, ಕೆಲಸ ನಿರ್ವಹಿಸಿದವರು ಪಾರ್ಸಿ ಬಂಧುಗಳು, ಪಂಚಾಂಗ ರೂಪಿಸಿದವರು ಬೌದ್ದ ಸಮುದಾಯದವರು..ಒಟ್ಟಿನಲ್ಲಿ ಅಬುಧಾಬಿಯ ಹಿಂದು ಮಂದಿರ ಸವ೯ಧಮ೯ಗಳ ಪ್ರೀತಿ ಸೌಹಾರ್ದತೆಯ ನೆಲೆಬೀಡು ಎಂದರೂ ತಪ್ಪಾಗಲಾರದು. ಒಂದು ರೀತಿಯಲ್ಲಿ ಇದೊಂದು “ಟೆಂಪಲ್ ಟ್ಯೂರಿಸಂ”ನ ಅದ್ಬುತವಾದ ಪರಿಕಲ್ಪನೆಯ ಆರಾಧನಾ ತಾಣವೂ ಹೌದು.
ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ .ಉಡುಪಿ (ಅಬುಧಾಬಿಯಿಂದ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smriti Irani ದೆಹಲಿ ಬಿಜೆಪಿಯಲ್ಲಿ ಸಕ್ರಿಯ: ”ಸಿಎಂ ಫೇಸ್” ಆಗಿ ಕೇಳಿ ಬರುತ್ತಿರುವ ಹೆಸರು!
International Day of Democracy: “ವಿಶ್ವ ಪ್ರಜಾಪ್ರಭುತ್ವ” ಆತ್ಮಾವಲೇೂಕನ ದಿನ
Beauty Tips: ಮುಖದ ಕಾಂತಿ ಹೆಚ್ಚಿಸಲು ಟೊಮ್ಯಾಟೋ ಫೇಸ್ ಪ್ಯಾಕ್; ಇದರ ಲಾಭವೇನು ಗೊತ್ತಾ?
South Indian actors: ನಾಗಾರ್ಜುನ್ ಟು ವಿಜಯ್; ದಕ್ಷಿಣ ಭಾರತದ ಶ್ರೀಮಂತ ನಟರು ಯಾರ್ಯಾರು
Special Food ಮನೆಯಲ್ಲೊಮ್ಮೆ ಈ ರೆಸಿಪಿ ಟ್ರೈ ಮಾಡಿ ನೋಡಿ… ಟೇಸ್ಟ್ ಹೇಗಿದೆ ಹೇಳಿ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.