![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Nov 27, 2020, 6:15 PM IST
ಕರಾಚಿ: ಪಾಕಿಸ್ತಾನದ ಕರಾಚಿಯ ಟ್ರಾಫಿಕ್ ಸಿಗ್ನಲ್ನಲ್ಲಿ ಭಿಕ್ಷೆ ಬೇಡುತ್ತಿದ್ದ ತೃತೀಯ ಲಿಂಗಿ ಈಗ ಅಲ್ಲಿ ಕಾಣುತ್ತಿಲ್ಲ. ಆಕೆ ಈಗ ಸಾಮಾನ್ಯ ವ್ಯಕ್ತಿಯಲ್ಲ. ಕಾನೂನು ಪದವಿ ಪಡೆದು ಸಮರ್ಥವಾಗಿ ವಾದ ಮಂಡಿಸುವ ನ್ಯಾಯವಾದಿ. ಇಂಥ ಸಾಧನೆ ಮಾಡಿದ ತೃತೀಯ ಲಿಂಗಿಯ ಹೆಸರು ನಿಶಾ ರಾವ್ (28). ಅವರು ಆ ದೇಶದ ಮೊದಲ ತೃತೀಯ ಲಿಂಗಿ ನ್ಯಾಯವಾದಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
2018ರಲ್ಲಿ ಪಾಕಿಸ್ತಾನದ ಸಂಸತ್ನಲ್ಲಿ ತೃತೀಯ ಲಿಂಗಿಗಳ ಸಮುದಾಯದ ಹಕ್ಕುಗಳನ್ನು ರಕ್ಷಿಸುವ ಬಗೆಗಿನ ವಿಧೇಯಕ ಅನುಮೋದನೆಗೊಂಡಿತ್ತು. ಇದರಿಂದಾಗಿ ಅವರ ಜೀವನದ ದಿಕ್ಕೇ ಬದಲಾವಣೆಯಾಯಿತು. ಆರಂಭದಲ್ಲಿ ಅವರು ಕರಾಚಿಯ ರಸ್ತೆಗಳ ಸಿಗ್ನಲ್ನಲ್ಲಿ ಬೇಡುತ್ತಿದ್ದರು ಮತ್ತು ಪೊಲೀಸರಿಂದ, ಇತರರಿಂದ ದೌರ್ಜನ್ಯಕ್ಕೆ ಒಳಗಾಗುತ್ತಿದ್ದರು.
ಇಂಥ ದಿನಗಳಿಗೆ ಕೊನೆ ಹಾಡಬೇಕೆಂದು ನಿರ್ಧರಿಸಿದ ನಿಶಾ ರಾವ್, ಭಿಕ್ಷೆ ಬೇಡುವುದನ್ನು ಮುಂದುವರಿಸಿದರೂ, ಅದರಿಂದ ಸಿಕ್ಕಿದ ಹಣವನ್ನು ಕಾನೂನು ಅಧ್ಯಯನಕ್ಕೆ ವಿನಿಯೋಗಿಸಿದರು. ಪದವಿ ಪಡೆದುಕೊಂಡ ಬಳಿಕ ಕರಾಚಿ ಬಾರ್ ಎಸೋಸಿಯೇಷನ್ನಲ್ಲಿ ನೋಂದಣಿ ಮಾಡಿಸಿಕೊಂಡು, ನ್ಯಾಯವಾದಿಯಾದರು.
ಇದನ್ನೂ ಓದಿ:ಕೋವಿಡ್ 19ಗೆ ಲಸಿಕೆ ಲಭ್ಯವಾಗುವವರೆಗೆ ಕಠಿಣ ಕಾನೂನು ಜಾರಿಗೊಳಿಸಿ: ಕೇಂದ್ರಕ್ಕೆ ಸುಪ್ರೀಂ
ಅವರು ಇದುವರೆಗೆ 50 ಯಶಸ್ವಿ ಕೇಸುಗಳನ್ನು ನಿರ್ವಹಿಸಿದ್ದಾರೆ. “ದೇಶದ ಮೊದಲ ತೃತೀಯ ಲಿಂಗಿ ನ್ಯಾಯಮೂರ್ತಿಯಾಗಬೇಕೆಂದಿದ್ದೇನೆ. ನಮ್ಮ ಸಮುದಾಯದ ಮೊದಲ ವಕೀಲೆ’ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ ಎಂದು “ರಾಯಿಟರ್ಸ್’ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಲಾಹೋರ್ ಮೂಲದ ನಿಶಾ ರಾವ್, 18 ವಯಸ್ಸಿನ ಬಳಿಕ ತಮ್ಮ ಕುಟುಂಬದ ಜತೆಗಿನ ಬಾಂಧವ್ಯ ಕಡಿದುಕೊಂಡು ಕರಾಚಿಗೆ ಬಂದಿದ್ದರು. ಲೈಂಗಿಕ ಕಾರ್ಯಕರ್ತೆಯಾಗುವ ಅವಕಾಶ ತಿರಸ್ಕರಿಸಿದ ನಿಶಾ ರಾವ್ ಭಿಕ್ಷೆ ಬೇಡುತ್ತಾ ಹೊಸ ಜೀವನ ಕಂಡುಕೊಂಡಿದ್ದರು.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.