Gangolli:ಭಾರೀ ಗಾಳಿ ಮಳೆ-15ಕ್ಕೂ ಅಧಿಕ ವಿದ್ಯುತ್‌ ಕಂಬ ಧರಾಶಾಹಿ, 2 ದಿನ ವಿದ್ಯುತ್‌ ಇಲ್ಲ

ವಿದ್ಯುತ್‌ ಕಂಬಗಳು ಹಾಗೂ ಇತರೆಡೆ ಮರಗಳು ಬಿದ್ದು ವಿದ್ಯುತ್‌ ಲೈನ್‌ ಗಳಿಗೆ ಹಾನಿಯಾಗಿದೆ.

Team Udayavani, Jul 25, 2024, 1:02 PM IST

Gangolli:ಭಾರೀ ಗಾಳಿ ಮಳೆ-15ಕ್ಕೂ ಅಧಿಕ ವಿದ್ಯುತ್‌ ಕಂಬ ಧರಾಶಾಹಿ, 2 ದಿನ ವಿದ್ಯುತ್‌ ಇಲ್ಲ

ಗಂಗೊಳ್ಳಿ: ಕುಂದಾಪುರ ತಾಲೂಕಿನಲ್ಲಿ ಬುಧವಾರ (ಜುಲೈ 24) ರಾತ್ರಿ ಸುರಿದ ಭಾರೀ ಸುಂಟರಗಾಳಿ ಮಳೆಯಿಂದಾಗಿ ಹಲವಾರು ವಿದ್ಯುತ್‌ ಕಂಬಗಳು, ಮರಗಳು ಉರುಳಿ ಬಿದ್ದಿರುವ ಘಟನೆ ನಡೆದಿದೆ. ಆದರೆ ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿಯಂತಹ ಘಟನೆ ನಡೆದಿಲ್ಲ.

ಗಂಗೊಳ್ಳಿ, ದಾಕುಹಿತ್ಲು, ಮೀನುಪೇಟೆ, ಗುಜ್ಜಾಡಿ, ನಾಯಕವಾಡಿ ಸೇರಿದಂತೆ ಸುತ್ತಮುತ್ತ ಸುಮಾರು 15ರಿಂದ 20 ವಿದ್ಯುತ್‌ ಕಂಬಗಳು ತುಂಡಾಗಿ ಬಿದ್ದಿದೆ. ಇದರಿಂದಾಗಿ ಈ ಪ್ರದೇಶದಲ್ಲಿ ಬುಧವಾರ ರಾತ್ರಿಯಿಂದಲೇ ಕರೆಂಟ್‌ ಇಲ್ಲದಂತಾಗಿದೆ.

ಗಂಗೊಳ್ಳಿಯ ದಾಕುಹಿತ್ಲುವಿಗೆ ತೆರಳುವ ದಾರಿಯಲ್ಲಿ ದೊಡ್ಡ ಮಾವಿನ ಮರ ಬಿದ್ದಿದ್ದು, ಇದರಿಂದ ದಿನನಿತ್ಯ ಓಡಾಟ ನಡೆಸುವವರು, ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದ್ದು, ಈಗ ಮರವನ್ನು ಕಡಿದು ತೆರವುಗೊಳಿಸುವ ಕಾರ್ಯ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ದಾಕುಹಿತ್ಲು ಪ್ರದೇಶದಲ್ಲಿ ನಾಲ್ಕು ವಿದ್ಯುತ್‌ ಕಂಬಗಳು, ಮೀನುಪೇಟೆ ಸುತ್ತಮುತ್ತ 4 ಕಂಬಗಳು ಸೇರಿದಂತೆ 20ಕ್ಕೂ ಅಧಿಕ ವಿದ್ಯುತ್‌ ಕಂಬಗಳು ಹಾಗೂ ಇತರೆಡೆ ಮರಗಳು ಬಿದ್ದು ವಿದ್ಯುತ್‌ ಲೈನ್‌ ಗಳಿಗೆ ಹಾನಿಯಾಗಿದೆ.

ಭಾರೀ ಪ್ರಮಾಣದಲ್ಲಿ ವಿದ್ಯುತ್‌ ಕಂಬಗಳು ಹಾಗೂ ತಂತಿಗಳು ಕಡಿದು ಬಿದ್ದಿರುವುದರಿಂದ ಇವುಗಳ ರಿಪೇರಿಗೆ ಹೆಚ್ಚಿನ ಸಮಯ ತಗುಲಲಿದ್ದು, ಗಂಗೊಳ್ಳಿ, ಗುಜ್ಜಾಡಿ, ನಾಯಕವಾಡಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎರಡು-ಮೂರು ದಿನಗಳ ಕಾಲ ವಿದ್ಯುತ್‌ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದ್ದಿರುವುದಾಗಿ ಮೆಸ್ಕಾಂ ಮೂಲಗಳು ತಿಳಿಸಿವೆ.

ಭಾರೀ ಸುಂಟರಗಾಳಿ ಮಳೆಗೆ ಕುಂದಾಪುರ ತಾಲೂಕಿನ 12 ಮನೆಗಳು ಹಾನಿಗೊಂಡಿದ್ದು, ನಾಲ್ಕು ಲಕ್ಷ ರೂಪಾಯಿ ನಷ್ಟದ ಅಂದಾಜು ಮಾಡಲಾಗಿದೆ. ಬೈಂದೂರಿನಲ್ಲಿ ಎರಡು ಪ್ರಕರಣಗಳು ನಡೆದಿದ್ದು, 1.75 ಲಕ್ಷ ರೂಪಾಯಿ ನಷ್ಟದ ಅಂದಾಜು ಮಾಡಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ಬುಧವಾರ ಸರಾಸರಿ 45.7 ಮಿ.ಮೀ. ಮಳೆಯಾಗಿದ್ದು, ಬೈಂದೂರಿನಲ್ಲಿ ಅತ್ಯಧಿಕ 63.6 ಮೀ. ಮಳೆಯಾಗಿದೆ. ಕುಂದಾಪುರದಲ್ಲಿ 53.3 ಮಿ.ಮೀ. ಮಳೆಯಾಗಿದೆ. ಹೆಬ್ರಿಯಲ್ಲಿ 60.5 ಮಿ.ಮೀಟರ್‌, ಕಾರ್ಕಳದಲ್ಲಿ 36.9, ಕಾಪು 32.9. ಬ್ರಹ್ಮಾವರ 26.5, ಉಡುಪಿಯಲ್ಲಿ 24.1 ಮಿ.ಮೀ. ಮಳೆಯಾಗಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ:Sandalwood: ರಾಜ್‌ ಶೆಟ್ಟಿ ʼರೂಪಾಂತರʼ ಮೆಚ್ಚಿದ ಸ್ಟಾರ್ ನಿರ್ದೇಶಕ ಕಾರ್ತಿಕ್‌ ಸುಬ್ಬರಾಜ್

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16-kumbashi

Ganesh Chaturthi; ಆನೆಗುಡ್ಡೆ: ಸಂಭ್ರಮದ ಶ್ರೀ ವಿನಾಯಕ ಚತುರ್ಥಿ; ಹರಿದು ಬಂದ ಭಕ್ತ ಸಮೂಹ

Fake Document  ಸೃಷ್ಟಿಸಿ ವಾಹನ ನೋಂದಣಿ: ದೂರು ದಾಖಲು

Fake Document ಸೃಷ್ಟಿಸಿ ವಾಹನ ನೋಂದಣಿ: ದೂರು ದಾಖಲು

Kundapura ವಂಚನೆ: ಫೈನಾನ್ಸ್‌ ಸಿಬಂದಿ ವಿರುದ್ಧ ದೂರು

Kundapura ವಂಚನೆ: ಫೈನಾನ್ಸ್‌ ಸಿಬಂದಿ ವಿರುದ್ಧ ದೂರು

kuKundapura ಪ್ರತ್ಯೇಕ ಪ್ರಕರಣ: ಮೂವರು ದಿಢೀರ್‌ ಸಾವು

Kundapura ಪ್ರತ್ಯೇಕ ಪ್ರಕರಣ: ಮೂವರು ದಿಢೀರ್‌ ಸಾವು

Kundapura: ಊರಿಗೆ ಹೆಮ್ಮೆ: ಶಾಸಕ ಗಂಟಿಹೊಳೆ

Kundapura: ಊರಿಗೆ ಹೆಮ್ಮೆ: ಶಾಸಕ ಗಂಟಿಹೊಳೆ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.