
ಜನರ ಮನಃಸ್ಥಿತಿ ಬದಲಿಸಲು ಐಪಿಎಲ್ ಅಗತ್ಯ: ಗಂಭೀರ್
Team Udayavani, May 5, 2020, 5:45 AM IST

ಹೊಸದಿಲ್ಲಿ: ಈ ಬಾರಿಯ ಐಪಿಎಲ್ ಪಂದ್ಯಾವಳಿ ಇನ್ನೂ ಅನಿಶ್ಚಿತತೆಯಲ್ಲೇ ಇದೆ. ಕ್ರಿಕೆಟ್ ಅಭಿ ಮಾನಿಗಳೇನೋ ಈ ಕೂಟ ನಡೆದೀತೆಂಬ ವಿಶ್ವಾಸದಲ್ಲಿದ್ದಾರೆ. ಆದರೆ ಕೋವಿಡ್-19 ಇದಕ್ಕೆ ಆಸ್ಪದ ಕೊಡುವುದು ಅನುಮಾನ ಎಂಬುದು ಸದ್ಯದ ಸ್ಥಿತಿ. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಮಾಜಿ ಕ್ರಿಕೆಟಿಗ, ಹಾಲಿ ಸಂಸದ ಗೌತಮ್ ಗಂಭೀರ್, “ದೇಶದ ಜನರ ಮನಸ್ಥಿತಿಯನ್ನು ಬದಲಿಸಲು ಐಪಿಎಲ್ ಕೂಟವನ್ನು ನಡೆಸುವುದು ಉತ್ತಮ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಓರ್ವ ರಾಜಕಾರಣಿಯಾಗಿ ಹೇಳುವುದಾದರೆ ನನಗೆ ದೇಶವಾಸಿಗಳ ರಕ್ಷಣೆ ಅತೀ ಮುಖ್ಯ. ಆದರೆ ಜನರ ಮನಸ್ಥಿತಿಯನ್ನು ಕೋವಿಡ್-19ದಿಂದ ವಿಮುಖವಾಗಿಸುವ ನಿಟ್ಟಿನಲ್ಲಿ ಐಪಿಎಲ್ ಪಂದ್ಯಾವಳಿಯನ್ನು ನಡೆ ಸುವುದು ಒಳ್ಳೆಯದು…’ ಎಂದಿದ್ದಾರೆ ಗೌತಮ್ ಗಂಭೀರ್.
“ಇದು ತಂಡವೊಂದರ ಸೋಲು- ಗೆಲುವಿನ ಪ್ರಶ್ನೆಯಲ್ಲ. ದೇಶದ ಜನರ ಮನಸ್ಥಿತಿಯನ್ನು ಬದಲಿಸಬೇಕಾದ ತುರ್ತು ಅಗತ್ಯವಿದೆ. ಇದಕ್ಕೆ ಐಪಿಎಲ್ ಆಯೋಜನೆ ಸಹಕಾರಿಯಾದೀತು ಎಂಬುದು ನನ್ನ ಭಾವನೆ’ ಎಂಬುದಾಗಿ ಗೌತಮ್ ಗಂಭೀರ್ “ಸ್ಪೊರ್ಟ್ಸ್ ಟಾಕ್’ ಕಾರ್ಯಕ್ರಮದ ವೇಳೆ ಹೇಳಿದರು.
ದೇಶಕ್ಕೊಂದು ಸ್ಫೂರ್ತಿ
“ನಿಮಗೆ ಐಪಿಎಲ್ ಕೂಟವೇ ಮುಖ್ಯ ಎಂದು ಬಹಳಷ್ಟು ಮಂದಿ ಹೇಳುತ್ತಾರೆಂದು ಗೊತ್ತು. ಆದರೆ ವೈಯಕ್ತಿಕವಾಗಿ ಹೇಳುವುದಾರದೆ, ಈ ವರ್ಷ ಐಪಿಎಲ್ ನಡೆದದ್ದೇ ಆದಲ್ಲಿ ಯಾವ ಫ್ರಾಂಚೈಸಿ ಕೂಡ ಸೋಲು-ಗೆಲುವಿನ ಬಗ್ಗೆ ಚಿಂತಿಸುವುದಿಲ್ಲ. ಇವರೆಲ್ಲ ದೇಶಕ್ಕೊಂದು ಸ್ಫೂರ್ತಿ ಕೊಡಲಿದ್ದಾರೆ…’ ಎಂದರು.
ವಾತಾವರಣ ಬದಲಾದೀತು
“ಸದ್ಯ ಜಗತ್ತು ಋಣಾತ್ಮಕವಾಗಿ ಗೋಚರಿಸುತ್ತಿದೆ. ಇಂಥ ಸ್ಥಿತಿಯಲ್ಲಿ ಜನರು ಐಪಿಎಲ್ ವೀಕ್ಷಿಸಿದರೆ ವಾತಾವರಣ ಬದಲಾಗಬಹುದು. ಹೀಗಾಗಿ ಕಳೆದ 12 ವರ್ಷಗಳ ಐಪಿಎಲ್ಗಿಂತ ಇದು ಬಹಳ ವಿಶೇಷವೆನಿಸಲಿದೆ. ವಿದೇಶಿ ಆಟಗಾರರ ಗೈರಲ್ಲಿ, ಖಾಲಿ ಸ್ಟೇಡಿಯಂಗಳಲ್ಲಿ ಪಂದ್ಯ ನಡೆದರೂ ಚಿಂತೆ ಇಲ್ಲ. ಏನೇ ಆದರೂ ದೇಶವೇ ಗೆಲ್ಲುತ್ತದೆ’ ಎಂದು ಗೌತಮ್ ಗಂಭೀರ್ ಇಂಡಿಯನ್ ಪ್ರೀಮಿಯರ್ ಲೀಗ್ ಪರ ಬ್ಯಾಟ್ ಬೀಸಿದರು.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!

WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ

R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.