Government Data: ರಸ್ತೆ ಅಪಘಾತದಲ್ಲಿ ಸಾವು: ಕರ್ನಾಟಕಕ್ಕೆ 5ನೇ ಸ್ಥಾನ!
2023ರಲ್ಲಿ ಪ್ರತೀ 3 ನಿಮಿಷಕ್ಕೆ ಒಬ್ಬ ವ್ಯಕ್ತಿ ಸಾವು: ಕೇಂದ್ರ, ಉತ್ತರಪ್ರದೇಶದಲ್ಲಿ ಸಾವುನೋವಿನ ಸಂಖ್ಯೆ ಹೆಚ್ಚು
Team Udayavani, Oct 21, 2024, 7:10 AM IST
ಹೊಸದಿಲ್ಲಿ: ದೇಶದಲ್ಲಿ ರಸ್ತೆ ಅಪಘಾತಗಳಲ್ಲಿ ಮೃತಪಡುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದ್ದು, 2022ರಲ್ಲಿ 1.68 ಲಕ್ಷ ಆಗಿದ್ದ ಮೃತರ ಸಂಖ್ಯೆ 2023ರಲ್ಲಿ 1.73 ಲಕ್ಷಕ್ಕೆ ಏರಿಕೆಯಾಗಿದೆ.
ಈ ಪೈಕಿ ಅತೀಹೆಚ್ಚು ಸಾವು ಸಂಭವಿಸಿದ ರಾಜ್ಯಗಳಲ್ಲಿ ಕರ್ನಾಟಕ ಅಗ್ರ 5ನೇ ಸ್ಥಾನದಲ್ಲಿದೆ ಎಂದು ಕೇಂದ್ರ ಸರಕಾರದ ದತ್ತಾಂಶಗಳು ಬಹಿರಂಗ ಪಡಿಸಿವೆ. ರಸ್ತೆ ಅಪಘಾತಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ದತ್ತಾಂಶ ಸಂಗ್ರಹ ಆರಂಭಿಸಿದ ಬಳಿಕ ದಾಖಲಾದ ಅತೀಹೆಚ್ಚು ಮೃತರ ಸಂಖ್ಯೆಯೂ 2023ರದ್ದೇ ಆಗಿದೆ.
ವರದಿಗಳ ಪ್ರಕಾರ, ಪ್ರತೀ 3 ನಿಮಿಷಕ್ಕೆ ಒಬ್ಬರಂತೆ ಅಥವಾ ದಿನಕ್ಕೆ 474 ಮಂದಿಯಂತೆ 2023ರಲ್ಲಿ ಒಟ್ಟು 1.73 ಲಕ್ಷ ಮಂದಿ ಮೃತರಾಗಿದ್ದಾರೆ. ಈ ಪೈಕಿ ಉತ್ತರ ಪ್ರದೇಶದಲ್ಲೇ 23,652 ಮಂದಿ ಮೃತಪಟ್ಟಿದ್ದು, ಇದು ಅತೀ ಹೆಚ್ಚು ಸಾವು ಗಳನ್ನು ದಾಖಲಿಸಿದ ರಾಜ್ಯವಾಗಿದೆ.
ನಂತರದಲ್ಲಿ ತ.ನಾಡಿನಲ್ಲಿ 18,347, ಮಹಾರಾಷ್ಟ್ರ 15,366., ಮಧ್ಯಪ್ರದೇಶ 13798., ಕರ್ನಾಟಕದಲ್ಲಿ 12,321 ಮಂದಿ ಮೃತಪಟ್ಟಿದ್ದಾರೆ. ಮೃತರ ಪೈಕಿ 76,000 ಮಂದಿ ದ್ವಿಚಕ್ರ ವಾಹನ ಸವಾರ ರಾಗಿದ್ದು, ಇವರಲ್ಲಿ ಶೇ.70 ಮಂದಿ ಹೆಲ್ಮೆಟ್ ಧರಿಸಿರಲಿಲ್ಲ. ಗಾಯಾಳುಗಳ ಸಂಖ್ಯೆಯೂ ಏರಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baba Siddiqui Case: ಸಲ್ಮಾನ್ ಹತ್ಯೆಗೆ ಸಂಚು ಆರೋಪಿಗೆ ಪೊಲೀಸರಿಂದ ಹನಿಟ್ರ್ಯಾಪ್ ಬಲೆ!
Maharashtra: ಸೀಟು ಹಂಚಿಕೆ ಬಿಕ್ಕಟ್ಟು; ಶರದ್ ನೆರವು ಕೋರಿದ ಕಾಂಗ್ರೆಸ್, ಉದ್ಧವ್ ಪಕ್ಷ
Investigation: ಹಳಿಯ ಬೋಲ್ಟ್ ತೆಗೆದಿದ್ದಕ್ಕೆ ಮೈಸೂರು ರೈಲು ಅವಘಡ!
CM Marathon: ಎರಡು ಗಂಟೆಯಲ್ಲಿ 21 ಕಿ.ಮೀ. ದೂರ ಓಡಿದ ಕಾಶ್ಮೀರ ಸಿಎಂ ಒಮರ್!
Andhra Pradesh; 2 ಮಕ್ಕಳಿದ್ದವರಿಗೆ ಮಾತ್ರ ಚುನಾವಣ ಟಿಕೆಟ್!
MUST WATCH
ಹೊಸ ಸೇರ್ಪಡೆ
BBK11: ಮನೆಮಂದಿಯ ಜಗಳ ನೋಡಿ ತಲೆ ಮೇಲೆ ಕೈಯಿಟ್ಟು ಕೂತ ಕ್ಯಾಪ್ಟನ್ ಹನುಮಂತು
Kottigehara: ಕಾಡಾನೆ ದಾಳಿಗೆ ಅಪಾರ ಪ್ರಮಾಣದ ಬೆಳೆ ನಷ್ಟ, ಕಂಗಾಲಾದ ರೈತರು
ಕ್ಷುಲ್ಲಕ ವಿಚಾರಕ್ಕೆ ಮೂವರು ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ
Jayarama Acharya: ತೆಂಕುತಿಟ್ಟಿನ ಪ್ರಸಿದ್ಧ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ನಿಧನ
Tourism: ರಾಜ್ಯದ 7 ಐತಿಹಾಸಿಕ ತಾಣಗಳ ಅಭಿವೃದ್ಧಿಗೆ ಮುನ್ನುಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.