ಕಡಿಯಲಷ್ಟೇ ಉತ್ಸಾಹ, ಬೆಳೆಸಲು ನಾನಾ ಸಬೂಬು !

ಮರಗಳನ್ನು ಕಡಿದದ್ದು ಸಾಗರದಷ್ಟು; ಬೆಳೆಸಿದ್ದು ಸಾಸಿವೆಯಷ್ಟು

Team Udayavani, Mar 2, 2021, 5:10 AM IST

ಕಡಿಯಲಷ್ಟೇ ಉತ್ಸಾಹ, ಬೆಳೆಸಲು ನಾನಾ ಸಬೂಬು !

ಕುಂದಾಪುರ/ಬೈಂದೂರು: ಕಡಿದದ್ದು ಸಾಗರದಷ್ಟು; ಬೆಳೆಸಿದ್ದು ಮಾತ್ರ ಕೇವಲ ಸಾಸಿವೆಯಷ್ಟು.. ಈ ಮಾತು ಅಕ್ಷರಶಃ ಅನ್ವಯವಾಗುವುದು ಕುಂದಾಪುರದಿಂದ ಶಿರೂರುವರೆಗಿನ ರಸ್ತೆ ಅಗಲಗೊಳಿಸುವಾಗ ಆದ ಪರಿಸರ ನಷ್ಟಕ್ಕೆ. ಹೆದ್ದಾರಿ ಅಭಿವೃದ್ಧಿಗಾಗಿ ಸಾವಿರಾರು ಬೃಹತ್‌ ಮರಗಳನ್ನು ಕಡಿಯಲಾಯಿತು. ಪರ್ಯಾಯವಾಗಿ ಕೆಲವು ಕಿ.ಮೀ ವ್ಯಾಪ್ತಿಯಲ್ಲಿ ಕೆಲವು ಗಿಡಗಳನ್ನು ನೆಡಲಾಗಿದೆ.

ಬೆಳೆಸಿದ್ದು ಶೇ.19 ರಷ್ಟು ಮಾತ್ರ
ಚತುಷ್ಪಥ ಕಾಮಗಾರಿ ಆರಂಭಗೊಳ್ಳುವ ಮೊದಲು ಈ ರಸ್ತೆಯು ಮರ-ಗಿಡಗಳಿಂದ ಅಚ್ಚ ಹಸಿರಾಗಿ ಕಂಗೊಳಿಸುತ್ತಿತ್ತು. ಆದರೆ ಹೆದ್ದಾರಿಯ ಅಭಿವೃದ್ಧಿಗೆ ಬರೋಬ್ಬರಿ 9,309 ಮರಗಳನ್ನು ಕಡಿಯಲಾಗಿದೆ. ಇದಕ್ಕೆ ಪರ್ಯಾಯವಾಗಿ ತಲ್ಲೂರಿನಿಂದ ಆರಂಭಗೊಂಡು ಅರಾಟೆಯವರೆಗಿನ 3 ಕಿ.ಮೀ.ವರೆಗೆ 900 ಗಿಡ ಹಾಗೂ ಮುಳ್ಳಿಕಟ್ಟೆಯಿಂದ ತ್ರಾಸಿವರೆಗಿನ ಇಕ್ಕೆಲಗಳಲ್ಲಿ ಒಟ್ಟು 3 ಕಿ.ಮೀ. ವ್ಯಾಪ್ತಿಯಲ್ಲಿ 900 ಸೇರಿದಂತೆ ಒಟ್ಟು 6 ಕಿ.ಮೀ. ವಿಸ್ತೀರ್ಣದಲ್ಲಿ 1,800 ಗಿಡಗಳನ್ನು ನೆಡಲಾಗಿದೆ. ಅಂದರೆ ಕಡಿದ ಮರಗಳಿಗೆ ಬದಲಿಯಾಗಿ ಶೇ.19.33 ರಷ್ಟು ಮಾತ್ರ ನೆಟ್ಟಿದ್ದಾರೆ.

ಕಾಮಗಾರಿಗಾಗಿ ಒಟ್ಟಾರೆ 12.76 ಹೆಕ್ಟೇರ್‌ ಅರಣ್ಯ ಪ್ರದೇಶವನ್ನು ಅರಣ್ಯ ಇಲಾಖೆಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಗುತ್ತಿಗೆ ನೀಡಲಾಗಿದೆ. ಇದರಲ್ಲಿ 1.81 ಹೆಕ್ಟೇರ್‌ ಮ್ಯಾಂಗ್ರೋ ಕಾಡು ಕೂಡ ಸೇರಿದೆ. ಒಟ್ಟಾರೆ ಕುಂದಾಪುರದಿಂದ ಹೊನ್ನಾವರ – ಕಾರವಾರದವರೆಗಿನ 189.6 ಕಿ.ಮೀ. ಉದ್ದದ ಚತುಷ್ಪಥ ರಸ್ತೆ ಕಾಮಗಾರಿಗೆ ಒಟ್ಟಾರೆ 159 ಹೆಕ್ಟೇರ್‌ ಅರಣ್ಯ ಪ್ರದೇಶವನ್ನು ಬಿಟ್ಟುಕೊಡಲಾಗಿದೆ.

ಹೆಕ್ಟೇರ್‌ಗೆ 3 ಲಕ್ಷ ರೂ.
ಕುಂದಾಪುರ-ಶಿರೂರು ವರೆಗಿನ ವ್ಯಾಪ್ತಿಯಲ್ಲಿ ಬಿಟ್ಟುಕೊಟ್ಟ ಅರಣ್ಯ ಪ್ರದೇಶಕ್ಕೆ ಹೆದ್ದಾರಿ ಪ್ರಾಧಿಕಾರವು ಅರಣ್ಯ ಇಲಾಖೆಗೆ ನೆಡುತೋಪು ಅಥವಾ ಹೆದ್ದಾರಿ ಹಸುರೀಕರಣಕ್ಕಾಗಿ 76.56 ಲಕ್ಷ ರೂ. ನೀಡಬೇಕಿದೆ. 12 ಹೆಕ್ಟೇರ್‌ ಅರಣ್ಯ ಪ್ರದೇಶಕ್ಕೆ ದುಪ್ಪಟ್ಟು ಅಂದರೆ ಸುಮಾರು 25 ಹೆಕ್ಟೇರ್‌ ಪ್ರದೇಶವನ್ನು ಬೆಳೆಸುವ ಗುರಿಯಿದ್ದು, ಅದಕ್ಕಾಗಿ ಹೆಕ್ಟೇರ್‌ಗೆ 3 ಲಕ್ಷ ರೂ. ವಿನಿಯೋಗಿಸಲು ನಿರ್ಧರಿಸಲಾಗಿದೆ.

ತುಮಕೂರಿನಲ್ಲಿ 320 ಹೆ. ಅಭಿವೃದ್ಧಿ ?
ಕುಂದಾಪುರ- ಕಾರವಾರದವರೆಗಿನ ಕಾಮಗಾರಿಗೆ ಕರಾವಳಿಯಲ್ಲಿ ಅರಣ್ಯ ಕಳೆದುಕೊಂಡರೆ ತುಮಕೂರಿನಲ್ಲಿ ಅರಣ್ಯ ಅಭಿವೃದ್ಧಿ ಪಡಿಸಲಾಗುತ್ತದಂತೆ. ಇದು ವಿಚಿತ್ರವೆಂದರೂ ಸತ್ಯ. ಈ ಕಾಮಗಾರಿಗೆ 159 ಹೆಕ್ಟೇರ್‌ ಅರಣ್ಯ ಬಿಟ್ಟುಕೊಟ್ಟದ್ದಕ್ಕೆ ಪರ್ಯಾಯವಾಗಿ ಕಾಡು ಬೆಳೆಸಲು ಕರಾವಳಿಯಲ್ಲಿ ಜಾಗವಿಲ್ಲವಂತೆ. ಹಾಗಾಗಿ ತುಮಕೂರಿನಲ್ಲಿ 320 ಹೆಕ್ಟೇರ್‌ ಅರಣ್ಯ ಪ್ರದೇಶವನ್ನು ಬೆಳೆಸಲಾಗುತ್ತದೆಯಂತೆ. ಆದರೆ ಇದರಿಂದ ಕರಾವಳಿಯಲ್ಲಿ ಕಡಿದ ಮರಗಳಿಗೆ ಪರಿಹಾರ ಸಿಕ್ಕಂತಾಗುತ್ತದೆಯೇ ಎಂಬುದು ಸ್ಥಳೀಯರ ಪ್ರಶ್ನೆ.

ಅನುದಾನವೇ ಬಂದಿಲ್ಲ…
ಸರಕಾರ, ಪ್ರಾಧಿಕಾರಕ್ಕೆ ಅಭಿವೃದ್ಧಿ ಬಗ್ಗೆ ಇರುವ ಕಾಳಜಿ ಪರಿಸರ ಸಂರಕ್ಷಣೆ ಬಗ್ಗೆ ಇಲ್ಲ ಅನ್ನುವುದಕ್ಕೆ ಇದೊಂದೇ ನಿದರ್ಶನ ಸಾಕು. ಕಾಮಗಾರಿಗಾಗಿ ಕೋಟಿ- ಕೋಟಿ ರೂ. ಬಿಡುಗಡೆ ಮಾಡುವ ಇವರು, ಗಿಡ ನೆಡಲು, ಅರಣ್ಯ ಬೆಳೆಸಲು ಅನುದಾನ ಬಿಡುಗಡೆಗೆ ಮೀನಾಮೇಷ ಎಣಿಸುತ್ತಿದ್ದಾರೆ. ಕುಂದಾಪುರದಿಂದ ತ್ರಾಸಿಯವರೆಗೆ ಒಟ್ಟು 6 ಕಿ.ಮೀ.ವ್ಯಾಪ್ತಿಯಲ್ಲಿ ಒಟ್ಟು 1,800 ಗಿಡಗಳನ್ನು ಹೆದ್ದಾರಿಯ ಇಕ್ಕೆಲಗಳಲ್ಲಿ ನೆಡಲಾಗಿದೆ. ಆದರೆ ತ್ರಾಸಿಯಿಂದ ಶಿರೂರುವರೆಗೆ ಒಂದೇ ಒಂದೇ ಗಿಡವನ್ನೂ ನೆಟ್ಟಿಲ್ಲ. ಇದಕ್ಕೆ ಅಧಿಕಾರಿಗಳ ಬಳಿ ಕಾರಣ ಕೇಳಿದರೆ ಅನುದಾನವೇ ಬಂದಿಲ್ಲ ಎನ್ನುತ್ತಾರೆ.

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.