Historic Sengol;ನೂತನ ಸಂಸತ್‌ ಭವನದಲ್ಲಿ ರಾಜದಂಡ ಸ್ಥಾಪನೆ… ಸೆಂಗೋಲ್ ಹಿಂದಿನ ಇತಿಹಾಸವೇನು?

ಸೆಂಗೋಲ್‌ ಸ್ವತಂತ್ರ ಭಾರತದ ಐತಿಹಾಸಿಕ ಸಂಕೇತವಾಗಿದೆ

Team Udayavani, May 24, 2023, 4:51 PM IST

Historic Sengol;ನೂತನ ಸಂಸತ್‌ ಭವನದಲ್ಲಿ ರಾಜದಂಡ ಸ್ಥಾಪನೆ… ಸೆಂಗೋಲ್ ಹಿಂದಿನ ಇತಿಹಾಸವೇನು?

ಪ್ರಧಾನಿ ನರೇಂದ್ರ ಮೋದಿ ಅವರು ಮೇ 28(ಭಾನುವಾರ)ರಂದು ನೂತನ ಸಂಸತ್‌ ಭವನವನ್ನು ಉದ್ಘಾಟಿಸಲಿದ್ದು, ಈ ಸಂದರ್ಭದಲ್ಲಿ ಅವರು ಸ್ಪೀಕರ್‌ ಸ್ಥಾನದ ಬಳಿ ಐತಿಹಾಸಿಕ ಚಿನ್ನದ ರಾಜದಂಡ (ಸೆಂಗೋಲ್)‌ ಅನ್ನು ಸ್ಥಾಪಿಸಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿಳಿಸಿದ್ದಾರೆ.

ಇದನ್ನೂ ಓದಿ:ಶಾಂತಿ ಕದಡಿದರೆ ಬಜರಂಗದಳ, ಆರ್‌ಎಸ್‌ಎಸ್‌ ನಿಷೇಧ: ಪ್ರಿಯಾಂಕ್‌ ಖರ್ಗೆ

ಬ್ರಿಟಿಷರು ಭಾರತೀಯರಿಗೆ ಅಧಿಕಾರ ಹಸ್ತಾಂತರಿಸಿದಕ್ಕೆ ಪ್ರತೀಕವಾಗಿ ಈ ಚಿನ್ನದ ರಾಜದಂಡವನ್ನು ದೇಶದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್‌ ನೆಹರು ಅವರಿಗೆ ಹಸ್ತಾಂತರಿಸಲಾಗಿತ್ತು ಎಂದು ಸಚಿವ ಶಾ ಹೇಳಿದರು.

ಈ ರಾಜದಂಡವನ್ನು “ಸೆಂಗೋಲ್”‌ ಎಂದು ಕರೆಯುತ್ತಾರೆ. ಇದು ತಮಿಳು ಪದ ಸೆಮ್ಮೈನಿಂದ ಬಂದುದಾಗಿದೆ. ಅಂದರೆ ಇದರರ್ಥ ಧರ್ಮಸಮ್ಮತ ಎಂಬುದಾಗಿದೆ. ಸೆಂಗೋಲ್‌ ಸ್ವತಂತ್ರ ಭಾರತದ ಐತಿಹಾಸಿಕ ಸಂಕೇತವಾಗಿದೆ. ಇದು ಬ್ರಿಟಿಷರು ಭಾರತೀಯರಿಗೆ ಅಧಿಕಾರವನ್ನು ಹಸ್ತಾಂತರಿಸಿರುವುದನ್ನು ಪ್ರತಿನಿಧಿಸುತ್ತದೆ.

ರಾಜದಂಡ(ಸೆಂಗೋಲ)ದ ಹಿಂದಿನ ಇತಿಹಾಸವೇನು?

ಬ್ರಿಟಿಷ್‌ ಇಂಡಿಯಾದ ಕೊನೆಯ ವೈಸರಾಯ್ ಲಾರ್ಡ್‌ ಮೌಂಟ್‌ ಬ್ಯಾಟನ್ ನೆಹರು ಅವರ ಜೊತೆ ಸರಣಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಸಂದರ್ಭದಲ್ಲಿ ಕೇಳಿದ ಪ್ರಶ್ನೆಯಿಂದಾಗಿ ಸೆಂಗೋಲ್‌ ಇತಿಹಾಸದ ಬಗ್ಗೆ ತಿಳಿಯುವಂತಾಗಿತ್ತು. ಪತ್ರಿಕೆಗಳ ವರದಿಯ ಪ್ರಕಾರ, ಲಾರ್ಡ್‌ ಮೌಂಟ್‌ ಬ್ಯಾಟನ್‌ ಅವರು ಭಾರತ ಸ್ವತಂತ್ರಗೊಳ್ಳುತ್ತಿರುವ ಈ ಸಮಯದಲ್ಲಿ ಅಧಿಕಾರ ಹಸ್ತಾಂತರದ ಸಂಕೇತದ ಕುರಿತು ಏನು ಮಾಡಬೇಕು ಎಂದು ನೆಹರು ಅವರ ಬಳಿ ಸಲಹೆ ಕೇಳಿದ್ದರು ಎಂದು ವರದಿ ತಿಳಿಸಿದೆ.

ಆ ನಿಟ್ಟಿನಲ್ಲಿ ದೇಶದ ಕೊನೆಯ ಗವರ್ನರ್‌ ಜನರಲ್‌ ಸಿ.ರಾಜಗೋಪಾಲಾಚಾರಿ ಅವರ ಬಳಿ ನೆಹರು ಅವರು ಸಲಹೆ ಕೇಳಿದ್ದರು. ಅದಕ್ಕೆ ರಾಜಾಜಿ ಎಂದೇ ಜನಪ್ರಿಯರಾಗಿದ್ದ ರಾಜಗೋಪಾಲಾಚಾರಿಯವರು “ತಮಿಳು ಸಂಪ್ರದಾಯದಲ್ಲಿ ಪ್ರಧಾನ ಅರ್ಚಕರು ಹೊಸದಾಗಿ ಅಧಿಕಾರಕ್ಕೇರಿದ ರಾಜನಿಗೆ ರಾಜದಂಡವನ್ನು ಹಸ್ತಾಂತರಿಸುವ ಕುರಿತು ತಿಳಿಸಿದ್ದರಂತೆ.

ವರದಿಯ ಪ್ರಕಾರ, ಚೋಳರ ಕಾಲದಲ್ಲಿ ಈ ಸಂಪ್ರದಾಯವನ್ನು ಅನುಸರಿಸಲಾಗುತ್ತಿತ್ತು. ಆ ನಿಟ್ಟಿನಲ್ಲಿ ಭಾರತ ಸ್ವಾತಂತ್ರ್ಯ ಪಡೆದುದಕ್ಕೆ ಸಂಕೇತವಾಗಿ ಸೆಂಗೋಲ್‌ (ರಾಜದಂಡ) ಅನ್ನು ಹಸ್ತಾಂತರಿಸುವಂತೆ ರಾಜಾಜಿ ನೆಹರುಗೆ ಸಲಹೆ ನೀಡಿರುವುದಾಗಿ ವಿವರಿಸಿದೆ.

ಸ್ವತಂತ್ರ ಭಾರತಕ್ಕೆ ಬ್ರಿಟಿಷರು ಅಧಿಕಾರವನ್ನು ಹಸ್ತಾಂತರಿಸುವುದಕ್ಕೆ ಪ್ರತೀಕವಾಗಿ ರಾಜದಂಡವನ್ನು ತರುವ ಮಹತ್ವದ ಹೊಣೆಗಾರಿಕೆಯನ್ನು ರಾಜಾಜಿಯವರಿಗೆ ವಹಿಸಲಾಗಿತ್ತು. ಅದರಂತೆ ರಾಜಾಜಿಯವರು ತಮಿಳುನಾಡಿನ ಪ್ರಮುಖ ತಿರುವಾಡುಥುರೈ ಅಧೀನಂ ಮಠವನ್ನು ಸಂಪರ್ಕಿಸಿ, ಚರ್ಚೆ ನಡೆಸಿದ್ದರು. ಮಠದ ಸ್ವಾಮೀಜಿ ಅಧಿಕಾರ ಹಸ್ತಾಂತರದ ಪ್ರತೀಕವಾಗಿ ಸೆಂಗೋಲ್‌ ನೀಡಲು ಒಪ್ಪಿಗೆ ಸೂಚಿಸಿದ್ದರು. ಮದ್ರಾಸ್‌ ಪ್ರಾಂತ್ಯದ ಯುಮ್ಮಿಡಿ ಬಂಗಾರು ಚೆಟ್ಟಿ ಎಂಬ ಅಕ್ಕಸಾಲಿಗ ಈ ಸೆಂಗೋಲ್‌ ಅನ್ನು ತಯಾರಿಸಿದ್ದರು. ಇದು ಐದು ಅಡಿ ಉದ್ದವಾಗಿದ್ದು, ನ್ಯಾಯದ ಸಂಕೇತವಾಗಿ ರಾಜದಂಡದ ಟಾಪ್‌ ನಲ್ಲಿ ನಂದಿಯನ್ನು ಕೆತ್ತಲಾಗಿದೆ.

ರಾಜದಂಡ ಹಸ್ತಾಂತರ:

ವರದಿಯ ಪ್ರಕಾರ, ಮಠದ ಹಿರಿಯ ಪುರೋಹಿತರು ಮೊದಲು ಈ ರಾಜದಂಡವನ್ನು ಮೌಂಟ್‌ ಬ್ಯಾಟನ್‌ ಗೆ ಹಸ್ತಾಂತರಿಸಿ, ನಂತರ ವಾಪಸ್‌ ಪಡೆದು ಅದಕ್ಕೆ ಗಂಗಾಜಲವನ್ನು ಪ್ರೋಕ್ಷಿಸಿದ್ದರು. ನಿಯೋಜಿತ ಪ್ರಧಾನಿ ನೆಹರು ಅವರನ್ನು ಮೆರವಣಿಗೆಯಲ್ಲಿ ಕರೆತಂದು ರಾಜದಂಡವನ್ನು ಹಸ್ತಾಂತರಿಸಲಾಗಿತ್ತು.(1947ರ ಅಗಸ್ಟ್‌ 14ರ ಮಧ್ಯರಾತ್ರಿ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್‌ ನೆಹರು ಅವರಿಗೆ ಬ್ರಿಟಿಷರು ಅಧಿಕಾರ ಹಸ್ತಾಂತರಿಸಿದ ಪ್ರತೀಕವಾಗಿ ಸೆಂಗೋಲ್‌ ಅನ್ನು ನೀಡಿದ್ದರು. ನಂತರ ರಾಜದಂಡವನ್ನು ಅಲಹಾಬಾದ್‌ ಮ್ಯೂಸಿಯಮ್‌ ನಲ್ಲಿ ಇಡಲಾಗಿತ್ತು).

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!

Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.