Death Penalty: ಸ್ವಾತಂತ್ರ್ಯ ನಂತರ ಭಾರತದಲ್ಲಿ ಗಲ್ಲಿಗೇರಿಸಲ್ಪಟ್ಟ ಮೊದಲ ಮಹಿಳಾ ಕೈದಿ ಈಕೆ!

ಕಲ್ಯಾಣ್‌, ಕೊಲ್ಹಾಪುರ್‌ ಮತ್ತು ನಾಸಿಕ್‌ ನಲ್ಲಿ ಸಕ್ರಿಯರಾಗಿ ಮಕ್ಕಳ ಕಳ್ಳತನ ನಡೆಸುತ್ತಿದ್ದರು.

ನಾಗೇಂದ್ರ ತ್ರಾಸಿ, Sep 3, 2024, 4:31 PM IST

Death Penalty: ಸ್ವಾತಂತ್ರ್ಯ ನಂತರ ಭಾರತದಲ್ಲಿ ಗಲ್ಲಿಗೇರಿಸಲ್ಪಟ್ಟ ಮೊದಲ ಮಹಿಳಾ ಕೈದಿ ಈಕೆ!

ಭಾರತದಲ್ಲಿ ಮರಣದಂಡನೆ ಕೆಲವು ಅಪರಾಧಗಳಿಗೆ ಕಾನೂನುಬದ್ದ ಶಿಕ್ಷೆಯಾಗಿದೆ. ಇದು ಕ್ರಿಮಿನಲ್‌ ಕೋಡ್‌ ಆಫ್‌ ಪ್ರೋಸಿಜರ್‌, 1973ರ ಸೆಕ್ಷನ್‌ 354(5)ರ ಪ್ರಕಾರ ಶಿಕ್ಷೆ ವಿಧಿಸಲಾಗುವುದು, ಭಾರತದಲ್ಲಿ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಗಲ್ಲುಶಿಕ್ಷೆಯನ್ನು ವಿಧಿಸಲಾಗುತ್ತದೆ.

ಪ್ರಸ್ತುತ ಭಾರತದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ 539 ಕೈದಿಗಳಿದ್ದಾರೆ. ಭಾರತದಲ್ಲಿ ತೀರಾ ಇತ್ತೀಚೆಗೆ ಅಂದರೆ 2020ರ ಮಾರ್ಚ್‌ ನಲ್ಲಿ ಗಲ್ಲುಶಿಕ್ಷೆ ವಿಧಿಸಲಾಗಿತ್ತು. 2012ರ ದೆಹಲಿ ಸಾಮೂಹಿಕ ಅತ್ಯಾ*ಚಾರ ಮತ್ತು ಕೊಲೆ ಅಪರಾಧಿಗಳಲ್ಲಿ ನಾಲ್ವರನ್ನು ತಿಹಾರ್‌ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು. ಸ್ವಾತಂತ್ರ್ಯ ನಂತರ 1947ರಿಂದ ಈವರೆಗೆ ಭಾರತದಲ್ಲಿ ಹಲವಾರು ಅಪರಾಧಿಗಳನ್ನು ಗಲ್ಲಿಗೇರಿಸಲಾಗಿದೆ. ಸರ್ಕಾರದ ಅಧಿಕೃತ ಅಂಕಿ-ಅಂಶದ ಪ್ರಕಾರ. 1947ರಿಂದ ಈವರೆಗೆ ಕೇವಲ 57 ಅಪರಾಧಿಗಳಿಗೆ ಮಾತ್ರ ಮರಣದಂಡನೆಗೆ ಗುರಿಪಡಿಸಲಾಗಿದೆ.

ಭಾರತದಲ್ಲಿ ಗಲ್ಲಿಗೇರಿಸಲ್ಪಟ್ಟ ಮೊದಲ ಮಹಿಳೆ ಈಕೆ!

1955ರ ಜನವರಿ 3ರಂದು ರತ್ತನ್‌ ಬಾಯಿ ಜೈನ್‌ ಎಂಬಾಕೆಯನ್ನು ಗಲ್ಲಿಗೇರಿಸಲಾಗಿದ್ದು, ದೇಶದಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾದ ಮೊದಲ ಮಹಿಳೆ ಈಕೆ. ರತ್ತನ್‌ ಬಾಯಿ ಸ್ಟೆರಿಲಿಟಿ(Sterlity-ಬಂಜೆತನ ನಿವಾರಣೆ) ಕ್ಲಿನಿಕ್‌ ನಲ್ಲಿ ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಳು. ಕ್ಲಿನಿಕ್‌ ನಲ್ಲಿ ಕೆಲಸ ಮಾಡುತ್ತಿದ್ದ ಮೂವರು ಯುವತಿಯರಿಗೆ ತನ್ನ ಪತಿಯ ಜತೆ ಅನೈತಿಕ ಸಂಬಂಧ ಇದೆ ಎಂಬ ಸಂಶಯದ ಪರಿಣಾಮ ರತ್ತನ್‌ ಬಾಯಿ, ಮೂವರು ಯುವತಿಯರಿಗೆ ವಿಷ ನೀಡಿ ಕೊಲೆಗೈದಿದ್ದಳು. ಈ ಪ್ರಕರಣದಲ್ಲಿ ಜೈನ್‌ ಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ಇದರ ಪರಿಣಾಮ 1955ರ ಜನವರಿ 3ರಂದು ತಿಹಾರ್‌ ಜೈಲಿನಲ್ಲಿ ರತ್ತನ್‌ ಬಾಯಿಯನ್ನು ಗಲ್ಲಿಗೇರಿಸಲಾಗಿತ್ತು. ಇದನ್ನು ಹೊರತುಪಡಿಸಿ ಜೈನ್‌ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಕಳೆದ 75 ವರ್ಷಗಳಲ್ಲಿ ಭಾರತದಲ್ಲಿ ಮರಣದಂಡನೆ ಶಿಕ್ಷೆಗೊಳಗಾದ ಮೊದಲ ಮಹಿಳೆ ಜೈನ್.‌

ಸೀರಿಯಲ್‌ ಕಿಲ್ಲರ್ಸ್ ರೇಣುಕಾ ಶಿಂಧೆ ಮತ್ತು ಸೀಮಾ ಗಾವಿಟ್:‌‌

ಸೀಮಾ ಮೋಹನ್‌ ಗಾವಿಟ್‌ ಮತ್ತು ರೇಣುಕಾ ಕಿರಣ್‌ ಶಿಂಧೆ ಸಹೋದರಿಯರು 1990ರಿಂದ 1996ರವರೆಗೆ 13 ಮಕ್ಕಳನ್ನು ಅಪಹರಿಸಿದ್ದು, ಅವರಲ್ಲಿ 9 ಮಕ್ಕಳನ್ನು ಹತ್ಯೆ*ಗೈದ ಸರಣಿ ಹಂತಕರು. ಅಷ್ಟೇ ಅಲ್ಲ ತಾಯಿ ಅಂಜನಾಬಾಯಿ ಕೂಡಾ ಈ ಕೃತ್ಯದಲ್ಲಿ ಶಾಮೀಲಾಗಿದ್ದು, ಮಹಾರಾಷ್ಟ್ರ, ಪುಣೆ, ಥಾಣೆ, ಕಲ್ಯಾಣ್‌, ಕೊಲ್ಹಾಪುರ್‌ ಮತ್ತು ನಾಸಿಕ್‌ ನಲ್ಲಿ ಸಕ್ರಿಯರಾಗಿ ಮಕ್ಕಳ ಕಳ್ಳತನ ನಡೆಸುತ್ತಿದ್ದರು.

1996ರ ನವೆಂಬರ್‌ ನಲ್ಲಿ ಸೀಮಾ ಮೋಹನ್‌, ರೇಣುಕಾ ಶಿಂಧೆ, ತಾಯಿ ಅಂಜನಾಬಾಯಿ ಹಾಗೂ ರೇಣುಕಾ ಪತಿ ಕಿರಣ್‌ ಶಿಂಧೆ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಕಿರಣ್‌ ಶಿಂಧೆ ಸಾಕ್ಷಿಯಾಗಿ ಬದಲಾಗಿದ್ದರಿಂದ ಪ್ರಕರಣದಲ್ಲಿ ಕ್ಷಮೆ ನೀಡಲಾಗಿತ್ತು. ಆದರೆ ಬಂಧನಕ್ಕೊಳಗಾಗಿ ವಿಚಾರಣೆ ಆರಂಭವಾಗುವ ಮುನ್ನವೇ ಅಂಜನಾಬಾಯಿ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಳು.

ಪ್ರಕರಣದಲ್ಲಿ ಸೀಮಾ ಹಾಗೂ ರೇಣುಕಾಗೆ ಕೊಲ್ಹಾಪುರ್‌ ಸೆಷನ್ಸ್‌ ಕೋರ್ಟ್‌ ದೋಷಿ ಎಂದು ತಿಳಿಸಿ, ಮರಣದಂಡನೆ ವಿಧಿಸಿತ್ತು. 2004ರಲ್ಲಿ ಬಾಂಬೆ ಹೈಕೋರ್ಟ್‌ ಕೂಡಾ ಸೆಷನ್ಸ್‌ ಕೋರ್ಟ್‌ ತೀರ್ಪನ್ನು ಎತ್ತಿಹಿಡಿದಿತ್ತು. 2006ರಲ್ಲಿ ಸುಪ್ರೀಂಕೋರ್ಟ್‌ ಕೂಡಾ ಮರಣದಂಡನೆ ಶಿಕ್ಷೆಯನ್ನು ಎತ್ತಿಹಿಡಿದಿತ್ತು. 2014ರಲ್ಲಿ ಅಂದಿನ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದರು.

ಏತನ್ಮಧ್ಯೆ 2008, 2009ರಲ್ಲೇ ನಾವು ಕ್ಷಮದಾನ ಅರ್ಜಿ ಸಲ್ಲಿಸಿದ್ದರು ಕೂಡಾ 2014ರಲ್ಲಿ ತಿರಸ್ಕರಿಸಿದ್ದು ಯಾಕೆ ಎಂದು ವಿಳಂಬವನ್ನು ಪ್ರಶ್ನಿಸಿ ಇಬ್ಬರೂ ಬಾಂಬೆ ಹೈಕೋರ್ಟ್‌ ಗೆ ಮೇಲ್ಮನವಿ ಸಲ್ಲಿಸಿ, ಗಲ್ಲುಶಿಕ್ಷೆ ಜಾರಿಗೆ ತಡೆ ಪಡೆಯುಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ಯರವಾಡ ಜೈಲಿನಲ್ಲಿರುವ ಸಹೋದರಿಯರಿಗೆ ನೇಣು ಕುಣಿಕೆ ಶಿಕ್ಷೆಯಿಂದ ಪಾರಾಗಲು ಸಾಧ್ವವಿಲ್ಲ. ಒಂದು ವೇಳೆ ಮರಣದಂಡನೆ ಶಿಕ್ಷೆಗೆ ದಿನಾಂಕ ನಿಗದಿಯಾದರೆ ಜೈನ್‌ ನಂತರ ಗಲ್ಲಿಗೇರಿದ ಮಹಿಳಾ ಕೈದಿಯಾಗಲಿದ್ದಾರೆ.

ಟಾಪ್ ನ್ಯೂಸ್

1-rrrrr

Rahul Gandhi ನಂಬರ್ ಒನ್ ಉಗ್ರ: ಕೇಂದ್ರ ಸಚಿವ ಬಿಟ್ಟು ವಿವಾದ

BJP Symbol

Kejriwal ರಾಜೀನಾಮೆ ನೀಡಿರುವುದು ಅಪರಾಧದ ತಪ್ಪೊಪ್ಪಿಗೆ: ಬಿಜೆಪಿ ಲೇವಡಿ

Vande-Metro

Metro Train: ದೇಶದ ಮೊದಲ “ವಂದೇ ಭಾರತ್‌ ಮೆಟ್ರೋ’ಗೆ ಸೆ.16ರಂದು (ನಾಳೆ) ಪ್ರಧಾನಿ ಚಾಲನೆ

mohan bhagwat

Hindu ಎಂದರೆ ಧಾರ್ಮಿಕ ನಂಬಿಕೆ, ಜಾತಿ ಲೆಕ್ಕಿಸದೆ ಉದಾರತೆ, ಸದ್ಭಾವನೆ ಇರುವವರು

MB Patil ತುಚ್ಛ ಮಾತು ಯತ್ನಾಳ ಮನೆತನದ ಸಂಸ್ಕೃತಿ ಅಲ್ಲ

MB Patil ತುಚ್ಛ ಮಾತು ಯತ್ನಾಳ ಮನೆತನದ ಸಂಸ್ಕೃತಿ ಅಲ್ಲ

NIPAH

Kerala ನಿಫಾ ವೈರಸ್‌ ಸೋಂಕಿನಿಂದ 24 ವರ್ಷದ ಯುವಕ ಮೃ*ತ್ಯು

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 7ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 7ನೇ ರೀಲ್ಸ್ ಪ್ರಸಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mumbai: ಉದ್ಯೋಗದ ನೆಪದಲ್ಲಿ ಕಾಂಬೋಡಿಯಾಕ್ಕೆ ಮಾನವ ಕಳ್ಳಸಾಗಣೆ; ಮುಂಬೈ ಮಹಿಳೆ ಸೆರೆ!

Mumbai: ಉದ್ಯೋಗದ ನೆಪದಲ್ಲಿ ಕಾಂಬೋಡಿಯಾಕ್ಕೆ ಮಾನವ ಕಳ್ಳಸಾಗಣೆ; ಮುಂಬೈ ಮಹಿಳೆ ಸೆರೆ!

Kejriwal: ಕೇಜ್ರಿವಾಲ್‌ ಜಾಮೀನು- ಸಿಬಿಐ ಬಂಧನದ ಕಾನೂನುಬದ್ಧತೆ ಬಗ್ಗೆ ಸುಪ್ರೀಂ ಭಿನ್ನ ಆದೇಶ

Kejriwal: ಕೇಜ್ರಿವಾಲ್‌ ಜಾಮೀನು- ಸಿಬಿಐ ಬಂಧನದ ಕಾನೂನುಬದ್ಧತೆ ಬಗ್ಗೆ ಸುಪ್ರೀಂ ಭಿನ್ನ ಆದೇಶ

Representative image

Bihar: ಸಾಮೂಹಿಕ ಅ*ತ್ಯಾಚಾರಕ್ಕೆ ಯತ್ನ-ವೈದ್ಯನ ಖಾಸಗಿ ಅಂಗ ಕತ್ತರಿಸಿ ಬಚಾವ್‌ ಆದ ನರ್ಸ್!

Kota: Instagram ಜಾಹೀರಾತು ನಂಬಿ 67,000 ರೂ. ಹಣ ಕಳೆದುಕೊಂಡ ಯುವತಿ!

Kota: Instagram ಜಾಹೀರಾತು ನಂಬಿ 67,000 ರೂ. ಹಣ ಕಳೆದುಕೊಂಡ ಯುವತಿ!

Manipal: ಟೆಲಿಗ್ರಾಂ App-ಹೂಡಿಕೆ ನೆಪದಲ್ಲಿ 8 ಲಕ್ಷಕ್ಕೂ ಅಧಿಕ ಹಣ ವಂಚನೆ; ದೂರು ದಾಖಲು

Manipal: ಟೆಲಿಗ್ರಾಂ App-ಹೂಡಿಕೆ ನೆಪದಲ್ಲಿ 8 ಲಕ್ಷಕ್ಕೂ ಅಧಿಕ ಹಣ ವಂಚನೆ; ದೂರು ದಾಖಲು

MUST WATCH

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

udayavani youtube

ಉಡುಪಿ ಕೃಷ್ಣ ಮಠದಲ್ಲಿರುವ ಸುಬ್ರಹ್ಮಣ್ಯ ಸನ್ನಿಧಿ

ಹೊಸ ಸೇರ್ಪಡೆ

Madikeri: ತಹಶೀಲ್ದಾರ್‌ ಸಹಿ ನಕಲಿ ಆರೋಪ: ವಿಷ ಸೇವಿಸಿದ್ದ ನೌಕರ ಸಾವು

Madikeri: ತಹಶೀಲ್ದಾರ್‌ ಸಹಿ ನಕಲಿ ಆರೋಪ: ವಿಷ ಸೇವಿಸಿದ್ದ ನೌಕರ ಸಾವು

1-rrrrr

Rahul Gandhi ನಂಬರ್ ಒನ್ ಉಗ್ರ: ಕೇಂದ್ರ ಸಚಿವ ಬಿಟ್ಟು ವಿವಾದ

ಸುಳ್ಯ: ಬೈಕ್‌ ಗಳ ನಡುವೆ ಅಪಘಾತ

Sullia: ಬೈಕ್‌ ಗಳ ನಡುವೆ ಅಪಘಾತ

Udupi: ಬೆಡ್‌ಶೀಟ್‌ ಮಾರುವ ನೆಪ; ಮನೆಗೆ ಅಕ್ರಮ ಪ್ರವೇಶ

Udupi: ಬೆಡ್‌ಶೀಟ್‌ ಮಾರುವ ನೆಪ; ಮನೆಗೆ ಅಕ್ರಮ ಪ್ರವೇಶ

Onion

Discount: ಬೆಂಗಳೂರಿನಲ್ಲೂ ರಿಯಾಯಿತಿ ಬೆಲೆಯಲ್ಲಿ ಸಿಗಲಿದೆ ಈರುಳ್ಳಿ: ಕೇಂದ್ರ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.