ಚಾಮರಾಜನಗರದ ಸೋಬಾನೆ ಪದದ ಹೊನ್ನಮ್ಮ ಅವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ


Team Udayavani, Jan 4, 2021, 6:05 PM IST

ಚಾಮರಾಜನಗರದ ಸೋಬಾನೆ ಪದದ ಹೊನ್ನಮ್ಮ ಅವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ

ಚಾಮರಾಜನಗರ: ಅಪರೂಪಕ್ಕೆ ಬೆಂಗಳೂರಿನಿಂದ ಹೊರ ಜಿಲ್ಲೆಯಾದ ಜನಪದ ತವರು ಚಾಮರಾಜನಗರದಲ್ಲಿ ಪ್ರಕಟಿಸಲಾದ ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿಗೆ ಚಾಮರಾಜನಗರ ರಾಮಸಮುದ್ರದ ಸೋಬಾನೆ ಕಲಾವಿದೆ ಹೊನ್ನಮ್ಮ ಸಹ ಆಯ್ಕೆಯಾಗಿದ್ದಾರೆ.

ಚಾಮರಾಜನಗರ ಪಟ್ಟಣದ ರಾಮಸಮುದ್ರದ ಬಡಾವಣೆಯ ನಿವಾಸಿಯಾದ ಬಿ.ಹೊನ್ನಮ್ಮ ಅವರು ಸೋಬಾನೆ ಹಾಡು ಹಾಡುವುದರಲ್ಲಿ ಪರಿಣಿತರು. ಈ ಕಲೆ ಅವರಿಗೆ 40 ವರ್ಷಗಳಿಂದ ಒಲಿದುಬಂದಿದೆ. ತಮ್ಮ ತಾಯಿ ಚಿಕ್ಕಸಿದ್ದಮ್ಮ, ದೊಡ್ಡಮ್ಮ ಹನುಮಮ್ಮ ಅವರ ಜತೆ ಹೊಲ ಗದ್ದೆಗಳಿಗೆ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಅವರ ನೆರವಿನಿಂದ ಸೋಬಾನೆ ಹಾಡುಗಳನ್ನು ಕಲಿತು, ಅದನ್ನು ಸತತವಾಗಿ ಹಾಡುತ್ತಾ , ಇಂದಿನ ಪೀಳಿಗೆಗೂ ಕಲಿಸಿದ್ದಾರವರು.

ಹೊನ್ನಮ್ಮ ಅವರ ಬಾಯಲ್ಲಿ ಜನಪದಗಳು ನಿರರ್ಗಳವಾಗಿ ಮೂಡಿ ಬರುತ್ತವೆ. ಮೈದಾಳರಾಮ, ಬಿಳಿಗಿರಿರಂಗಸ್ವಾಮಿ, ಶಿವಶರಣೆಶಂಕಮ್ಮ, ಜೋಗುಳಹಾಡು, ಒಡಹುಟ್ಟಿದವರ ಹಾಡು, ತಾಯಮ್ಮನ ಹಾಡು, ಚಾಮುಂಡೇಶ್ವರಿ, ನಂಜುಂಡೇಶ್ವರರ ಕುರಿತ ಹಾಡು, ಬೀಸುವ ಕಲ್ಲಿನ ಪದಗಳು ಅವರ ನಾಲಿಗೆಯಲ್ಲಿ ಅದ್ಭುತವಾಗಿ ಮೂಡಿ ಬರುತ್ತವೆ.

ಇದನ್ನೂ ಓದಿ :2020ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಕಟ

ಈ ಜಾನಪದ ಕಲೆ ನನಗೆ ಕೊನೆಯಾಗಬಾರದು, ಮುಂದಿನ ಪೀಳಿಗೆಗೂ ಇದರ ಅಗತ್ಯವಿದೆ ಎಂಬುದನ್ನರಿತ ಹೊನ್ನಮ್ಮ 10 ಮಂದಿಗೆ ಸೋಬಾನೆ ಕಲಿಸುತ್ತಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹೊನ್ನಮ್ಮ ಅವರು, ಜಿಲ್ಲೆಯ ಬಿಳಿಗಿರಿರಂಗನಬೆಟ್ಟ, ಗುಂಡ್ಲುಪೇಟೆ ತಾಲೂಕಿನ ಹಂಗಳ, ಲಕ್ಕೂರು, ಮದ್ದೂರು, ಮುಡಿಗುಂಡ, ಮೈಸೂರಿನಲ್ಲಿ ಆಯೋಜಿಸಿದ್ದ ಧರೆಗೆ ದೊಡ್ಡವರ ಉತ್ಸವದಲ್ಲೂ ಪಾಲ್ಗೊಂಡು ತಮ್ಮ ಸೋಬಾನೆಪದದ ಸಾರವನ್ನು ಜನತೆಗೆ ಉಣಬಡಿಸಿದ್ದಾರೆ.

ಇವರ ಕಲೆಯನ್ನು ಗುರುತಿಸಿ ಚಾಮರಾಜನಗರ ದಸರಾಮಹೋತ್ಸವ, ಜಿಲ್ಲಾ ಕನ್ನಡ ಸಾಹಿತ್ಯಸಮ್ಮೇಳನ, ರಂಗತರಂಗ ಬೆಳ್ಳಿಹಬ್ಬ, ಜನಪರ ಉತ್ಸವ, ಮಹಿಳಾಸಂಸ್ಕೃತಿ ಉತ್ಸವ, 2004 ರಲ್ಲಿ ನಡೆದ ಕಲಾ ಪ್ರತಿಭೋತ್ಸವ, ಜಿಲ್ಲೆಯ ಕನ್ನಡಪರ ಸಂಘಟನೆಗಳು ಸನ್ಮಾನಿಸಿವೆ.

ನೂರಾರು ಮದುವೆ ಸಂದರ್ಭದಲ್ಲಿ ಇವರು ಭಾಗವಹಿಸಿ ತಮ್ಮ ಸೋಬಾನೆಕಲೆಯನ್ನು ಪ್ರದರ್ಶನ ಮಾಡಿದ್ದಾರೆ. ನಾನು ಸೋಬಾನೆ ಹಾಡನ್ನು ಕಲಿಯಬೇಕಾದರೆ ನನಗೆ ಗುರುವಾಗಿ ಸಹಕಾರ ನೀಡಿದವರು ನಮ್ಮ ತಾಯಿ ಚಿಕ್ಕಸಿದ್ದಮ್ಮ ಎಂದು ಕೃತಜ್ಞತೆಯಿಂದ ನೆನೆಯುತ್ತಾರೆ ಹೊನ್ನಮ್ಮ

ಪ್ರಶಸ್ತಿಗಳ ಬಗ್ಗೆ ನಾನ್ಯಾವತ್ತೂ ಆಸೆ ಪಟ್ಟವಳಲ್ಲ. ನನ್ನ ಪಾಡಿಗೆ ಸೋಬಾನೆ ಹಾಡಿಕೊಂಡಿದ್ದೇನೆ. ಸರ್ಕಾರದವರು ನನಗೆ ಪ್ರಶಸ್ತಿ ನೀಡಿರುವ ವಿಷಯ ಗೊತ್ತಾಗಿ ಸಂತೋಷವಾಯಿತ. ಜನಪದ ಅಕಾಡೆಮಿಯವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಇದಕ್ಕೆಲ್ಲ ಕಾರಣರಾದ ನಮ್ಮವ್ವನಿಗೂ ಕೃತಜ್ಞಳಾಗಿದ್ದೇನ.ಎ
– ಹೊನ್ಮಮ್ಮ, ಜಾನಪದ ಆಕಾಡೆಮಿ ಪ್ರಶಸ್ತಿ ಪುರಸ್ಕೃತರು

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.