ರಾಶಿ ಫಲ; ಧನಾಗಮ ವೃದ್ಧಿ, ಉದ್ಯೋಗ ವ್ಯವಹಾರಗಳಲ್ಲಿ ಸ್ಥಾನಮಾನ ವೃದ್ಧಿ
Team Udayavani, Jan 17, 2023, 7:12 AM IST
ಮೇಷ: ಮಾತೃ ಸಮಾನರಿಂದ, ಸ್ತ್ರೀಯರಿಂದ ಸುಖ. ಗೃಹೋಪಕರಣಗಳಲ್ಲಿ ವೃದ್ಧಿ. ದೂರದ ಮಿತ್ರರ ಸಮಾಗಮ. ಆಹಾರ ಸೇವನೆಯಲ್ಲಿ ಮಿತವಿರಲಿ. ಹಿಂದೆ ಮಾಡಿದ ಸತ್ಕಾರ್ಯದಿಂದ ಶ್ಲಾಘನೆ. ದೇವತಾ ಸನ್ನಿಧಾನ ದರ್ಶನದಿಂದ ತೃಪ್ತಿ.
ವೃಷಭ: ಕಾರ್ಯ ಕ್ಷೇತ್ರದಲ್ಲಿ ಅತೀ ಶ್ರಮ ವಹಿಸಿ ಗುರಿ ಸಾಧನೆ. ಮಾನಸಿಕ ಗೊಂದಲವಿದ್ದರೂ ಕಿರಿಯರಿಂದ ಸಹಾಯ ಒದಗುವುದು. ಆತುರದ ನಿರ್ಣಯ ಬೇಡ. ಸಣ್ಣ ಪ್ರಯಾಣದಿಂದ ಲಾಭ. ಗೃಹದಲ್ಲಿ ಅಶಾಂತಿಗೆ ಅವಕಾಶ ನೀಡದಿರಿ.
ಮಿಥುನ: ಧನಾಗಮ ವೃದ್ಧಿ. ಸಮಯಕ್ಕೆ ಸರಿಯಾಗಿ ಸಹಾಯ ಒದಗುವುದು. ಉತ್ತಮ ವ್ಯಕ್ತಿಗಳ ಒಡನಾಟ. ಪರವೂರ ಕಾರ್ಯದಲ್ಲಿ ಜಯ. ಉತ್ತಮ ಬದಲಾವಣೆ ಲಾಭದ ವಿಚಾರದಲ್ಲಿ ತೃಪ್ತಿ ಇರಲಿ. ಉದ್ಯೋಗ ವ್ಯವಹಾರಗಳಲ್ಲಿ ಸ್ಥಾನಮಾನ ವೃದ್ಧಿ.
ಕರ್ಕ: ಸಾಹಸದಿಂದ ದಿನ ಆರಂಭ. ಕೆಲಸ ಕಾರ್ಯಗಳಲ್ಲಿ ಏಕಾಗ್ರತೆ ಉತ್ತಮ ಆಲೋಚನೆ. ಮಿತ್ರರ ಸಹಾಯದಿಂದ ಜಯ. ಹಿಂದೆ ಶತ್ರುಗಳಾದವರಿಂದ ಸಂಧಾನ ಪ್ರಸ್ತಾವ. ನಿರೀಕ್ಷಿತ ಸ್ಥಾನಮಾನ ಪ್ರಾಪ್ತಿಯಿಂದ ಮಾನಸಿಕ ನೆಮ್ಮದಿ.
ಸಿಂಹ: ಉನ್ನತ ಸ್ಥಾನಮಾನ ಕಾರ್ಯ ಸಾಧನೆಗೆ ಆರ್ಥಿಕ ವ್ಯಯ. ಮಾತಿನಲ್ಲಿ ಸಹನೆ ಅಗತ್ಯ. ನಿರೀಕ್ಷಿತ ಸಹಾಯ ಲಭಿಸದು. ವಿರೋಧಿಗಳಿಗೆ ಅವಕಾಶ ನೀಡಬೇಡಿ. ನಿಮ್ಮ ಆಲೋಚನೆಯೊಂದಿಗೆ ನಡೆಯಿರಿ. ಅನ್ಯರ ಸಹಾಯ ಬೇಡ.
ಕನ್ಯಾ: ಅನಿರೀಕ್ಷಿತ ಸ್ಥಾನಮಾನ ಸಿಗುವ ದಿನ. ಉದ್ಯೋಗದಲ್ಲಿ ತೃಪ್ತಿ. ಧನಲಾಭವಿದ್ದರೂ ಖರ್ಚಿನ ಹಿಡಿತವಿರಲಿ. ನೂತನ ವ್ಯವಹಾರದಲ್ಲಿ ಪ್ರಾಮಾಣಿಕತೆ ಪಾರದರ್ಶಕತೆ ಇರಲಿ. ಹಿರಿಯರ ಆಶೀರ್ವಾದದಿಂದ ಅಭಿವೃದ್ಧಿ.
ತುಲಾ: ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿಲ್ಲವೆಂದು ಬೇಸರ ಬೇಡ. ದಾಕ್ಷಿಣ್ಯ ಪ್ರವೃತ್ತಿಯಿಂದ ನಷ್ಟವಾಗುವ ಸಾಧ್ಯತೆ. ದೂರ ಪ್ರದೇಶದ ಕೆಲಸ ಕಾರ್ಯಗಳಲ್ಲಿ ತೃಪ್ತಿ ಸಮಾಧಾನ. ಮಿತ್ರರಲ್ಲಿ ನಿಷ್ಠುರ ಬೇಡ. ವಿಶ್ರಾಂತಿಯಿಂದ ದಿನ ಕಳೆಯಿರಿ.
ವೃಶ್ಚಿಕ: ದೇವತಾ ಸ್ಥಳ ಸಂದರ್ಶನ. ದೂರ ಪ್ರಯಾಣ ಸಂಭವ. ಗುರು ಹಿರಿಯರಿಂದ ಆಶೀರ್ವಾದ. ನೂತನ ಮಿತ್ರರ ಸಮಾಗಮ. ಮನೆಯಲ್ಲಿ ಸಂತಸದ ವಾತಾವರಣ. ಆರೋಗ್ಯದ ಕಡೆಗೆ ಗಮನವಿರಲಿ. ದಂಪತಿಗಳು ಸಾಮರಸ್ಯ ಕಾಪಾಡಿ.
ಧನು: ಬಹಳ ಸಮಯದಿಂದ ನೆನೆಗುದಿಗೆ ಬಿದ್ದಿದ್ದ ಕೆಲಸ ಕಾರ್ಯಗಳಲ್ಲಿ ಪ್ರಗತಿ. ವಿಘ್ನ ಪರಿಹಾರ ಆರ್ಥಿಕ ವಿಚಾರಗಳಲ್ಲಿ ಎಚ್ಚರಿಕೆ, ಹಿಡಿತವಿರಲಿ. ದಾಂಪತ್ಯ ಸುಖ ಪರಸ್ಪರ ಪ್ರೋತ್ಸಾಹ. ಮಿತ್ರರಿಂದ ಲಾಭ. ಧನಾಗಮನಕ್ಕೆ ಕೊರತೆ ಇರದು.
ಮಕರ: ಹಿರಿಯರ ಮನಸ್ಸನ್ನು ನೋಯಿಸದಿರಿ. ಕೆಲಸ ಕಾರ್ಯಗಳಲ್ಲಿ ಪಾಲುದಾರಿಕಾ ವ್ಯವಹಾರಗಳಲ್ಲಿ ಲಾಭ. ಸಣ್ಣ ಪ್ರಯಾಣದಿಂದ ಲಾಭ. ಆರೋಗ್ಯ ಸುಧಾರಣೆ. ಅವಿವಾಹಿತರಿಗೆ ಕಂಕಣ ಭಾಗ್ಯ. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಕಾರ್ಯ ಸಿದ್ಧಿ.
ಕುಂಭ: ಶೀತ, ಕಫ ಬಾದೆ ಇದ್ದರೂ ಆರೋಗ್ಯ ಸುಧಾರಿಸುವುದು. ಧನಲಾಭದ ಕೊರತೆ ಇರದು. ಅನ್ಯರ ಸಂಪರ್ಕ ಸಹಾಯದ ನಿರೀಕ್ಷೆ ಸಲ್ಲದು. ಮನೆಯಲ್ಲಿ ಶಾಂತಿ ಸಮಾಧಾನಕ್ಕೆ ಆದ್ಯತೆ ನೀಡಿ. ಕಾರ್ಯಕ್ಷೇತ್ರದಲ್ಲಿ ಏಕಾಗ್ರತೆ ಅಗತ್ಯ.
ಮೀನ: ಪಾಲುದಾರಿಕೆ ವ್ಯವಹಾರದಲ್ಲಿ ಪ್ರಗತಿ. ಗೌಪ್ಯತೆಯಿಂದ ಲಾಭ. ಸಂದರ್ಭಕ್ಕೆ ಸರಿಯಾಗಿ ಬುದ್ಧಿವಂತಿಕೆ ಪ್ರದರ್ಶಿಸಿ. ದೂರದ ವ್ಯವಹಾರದಲ್ಲಿ ಲಾಭ. ದಾಂಪತ್ಯ ಸುಖ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಜವಾಬ್ದಾರಿ ಪರಿಶ್ರಮ. ಮಕ್ಕಳ ಬಗ್ಗೆ ಹೆಚ್ಚಿದ ಗಮನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Mysuru Dasara 2024: ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ
Sullia: ಅಭಿವೃದ್ಧಿ ಕಾಣದ ಪೆರ್ಮಾಜೆ-ಕೋಟೆಗುಡ್ಡೆ-ಪಂಬೆತ್ತಾಡಿ ರಸ್ತೆ
Bengaluru:ಟಿವಿ ರಿಪೇರಿಗೆ ಸ್ಪಂದಿಸದ ಎಲೆಕ್ಟ್ರಾನಿಕ್ಸರ್ವೀಸ್ ಸೆಂಟರ್ಗೆ 12 ಸಾವಿರ ದಂಡ!
Thumbe: ಅಗೆದಲ್ಲಿ ಕಡೆಗೂ ಡಾಮರು
Bengaluru: ʼರಾಹುಲ್ ಭಯೋತ್ಪಾದಕ’ ಹೇಳಿಕೆ: ಕೇಂದ್ರ ಸಚಿವ ರವನೀತ್ ವಿರುದ್ಧ ಕೇಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.