ಪವರ್‌ ಪ್ಲೇಯಲ್ಲಿ ಬ್ಯಾಟಿಂಗ್‌ ಪವರ್‌ ಕಳೆದುಕೊಂಡ ಹೈದರಾಬಾದ್‌!


Team Udayavani, Mar 31, 2022, 5:30 AM IST

ಪವರ್‌ ಪ್ಲೇಯಲ್ಲಿ ಬ್ಯಾಟಿಂಗ್‌ ಪವರ್‌ ಕಳೆದುಕೊಂಡ ಹೈದರಾಬಾದ್‌!

ಪವರ್‌ ಪ್ಲೇ ಎಂಬ ಹೆಸರು ಅನ್ವಯವಾಗುವುದೇ ಬ್ಯಾಟಿಂಗ್‌ ತಾಕತ್‌ಗೆ. ಏಕದಿನದಲ್ಲಿ ಮೊದಲ 15 ಓವರ್‌, ಟಿ20ಯಲ್ಲಿ ಮೊದಲ 6 ಓವರ್‌ಗಳಲ್ಲಿ ಕ್ಷೇತ್ರರಕ್ಷಣೆಯ ನಿರ್ಬಂಧ ಇರುವುದರಿಂದ ಬ್ಯಾಟರ್‌ಗಳು ಸಲೀಸಾಗಿ ಬೌಂಡರಿ, ಸಿಕ್ಸರ್‌ ಸುರಿಮಳೆಗೈಯಬಹುದು. ಆಗ ಬಹುತೇಕ ಫೀಲ್ಡರ್ ಸರ್ಕಲ್‌ ಒಳಗೆ ನಿಂತಿರುವುದೇ ಇದಕ್ಕೆ ಕಾರಣ.

ಈ ಫೀಲ್ಡಿಂಗ್‌ ನಿರ್ಬಂಧದ ಲಾಭ ಎತ್ತಿದ ಮೊದಲಿಗರೆಂದರೆ ಭಾರತದ ಕೃಷ್ಣಮಾಚಾರಿ ಶ್ರೀಕಾಂತ್‌ ಮತ್ತು ನ್ಯೂಜಿಲ್ಯಾಂಡಿನ ಮಾರ್ಕ್‌ ಗ್ರೇಟ್‌ಬ್ಯಾಚ್‌. 1992ರ ಏಕದಿನ ವಿಶ್ವಕಪ್‌ನಲ್ಲಿ ಇವರಿಬ್ಬರು ಮೊದಲ 15 ಓವರ್‌ಗಳಲ್ಲಿ ಬಿರುಸಿನ ಬ್ಯಾಟಿಂಗಿಗೆ ಮುಂದಾಗಿದ್ದರು. ಇದನ್ನು ಇನ್ನಷ್ಟು ಸ್ಫೋಟಕಗೊಳಿಸಿ 15 ಓವರ್‌ಗಳಲ್ಲೇ 100 ರನ್‌ ಪೇರಿಸಿಲು ಸಾಧ್ಯ ಎಂದು ತೋರಿಸಿಕೊಟ್ಟವರು ಶ್ರೀಲಂಕಾದ ಡ್ಯಾಶಿಂಗ್‌ ಓಪನರ್‌ ಸನತ್‌ ಜಯಸೂರ್ಯ. ಅಂದು ಅರ್ಜುನ ರಣರುಂಗ ಸಾರಥ್ಯದ ಶ್ರೀಲಂಕಾ ವಿಶ್ವಕಪ್‌ ಗೆಲ್ಲಲು ಜಯಸೂರ್ಯ ಅವರ ಬ್ಯಾಟಿಂಗ್‌ ಅಬ್ಬರವೇ ಮುಖ್ಯ ಕಾರಣವಾಗಿತ್ತು. ಟಿ20 ಯುಗ ಆರಂಭಗೊಂಡ ಬಳಿಕವಂತೂ ಪ್ರತಿಯೊಂದು ಅವಧಿಯೂ “ಪವರ್‌ ಪ್ಲೇ’ ಆಗಿಯೇ ಗೋಚರಿಸಿದೆ. ಅಂದು ಏಕದಿನ ಪಂದ್ಯದ ಇನ್ನಿಂಗ್ಸ್‌ ಒಂದರಲ್ಲಿ ದಾಖಲಾಗುತ್ತಿದ್ದ ಮೊತ್ತ ಇಂದು ಟಿ20 ಇನ್ನಿಂಗ್ಸ್‌ನಲ್ಲೇ ರಾಶಿ ಬೀಳುತ್ತದೆ!

ಹೈದರಾಬಾದ್‌ ಸಂಕಟ
ಇಂಥ ಹೊಡಿಬಡಿ ಜಮಾನಾದಲ್ಲಿ, ಟಿ20 ಪವರ್‌ ಪ್ಲೇ ಅವಧಿಯಲ್ಲಿ ತಂಡವೊಂದು ರನ್ನಿಗಾಗಿ ಪರದಾಡಿದರೆ ಅದು ದೊಡ್ಡ ಅಚ್ಚರಿಯಾಗಿ ಕಾಣುತ್ತದೆ. ರಾಜಸ್ಥಾನ್‌ ರಾಯಲ್ಸ್‌ ಎದುರಿನ ಮಂಗಳವಾರದ ಐಪಿಎಲ್‌ ಪಂದ್ಯದಲ್ಲಿ ಬೃಹತ್‌ ಮೊತ್ತ ಚೇಸ್‌ ಮಾಡುವ ವೇಳೆ “ಆರೇಂಜ್‌ ಆರ್ಮಿ’ ಖ್ಯಾತಿಯ ಸನ್‌ರೈಸರ್ ಹೈದರಾಬಾದ್‌ ಕೂಡ ಇಂಥದೇ ಅವಸ್ಥೆಗೆ ಸಿಲುಕಿತು. ಅದು 3 ವಿಕೆಟಿಗೆ ಕೇವಲ 14 ರನ್‌ ಮಾಡಿತ್ತು! ನಾಯಕ ಕೇನ್‌ ವಿಲಿಯಮ್ಸನ್‌, ರಾಹುಲ್‌ ತ್ರಿಪಾಠಿ ಮತ್ತು ನಿಕೋಲಸ್‌ ಪೂರಣ್‌ 4.5 ಓವರ್‌ಗಳಲ್ಲಿ ಔಟಾಗಿ ಪೆವಿಲಿಯನ್‌ ಸೇರಿಯಾಗಿತ್ತು. ಈ 3 ವಿಕೆಟ್‌ ಬಿದ್ದಾಗ ಹೈದರಾಬಾದ್‌ ಗಳಿಕೆ ಕೇವಲ 9 ರನ್‌.

ಇದು ಐಪಿಎಲ್‌ ಇತಿಹಾಸದ ಪವರ್‌ ಪ್ಲೇ ಅವಧಿಯಲ್ಲಿ ದಾಖಲಾದ ಕನಿಷ್ಠ ಮೊತ್ತದ ಜಂಟಿ ದಾಖಲೆ. 2009ರ ಆರ್‌ಸಿಬಿ ಎದುರಿನ ಕೇಪ್‌ಟೌನ್‌ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ 2 ವಿಕೆಟಿಗೆ 14 ರನ್‌ ಗಳಿಸಿತ್ತು. 4 ಬಾರಿಯ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಒಮ್ಮೆ 15 ರನ್‌, 2 ಸಲ 16 ರನ್‌ ಗಳಿಸಿತ್ತು. ಇವುಗಳ ಅಂಕಿಅಂಶ ಇಲ್ಲಿದೆ.

ಟಾಪ್ ನ್ಯೂಸ್

Rare occurrence: ಮಳೆಗಾಗಿ ಪ್ರಾರ್ಥಿಸಿ ಬಾಲಕರಿಬ್ಬರಿಗೆ ಮದುವೆ

Renukacharya

BJP: ರಾಜ್ಯಾಧ್ಯಕ್ಷ ವಿಜಯೇಂದ್ರ ರಾಜೀನಾಮೆ ನೀಡೋದಿಲ್ಲ: ಎಂ.ಪಿ.ರೇಣುಕಾಚಾರ್ಯ

yathnal

BJP Politics: ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದಿಲ್ಲ: ಶಾಸಕ ಯತ್ನಾಳ್‌

Udupi: ಗೀತಾರ್ಥ ಚಿಂತನೆ 50: ಧೃತರಾಷ್ಟ್ರನನ್ನು ಬಂಧಿಸಿದ ಮಮಕಾರ

Udupi: ಗೀತಾರ್ಥ ಚಿಂತನೆ 50: ಧೃತರಾಷ್ಟ್ರನನ್ನು ಬಂಧಿಸಿದ ಮಮಕಾರ

1-nepp

Nepal; ಮಳೆ, ಪ್ರವಾಹ, ಭೂಕುಸಿತಕ್ಕೆ 170 ಸಾವು

money

Fruad: ಸರಕಾರಿ ಕೆಲಸದ ಆಸೆ ತೋರಿಸಿ 28 ಲಕ್ಷ ರೂಪಾಯಿ ವಂಚನೆ

Mahisha

Mysuru: ಮಹಿಷಾ ಪ್ರತಿಮೆ ಪುಷ್ಪಾರ್ಚನೆಗೆ ಪೊಲೀಸರ ತಡೆ: ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shooting

Shooting; ತಡವಾಗಿ ಬಂದ ಉಮೇಶ್‌ಗೆ ತಪ್ಪಿತು ಫೈನಲ್‌

1-ddee

Kanpur Test: ಪಂದ್ಯ ಡ್ರಾ ಹಾದಿಯತ್ತ

1-PT

PT Usha ತಿರುಗೇಟು; ಸ್ವಾರ್ಥ ಮತ್ತು ವಿತ್ತೀಯ ಲಾಭದ ಮೇಲೆ ಹೆಚ್ಚು ಗಮನ

IPL: Foreign players can no longer get crores; This is the new rule

IPL: ವಿದೇಶಿ ಆಟಗಾರರಿಗೆ ಇನ್ನು ಕೋಟಿ ಕೋಟಿ ಹಣ ಪಡೆಯಲು ಸಾಧ್ಯವಿಲ್ಲ; ಹೀಗಿದೆ ಹೊಸ ನಿಯಮ

SLvsNZ: ಲಂಕಾ ಸ್ಪಿನ್‌ ಹೊಡೆತಕ್ಕೆ ಗಾಲೆಯಲ್ಲಿ ಮುಳುಗಿದ‌ ಕಿವೀಸ್ ಗೆ ಸರಣಿ ಸೋಲು

SLvsNZ: ಲಂಕಾ ಸ್ಪಿನ್‌ ಹೊಡೆತಕ್ಕೆ ಗಾಲೆಯಲ್ಲಿ ಮುಳುಗಿದ‌ ಕಿವೀಸ್ ಗೆ ಸರಣಿ ಸೋಲು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Rare occurrence: ಮಳೆಗಾಗಿ ಪ್ರಾರ್ಥಿಸಿ ಬಾಲಕರಿಬ್ಬರಿಗೆ ಮದುವೆ

Renukacharya

BJP: ರಾಜ್ಯಾಧ್ಯಕ್ಷ ವಿಜಯೇಂದ್ರ ರಾಜೀನಾಮೆ ನೀಡೋದಿಲ್ಲ: ಎಂ.ಪಿ.ರೇಣುಕಾಚಾರ್ಯ

yathnal

BJP Politics: ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದಿಲ್ಲ: ಶಾಸಕ ಯತ್ನಾಳ್‌

Udupi: ಗೀತಾರ್ಥ ಚಿಂತನೆ 50: ಧೃತರಾಷ್ಟ್ರನನ್ನು ಬಂಧಿಸಿದ ಮಮಕಾರ

Udupi: ಗೀತಾರ್ಥ ಚಿಂತನೆ 50: ಧೃತರಾಷ್ಟ್ರನನ್ನು ಬಂಧಿಸಿದ ಮಮಕಾರ

1-nepp

Nepal; ಮಳೆ, ಪ್ರವಾಹ, ಭೂಕುಸಿತಕ್ಕೆ 170 ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.