![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Feb 2, 2021, 11:30 PM IST
ಮೆಲ್ಬರ್ನ್: ಆಸ್ಟ್ರೇಲಿಯ ಚೊಚ್ಚಲ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ರೇಸ್ನಿಂದ ಬಹುತೇಕ ಹೊರಬಿದ್ದಿದೆ. ಇನ್ನೊಂದೆಡೆ ನ್ಯೂಜಿಲ್ಯಾಂಡ್ ಈ ಕೂಟದ ಫೈನಲ್ಗೆ ಲಗ್ಗೆ ಹಾಕಿದ ಮೊದಲ ತಂಡವಾಗಿ ಹೊರಹೊಮ್ಮಿದೆ.
ಈ ಎಲ್ಲ ದಿಢೀರ್ ವಿದ್ಯಮಾನಗಳಿಗೆ ಕಾರಣ, ಆಸ್ಟ್ರೇಲಿಯ ತನ್ನ ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೊರೊನಾ ಕಾರಣದಿಂದ ರದ್ದುಗೊಳಿಸಿದ್ದು!
ಅಂತಿಮ ಅವಕಾಶ
ಭಾರತದ ವಿರುದ್ಧ ತವರಿನ ಸರಣಿ ಸೋತಾಗಲೇ ಆಸ್ಟ್ರೇಲಿಯದ ಮೇಲೆ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಒತ್ತಡ ತೀವ್ರಗೊಂಡಿತ್ತು. ದಕ್ಷಿಣ ಆಫ್ರಿಕಾ ಸರಣಿ ಕಾಂಗರೂಗಳ ಮುಂದಿರುವ ಅಂತಿಮ ಅವಕಾಶ ಆಗಿತ್ತು. ಅಲ್ಲಿ ಆಡಲಾಗುವ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಯಾವ ಪಂದ್ಯವನ್ನೂ ಸೋಲದೆ, ಎರಡು ಟೆಸ್ಟ್ ಗಳಲ್ಲಿ ಗೆಲುವು ಸಾಧಿಸಿದರಷ್ಟೇ ಆಸ್ಟ್ರೇಲಿಯಕ್ಕೆ ಫೈನಲ್ ಪ್ರವೇಶಿಸುವ ಅವಕಾಶ ಲಭಿಸುತ್ತಿತ್ತು. ಆದರೀಗ “ಕ್ರಿಕೆಟ್ ಆಸ್ಟ್ರೇಲಿಯ’ ಮಂಗಳವಾರ ದಿಢೀರನೇ ದಕ್ಷಿಣ ಆಫ್ರಿಕಾ ಪ್ರವಾಸವನ್ನೇ ರದ್ದುಗೊಳಿಸುವ ಮೂಲಕ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ನಿಂದಲೇ ಹೊರಬಿದ್ದಂತಾಗಿದೆ.
ಸದ್ಯ ಆಸ್ಟ್ರೇಲಿಯ 332 ಅಂಕ ಹಾಗೂ 69.2 ಗೆಲುವಿನ ಪ್ರತಿಶತ ಸಾಧನೆಯೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಜೂನ್ನಲ್ಲಿ ನಡೆಯಲಿರುವ ಫೈನಲ್ಗೂ ಮುನ್ನ ಆಸ್ಟ್ರೇಲಿಯದ ಮುಂದೆ ಯಾವುದೇ ಟೆಸ್ಟ್ ಸರಣಿ ಇಲ್ಲ. ಹೀಗಾಗಿ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಅಲಂಕರಿಸುವ ಯಾವ ಸಾಧ್ಯತೆಯೂ ಆಸೀಸ್ ಮುಂದಿಲ್ಲ.
ಇದನ್ನೂ ಓದಿ:ಬಿಜೆಪಿಯಲ್ಲಿ ದುಡಿದವರಿಗಿಂತಲೂ ದುಡ್ಡಿದ್ದವರಿಗೆ ಬೆಲೆ: ಮಾಜಿ ಶಾಸಕ ವಾಲ್ಮೀಕಿ ಕಣ್ಣೀರು
ಕೊರೊನಾ ಭೀತಿ
“ದಕ್ಷಿಣ ಆಫ್ರಿಕಾದಲ್ಲಿ ಈಗ ಕೊರೊನಾದ ದ್ವಿತೀಯ ಅಲೆ ಎದ್ದಿದೆ. ಇಂಥ ಸ್ಥಿತಿಯಲ್ಲಿ ಅಲ್ಲಿಗೆ ಪ್ರವಾಸ ತೆರಳುವುದು ಅಪಾಯಕ್ಕೆ ಕಾರಣವಾದೀತು. ನಮಗೆ ಕ್ರಿಕೆಟಿಗರ ಆರೋಗ್ಯ ಮುಖ್ಯ’ ಎಂಬ ಕ್ರಿಕೆಟ್ ಆಸ್ಟ್ರೇಲಿಯದ ಸಿಇಒ ನಿಕ್ ಹಾಕ್ಲೆ ಟ್ವೀಟ್ ಮಾಡಿದ್ದಾರೆ. ಇದರಿಂದ ಆಸ್ಟ್ರೇಲಿಯ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ನಿಂದ ಅಧಿಕೃತವಾಗಿ ನಿರ್ಗಮಿಸಿದೆ ಎಂಬುದಾಗಿ ಖ್ಯಾತ ಪತ್ರಕರ್ತ ಡೇನಿಯಲ್ ಬ್ರೆಟ್ಟಿಂಗ್ ತಿಳಿಸಿದ್ದಾರೆ.
ಭಾರತ-ಇಂಗ್ಲೆಂಡ್ ಸ್ಪರ್ಧೆ
ಈಗಿನ ಲೆಕ್ಕಾಚಾರದಂತೆ ಶೇ. 70 ಪ್ರತಿಶತ ಗೆಲುವಿನ ದಾಖಲೆ ಹೊಂದಿರುವ ನ್ಯೂಜಿಲ್ಯಾಂಡ್ ತಂಡದ ಫೈನಲ್ ಪ್ರವೇಶ ಆಧಿಕೃತಗೊಂಡಿದೆ. ಇನ್ನೊಂದು ಸ್ಥಾನಕ್ಕಾಗಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಸ್ಪರ್ಧೆ ಏರ್ಪಡಲಿದೆ.
ಸದ್ಯ ಭಾರತ 71.7 ಹಾಗೂ ಇಂಗ್ಲೆಂಡ್ 68.7 ಪ್ರತಿಶತ ಗೆಲುವಿನ ದಾಖಲೆಯೊಂದಿಗೆ ಮೊದಲ ಹಾಗೂ 4ನೇ ಸ್ಥಾನ ದಲ್ಲಿವೆ. ಮುಂದಿನ ಮಹತ್ವದ ಸರಣಿ ಭಾತ-ಇಂಗ್ಲೆಂಡ್ ನಡುವೆ ಏರ್ಪಡಲಿರುವುದರಿಂದ ಸ್ಪರ್ಧೆ ತೀವ್ರಗೊಳ್ಳಲಿದೆ. ಆದರೆ ಗರಿಷ್ಠ ಅವಕಾಶ ಭಾರತದ ಮುಂದಿದೆ.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.