ಇಫಿ; ದೊಡ್ಡ ಬದಲಾವಣೆಗಳು ಸುಮ್ಮನೆ ಬರುವುದಿಲ್ಲ, ಕಠಿನ ಸವಾಲುಗಳೊಂದಿಗೆ ಬರುತ್ತದೆ; ಬರ್ನರ್


Team Udayavani, Nov 21, 2022, 5:46 PM IST

ಇಫಿ; ದೊಡ್ಡ ಬದಲಾವಣೆಗಳು ಸುಮ್ಮನೆ ಬರುವುದಿಲ್ಲ, ಕಠಿನ ಸವಾಲುಗಳೊಂದಿಗೆ ಬರುತ್ತದೆ; ಬರ್ನರ್

ಪಣಜಿ: ಆಧುನಿಕ ಬದುಕಿನ ಸಮಸ್ಯೆಗಳು ನೋಡಲಿಕ್ಕೆ ಸರಳ. ಆದರೆ ಅದನ್ನು ಅರ್ಥೈಸಿಕೊಳ್ಳುವುದು ಹಾಗೂ ಪರಿಹರಿಸಿಕೊಳ್ಳುವುದು ತೀರಾ ಕಷ್ಟ ಎಂಬುದು ಆಸ್ಟ್ರಿಯಾ ಸಿನಿಮಾ ನಿರ್ದೇಶಕ ಡಯಟರ್‌ ಬರ್ನರ್‌ ಅವರ ಅಭಿಪ್ರಾಯ. 53ನೇ ಇಫಿ ಚಿತ್ರೋತ್ಸವದ ಉದ್ಘಾಟನಾ ಚಿತ್ರ “ಅಲ್ಮಾ ಆಂಡ್‌ ಓಸ್ಕರ್‌”, ಸಿನಿಮಾದ ನಿರ್ದೇಶಕ ಬರ್ನರ್.

ಇದನ್ನೂ ಓದಿ:ಬ್ಯಾಂಕ್‌ ದರೋಡೆ ಮಾಡಲು ಉಬರ್‌ ಕ್ಯಾಬ್‌ ಬುಕ್: ಕಳ್ಳನಿಗಾಗಿ ಕಾದ ಅಮಾಯಕ ಚಾಲಕ…!

ನನ್ನ ಸಿನಿಮಾಗಳು ಇಂಥ ಸಮಸ್ಯೆ, ಸವಾಲುಗಳನ್ನು ಕುರಿತಾದುದೇ ಎಂದು ವಿವರಿಸುವ ಅವರು, ನಾವು ಅಂದುಕೊಂಡಷ್ಟು ಸರಳವೂ ಅಲ್ಲ, ಪರಿಹಾರವೂ ಸುಲಭವಿಲ್ಲ ಎಂದರು. ಆಲ್ಮಾ ಮತ್ತು ಓಸ್ಕರ್‌ ನಲ್ಲೂ ಕಥಾನಾಯಕ ಬದುಕಿನಲ್ಲಿ ಒಂದು ಹಂತದ ತೀರ್ಮಾನಕ್ಕೆ ಬಂದರೆ, ಕಥಾನಾಯಕಿ ಬದುಕಿನ ಮತ್ತೊಂದು ಹಂತದ ಕನಸು ಕಾಣುತ್ತಾಳೆ. ಅದನ್ನು ಗುರಿಯೂ ಎಂದುಕೊಳ್ಳಬಹುದು. ಈ ಆಧುನಿಕ ಸಂದರ್ಭದ ಸವಾಲುಗಳೇ ಹಾಗೆ ಎಂದು ಬರ್ನರ್‌ ವಿವರಿಸುತ್ತಾರೆ.

ಪತ್ರಿಕಾಗೋಷ್ಠಿಯಲ್ಲಿ ವಿವಿಧ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಸಮಾಜ ಮತ್ತು ಅದರಲ್ಲಿನ ಪಾತ್ರಗಳ ಬಗ್ಗೆ ಎಲ್ಲಿಲ್ಲದ ಕುತೂಹಲ. ಇವೆಲ್ಲವನ್ನೂ ನನ್ನದೇ ಆದ ದೃಷ್ಟಿಕೋನದಲ್ಲಿ ವಿಶ್ಲೇಷಿಸುತ್ತಾ ಕಥೆ ಕಟ್ಟಲು ಪ್ರಯತ್ನಿಸುವೆ. ಈ ಸಿನಿಮಾ ಮಾಡಲೂ ಅಂಥದ್ದೇ ಒಂದು ಎಳೆ ಪ್ರೇರಣೆ ಎಂದರು.ದೊಡ್ಡ ಬದಲಾವಣೆಗಳು ಸುಮ್ಮನೆ ಬರುವುದಿಲ್ಲ, ಕಠಿನ ಸವಾಲುಗಳೊಂದಿಗೆ ಬರುತ್ತದೆ. ಇದನ್ನು ನಾವು ಅರಿಯವುದೂ ವಿಶೇಷವೇ, ನನ್ನ ಸಿನಿಮಾಗಳೂ ಅದೇ ಬಗೆಯ ಪ್ರಯತ್ನ ಎಂದ ಅವರು, ಆಧುನಿಕ ಬದುಕಿನ ಸಂದರ್ಭಗಳ ಸಂಕೀರ್ಣತೆಯನ್ನು ಅರಿಯಲೆತ್ನಿಸುತ್ತಿದ್ದೇನೆ. ಅದಕ್ಕೆ ಸಿನಿಮಾವನ್ನು ಮಾಧ್ಯಮವಾಗಿ ಆರಿಸಿಕೊಂಡಿದ್ದೇನೆ ಎಂದರು.

ಅಲ್ಮಾ ಮತ್ತು ಓಸ್ಕರ್‌ ಸಿನಿಮಾ ಆಸ್ಟ್ರಿಯಾ ದೇಶದ ಸಿನಿಮಾ. ಒಬ್ಬ ಕಲಾವಿದ ಹಾಗೂ ತನ್ನ ಕಲೆಯ ರೂಪದರ್ಶಿಯ ನಡುವಿನ ಸಂಬಂಧ, ಪ್ರೀತಿ, ಮಹಾತ್ವಾಕಾಂಕ್ಷೆ ಎಲ್ಲವೂ ಸಿನಿಮಾದ ಕಥಾವಸ್ತು.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-tudar

Movie: ತುಡರ್ ಸಿನಿಮಾ ತುಳು ಚಿತ್ರರಂಗಕ್ಕೆ ಹೊಸ ಬೆಳಕಾಗಿ ಮೂಡಿಬರಲಿ; ಗಣೇಶ್ ರಾವ್

chef chidambara kannada movie

Chef Chidambara: ಅನಿರುದ್ಧ್ ಅಡುಗೆ ಶುರು

tdy-7

Bollywood: ರಿಮೇಕ್‌ ಆಗಿ ಮತ್ತೆ ತೆರೆಗೆ ಬರಲಿದೆ 70ರ ದಶಕದ ಮೂರು ಹಿಟ್‌ ಸಿನಿಮಾಗಳು

ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್‌

ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್‌

ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ

ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.