ಹೊರಗೆ ಥಳಕು, ಒಳಗೆ ವಿಷ : ವಿಶ್ವಸಂಸ್ಥೆಯಲ್ಲಿ ಪಾಕಿಸ್ಥಾನ ಆರೋಪಕ್ಕೆ ಭಾರತ ಖಡಕ್ ಜವಾಬ್
Team Udayavani, Sep 27, 2020, 7:15 AM IST
ವಿಶ್ವಸಂಸ್ಥೆ: “ಪಾಕಿಸ್ಥಾನದ್ದು ಯಾವತ್ತಿದ್ದರೂ ಮುಕುಟಾಲಂಕಾರದ ಜೀವನ. ಮೇಲೆಲ್ಲಾ ಥಳಕು ತೋರ್ಪಡಿಸುವ ಆ ರಾಷ್ಟ್ರ, ಆಂತರ್ಯದಲ್ಲಿ ಭಯೋತ್ಪಾದನೆಯಂಥ ವಿಷವನ್ನು ತುಂಬಿರುವಂಥ ದೇಶ.”
ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಶುಕ್ರವಾರ ಭಾರತದ ವಿರುದ್ಧ ಮಾಡಿದ್ದ ಆರೋಪಗಳಿಗೆ ಭಾರತ, ಶನಿವಾರ ಸಭೆಯಲ್ಲಿ ತಾನು ಸಲ್ಲಿಸಬೇಕಿರುವ ರೈಟ್ ಟು ರಿಪ್ಲೆ„(ಪ್ರತಿಕ್ರಿಯಿಸುವ ಹಕ್ಕು) ಅಡಿ ನೀಡಿದ ಖಡಕ್ ಉತ್ತರವಿದು.
ಶುಕ್ರವಾರದ ಸಭೆಯಲ್ಲಿ ಮಾತನಾಡಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಜಮ್ಮು ಕಾಶ್ಮೀರ ವಿಚಾರವನ್ನು ಪ್ರಸ್ತಾವಿಸಿ ಪುಂಖಾನುಪುಖವಾಗಿ ಆರೋಪ ಮಾಡಿದ್ದರು. ಅದರಿಂದ ಕೆರಳಿದ ವಿಶ್ವಸಂಸ್ಥೆಯಲ್ಲಿರುವ ಭಾರತದ ಶಾಶ್ವತ ಪ್ರತಿನಿಧಿಗಳ ತಂಡದ ಕಾರ್ಯದರ್ಶಿಯಾಗಿರುವ ಮಿಜಿಟೊ ವಿನಿಟೊ ಸಭಾತ್ಯಾಗ ನಡೆಸಿದ್ದರಲ್ಲದೆ, ಶನಿವಾರದಂದು ಪ್ರತ್ಯುತ್ತರ ನೀಡುವುದಾಗಿ ತಿಳಿಸಿದ್ದರು.
ಶನಿವಾರದ ಸಮ್ಮೇಳನದಲ್ಲಿ ಮಾತನಾಡಿದ ಅವರು, “”ತಮ್ಮ ರಾಜಕೀಯ ಜೀವನದಲ್ಲಿ ಯಾವುದೇ ಸಾಧನೆ ಮಾಡದವರಿಂದ ಏನನ್ನು ನಿರೀಕ್ಷಿಸಬಹುದೋ, ಅದು ಖಾನ್ ಅವರಿಂದ ವ್ಯಕ್ತವಾಗಿದೆಯಷ್ಟೇ. ಜಾಗತಿಕ ಉಗ್ರರೆಂದು ಪರಿಗಣಿಸಲ್ಪಟ್ಟಿರುವ ಲಷ್ಕರ್ ನಾಯಕ, ಉಗ್ರ ಹಫೀಜ್ ಸಯೀದ್, ಜೈಶ್ ಉಗ್ರ ಮಸೂದ್ ಅಜರ್ಗೆ ಆ ದೇಶ ಆಶ್ರಯತಾಣವಾಗಿದೆ” ಎಂದರು.
“ಅಮೆರಿಕದ ಮೇಲಿನ ದಾಳಿಕೋರ ಒಸಾಮಾ ಬಿನ್ ಲಾಡೆನ್ನನ್ನು ಹುತಾತ್ಮ ಎಂದು ಪರಿಗಣಿಸಲು ಪಾಕಿಸ್ಥಾನದ ಸಂಸತ್ತು ಜುಲೈನಲ್ಲಿ ನಿರ್ಧಾರ ಕೈಗೊಂಡಿದೆ. 39 ವರ್ಷಗಳ ಹಿಂದೆ ದಕ್ಷಿಣ ಏಷ್ಯಾದಲ್ಲಿ ತನ್ನ ಜನರನ್ನೇ ಬರ್ಬರವಾಗಿ ಕೊಂದು ದೊಡ್ಡ ನರ ಮೇಧ ನಡೆಸಿರುವ ಆ ದೇಶ ಇಂದು ನಾಚಿಕೆ ಇಲ್ಲದಂತೆ ಬೇರೆ ದೇಶಗಳ ಮೇಲೆ ಆರೋಪ ಮಾಡುತ್ತಿದೆ” ಎಂದು ವಿನಿಟೊ, ಕಟುವಾಗಿ ಟೀಕಿಸಿದರು.
“”ವಿಶ್ವ ಸಂಸ್ಥೆಯ ಅಂಗಳದಲ್ಲಿ ಕೇವಲ ವಿಷವನ್ನೇ ಚೆಲ್ಲುವ ಮೂಲಕ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಿಗೆ ನಂಜು ಪಸರಿಸುವ ಕೆಲಸ ಮಾಡುತ್ತಿರುವ ಇದೇ ಇಮ್ರಾನ್ ಖಾನ್, 2019ರಲ್ಲಿ ಪಾಕಿಸ್ಥಾನದಲ್ಲಿನ್ನೂ 30,000ದಿಂದ 40,000 ಉಗ್ರರು ಇದ್ದಾರೆಂದು ಹೇಳಿದ್ದರು. ಅವರಲ್ಲಿ ಹಲವಾರು ಉಗ್ರರು ಜಮ್ಮು ಕಾಶ್ಮೀರದಲ್ಲಿ ಸಕ್ರಿಯರಾಗಿದ್ದಾರೆಂದು ಹೇಳಿದ್ದರು. ಸದಾ ಬೇರೆ ರಾಷ್ಟ್ರದ ಕಡೆ ಬೆರಳು ಮಾಡಿ ತೋರಿಸುವ ಪಾಕಿಸ್ಥಾನದಲ್ಲಿ ಅಲ್ಪಸಂಖ್ಯಾಕರ ನಾಶಕ್ಕಾಗಿಯೇ ಸೃಷ್ಟಿಯಾಗಿರುವಂಥ ವಾತಾವರಣವಿದೆ. ಅಷ್ಟೇ ಅಲ್ಲ, ತಮ್ಮದು ಕಟ್ಟಾ ಮುಸ್ಲಿಂ ರಾಷ್ಟ್ರ ಎಂದು ಹೇಳಿಕೊಳ್ಳುವ ಅದು, ತನ್ನದೇ ದೇಶದ ಮುಸ್ಲಿಂ ಪ್ರಜೆಗಳನ್ನು ಅವರು ಇಸ್ಲಾಂ ಧರ್ಮದ ಬೇರೆ ಪಂಗಡದವರು ಎಂಬ ಕಾರಣಕ್ಕಾಗಿ ಕೊಲ್ಲುವ ಹೇಯತನ ಪ್ರದರ್ಶಿಸುತ್ತದೆ” ಎಂದು ವಿನಿ ಟೊ ಝಾಡಿಸಿದರು.
ಅಲ್ಲದೆ, ಜಮ್ಮು ಕಾಶ್ಮೀರ ನಮ್ಮ ಅವಿಭಾಜ್ಯ ಅಂಗ. ತಾನು ಆಕ್ರಮಿಸಿಕೊಂಡಿರುವ ಕಾಶ್ಮೀರದ ಪ್ರಾಂತ್ಯಗಳಿಂದ ಅದು ಹಿಂದೆ ಸರಿಯಬೇಕು” ಎಂದು ಆಗ್ರಹಿಸಿದರು.
ಭಾರತಕ್ಕೆ ಭೂತಾನ್ ಬೆಂಬಲ
ವಿಶ್ವಸಂಸ್ಥೆಯ ಭದ್ರತಾ ಕೌನ್ಸಿಲ್(ಯುಎನ್ಎಸ್ಸಿ)ನಲ್ಲಿ ಭಾರತ ಶಾಶ್ವತ ರಾಯಭಾರಿಯಾಗಿರುವುದನ್ನು ಭೂತಾನ್ ಸದಾ ಬೆಂಬಲಿಸುತ್ತದೆ ಎಂದು ಆ ದೇಶದ ಪ್ರಧಾನಿ ಲೊಟಾಯ್ ಶೆರಿಂಗ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Burkina Faso: ಬುರ್ಕಿನಫಾಸೋದಲ್ಲಿ ಒಂದೇ ಗಂಟೆಯಲ್ಲಿ 600 ಮಂದಿ ಹತ್ಯೆ
Zakir Naik ವಿವಾದ; ಎಲ್ಲರೂ ಅಲ್ಲಾಹನನ್ನಷ್ಟೇ ಪ್ರಾರ್ಥಿಸಿದರೆ ಶಾಂತಿ…
Iran ಅಣ್ವಸ್ತ್ರ ಕೇಂದ್ರದ ಮೇಲೆ ದಾಳಿ ಮಾಡಿ: ಇಸ್ರೇಲ್ಗೆ ಟ್ರಂಪ್
Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು
Iran ಸರ್ವೋಚ್ಚ ನಾಯಕನ ಕೈಯಲ್ಲಿ ರೈಫಲ್!; ಇಸ್ರೇಲ್ ದೀರ್ಘಕಾಲ ಉಳಿಯುವುದಿಲ್ಲ..
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Vidya Balan; ಮತ್ತೆ ಬಂದಳು ಮಂಜುಳಿಕಾ!
Short Circuit; ಅಗ್ನಿ ಆಕಸ್ಮಿಕದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನ
Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ
Kuloor: ಮೊಯ್ದೀನ್ ಬಾವಾ ಸೋದರ ಮಮ್ತಾಜ್ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ
Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.