Indian Army: ಆಗ ಸಹಪಾಠಿಗಳು, ಈಗ ಭೂ ಸೇನೆ, ನೌಕಪಡೆ ಮುಖ್ಯಸ್ಥರು!

ಲೆ. ಜನರಲ್ ಉಪೇಂದ್ರ ದ್ವಿವೇದಿ ಭೂ ಸೇನೆ ಮುಖ್ಯಸ್ಥ, ಅಡ್ಮಿರಲ್ ತ್ರಿಪಾಠಿಗೆ ನೌಕಪಡೆ ಹೊಣೆ

Team Udayavani, Jun 30, 2024, 5:46 PM IST

ARMY,-Navy-Chiefs

ನವದೆಹಲಿ: ಭಾರತೀಯ ಸೇನೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಸಹಪಾಠಿಗಳಿಬ್ಬರು ಸೇನೆಯ ಎರಡು ವಿಭಾಗಗಳ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಭೂ ಸೇನೆಗೆ ಮತ್ತು ಅಡ್ಮಿರಲ್ ದಿನೇಶ್ ತ್ರಿಪಾಠಿ ನೌಕಾ ಪಡೆಯ ನೂತನ ಮುಖ್ಯಸ್ಥರಾಗಿದ್ದಾರೆ.

ಭಾರತೀಯ ನೌಕಾ ಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ತ್ರಿಪಾಠಿ ಹಾಗೂ ಭೂ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್‌ ಜನರಲ್ ಉಪೇಂದ್ರ ದ್ವಿವೇದಿ ಮಧ್ಯಪ್ರದೇಶದ ರೇವಾದಲ್ಲಿನ ಸೈನಿಕ ಶಾಲೆಯಲ್ಲಿ ಸಹಪಾಠಿಗಳಾಗಿದ್ದರು. 1970ರ ದಶಕದ ಆರಂಭದಲ್ಲಿ ಇಬ್ಬರೂ 5ಎ ತರಗತಿಯಿಂದ ಶಾಲೆಯಲ್ಲಿ ಒಂದೇ ತರಗತಿಯಲ್ಲಿ ಓದಿದ್ದರು.

ಇಬ್ಬರೂ ಅಧಿಕಾರಿಗಳ ಹಾಜರಿ ಸಂಖ್ಯೆ ನಡುವೆಯೂ ಹೆಚ್ಚಿನ ಅಂತರವಿರಲಿಲ್ಲ. ದ್ವಿವೇದಿ ನೋಂದಣಿ ಸಂಖ್ಯೆ 931 ಹಾಗೂ ತ್ರಿಪಾಠಿ ನೋಂದಣಿ ಸಂಖ್ಯೆ 938 ಇತ್ತು. ಶಾಲೆಯಲ್ಲಿನ ಆರಂಭದ ದಿನಗಳಲ್ಲಿ ಇಬ್ಬರ ನಡುವೆ ಉತ್ತಮ ಬಾಂಧವ್ಯವಿತ್ತು. ಇಬ್ಬರೂ ರಕ್ಷಣಾ ವಿಭಾಗದಲ್ಲಿ ಬೇರೆ ಬೇರೆ ದಿಕ್ಕು ಹಿಡಿದರೂ, ಪ್ರತಿ ಹಂತದಲ್ಲಿಯೂ ಸಂಪರ್ಕದಲ್ಲಿದ್ದರು.

ಮೇ ತಿಂಗಳಲ್ಲಿ ಅಧಿಕಾರ ವಹಿಸಿದ್ದ ತ್ರಿಪಾಠಿ

ಸೇನೆಯಲ್ಲಿನ ಹಿರಿಯ ನಾಯಕತ್ವದಲ್ಲಿನ ಗೆಳೆತನವು ಪಡೆಗಳ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಇಬ್ಬರೂ ಅಧಿಕಾರಿಗಳ ಬಲ್ಲ ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಡ್ಮಿರಲ್ ತ್ರಿಪಾಠಿ ಮೇ 1ರಂದು ಭಾರತೀಯ ನೌಕಾ ಪಡೆ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು. ಲೆ. ಜನರಲ್ ದ್ವಿವೇದಿ ಭಾನುವಾರ (ಜೂ. 30)  ಸೇನಾ ಪಡೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

” ಭಾರತೀಯ ಸೇನೆಯ ಇತಿಹಾಸದಲ್ಲಿ ಮೊದಲ ಬಾರಿ ಇಬ್ಬರು ಅಸಾಧಾರಣವಾದ ವಿದ್ಯಾರ್ಥಿಗಳ ಪೋಷಿಸುವ ಅಪರೂಪದ ಗೌರವ. ಮಧ್ಯಪ್ರದೇಶದ ರೇವಾದ ಸೈನಿಕ ಶಾಲೆಯಲ್ಲಿ ಓದಿ, 50 ವರ್ಷಗಳ ಬಳಿಕ ತಮ್ಮ ತಮ್ಮ ವಿಭಾಗಗಳನ್ನು ಮುನ್ನಡೆಸುವ ಅವಕಾಶ ಪಡೆದಿದ್ದಾರೆ” ಎಂದು ರಕ್ಷಣಾ ಸಚಿವಾಲಯದ ವಕ್ತಾರ ಎ. ಭರತ್ ಭೂಷಣ್ ಬಾಬು ಟ್ವೀಟ್ ಮಾಡಿದ್ದಾರೆ.

ಮನೋಜ್ ಪಾಂಡೆ ನಿವೃತ್ತಿ

2022ರ ಮೇ ನಿಂದ ಭಾರತೀಯ ಭೂ ಸೇನೆ ಮುಖ್ಯಸ್ಥರಾಗಿದ್ದ ಮನೋಜ್ ಪಾಂಡೆ ನಿವೃತ್ತರಾಗಿದ್ದು, ಜನರಲ್ ಉಪೇಂದ್ರ ದ್ವಿವೇದಿ ಅಧಿಕಾರ ವಹಿಸಿಕೊಂಡರು. ದ್ವಿವೇದಿ  ಇದಕ್ಕೂ ಮುನ್ನ ಸೇನಾ ಸಿಬ್ಬಂದಿ ಉಪ ಮುಖ್ಯಸ್ಥರಾಗಿದ್ದರು. ಅವರು ಪರಮ ವಸಿಷ್ಠ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ ಹಾಗೂ ಮೂರು ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚಾರ್ಜ್ ಕಮೆಂಡೇಷನ್ ಕಾರ್ಡ್‌ಗಳನ್ನು ಪಡೆದಿದ್ದಾರೆ.

ಮಧ್ಯಪ್ರದೇಶ ಮೂಲದ ಉಪೇಂದ್ರ ದ್ವಿವೇದಿ, 1981ರ ಜನವರಿಯಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಸೇರ್ಪಡೆಯಾಗಿದ್ದರು. 1984ರಲ್ಲಿ ಜಮ್ಮು ಮತ್ತು ಕಾಶ್ಮೀರ ರೈಫಲ್ಸ್‌ನ 18ನೇ ಬೆಟಾಲಿಯನ್‌ಗೆ ನಿಯೋಜನೆಗೊಂಡಿದ್ದರು. ಕಾಶ್ಮೀರ ಕಣಿವೆ ಹಾಗೂ ರಾಜಸ್ಥಾನ ಮರುಭೂಮಿಗಳಲ್ಲಿ ಅವರು ಸೇನೆಯ ನಿರ್ವಹಿಸಿದ್ದರು.

ಟಾಪ್ ನ್ಯೂಸ್

Coal Production: ಕೋಲ್‌ ಇಂಡಿಯಾ ಲಿಮಿಟೆಡ್-ಕಲ್ಲಿದ್ದಲು ಉತ್ಪಾದನೆ ಶೇ.8ರಷ್ಟು ಹೆಚ್ಚಳ

Coal Production: ಕೋಲ್‌ ಇಂಡಿಯಾ ಲಿಮಿಟೆಡ್-ಕಲ್ಲಿದ್ದಲು ಉತ್ಪಾದನೆ ಶೇ.8ರಷ್ಟು ಹೆಚ್ಚಳ

Zimbabwe series; ಮತ್ತೆ ತಂಡದಲ್ಲಿ ಬದಲಾವಣೆ; ಟೀಂ ಇಂಡಿಯಾ ಸೇರಿದ ಮೂವರು ಯುವ ಆಟಗಾರರು

Zimbabwe series; ಮತ್ತೆ ತಂಡದಲ್ಲಿ ಬದಲಾವಣೆ; ಟೀಂ ಇಂಡಿಯಾ ಸೇರಿದ ಮೂವರು ಯುವ ಆಟಗಾರರು

Uttar Pradesh: ಹಾವಿನ ದ್ವೇಷ…45 ದಿನಗಳಲ್ಲಿ 5 ಬಾರಿ ಹಾವು ಕಚ್ಚಿದರೂ ಬದುಕುಳಿದ ವ್ಯಕ್ತಿ!

Chikkamagaluru: ಬಸ್ ಹತ್ತುವ ವೇಳೆ ತುಂಡಾದ ಡೋರ್ ಲಾಕ್… ಮಹಿಳೆಗೆ ಗಾಯ

Chikkamagaluru: ಡೋರ್ ಲಾಕ್ ತುಂಡಾಗಿ ಬಸ್ಸಿನಿಂದ ಹೊರಬಿದ್ದ ಮಹಿಳೆ…

Sirsi: ಕೇಂದ್ರ ಸಚಿವರನ್ನು ಭೇಟಿಯಾದ ಕಾಗೇರಿ: ಚತುಷ್ಪತ ರಾ.ಹೆದ್ದಾರಿ ತ್ವರಿತಕ್ಕೆ ಮನವಿ

Sirsi: ಕೇಂದ್ರ ಸಚಿವರನ್ನು ಭೇಟಿಯಾದ ಕಾಗೇರಿ: ಚತುಷ್ಪತ ರಾ.ಹೆದ್ದಾರಿ ತ್ವರಿತಕ್ಕೆ ಮನವಿ

18

Actress Akshita Bopaiah: ತಮಿಳಿನತ್ತ ನವನಟಿ ಅಕ್ಷಿತಾ ಸಿನಿಯಾನ

Hubballi: ಪಾಲಿಕೆ ಆಯುಕ್ತರು, ಸಿಬ್ಬಂದಿಗಳಿಂದ ದಾಳಿ… ನಿಷೇಧಿತ ಪ್ಲಾಸ್ಟಿಕ್ ವಶ

Hubballi: ಪಾಲಿಕೆ ಆಯುಕ್ತರು, ಸಿಬ್ಬಂದಿಗಳಿಂದ ದಾಳಿ… ನಿಷೇಧಿತ ಪ್ಲಾಸ್ಟಿಕ್ ವಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uttar Pradesh: ಹಾವಿನ ದ್ವೇಷ…45 ದಿನಗಳಲ್ಲಿ 5 ಬಾರಿ ಹಾವು ಕಚ್ಚಿದರೂ ಬದುಕುಳಿದ ವ್ಯಕ್ತಿ!

16

ಮದುವೆ ಆಗಲು ನಿರಾಕರಿಸಿದ್ದಕ್ಕೆ ಪ್ರಿಯಕರನ ಖಾಸಗಿ ಅಂಗವನ್ನೇ ಕತ್ತರಿಸಿದ ಪ್ರಿಯತಮೆ.!

Conversion: ಮತಾಂತರದಿಂದ ಬಹುಸಂಖ್ಯಾತರು…ಅಲ್ಪಸಂಖ್ಯಾತರಾಗಬಹುದು; ಅಲಹಾಬಾದ್‌ ಕೋರ್ಟ್

Conversion: ಮತಾಂತರದಿಂದ ಬಹುಸಂಖ್ಯಾತರು…ಅಲ್ಪಸಂಖ್ಯಾತರಾಗಬಹುದು; ಅಲಹಾಬಾದ್‌ ಕೋರ್ಟ್

Salman Khan ಹತ್ಯೆಗೆ 8 ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್…  25 ಲಕ್ಷಕ್ಕೆ ಡೀಲ್

Salman Khan ಹತ್ಯೆಗೆ 8 ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್… 25 ಲಕ್ಷಕ್ಕೆ ಡೀಲ್

Tragedy: ಯುವಕನಿಗೆ ನಿದ್ದೆಯಲ್ಲಿ ನಡೆಯುವ ಅಭ್ಯಾಸ…  ಆರನೇ ಮಹಡಿಯಿಂದ ಬಿದ್ದು ಮೃತಪಟ್ಟ

Tragedy: ಯುವಕನಿಗೆ ನಿದ್ದೆಯಲ್ಲಿ ನಡೆಯುವ ಅಭ್ಯಾಸ… ಆರನೇ ಮಹಡಿಯಿಂದ ಬಿದ್ದು ಮೃತ್ಯು

MUST WATCH

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

ಹೊಸ ಸೇರ್ಪಡೆ

Coal Production: ಕೋಲ್‌ ಇಂಡಿಯಾ ಲಿಮಿಟೆಡ್-ಕಲ್ಲಿದ್ದಲು ಉತ್ಪಾದನೆ ಶೇ.8ರಷ್ಟು ಹೆಚ್ಚಳ

Coal Production: ಕೋಲ್‌ ಇಂಡಿಯಾ ಲಿಮಿಟೆಡ್-ಕಲ್ಲಿದ್ದಲು ಉತ್ಪಾದನೆ ಶೇ.8ರಷ್ಟು ಹೆಚ್ಚಳ

Zimbabwe series; ಮತ್ತೆ ತಂಡದಲ್ಲಿ ಬದಲಾವಣೆ; ಟೀಂ ಇಂಡಿಯಾ ಸೇರಿದ ಮೂವರು ಯುವ ಆಟಗಾರರು

Zimbabwe series; ಮತ್ತೆ ತಂಡದಲ್ಲಿ ಬದಲಾವಣೆ; ಟೀಂ ಇಂಡಿಯಾ ಸೇರಿದ ಮೂವರು ಯುವ ಆಟಗಾರರು

Uttar Pradesh: ಹಾವಿನ ದ್ವೇಷ…45 ದಿನಗಳಲ್ಲಿ 5 ಬಾರಿ ಹಾವು ಕಚ್ಚಿದರೂ ಬದುಕುಳಿದ ವ್ಯಕ್ತಿ!

1-mng-protest

Mangaluru: ನೀಟ್ ಅವ್ಯವಹಾರ: ಎನ್.ಎಸ್.ಯು.ಐ., ಕಾಂಗ್ರೆಸ್ ಪ್ರತಿಭಟನೆ

Chikkamagaluru: ಬಸ್ ಹತ್ತುವ ವೇಳೆ ತುಂಡಾದ ಡೋರ್ ಲಾಕ್… ಮಹಿಳೆಗೆ ಗಾಯ

Chikkamagaluru: ಡೋರ್ ಲಾಕ್ ತುಂಡಾಗಿ ಬಸ್ಸಿನಿಂದ ಹೊರಬಿದ್ದ ಮಹಿಳೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.