Indian Army: ಪರ್ವತ ಯುದ್ಧಕ್ಕೆ ದೇಸಿ ಟ್ಯಾಂಕರ್ ಸಜ್ಜು
ಎರಡೇ ವರ್ಷಗಳಲ್ಲಿ ಅಭಿವೃದ್ಧಿ; ಲಡಾಖ್ ಗಡಿಯಲ್ಲಿ ನಿಯೋಜನೆ
Team Udayavani, Jul 7, 2024, 7:25 AM IST
ಹೊಸದಿಲ್ಲಿ: ಲಡಾಖ್ ಬಳಿ ವಾಸ್ತವಿಕ ಗಡಿ ನಿಯಂತ್ರಣ ರೇಖೆ (ಎಲ್ಎಸಿ)ಯಲ್ಲಿ ಪದೇ ಪದೆ ಉಪಟಳ ನೀಡುತ್ತಿರುವ ಚೀನಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಭಾರತವು ದೇಶೀಯವಾಗಿ ಜೋರಾವರ್ ಯುದ್ಧ ಟ್ಯಾಂಕನ್ನು ಅಭಿವೃದ್ಧಿಪಡಿಸಿದೆ. ಗುಜರಾತ್ನ ಹಜೀರಾದಲ್ಲಿ ಈ ಟ್ಯಾಂಕರ್ನ ಮೊದಲ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ.
ವಿಶೇಷವೆಂದರೆ ಈ ಟ್ಯಾಂಕರ್ ಪರ್ವತ, ಗುಡ್ಡಗಾಡು ಪ್ರದೇಶಗಳಲ್ಲಿ ಸರಾಗವಾಗಿ ಸಂಚರಿಸುವ ಕಾರಣ ಪರ್ವತ ಯುದ್ಧದ ಸನ್ನಿವೇಶ ಎದುರಾದಾಗ ದೇಶದ ಸೇನೆಗೆ ದೊಡ್ಡ ಶಕ್ತಿಯಾಗಿ ನೆರವಾಗಲಿದೆ. ಈ ಕುರಿತು ಡಿಆರ್ಡಿಒ ಮುಖ್ಯಸ್ಥ ಡಾ| ಸಮೀರ್ ಕಾಮತ್ ಮಾಹಿತಿ ನೀಡಿದ್ದು, ಪರ್ವತ ಪ್ರದೇಶಗಳಲ್ಲಿ ಈ ಟ್ಯಾಂಕ್ ಸರಾಗವಾಗಿ ಸಂಚರಿಸಬಲ್ಲುದು. ನೆಲ ಹಾಗೂ ನದಿಯಲ್ಲೂ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಟಿ-72, ಟಿ-90 ಟ್ಯಾಂಕರ್ಗಳಿಗಿಂತ ಹಗುರವಾದ ಈ ಟ್ಯಾಂಕರನ್ನು ವಿಮಾನದಲ್ಲಿ ಸಾಗಿಸಬಹುದು. ಇನ್ನಷ್ಟು ಪರೀಕ್ಷೆಗಳ ಅನಂತರ 2027ರಲ್ಲಿ ಇದು ಸೇನೆಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಮುಂದಿನ 12ರಿಂದ 18 ತಿಂಗಳುಗಳ ಕಾಲ ಜೊರಾವರ್ ಟ್ಯಾಂಕನ್ನು ವಿವಿಧ ಪರೀಕ್ಷೆಗಳಿಗೆ ಒಡ್ಡಲಾಗುತ್ತದೆ.
ಚೀನಕ್ಕೆ ಸೆಡ್ಡು
ಪೂರ್ವ ಲಡಾಖ್ನಲ್ಲಿ ಭಾರತೀಯ ಸೇನೆಯ ಅಗತ್ಯಗಳನ್ನು ಪೂರೈಸಲು ಜೋರಾವರ್ ಟ್ಯಾಂಕರ್ ಸಿದ್ಧವಾಗಿದೆ. ಅಲ್ಲಿನ ಎಲ್ಎಸಿಯ ಬಳಿ ಇರುವ ಚೀನದ ಸೇನೆಗೆ ಸೆಡ್ಡು ಹೊಡೆಯುವುದಲ್ಲದೆ, ಯುದ್ಧದ ಸಂದರ್ಭಗಳಲ್ಲಿ ಈ ಟ್ಯಾಂಕರ್ ನಿರ್ಣಾಯಕ ಪಾತ್ರ ವಹಿಸಲಿದೆ. ರಷ್ಯಾ-ಉಕ್ರೇನ್ ಯುದ್ಧ ಆರಂಭವಾದ ಅನಂತರ ಟ್ಯಾಂಕ್ಗಳೊಂದಿಗೆ ಯುಎವಿ (ಅನ್ಮ್ಯಾನ್x ಏರಿಯಲ್ ವೆಹಿಕಲ್)ಗಳನ್ನು ಜೋಡಿಸಲಾಗಿದೆ. ಹಾಗಾಗಿ ಮುಂಬರುವ ಯುದ್ಧಗಳಲ್ಲಿ ಟ್ಯಾಂಕ್ಗಳು ಪ್ರಮುಖ ಅಸ್ತ್ರವಾಗಲಿವೆ.
2 ವರ್ಷಗಳಲ್ಲಿ ಅಭಿವೃದ್ಧಿ
ಡಿಆರ್ಡಿಒ (ಭಾರತೀಯ ರಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) ಹಾಗೂ ಎಲ್ ಆ್ಯಂಡ್ ಟಿ ಕಂಪೆನಿ ಜಂಟಿಯಾಗಿ ಕೇವಲ 2 ವರ್ಷಗಳ ದಾಖಲೆಯ ಸಮಯದಲ್ಲಿ ಈ ಟ್ಯಾಂಕರ್ ನಿರ್ಮಿಸಿವೆ.
ಸೇನಾ ನಾಯಕನ ಹೆಸರು
ನೂತನ ಟ್ಯಾಂಕರ್ಗೆ ಜೋರಾವರ್ ಸಿಂಗ್ ಅವರ ಹೆಸರನ್ನು ಇಡಲಾಗಿದೆ. ಇವರು 19ನೇ ಶತಮಾನದಲ್ಲಿ ಡೋಗ್ರಾ ರಜಪೂತ್ ರಾಜ ಜಮ್ಮುವಿನ ಗುಲಾಬ್ ಸಿಂಗ್ ಅವರ ಸೇನಾನಾಯಕರಾಗಿದ್ದರು. ತಮ್ಮ ಶೌರ್ಯಕ್ಕೆ ಹೆಸರುವಾಸಿಯಾಗಿದ್ದರು.
ಜೋರಾವರ್ ಟ್ಯಾಂಕ್ ವೈಶಿಷ್ಟ್ಯಗಳು
– 105 ಮಿ.ಮೀ.- ಸಾಮರ್ಥ್ಯದ ಪ್ರಧಾನ ಗನ್
– 25 ಟನ್ – ಈ ಲಘು ಯುದ್ಧ ಟ್ಯಾಂಕ್ನ ತೂಕ
– 70 ಕಿ.ಮೀ. – ಪ್ರತೀ ತಾಸಿಗೆ ಸಂಚರಿಸುವ ವೇಗ
– 50- ಆರಂಭದಲ್ಲಿ ಸೇನೆಗೆ ಪೂರೈಕೆ
– 295- ಅನಂತರದ ಹಂತಗಳಲ್ಲಿ ಸೇರ್ಪಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prophet Hate Speech; ಯತಿ ನರಸಿಂಹಾನಂದ ಸರಸ್ವತಿ ಯುಪಿ ಪೊಲೀಸರ ವಶಕ್ಕೆ
Exit poll results; ಹರಿಯಾಣದಲ್ಲಿ ಕೈಗೆ ಅಧಿಕಾರ, ಜಮ್ಮು ಮತ್ತು ಕಾಶ್ಮೀರ ಅತಂತ್ರ?
Haryana Polls; ಕೈ ಕಾರ್ಯಕರ್ತರು ಮತ್ತು ಪಕ್ಷೇತರನ ಬೆಂಬಲಿಗರ ಮಾರಾಮಾರಿ
PM: ಕಾಂಗ್ರೆಸ್ ಡ್ರಗ್ಸ್ ದಂಧೆ ಹಣ ಚುನಾವಣೆ ಗೆಲ್ಲಲು ಬಳಸಿಕೊಳ್ಳುತ್ತಿದೆ: ಪ್ರಧಾನಿ ಮೋದಿ
IFFI: ನವೆಂಬರ್ 20ರಿಂದ ಗೋವಾದಲ್ಲಿ 55ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Prophet Hate Speech; ಯತಿ ನರಸಿಂಹಾನಂದ ಸರಸ್ವತಿ ಯುಪಿ ಪೊಲೀಸರ ವಶಕ್ಕೆ
Theft Case: ಬ್ಯಾಂಕಿನಿಂದ ಹಣದ ಬ್ಯಾಗ್ ಕಳವು ಪ್ರಕರಣ
Exit poll results; ಹರಿಯಾಣದಲ್ಲಿ ಕೈಗೆ ಅಧಿಕಾರ, ಜಮ್ಮು ಮತ್ತು ಕಾಶ್ಮೀರ ಅತಂತ್ರ?
Manvi: ವಿಪಕ್ಷಗಳ ಬೆದರಿಕೆಗಳಿಗೆ ಜಗ್ಗಲ್ಲ, ಜನರಿಗಾಗಿ ಹೋರಾಟ ಮುಂದುವರಿಸುವೆ: ಸಿದ್ದರಾಮಯ್ಯ
ನಾಡೋಜ ಜಿ. ಶಂಕರ್ 69ನೇ ಹುಟ್ಟು ಹಬ್ಬ: ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.