![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 9, 2021, 12:05 AM IST
ಬೆಂಗಳೂರು : ಕೊರೊನಾ ದಿಂದಾಗಿ ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ಕ್ವಾರಂಟೈನ್ಗೆ ಒಳಗಾಗಿದ್ದ ಹಾಕಿ ಆಟಗಾರ್ತಿಯರೆಲ್ಲ ಈಗ ಚೇತರಿಸಿಕೊಂಡಿದ್ದಾರೆ.
ನಾಯಕಿ ರಾಣಿ ರಾಮ್ಪಾಲ್ ಸೇರಿದಂತೆ ಒಟ್ಟು 7 ಆಟಗಾರ್ತಿಯರ ಕೊರೊನಾ ಫಲಿತಾಂಶ ಪಾಸಿಟಿವ್ ಬಂದಿತ್ತು. ಸೋಂಕಿಗೆ ಸಿಲುಕಿದ ಉಳಿದವರೆಂದರೆ ಸವಿತಾ ಪುನಿಯ, ಶರ್ಮಿಳಾ ದೇವಿ, ರಜನಿ, ನವಜೋತ್ ಕೌರ್, ನವನೀತ್ ಕೌರ್ ಮತ್ತು ಸುಶೀಲಾ. ಜತೆಗೆ ವೀಡಿಯೋ ವಿಶ್ಲೇಷಕ ಅಮೃತಪ್ರಕಾಶ್ ಮತ್ತು ವೈಜ್ಞಾನಿಕ ಸಲಹೆಗಾರ ವೇನ್ ಲೊಂಬಾರ್ಡ್ ಅವರ ಫಲಿತಾಂಶವೂ ಪಾಸಿಟಿವ್ ಬಂದಿತ್ತು. ಇವರೂ ಚೇತರಿಸಿಕೊಂಡಿದ್ದಾರೆ.
10 ದಿನಗಳ ವಿರಾಮ ಪಡೆದು ಎ. 24ರಂದು ಬೆಂಗಳೂರಿನ ರಾಷ್ಟ್ರೀಯ ಶಿಬಿರಕ್ಕೆ ಆಗಮಿಸಿದಾಗ ನಡೆಸಿದ ಕೋವಿಡ್ ಟೆಸ್ಟ್ ವೇಳೆ ಇವರೆಲ್ಲರ ಫಲಿತಾಂಶ ಪಾಸಿಟಿವ್ ಬಂದಿತ್ತು.
ರಾಣಿ ಕೃತಜ್ಞತೆ
“ಈ ಸಂದರ್ಭದಲ್ಲಿ ನಮಗೆ ಧೈರ್ಯ ತುಂಬಿದ, ಕಾಳಜಿ ವ್ಯಕ್ತಡಿಸಿದ, ಮಾನಸಿಕವಾಗಿ ಗಟ್ಟಿಗೊಳಿಸಿದ ಎಲ್ಲರಿಗೂ ಕೃತಜ್ಞತೆಗಳು. ನಾನು, ಸಹ ಆಟಗಾರ್ತಿಯರು, ಸಹಾಯಕ ಸಿಬಂದಿಯೆಲ್ಲ ಕೊರೊನಾದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇವೆ. ಎಲ್ಲರೂ ಜತೆಗೂಡಿ ಕೊರೊನಾವನ್ನು ಮಣಿಸೋಣ. ಮಾಸ್ಕ್ ಧರಿಸಿ, ಕೊರೊನಾ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿ, ಸುರಕ್ಷಿತವಾಗಿರಿ…’ ಎಂದು ರಾಣಿ ರಾಮ್ಪಾಲ್ ಹಾರೈಸಿದ್ದಾರೆ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.