Investigation: ಹಳಿಯ ಬೋಲ್ಟ್ ತೆಗೆದಿದ್ದಕ್ಕೆ ಮೈಸೂರು ರೈಲು ಅವಘಡ!
ತನಿಖೆ ವೇಳೆ ದುಷ್ಕರ್ಮಿಗಳ ಪಿತೂರಿ ಬಹಿರಂಗ
Team Udayavani, Oct 21, 2024, 7:30 AM IST
ಚೆನ್ನೈ: ತಮಿಳುನಾಡಿನ ಕವರಪಟ್ಟೈ ನಲ್ಲಿ ಅ.11ರಂದು ಮೈಸೂರು – ದರ್ಭಾಂಗಾ ಬಾಗ್ಮತಿ ಎಕ್ಸ್ಪ್ರೆಸ್ ರೈಲು ಹಳಿತಪ್ಪಿದ್ದಕ್ಕೆ ತಾಂತ್ರಿಕ ದೋಷಗಳು ಕಾರಣವಲ್ಲ, ಹಳಿಯಲ್ಲಿದ್ದ ಬೋಲ್ಟ್ ನಟ್ಗಳನ್ನು ತೆಗದುಹಾಕಿ ರೈಲು ಹಳಿ ತಪ್ಪಿಸಲು ಪಿತೂರಿ ರೂಪಿಸಲಾಗಿತ್ತು ಎಂಬುದನ್ನು ತನಿಖೆ ಬಹಿರಂಗ ಪಡಿಸಿದೆ.
ರೈಲಿನ 12 ಬೋಗಿಗಳು ಹಳಿ ತಪ್ಪಿದ ಪರಿಣಾಮ 20 ಮಂದಿ ಗಾಯಗೊಂಡಿದ್ದರು. ಈ ಸಂಬಂಧಿಸಿದಂತೆ ತನಿಖೆಗೂ ಆದೇಶಿ ಸಲಾಗಿತ್ತು. ಅದರಂತೆ ಟ್ರ್ಯಾಕ್ಮ್ಯಾನ್, ಲೋಕೋ ಪೈಲಟ್ ಹಾಗೂ ಸ್ಟೇಷನ್ ಮಾಸ್ಟರ್ ಸೇರಿದಂತೆ 15 ಮಂದಿ ರೈಲ್ವೇ ಸಿಬಂದಿಯು ರೈಲ್ವೇ ಸುರಕ್ಷ ಆಯುಕ್ತರಾದ ಎ.ಎಂ.ಚೌಧರಿ ಅವರ ಮುಂದೆ ಅಪಘಾತಕ್ಕೆ ಕಾರಣವಾದ ಅಂಶಗಳನ್ನು ವಿವರಿಸಿದ್ದಾರೆ.
ತಾಂತ್ರಿಕವಾಗಿ ಯಾವ ಲೋಪವೂ ಉಂಟಾಗಿರಲಿಲ್ಲ ಎಂದು ಹೇಳಿದ್ದಾರೆ. ಪರಿಶೀಲನೆ ವೇಳೆ ಹಳಿಯ ನಟ್ ಮತ್ತು ಬೋಲ್ಟ್ಗಳನ್ನು ತೆಗೆದು ಪಿತೂರಿ ರೂಪಿಸಲಾಗಿತ್ತು ಎಂಬುದನ್ನು ದೃಢಪಡಿಸಿದ್ದಾರೆ. ಅಲ್ಲದೇ, ಕೃತ್ಯ ಎಸಗಲು ಕನಿಷ್ಠ 30 ನಿಮಿಷಗಳ ಅಗತ್ಯವಿದ್ದು, ರೈಲು ಸಂಚರಿಸು ವುದಕ್ಕೆ ಮೊದಲೇ ಈ ಕೃತ್ಯ ಎಸಗಲಾಗಿದ್ದು, ಇದರಲ್ಲಿ ಯಾರೋ ಪರಿಣತರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baba Siddiqui Case: ಸಲ್ಮಾನ್ ಹತ್ಯೆಗೆ ಸಂಚು ಆರೋಪಿಗೆ ಪೊಲೀಸರಿಂದ ಹನಿಟ್ರ್ಯಾಪ್ ಬಲೆ!
Maharashtra: ಸೀಟು ಹಂಚಿಕೆ ಬಿಕ್ಕಟ್ಟು; ಶರದ್ ನೆರವು ಕೋರಿದ ಕಾಂಗ್ರೆಸ್, ಉದ್ಧವ್ ಪಕ್ಷ
CM Marathon: ಎರಡು ಗಂಟೆಯಲ್ಲಿ 21 ಕಿ.ಮೀ. ದೂರ ಓಡಿದ ಕಾಶ್ಮೀರ ಸಿಎಂ ಒಮರ್!
Andhra Pradesh; 2 ಮಕ್ಕಳಿದ್ದವರಿಗೆ ಮಾತ್ರ ಚುನಾವಣ ಟಿಕೆಟ್!
Government Data: ರಸ್ತೆ ಅಪಘಾತದಲ್ಲಿ ಸಾವು: ಕರ್ನಾಟಕಕ್ಕೆ 5ನೇ ಸ್ಥಾನ!
MUST WATCH
ಹೊಸ ಸೇರ್ಪಡೆ
BBK11: ಮನೆಮಂದಿಯ ಜಗಳ ನೋಡಿ ತಲೆ ಮೇಲೆ ಕೈಯಿಟ್ಟು ಕೂತ ಕ್ಯಾಪ್ಟನ್ ಹನುಮಂತು
Kottigehara: ಕಾಡಾನೆ ದಾಳಿಗೆ ಅಪಾರ ಪ್ರಮಾಣದ ಬೆಳೆ ನಷ್ಟ, ಕಂಗಾಲಾದ ರೈತರು
ಕ್ಷುಲ್ಲಕ ವಿಚಾರಕ್ಕೆ ಮೂವರು ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ
Jayarama Acharya: ತೆಂಕುತಿಟ್ಟಿನ ಪ್ರಸಿದ್ಧ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ನಿಧನ
Tourism: ರಾಜ್ಯದ 7 ಐತಿಹಾಸಿಕ ತಾಣಗಳ ಅಭಿವೃದ್ಧಿಗೆ ಮುನ್ನುಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.