Kalaburagi: 77 ಪರೀಕ್ಷೆ ಬರೆದ ಕನ್ನಡ ಶಿಕ್ಷಕನಿಂದ ವಿಶ್ವದಾಖಲೆ!

ದೇಶದ ಎಲ್ಲ ಭಾಷೆಗಳಲ್ಲಿ ಪರೀಕ್ಷೆಗಳಿಗೆ ಹಾಜರಿ 4 ವಿಶ್ವ ದಾಖಲೆ, ಹಲವು ಪ್ರಶಸ್ತಿ ಪುರಸ್ಕಾರ

Team Udayavani, Oct 3, 2024, 7:27 AM IST

TEACHER

ಕಲಬುರಗಿ: ಗಡಿ ಭಾಗದ ಕನ್ನಡ ಶಿಕ್ಷಕರೊಬ್ಬರು ದೇಶದ 22 ರಾಜ್ಯಗಳ ಸೆಟ್‌, ನೆಟ್‌ ಮತ್ತು ಟಿಇಟಿ ಸೇರಿ ಒಟ್ಟು 77 ಪರೀಕ್ಷೆಗಳನ್ನು ಬರೆದು ತೇರ್ಗಡೆಯಾಗಿ ವಿಶ್ವ ದಾಖಲೆ ಮಾಡಿದ್ದಾರೆ!

ಧನಯ್ಯ ಕವಠಗಿಮಠ ಅವರು ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದ ಅಕ್ಕಲಕೋಟೆಯಲ್ಲಿ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಮಂಗರೂಳೆ ಕನ್ನಡ ಪ್ರೌಢಶಾಲೆಯಲ್ಲಿ ಶಿಕ್ಷಕ. ಈಗ ದೇಶದ 22 ರಾಜ್ಯಗಳ ಸೆಟ್‌, ನೆಟ್‌, ಟಿಇಟಿ ಪರೀಕ್ಷೆಗಳನ್ನು ಬರೆಯುವ ಮೂಲಕ ವಿಶ್ವ ದಾಖಲೆ ಮಾಡಿದ್ದಾರೆ. ಅಲ್ಲದೇ ತಮ್ಮದೇ ವೆಬ್‌ಸೈಟ್‌ ರಚನೆ ಮಾಡಿ ಅದರಲ್ಲಿ ನೆಟ್‌, ಸೆಟ್‌ ಮತ್ತು ಟಿಇಟಿ ಬರೆಯುವುದು ಹೇಗೆ ಎಂದು ಐಡಿಯಾಗಳನ್ನು ನೀಡುತ್ತಿದ್ದಾರೆ.

ಯಾವ ರಾಜ್ಯಗಳಲ್ಲಿ ಪರೀಕ್ಷೆ?
ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರ, ಮಹಾರಾಷ್ಟ್ರ, ಗೋವಾ, ಮಧ್ಯಪ್ರದೇಶ, ಛತ್ತೀಸ್‌ಗಡ, ಗುಜರಾತ್‌, ರಾಜಸ್ಥಾನ, ಪ. ಬಂಗಾಲ, ಹಿ. ಪ್ರದೇಶ, ಉತ್ತರಾಖಂಡ, ಆಸ್ಸಾಂ, ಅರುಣಾಚಲ ಪ್ರದೇಶ, ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್‌. ತ್ರಿಪುರಾ, ಸಿಕ್ಕಿಂ, ಜಮ್ಮು ಕಾಶ್ಮೀರ ರಾಜ್ಯಗಳ ನೆಟ್‌, ಸೆಟ್‌ ಹಾಗೂ ಟಿಇಟಿ ಪರೀಕ್ಷೆಗಳನ್ನು ಬರೆದಿದ್ದು ಒಡಿಶಾ, ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿ ಈ ಪರೀಕ್ಷೆಗಳು ಇಲ್ಲ. ಇದರಿಂದಾಗಿ ಆ ರಾಜ್ಯಗಳಿಗೆ ಹೋಗಿಲ್ಲ ಎನ್ನುತ್ತಾರೆ ಧನಯ್ಯ. ಧನಯ್ಯ ಅವರಿಗೆ ವರ್ಲ್ಡ್ ರೆಕಾರ್ಡ್‌ ಇಂಡಿಯಾ, ಇಂಡಿಯಾ ಬುಕ್‌ ಆಫ್‌ ವರ್ಲ್ಡ್ ರೆಕಾರ್ಡ್‌, ವರ್ಲ್ಡ್ ರೆಕಾರ್ಡ್‌ ಆಫ್‌ ರಿಪಬ್ಲಿಕ್‌ ಸೇರಿದಂತೆ ಒಟ್ಟು 7 ವಿಶ್ವ ದಾಖಲೆಯ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಅಲ್ಲದೇ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಿದ್ದಾರೆ.


ಡಿವೋರ್ಸ್‌ನಿಂದ ಡೈವರ್ಟ್‌ ಆಗಿದ್ದರು!

ಧನಯ್ಯ ಕವಠಗಿಮಠ 2010ರಲ್ಲಿ ಮೊದಲ ಹೆಂಡತಿಯಿಂದ ಡಿವೋರ್ಸ್‌ ಪಡೆದರು. ಈಗ ಎರಡನೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಆದರೆ ಡಿವೋರ್ಸ್‌ನಿಂದ ಆಘಾತಕ್ಕೊಳಗಾಗಿ ಮನಸ್ಸು ಹತೋಟಿಗೆ ಪಡೆಯಲು ಓದಿನೆಡೆಗೆ ಚಿತ್ತ ಹರಿಸಿದರು. ಪ್ರತಿ ರಾಜ್ಯದಲ್ಲಿನ ಆಯಾ ಭಾಷಾ ಪರೀಕ್ಷೆಗಳನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಲಾಗಿರುತ್ತಿತ್ತು. ಅವುಗಳನ್ನು ಬರೆಯುವ ಮೂಲಕ 22 ರಾಜ್ಯಗಳ 36 ಸೆಟ್‌, 36 ಟಿಇಟಿ, 4 ನೆಟ್‌ ಒಂದು ಪಿಎಚ್‌ಡಿ ಪರೀಕ್ಷೆಗಳನ್ನು ಬರೆದು ತೇರ್ಗಡೆಯಾಗಿದ್ದಾರೆ.

– ಸೂರ್ಯಕಾಂತ್‌ ಎಂ. ಜಮಾದಾರ

ಟಾಪ್ ನ್ಯೂಸ್

Vijayapura: ಗಣೇಶ ಮೂರ್ತಿಯ ಮಂಟಪದ ಗಾಜಿಗೆ ಕಿಡಿಗೇಡಿಗಳಿಂದ ಕಲ್ಲು ತೂರಿ ಹಾನಿ

Vijayapura: ಗಣೇಶ ಮೂರ್ತಿಯ ಮಂಟಪದ ಗಾಜಿಗೆ ಕಿಡಿಗೇಡಿಗಳಿಂದ ಕಲ್ಲು ತೂರಿ ಹಾನಿ

Tragedy: ರೋಗಿಗಳಂತೆ ಆಸ್ಪತ್ರೆಗೆ ಬಂದು ವೈದ್ಯನನ್ನೇ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು…

Tragedy: ರೋಗಿಗಳಂತೆ ಆಸ್ಪತ್ರೆಗೆ ಬಂದು ವೈದ್ಯನನ್ನೇ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು…

Contract Carriage: ಬೈಕ್‌ಗಳಿಗೂ ವಾಣಿಜ್ಯ ಸ್ಥಾನಮಾನಕ್ಕೆ ಕೇಂದ್ರ ಸಿದ್ಧತೆ

Contract Carriage: ಬೈಕ್‌ಗಳಿಗೂ ವಾಣಿಜ್ಯ ಸ್ಥಾನಮಾನಕ್ಕೆ ಕೇಂದ್ರ ಸಿದ್ಧತೆ

Japan Airport: 2ನೇ ಮಹಾಯುದ್ಧದ 226 ಕೆ.ಜಿ. ಬಾಂಬ್‌ ಈಗ ಸ್ಫೋಟ!

Japan Airport: 2ನೇ ಮಹಾಯುದ್ಧದ 226 ಕೆ.ಜಿ. ಬಾಂಬ್‌ ಈಗ ಸ್ಫೋಟ!

ಇಸ್ರೇಲ್‌ ಮೇಲೆ ಇರಾನ್‌ ದಾಳಿ 3ನೇ ಮಹಾಯುದ್ಧಕ್ಕೆ ಮುನ್ನುಡಿ: ಎಲ್ಲೆಡೆ ಚರ್ಚೆ

World War 3…?: ಇಸ್ರೇಲ್‌ ಮೇಲೆ ಇರಾನ್‌ ದಾಳಿ 3ನೇ ಮಹಾಯುದ್ಧಕ್ಕೆ ಮುನ್ನುಡಿ: ಚರ್ಚೆ

Stock Markets Slump: ಇರಾನ್‌-ಇಸ್ರೇಲ್‌ ಯುದ್ಧಕ್ಕೆ ಷೇರುಪೇಟೆ ತಲ್ಲಣ!

Stock Markets Slump: ಇರಾನ್‌-ಇಸ್ರೇಲ್‌ ಯುದ್ಧಕ್ಕೆ ಷೇರುಪೇಟೆ ತಲ್ಲಣ!

WhatsApp Image 2024-10-01 at 9.22.19 PM

Navaratri: ನವ ಮಹಾಭಾರತ- ದ್ರೌಪದಿಯ ನಿಟ್ಟುಸಿರಿಗೆ ಕೊನೆ ಎಂದು…? ಬದಲಾಗದ ಹೆಣ್ಣಿನ ಬವಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura: ಗಣೇಶ ಮೂರ್ತಿಯ ಮಂಟಪದ ಗಾಜಿಗೆ ಕಿಡಿಗೇಡಿಗಳಿಂದ ಕಲ್ಲು ತೂರಿ ಹಾನಿ

Vijayapura: ಗಣೇಶ ಮೂರ್ತಿಯ ಮಂಟಪದ ಗಾಜಿಗೆ ಕಿಡಿಗೇಡಿಗಳಿಂದ ಕಲ್ಲು ತೂರಿ ಹಾನಿ

ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂ ಒಪ್ಪಿಗೆ: ಜನ್ಮ ಇರುವವರೆಗೂ ಗಂಗಾವತಿ ಮರೆಯಲ್ಲ ಶಾಸಕ ರೆಡ್ಡಿ

ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂ ಒಪ್ಪಿಗೆ: ಜನ್ಮ ಇರುವವರೆಗೂ ಗಂಗಾವತಿ ಮರೆಯಲ್ಲ: ಶಾಸಕ ರೆಡ್ಡಿ

MYsuru-Dasara

Mysuru Dasara Utsava: 414ನೇ ದಸರಾ ಉತ್ಸವಕ್ಕೆ ಇಂದು ಚಾಲನೆ

Somannna-DVG

Competitive Exam: ರೈಲ್ವೇ ಪರೀಕ್ಷೆಯಲ್ಲಿ ಇನ್ನು ಕನ್ನಡ ಕಡ್ಡಾಯ: ಕೇಂದ್ರ ಸಚಿವ ಸೋಮಣ್ಣ

CM-siddu

MUDA Case: ಮಧ್ಯರಾತ್ರಿವರೆಗೆ ಕಡತ ವಿಲೇವಾರಿ ಮಾಡಿದ ಸಿಎಂ ಸಿದ್ದರಾಮಯ್ಯ?

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Vijayapura: ಗಣೇಶ ಮೂರ್ತಿಯ ಮಂಟಪದ ಗಾಜಿಗೆ ಕಿಡಿಗೇಡಿಗಳಿಂದ ಕಲ್ಲು ತೂರಿ ಹಾನಿ

Vijayapura: ಗಣೇಶ ಮೂರ್ತಿಯ ಮಂಟಪದ ಗಾಜಿಗೆ ಕಿಡಿಗೇಡಿಗಳಿಂದ ಕಲ್ಲು ತೂರಿ ಹಾನಿ

Tragedy: ರೋಗಿಗಳಂತೆ ಆಸ್ಪತ್ರೆಗೆ ಬಂದು ವೈದ್ಯನನ್ನೇ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು…

Tragedy: ರೋಗಿಗಳಂತೆ ಆಸ್ಪತ್ರೆಗೆ ಬಂದು ವೈದ್ಯನನ್ನೇ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು…

Contract Carriage: ಬೈಕ್‌ಗಳಿಗೂ ವಾಣಿಜ್ಯ ಸ್ಥಾನಮಾನಕ್ಕೆ ಕೇಂದ್ರ ಸಿದ್ಧತೆ

Contract Carriage: ಬೈಕ್‌ಗಳಿಗೂ ವಾಣಿಜ್ಯ ಸ್ಥಾನಮಾನಕ್ಕೆ ಕೇಂದ್ರ ಸಿದ್ಧತೆ

Japan Airport: 2ನೇ ಮಹಾಯುದ್ಧದ 226 ಕೆ.ಜಿ. ಬಾಂಬ್‌ ಈಗ ಸ್ಫೋಟ!

Japan Airport: 2ನೇ ಮಹಾಯುದ್ಧದ 226 ಕೆ.ಜಿ. ಬಾಂಬ್‌ ಈಗ ಸ್ಫೋಟ!

ಇಸ್ರೇಲ್‌ ಮೇಲೆ ಇರಾನ್‌ ದಾಳಿ 3ನೇ ಮಹಾಯುದ್ಧಕ್ಕೆ ಮುನ್ನುಡಿ: ಎಲ್ಲೆಡೆ ಚರ್ಚೆ

World War 3…?: ಇಸ್ರೇಲ್‌ ಮೇಲೆ ಇರಾನ್‌ ದಾಳಿ 3ನೇ ಮಹಾಯುದ್ಧಕ್ಕೆ ಮುನ್ನುಡಿ: ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.