Karkala: ಅಡಿಕೆಯಲ್ಲಿ ಚೆಂಡೆಕೊಳೆ ರೋಗ ಪತ್ತೆ; ರೈತರಿಗೆ ದೊಡ್ಡ ಪ್ರಮಾಣದ ನಷ್ಟ

ಅಡಿಕೆ ಹಾಳೆಯ ಒಳ ಬುಡ ಭಾಗದಲ್ಲಿ ಕಂದು ಬಣ್ಣ ಕಾಣಬಹುದು

Team Udayavani, Oct 16, 2024, 7:55 AM IST

Areca-Chde

ಕಾರ್ಕಳ: ಕಾರ್ಕಳ ತಾಲೂಕಿನ ವಿವಿಧ ಭಾಗಗಳಲ್ಲಿ ಇತ್ತೀಚೆಗೆ ಚೆಂಡೆಕೊಳೆ ರೋಗ (ಕ್ರೋನ್‌ ರೂಟ್‌) ಕಾಣಿಸಿಕೊಂಡಿದೆ. ಬಾಧಿತ ಮರಗಳು ಕ್ರಮೇಣ ಸತ್ತು ಹೋಗುವುದರಿಂದ ರೈತರಿಗೆ ದೊಡ್ಡ ಪ್ರಮಾಣದ ನಷ್ಟವಾಗುತ್ತಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ತೋಟಗಳಲ್ಲಿ ಈ ರೋಗ ಲಕ್ಷಣವನ್ನು ದೃಢಪಡಿಸಿದ್ದಾರೆ.

ಅಡಿಕೆ ಕೊಳೆ ರೋಗಕ್ಕೆ ಪೈಟೋಪ್‌ಥೋರ ಮೀಡಿಯೈ (ಕಜyಠಿಟಟಜಠಿಜಟ್ಟಚ ಞಛಿಚಛಜಿಜಿ) ಶಿಲೀಂಧ್ರವೇ ಕಾರಣವಾಗಿದ್ದು, ಹೆಚ್ಚು ಕಾಯಿ ಇರುವ ಮತ್ತು ಹಳೆ ಅಡಿಕೆ ಮರದಲ್ಲಿ ಈ ರೋಗ ಕಂಡು ಬರುತ್ತದೆ. ಈ ರೋಗವು ಆಗಸ್ಟ್‌-ಸೆಪ್ಟಂಬರ್‌ನಲ್ಲಿ ಪ್ರಾರಂಭವಾಗಿ ಡಿಸೆಂಬರ್‌-ಜನವರಿ ವರೆಗೂ ಇರುತ್ತದೆ. ಬಿಸಿಲು-ಮಳೆ, ರಾತ್ರಿಯ ಕಡಿಮೆ ಉಷ್ಣಾಂಶ ಹಾಗೂ ಮಂಜು ಬೀಳುವಿಕೆ ಶಿಲೀಂಧ್ರದ ಬೆಳೆವಣಿಗೆಗೆ ಸಹಕಾರಿ.

ರೋಗ ಲಕ್ಷಣ
ಪ್ರಾರಂಭದ ಲಕ್ಷಣವಾಗಿ ಹಸುರು ಗರಿಗಳು ಜೋತು ಬೀಳುತ್ತವೆ. ಕ್ರಮೇಣ ಹಳದಿ ಬಣ್ಣಕ್ಕೆ ತಿರುಗುತ್ತವೆ. ಸುಳಿ ಗರಿ ತುಂಬಾ ಸಮಯ ಹಸುರಾಗಿ ಉಳಿದು ತದನಂತರ ಒಣಗಿ ಚೆಂಡೆ ಭಾಗ ಕಳಚಿ ಬೀಳುತ್ತದೆ. ಅಡಿಕೆ ಹಾಳೆಯ ಒಳ ಬುಡ ಭಾಗದಲ್ಲಿ ಕಂದು ಬಣ್ಣ ಕಾಣಬಹುದು. ಅಡಿಕೆ ಹಾಳೆಯು ಕಾಂಡಕ್ಕೆ ಅಂಟಿಕೊಳ್ಳುವ ಭಾಗದಲ್ಲಿ ಶಿಲೀಂಧ್ರ ಪ್ರವೇಶಿಸಿ ಕಾಂಡದ ಒಳಭಾಗವನ್ನು ಪೂರ್ಣ ಕೊಳೆಯುವಂತೆ ಮಾಡುತ್ತದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.


ಈ ರೋಗವನ್ನು ಸಮಗ್ರ ನಿಯಂತ್ರಣ ಕ್ರಮಗಳಿಂದ ನಿರ್ವಹಣೆ ಮಾಡಬಹುದಾಗಿದೆ. ಈ ರೋಗ ಹರಡಲು ಅಸಮರ್ಪಕ ಬೋರ್ಡೊ ಸಿಂಪರಣೆ ಕೂಡ ಒಂದು ಕಾರಣವಾಗಿರಬಹುದು. ಅಡಿಕೆ ಕೊಳೆ ರೋಗ ನಿಯಂತ್ರಣ ಕ್ರಮಗಳನ್ನು ಪೂರ್ಣವಾಗಿ ಅನುಸರಿಸುವ ರೈತರ ತೋಟಗಳಲ್ಲಿ ಈ ರೋಗದ ಬಾಧೆ ಕಡಿಮೆ. ಪ್ರಾರಂಭಿಕ ಹಂತದಲ್ಲಿ ರೋಗ ಬಾಧಿತ ಮರಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಅನುಸರಿಸಿದರೆ ಮರಗಳನ್ನು ಉಳಿಸಿಕೊಳ್ಳಬಹುದಾಗಿದೆ.

ನಿಯಂತ್ರಣಕ್ಕೆ ಸಲಹೆ
* ಮಣ್ಣು ಪರೀಕ್ಷೆ ಆಧಾರದಲ್ಲಿ ಶಿಫಾರಸು ಮಾಡಿದ ಪೋಷಕಾಂಶ ಗಳನ್ನು ನಿಯಮಿತವಾಗಿ ನೀಡುವುದು.

*  ಬೇವಿನ ಹಿಂಡಿ ಹಾಗೂ ಟ್ರೈಕೋಡರ್ಮ್ ಮಿಶ್ರಣವನ್ನು ಮಳೆಗಾಲದ ಪೂರ್ವದಲ್ಲಿ ಅಡಿಕೆ ಮರಗಳಿಗೆ ನೀಡುವುದು.

* ಕೊಳೆರೋಗ ಬಾಧಿತ ಹಿಂಗಾರ ಗಳನ್ನು ಸಂಗ್ರಹಿಸಿ ಸುಡುವುದು.

*  ಚೆಂಡೆ ಕೊಳೆ ಬಾಧೆಯಿಂದ ಸತ್ತ ಮರಗಳನ್ನು ಕತ್ತರಿಸಿ ಸುಡುವುದು.

* ಪ್ರಾರಂಭಿಕ ಹಂತದ ರೋಗ ಲಕ್ಷಣ ಹೊಂದಿರುವ (ಹಸುರು ಗರಿ ಗಳು ಜೋತು ಬೀಳುವುದು) ಮರ ಗಳ ಕುಬೆ ಭಾಗಕ್ಕೆ ಶೇ. 10ರ ಬೋರ್ಡೊ ಪೇಸ್ಟ್‌ ಹಚ್ಚುವುದು ಹಾಗೂ ಸುತ್ತಲಿನ ಮರಗಳ ಕುಬೆ ಭಾಗಕ್ಕೆ ಶೇ. 1ರ ಬೋರ್ಡೊ ಸಿಂಪಡಿಸುವುದು.

* ಪ್ರಾರಂಭಿಕ ಹಂತದ ರೋಗ ಲಕ್ಷಣ ಹೊಂದಿರುವ ಮರಗಳ ಎಲೆಗಳಿಗೆ ಮೆಟಾಲಾಕ್ಸಿಲ್‌ ಶೇ. 35 – 1.50 ಗ್ರಾಂ 1 ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸುವುದು. ಸಿಂಪರಣೆ ಮಾಡಿದ ತರುವಾಯು ಕನಿಷ್ಠ 3-4 ಗಂಟೆಗಳ ಬಿಸಿಲು ಅವಶ್ಯ.

* ರೈತರು ನಿಯಮಿತವಾಗಿ ಅಡಿಕೆ ಕೊಳೆ ನಿಯಂತ್ರಣಕ್ಕೆ ಸಿಂಪಡಿಸುವ ಬೋರ್ಡೊ ದ್ರಾವಣವನ್ನು ಮಳೆ ಪ್ರಾರಂಭವಾದ ಬಳಿಕ ಮಾತ್ರ ನೀಡು ವುದಲ್ಲದೆ, ಮಳೆಗಾಲ ಪ್ರಾರಂಭದ ಪೂರ್ವದಲ್ಲಿಯೂ ನೀಡಬೇಕು ಹಾಗೂ 2-3ನೇ ಬಾರಿ ಬೋರ್ಡೊ ಸಿಂಪರಣೆ ಸಮಯದಲ್ಲಿ ಕುಬೆ ಭಾಗಕ್ಕೂ ಸಿಂಪರಣೆ ಮಾಡುವುದು ಸಹಕಾರಿ ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಟಾಪ್ ನ್ಯೂಸ್

7-sagara

Sagara: ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾಗಲೇ ಕುಸಿದು ಬಿದ್ದು ಶಿಕ್ಷಕ ಮೃತ್ಯು

Canadaದಲ್ಲಿ ಆರ್‌ ಎಸ್‌ ಎಸ್‌ ನಿಷೇಧಿಸಿ, ಭಾರತೀಯ ರಾಯಭಾರಿಗಳ ಮೇಲೆ ನಿರ್ಬಂಧ ಹೇರಿ: ಸಿಂಗ್

Canadaದಲ್ಲಿ ಆರ್‌ ಎಸ್‌ ಎಸ್‌ ನಿಷೇಧಿಸಿ, ಭಾರತೀಯ ರಾಯಭಾರಿಗಳ ಮೇಲೆ ನಿರ್ಬಂಧ ಹೇರಿ: ಸಿಂಗ್

Belagavi: ಫೇಸ್ಬುಕ್ ಗೆಳೆಯನ ಜೊತೆ ಸೇರಿ ಕೋಟ್ಯಾಧಿಪತಿ ಗಂಡನನ್ನೇ ಹತ್ಯೆಗೈದಳಾ ಪತ್ನಿ…

Belagavi: ಫೇಸ್ಬುಕ್ ಗೆಳೆಯನ ಜೊತೆ ಸೇರಿ ಕೋಟ್ಯಾಧಿಪತಿ ಗಂಡನನ್ನೇ ಹತ್ಯೆಗೈದಳಾ ಪತ್ನಿ…?

ಹುಚ್ಚ ವೆಂಕಟ್‌ To ಸಂಯುಕ್ತಾ.. ಬಿಗ್‌ಬಾಸ್‌ನಲ್ಲಿ ಕಿರಿಕ್‌ ಮಾಡಿ ಹೊರಬಂದ ಸ್ಪರ್ಧಿಗಳಿವರು

ಹುಚ್ಚ ವೆಂಕಟ್‌ To ಸಂಯುಕ್ತಾ.. ಬಿಗ್‌ಬಾಸ್‌ನಲ್ಲಿ ಕಿರಿಕ್‌ ಮಾಡಿ ಹೊರಬಂದ ಸ್ಪರ್ಧಿಗಳಿವರು

1-yog

Channapatna By Election; ಮೈತ್ರಿ ಅಭ್ಯರ್ಥಿ ನಾನೆ: ಸಿ.ಪಿ.ಯೋಗೇಶ್ವರ್ ವಿಶ್ವಾಸದ ನುಡಿ

13

ಪುರಾಣ ಪ್ರಸಂಗ ಕಾಯಕಲ್ಪ-ಯಕ್ಷಗಾನದ ಸಾಂಪ್ರದಾಯಿಕ ಆವರಣದ ಸೌಂದರ್ಯ, ಔಚಿತ್ಯ ಪ್ರಜ್ಞೆ

1-bb-ele

Channapatna By Election; 3 ಸಾವಿರ ಮಂದಿಗೆ ಸಿದ್ದ ಮಾಡಿದ್ದ ಬಿರಿಯಾನಿ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

Gangolli: ತ್ರಾಸಿ-ಗಂಗೊಳ್ಳಿ ಮುಖ್ಯ ರಸ್ತೆ ಗುಂಡಿ ಮುಚ್ಚಿದ ಯುವಕರು

9(1)

Trasi-ಮರವಂತೆ ಬೀಚ್‌: ವಾಟರ್‌ ಗೇಮ್ಸ್‌ ಬೋಟಿಂಗ್‌ ಮತ್ತೆ ಆರಂಭ

boil-rice

Ration: ಕರಾವಳಿಗೆ ಹೊರರಾಜ್ಯದ ಕುಚಲಕ್ಕಿಯೇ ಅನಿವಾರ್ಯ; ಭತ್ತವೂ ಇಲ್ಲ, ಅಕ್ಕಿಯೂ ಇಲ್ಲ,

Eshwar-Malpe1

Udupi: ಮುಳುಗುತಜ್ಞ ಈಶ್ವರ ಮಲ್ಪೆ ಮಕ್ಕಳಿಗೆ ಕೇರಳದಲ್ಲಿ ಚಿಕಿತ್ಸೆ

SP-Arun

immigrants: ಅಕ್ರಮ ಬಾಂಗ್ಲಾ ಪ್ರಜೆಗಳು 7 ಮಂದಿಯೂ ಕಟ್ಟಡ ಕಾರ್ಮಿಕರಲ್ಲ: ಎಸ್‌.ಪಿ.ಅರುಣ್‌

MUST WATCH

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

ಹೊಸ ಸೇರ್ಪಡೆ

7-sagara

Sagara: ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾಗಲೇ ಕುಸಿದು ಬಿದ್ದು ಶಿಕ್ಷಕ ಮೃತ್ಯು

Canadaದಲ್ಲಿ ಆರ್‌ ಎಸ್‌ ಎಸ್‌ ನಿಷೇಧಿಸಿ, ಭಾರತೀಯ ರಾಯಭಾರಿಗಳ ಮೇಲೆ ನಿರ್ಬಂಧ ಹೇರಿ: ಸಿಂಗ್

Canadaದಲ್ಲಿ ಆರ್‌ ಎಸ್‌ ಎಸ್‌ ನಿಷೇಧಿಸಿ, ಭಾರತೀಯ ರಾಯಭಾರಿಗಳ ಮೇಲೆ ನಿರ್ಬಂಧ ಹೇರಿ: ಸಿಂಗ್

10

Gangolli: ತ್ರಾಸಿ-ಗಂಗೊಳ್ಳಿ ಮುಖ್ಯ ರಸ್ತೆ ಗುಂಡಿ ಮುಚ್ಚಿದ ಯುವಕರು

9(1)

Trasi-ಮರವಂತೆ ಬೀಚ್‌: ವಾಟರ್‌ ಗೇಮ್ಸ್‌ ಬೋಟಿಂಗ್‌ ಮತ್ತೆ ಆರಂಭ

Belagavi: ಫೇಸ್ಬುಕ್ ಗೆಳೆಯನ ಜೊತೆ ಸೇರಿ ಕೋಟ್ಯಾಧಿಪತಿ ಗಂಡನನ್ನೇ ಹತ್ಯೆಗೈದಳಾ ಪತ್ನಿ…

Belagavi: ಫೇಸ್ಬುಕ್ ಗೆಳೆಯನ ಜೊತೆ ಸೇರಿ ಕೋಟ್ಯಾಧಿಪತಿ ಗಂಡನನ್ನೇ ಹತ್ಯೆಗೈದಳಾ ಪತ್ನಿ…?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.