ಇಂದು ಕರ್ನಾಟಕ ಬಂದ್: ಬಿಗು ಭದ್ರತೆ, ಎಲ್ಲಿ ಹೇಗಿದೆ ಪರಿಸ್ಥಿತಿ?


Team Udayavani, Feb 13, 2020, 9:12 AM IST

bandh

ಬೆಂಗಳೂರು: ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕರ್ನಾಟಕ ಸಂಘಟನೆಗಳು ಕರೆಕೊಟ್ಟಿರುವ ಕರ್ನಾಟಕ ಬಂದ್ ಇಂದು ಆಚರಿಸಲಾಗುತ್ತಿದೆ. ಬಹುತೇಕ ಜಿಲ್ಲೆಗಳಲ್ಲಿ ಸಂಚಾರ ವ್ಯವಸ್ಥೆ ಸಹಜವಾಗಿದ್ದರೂ ಬೆಳಗಿನ ಜಾವ ಹಲವೆಡೆ ಜನ ಸಂಚಾರ ವಿರಳವಾಗಿದೆ, ಕರಾವಳಿ ಜಲ್ಲೆಗಳಲ್ಲಿ ಯಾವುದೇ ಸ್ಪಂದನೆ ದೊರೆತಿಲ್ಲ.

ಸರಕಾರಿ ಮತ್ತು ಖಾಸಗಿ ವಲಯಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಮೀಸಲಾತಿ ಕಲ್ಪಿಸಲು ಸರೋಜಿನಿ ಮಹಿಷಿ ವರದಿಯನ್ನು ಸರಕಾರ ಜಾರಿ ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ.

ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಖಾಸಗಿ ಸಂಚಾರಿ ಸೇವೆಗಳಲ್ಲಿ ವ್ಯತ್ಯಯವಾಗಿದೆ. ಓಲಾ, ಊಬರ್, ಖಾಸಗಿ ಟ್ಯಾಕ್ಸಿ, ಆಟೋ ರಿಕ್ಷಾಗಳು ಬಂದ್ ಗೆ ಬೆಂಬಲ ಸೂಚಿಸಿದೆ. ಈ ಸೇವೆಗಳನ್ನೇ ನಂಬಿರುವವರು ಇಂದು ಪರದಾಡುತ್ತಿರುವುದು ಕಂಡು ಬಂದಿದೆ.

ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ ಗಳಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಇವುಗಳ ಸಂಚಾರ ಯಥಾಸ್ಥಿತಿಯಿದೆ. ಆದರೆ ಬಂದ್ ಕಾರಣದಿಂದ ಜನ ಸಂಚಾರ ವಿರಳವಾಗಿದ್ದು, ಬಸ್ ಗಳು ಬಹುತೇಕ ಖಾಲಿ ಖಾಲಿಯಾಗಿ ಸಂಚರಿಸುತ್ತಿವೆ.

ಶಾಲಾ ಕಾಲೇಜುಗಳು ಎಂದಿನಂತೆ ಮುಂದುವರಿದಿದ್ದು, ಯಾವುದೇ ರೀತಿಯ ರಜೆ ಘೋಷಿಸಲಾಗಿಲ್ಲ. ಆದರೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇಂದು ನಡೆಯಬೇಕಿದ್ದ ಪರೀಕ್ಷೆಗಳು ಮುಂದೂಡಲಾಗಿದೆ.

ಬಿಗು ಭದ್ರತೆ

ಬೆಂಗಳೂರಿನ ಹಲವೆಡೆ ಬಿಗು ಭದ್ರತೆ ಒದಗಿಸಲಾಗಿದೆ. ಟೌನ್ ಹಾಲ್, ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣ, ಮೈಸೂರು ರಸ್ತೆ, ಮೆಜೆಸ್ಟಿಕ್ ಮುಂತಾದ ಕಡೆಗಳಲ್ಲಿ ಪೊಲೀಸರು ಬಿಗು ಭದ್ರತೆ ಒದಗಿಸಿದ್ದಾರೆ.

 ಕರಾವಳಿ ಜಿಲ್ಲೆಯಲ್ಲಿ ಬಂದ್ ಇಲ್ಲ
ಕರ್ನಾಟಕ ಬಂದ್ ಗೆ ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ಯಾವುದೇ ಬೆಂಬಲ ದೊರೆತಿಲ್ಲ. ಗುರುವಾರ ಬೆಳಿಗ್ಗೆ ಎಲ್ಲಾ ಸಂಚಾರ ವ್ಯವಸ್ಥೆ ಎಂದಿನಂತಿದ್ದು, ಯಾವುದೇ ರೀತಿಯ ವ್ಯತ್ಯಾಸ ಕಂಡುಬಂದಿಲ್ಲ. ಇಲ್ಲಿನ ಖಾಸಗಿ ಬಸ್ ಗಳು ಯಾವುದೇ ರೀತಿಯ ಬೆಂಬಲ ನೀಡದಿರುವ ಕಾರಣ ಜನಸಂಚಾರ ಯಥಾಸ್ಥಿತಿಯಲ್ಲಿದೆ.

ಮಧ್ಯಕರ್ನಾಟಕ ದಾವಣಗೆರೆಯಲ್ಲಿ ಯಾವುದೇ ಬಂದ್ ವಾತವರಣ ಕಂಡುಬಂದಿಲ್ಲ. ಎಂದಿನಂತೆ ನಡೆಯುತ್ತಿರುವ ವ್ಯಾಪಾರ ವಹಿವಾಟು ನಡೆಯುತ್ತಿದ್ದು, ವಾಹನಗಳ ಸಂಚಾರ ಸಹಜಸ್ಥಿತಿಯಲ್ಲಿದೆ.

ಕೊಪ್ಪಳ ಜಿಲ್ಲೆಯಲ್ಲೂ ಯಾವುದೇ ರೀತಿಯ ಬಂದ್ ಬಿಸಿ ತಟ್ಟಿಲ್ಲ. ವ್ಯಾಪಾರ ವ್ಯವಹಾರ, ಸಂಚಾರ ವ್ಯವಸ್ಥೆ, ಶಾಲಾ ಕಾಲೇಜು ಎಂದಿನಂತಿದೆ.

ಟಾಪ್ ನ್ಯೂಸ್

Horoscope: ನವ ವಿವಾಹಿತರಿಗೆ ಸಂತಾನ ಭಾಗ್ಯ

Horoscope: ನವ ವಿವಾಹಿತರಿಗೆ ಸಂತಾನ ಭಾಗ್ಯ

Supreme Court: ಮಹಾಕುಂಭದಲ್ಲಿ ಭಕ್ತರ ಸುರಕ್ಷೆಗೆ ಮಾರ್ಗಸೂಚಿ: ಇಂದು ಸುಪ್ರೀಂ ವಿಚಾರಣೆ

Supreme Court: ಮಹಾಕುಂಭದಲ್ಲಿ ಭಕ್ತರ ಸುರಕ್ಷೆಗೆ ಮಾರ್ಗಸೂಚಿ: ಇಂದು ಸುಪ್ರೀಂ ವಿಚಾರಣೆ

Coat-Guard-Gov

Indian Coast Guard: ಮಂಗಳೂರಿನ ಕಡಲ ಒಡಲಲ್ಲಿ ಸಮರ ಕಸರತ್ತು!

Exam

Government College; ಸರಕಾರಿ ಪದವಿ ಕಾಲೇಜಿಗೆ ಪ್ರವೇಶಾತಿ ಅಭಿಯಾನ

1-yamuna

Yamuna River; ಅಮೃತವಾಗಿ ಹರಿಯಬೇಕಿದ್ದ ಯಮುನಾ ನದಿ ಕಲ್ಮಶವಾಗಿದ್ದೇಕೆ?

Mumbai: ಟೆನಿಸ್‌ ಬಾಲ್‌ ಕ್ರಿಕೆಟ್‌ ಆಡಿದ ಬ್ರಿಟನ್‌ ಮಾಜಿ ಪಿಎಂ ರಿಷಿ ಸುನಕ್‌

Mumbai: ಟೆನಿಸ್‌ ಬಾಲ್‌ ಕ್ರಿಕೆಟ್‌ ಆಡಿದ ಬ್ರಿಟನ್‌ ಮಾಜಿ ಪಿಎಂ ರಿಷಿ ಸುನಕ್‌

ಕಳಪೆ ಸಾಧನೆ: ಮೈಕ್ರೋಸಾಫ್ಟ್ ಉದ್ಯೋಗಿಗಳ ವಜಾ?

Microsoft: ಕಳಪೆ ಸಾಧನೆ: ಮೈಕ್ರೋಸಾಫ್ಟ್ ಉದ್ಯೋಗಿಗಳ ವಜಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Exam

Government College; ಸರಕಾರಿ ಪದವಿ ಕಾಲೇಜಿಗೆ ಪ್ರವೇಶಾತಿ ಅಭಿಯಾನ

Khandre

ಅರಣ್ಯ ಹಕ್ಕು ಅರ್ಜಿ: ಅನರ್ಹರಿಗೆ ಪಟ್ಟಿಯಿಂದ ಕೊಕ್‌

1-weewqe

1ರಿಂದ 5ನೇ ತರಗತಿ ಮಕ್ಕಳ ಕಲಿಕೆ ಬಲವರ್ಧನೆಗೆ ‘ಹಬ್ಬ’

1-ling

ಲಿಂಗನಮಕ್ಕಿ ಪವರ್‌ಹೌಸ್‌: 40 ವರ್ಷದ ಟರ್ಬೈನ್‌ ರನ್ನರ್‌ ಸ್ಥಗಿತ

R.Ashok1

ರಾಜ್ಯದಲ್ಲಿ ದಿನಕ್ಕೊಂದು ಮಾನಭಂಗ, ಅತ್ಯಾಚಾರ ಕೇಸ್‌: ಆರ್‌.ಅಶೋಕ್‌

MUST WATCH

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

ಹೊಸ ಸೇರ್ಪಡೆ

Horoscope: ನವ ವಿವಾಹಿತರಿಗೆ ಸಂತಾನ ಭಾಗ್ಯ

Horoscope: ನವ ವಿವಾಹಿತರಿಗೆ ಸಂತಾನ ಭಾಗ್ಯ

Supreme Court: ಮಹಾಕುಂಭದಲ್ಲಿ ಭಕ್ತರ ಸುರಕ್ಷೆಗೆ ಮಾರ್ಗಸೂಚಿ: ಇಂದು ಸುಪ್ರೀಂ ವಿಚಾರಣೆ

Supreme Court: ಮಹಾಕುಂಭದಲ್ಲಿ ಭಕ್ತರ ಸುರಕ್ಷೆಗೆ ಮಾರ್ಗಸೂಚಿ: ಇಂದು ಸುಪ್ರೀಂ ವಿಚಾರಣೆ

Coat-Guard-Gov

Indian Coast Guard: ಮಂಗಳೂರಿನ ಕಡಲ ಒಡಲಲ್ಲಿ ಸಮರ ಕಸರತ್ತು!

Exam

Government College; ಸರಕಾರಿ ಪದವಿ ಕಾಲೇಜಿಗೆ ಪ್ರವೇಶಾತಿ ಅಭಿಯಾನ

1-yamuna

Yamuna River; ಅಮೃತವಾಗಿ ಹರಿಯಬೇಕಿದ್ದ ಯಮುನಾ ನದಿ ಕಲ್ಮಶವಾಗಿದ್ದೇಕೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.