![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Dec 1, 2021, 9:30 PM IST
ಪ್ರಯಾಗ್ರಾಜ್: ಕಾಶಿ ವಿಶ್ವನಾಥನ “ಸುಗಮ ದರ್ಶನ’ ವ್ಯವಸ್ಥೆಯನ್ನು ವಿರೋಧಿಸಿದ್ದ ಅರ್ಜಿಯನ್ನು ಅಲಹಾಬಾದ್ ಉಚ್ಚ ನ್ಯಾಯಾಲಯ ತಿರಸ್ಕರಿಸಿದೆ. ಈ ಅರ್ಜಿ ನ್ಯಾಯಾಂಗದ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದೆ.
ಕಾಶಿ ವಿಶ್ವನಾಥ ದೇವಸ್ಥಾನ ಮಂಡಳಿ, ಜನರು ಸರತಿ ಸಾಲಲ್ಲಿ ನಿಲ್ಲುವುದನ್ನು ತಪ್ಪಿಸಲು, ಆರಾಮಾಗಿ ದರ್ಶನ ಮಾಡಲು ಸುಗಮ ದರ್ಶನ ಎಂಬ ವ್ಯವಸ್ಥೆಯನ್ನು ರೂಪಿಸಿತ್ತು. ಈ ವ್ಯವಸ್ಥೆ ಜನರ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳುತ್ತದೆ ಎಂದು ಗಜೇಂದ್ರ ಯಾದವ್ ಎಂಬ ವಕೀಲರು ಆರೋಪಿಸಿ, ನ್ಯಾಯಾಲಯದ ಮೊರೆ ಹೋಗಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, “”ದಿವ್ಯಾಂಗರಿಗೆ, ಇನ್ನಿತರ ದೈಹಿಕ ಸಮಸ್ಯೆಗಳನ್ನು ಹೊಂದಿರುವವರಿಗೆ ಈ ಸುಗಮ ದರ್ಶನ ಹೆಚ್ಚು ಪ್ರಯೋಜನಕಾರಿ. ಅಂಥವರಿಗೆ ಪೂರಕವಾಗಿ ಈ ಯೋಜನೆ ರೂಪಿಸಲಾಗಿದೆ. ಅಲ್ಲದೆ, ಈ ವಿಶೇಷ ವ್ಯವಸ್ಥೆಯಿಂದ ಇತರೆ ಜನರು ಎಂದಿನಂತೆ ಸರತಿಯಲ್ಲಿ ಬಂದು ತಮ್ಮ ಪೂಜೆ ಸಲ್ಲಿಸಲು ಮಂಡಳಿ ಅಡ್ಡಿ ಮಾಡಿಲ್ಲ” ಎಂದು ಹೇಳುವ ಮೂಲಕ ವಕೀಲರ ಅರ್ಜಿಯನ್ನು ತಿರಸ್ಕರಿಸಿದೆ.
ಇದನ್ನೂ ಓದಿ : ಕೊಲೆಗೆ ಸಂಚು; ಗೂಂಡಾಗಿರಿ ಮಾಡುವವರನ್ನ ಸರ್ಕಾರ ಬಿಡುವುದಿಲ್ಲ: ಆರ್. ಅಶೋಕ್
You seem to have an Ad Blocker on.
To continue reading, please turn it off or whitelist Udayavani.