Kaup: ಪಾಂಗಾಳದಲ್ಲಿದೆ ಕೋಟಿ ಚೆನ್ನಯರು ಈಜಿದ ಕಟ್ಟಿಕೆರೆ

ಕಳರಿ ತುಳುನಾಡ ಕಲೆ: ಹಲವು ಪುರಾವೆಗಳು ಲಭ್ಯ; ಗದ್ದೆ ನಡುವೆ ಇದೆ ನಾನಯರ ಸಮಾಧಿ

Team Udayavani, Sep 22, 2024, 1:39 PM IST

Kaup: ಪಾಂಗಾಳದಲ್ಲಿದೆ ಕೋಟಿ ಚೆನ್ನಯರು ಈಜಿದ ಕಟ್ಟಿಕೆರೆ

ಕಾಪು: ಪಾಂಗಾಳದ ನಾನಯರ ಗರಡಿಯಲ್ಲಿ  ಕಳರಿ ಸೇರಿದಂತೆ ಸಮರ ಕಲೆಗಳನ್ನು ಅಧ್ಯಯನ ಮಾಡಿದ್ದ  ತುಳುನಾಡಿನ ಅವಳಿ ವೀರರಾದ ಕೋಟಿ-ಚೆನ್ನಯರು ಈಜುತ್ತಿದ್ದರು ಎಂದು ಹೇಳಲಾದ ಕಟ್ಟಿಕೆರೆ ಮತ್ತು ನಾನಯರ ಸಮಾಧಿಗಳು ಈಗಲೂ ಇವೆ. ಇದರ ಜತೆಗೆ  ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಪ್ರಸಿದ್ಧಿ ಪಡೆದಿರುವ ಕಳರಿ ಸಮರಾಭ್ಯಾಸ ಕಲೆಗೆ ತುಳುನಾಡು ಮೂಲವಾಗಿತ್ತು ಎಂಬುದಕ್ಕೆ ಪೂರಕವಾಗಿಯೂ ಕೆಲವು ದಾಖಲೆಗಳು  ಒದಗಿವೆ.

16ನೇ ಶತಮಾನದಲ್ಲಿ ಪಾಂಗಾಳದ ನಾನಯರ ಗುರುಮಠದ ಗುರುಗಳಾದ ಕಿನ್ನಿಂಗದೇವ ನಾನಯರ ಸಲಹೆಯಂತೆ ಅವರ ಶಿಷ್ಯಂದಿರಾದ ಬಲಿಪ ನಾನಯ ಮತ್ತು ಪಿಲಿಪ ನಾನಯ ಅವರು, ಕೋಟಿ-ಚೆನ್ನಯರಿಗೆ  ಯುದ್ಧ ವಿದ್ಯೆಗಳನ್ನು ಕಲಿಸಿದ್ದರು. ತುಳುನಾಡಿನಲ್ಲಿ ಮಲ್ಲ ವಿದ್ಯೆಯನ್ನು ಕಲಿಸುವ ಹಲವಾರು ಗರಡಿಗಳಿದ್ದವು. ಇಲ್ಲಿ ಮೂರು ವರ್ಷದ ತರಬೇತಿ ನೀಡುತ್ತಿದ್ದು ಇದನ್ನು ಕೇರಳದಲ್ಲಿ ತುಳುನಾಡನ್‌ ವಿದ್ಯೆ ಎಂದು ಕರೆಯುತ್ತಿದ್ದರು. ಈ ಮಲ್ಲ ವಿದ್ಯೆಗಳಿಗಾಗಿ ಮಲ್ಲಕಂಬಗಳನ್ನು ಬಳಸಲಾಗುತ್ತಿತ್ತು. ತುಳುನಾಡಿನ ಹಲವಾರು ಗರೋಡಿಗಳಲ್ಲಿ ಕಾಣಸಿಗುವ ಗುರು ಕಂಬಗಳಿಗೂ, ಕಳರಿ ಸಮರಾಭ್ಯಾಸದ ಮಲ್ಲ ಕಂಬಗಳಿಗೂ ಪರಸ್ಪರ ಸಂಬಂಧಗಳಿವೆ.

ಮಲಯಾಳಿ ಸಾಹಿತ್ಯದಲ್ಲೂ ಉಲ್ಲೇಖ: ಮಾರ್ಷಲ್‌ ಆರ್ಟ್‌ಗೆ ಸಮಾನವಾಗಿರುವ ಕಳರಿ ಸಮರ ಕಲೆಯು ನಮ್ಮ ತುಳುನಾಡಿನ ಮೂಲ ಕಲೆ ಎನ್ನುವುದನ್ನು ವಿದೇಶಿ ಸಂಶೋಧಕರೂ ಒಪ್ಪಿಕೊಂಡಿದ್ದಾರೆ. ತುಳುನಾಡಿನಿಂದ ಉತ್ತರ ಕೇರಳಕ್ಕೆ ಹೋಗಿ, ಅಲ್ಲಿಂದ ದಕ್ಷಿಣ ತಮಿಳುನಾಡಿನವರೆಗೂ ವ್ಯಾಪಿಸಿರುವ ಕಳರಿ ಕಲೆಯ ಬಗ್ಗೆ ಈಗಾಗಲೇ ಹಲವಾರು ರೀತಿಯ ಅಧ್ಯಯನಗಳು ನಡೆದಿವೆ. ಬಹುತೇಕ ರಾಜ್ಯಗಳ ಸಂಗಮ ಸಾಹಿತ್ಯಗಳಲ್ಲಿ ಕಳರಿ ವಿದ್ಯೆಗಳ ಬಗ್ಗೆ ಉಲ್ಲೇಖವಿದ್ದು ಮಲಯಾಳಿ ಸಾಹಿತ್ಯಗಳಲ್ಲೂ ಇದರ ಬಗ್ಗೆ ಉಲ್ಲೇಖವಿದೆ ಎನ್ನುತ್ತಾರೆ ಕಳರಿ ಸಮರಾಭ್ಯಾಸದ ಬಗ್ಗೆ ಅಧ್ಯಯನಶೀಲರಾಗಿರುವ ಪತ್ರಕರ್ತ, ಚಿಂತಕ ಶ್ರೀಕಾಂತ್‌ ಶೆಟ್ಟಿ ಕಾರ್ಕಳ. ಈ ನಡುವೆ, ಕಳರಿ ಕಲೆಯೇ ಕರಾಟೆ ಆಗಿರಬಹುದು ಎನ್ನುವ ಒಂದು ವಾದ ಶಶಿಕಾಂತ್‌ ಶೆಟ್ಟಿ ಕಟಪಾಡಿ ಅವರದ್ದು.

ನಾನಯರ ಗರಡಿಯಲ್ಲಿ ಏನೇನಿವೆ?

ಶ್ರೀ ಚಂಡಿಕಾ ಪರಮೇಶ್ವರಿ ದೇವಿ ಇಲ್ಲಿನ ಶಕ್ತಿ ದೇವತೆಯಾಗಿದ್ದು ಗಣಪತಿ, ಬ್ರಹ್ಮ, ವೀರಭದ್ರ, ಈಶ್ವರ, ಕುಮಾರನ್ನೊಳಗೊಂಡ ಪಂಚದೈವಿಕ ಸಾನಿಧ್ಯಗಳಿವೆ. ಕೋಟಿ ಚೆನ್ನಯ್ಯರ ಶಸ್ತ್ರ ತರಬೇತಿ ಗುರುಗಳಾದ ಬಲಿಪ ನಾನಯ ಮತ್ತು ಪಿಲಿಪ ನಾನಯರ ಸಮಾಧಿ, ಕೋಟಿ ಚೆನ್ನಯ್ಯರ ಸಹಿತವಾಗಿ ಅನೇಕರು ಸಾಧನೆಗೈಯ್ಯುತ್ತಿದ್ದ ಕಟ್ಟಿಕೆರೆ ಸದ್ಯಕ್ಕೆ ಇಲ್ಲಿ ತೋರಿ ಬರುತ್ತಿರುವ ಪುರಾವೆಗಳು.

ಗುರು ಸ್ಮರಣೆಗಾಗಿ 66 ಗರಡಿ ನಿರ್ಮಾಣ

ಸಾಯನ ಬೈದ್ಯರ ಸೂಚನೆಯಂತೆ ಕೋಟಿ-ಚೆನ್ನಯ್ಯರಿಗೆ ಪಾಂಗಾಳ ನಾನಯರ ಗರಡಿಯಲ್ಲಿ ಬಲಿಪ ನಾನಯ ಮತ್ತು ಪಿಲಿಪ ನಾನಯರೆಂಬ ಅವಳಿ ಪುರುಷರ ಬಳಿ ಕಳರಿ ವಿದ್ಯೆ ಸಹಿತ ಪರಿಪೂರ್ಣ ಅಂಗ ಸಾಧನೆ ಕಲಿಸಲಾಗುತ್ತದೆ. ಅಲ್ಲಿ ಗುರುಕಾಣಿಕೆ ವಿಷಯ ಬಂದಾಗ ಗುರುಗಳು ನಿರಾಕರಿಸುತ್ತಾರೆ. ಅದಕ್ಕೆ ಪ್ರತಿಯಾಗಿ ಗುರು ವಿದ್ಯೆ ಕಲಿತ ಸ್ಮರಣೆಗಾಗಿ 66 ಗರಡಿ ನಿರ್ಮಿಸುವುದಾಗಿ ಬಲಿಪ ಮತ್ತು ಪಿಲಿಪ ನಾನಯರಿಗೆ ವಾಗ್ಧಾನ ನೀಡುತ್ತಾರೆ. ಮರಣ  ಕಾಲಕ್ಕೆ 66 ಗರಡಿ ನಿರ್ಮಾಣ ಮಾಡುವಂತೆ ಬಲ್ಲಾಳರಿಗೆ ಸೂಚನೆ ನೀಡಿದ್ದು, ಪಾಂಗಾಳ ನಾನಯರ ಗರಡಿಯ ಆಯವನ್ನು ಮಾದರಿಯನ್ನಾಗಿಸಿಕೊಂಡು 66 ಗರಡಿ ನಿರ್ಮಾಣವಾಗಿರುವುದನ್ನು ಸ್ಮರಿಸಿಕೊಳ್ಳಬಹುದಾಗಿದೆ.
-ಸುಧಾಕರ್‌ ಡಿ. ಅಮೀನ್‌, ಪಾಂಗಾಳ ಗುಡ್ಡೆ ಗರಡಿಮನೆ

ಕೇರಳದಲ್ಲಿ 14 ಗ್ರಾಮಗಳು ಉಂಬಳಿ!

ಪಾಂಗಾಳ ನಾನಯರ ಗರಡಿಯಲ್ಲಿ ಕೇರಳದ ವಿದ್ಯಾರ್ಥಿಗಳು ಕೂಡಾ ಕಳರಿ ಕಲಿಯಲು ಬರುತ್ತಿದ್ದರು. ಇದಕ್ಕೆ ಪ್ರತಿಯಾಗಿ ಕೇರಳದ ಅಲೆಪ್ಪಿ ಜಿಲ್ಲೆಯ ಮುದ್ದು ಕುಳಂ, ಚಂಬ ಕುಳಂ ಸಹಿತ 14 ಗ್ರಾಮಗಳನ್ನು ಗುರುದಕ್ಷಿಣೆ ರೂಪದಲ್ಲಿ ನಾನಯರ ಕುಟುಂಬಸ್ಥರಿಗೆ ಉಂಬಳಿ ರೂಪದಲ್ಲಿ ಬಿಡಲಾಗಿತ್ತು. ಅದರಲ್ಲಿ ಮುದ್ದು ಕುಳಂ, ಚಂಬ ಕುಳಂನ ಜಮೀನು ಉಳುವನೇ ಹೊಲದೊಡೆಯ ಕಾನೂನಿನಲ್ಲಿ ಕಳೆದುಹೋಗಿದೆ, ಮುದ್ದು ಕುಳಂನಲ್ಲಿ ಗುರು ಮಠ, ಮನೆ ಮತ್ತು ಪಾಂಗಾಳದಿಂದ ಕೊಂಡೊಯ್ದು ಪ್ರತಿಷ್ಠಾಪಿಸಲಾಗಿರುವ ವೀರಭದ್ರ ದೇವಸ್ಥಾನದಲ್ಲಿ ಈಗಲೂ ಆರಾಧನೆ ನಡೆಯುತ್ತಿದೆ. ನಾನಯ ಕುಟುಂಬದ ಸದಸ್ಯರು ಈಗಲೂ ಮಠದಲ್ಲಿ ವಾಸವಿದ್ದಾರೆ ಎನ್ನುತ್ತಾರೆ ಪಾಂಗಾಳದ ನಾನಯರ ಗರಡಿಯ ಕರುಣಾಕರ ಶೆಟ್ಟಿ.

-ರಾಕೇಶ್‌ ಕುಂಜೂರು

ಟಾಪ್ ನ್ಯೂಸ್

Kadur: ಅಪ್ರಾಪ್ತ ವಯಸ್ಕ ಬಾಲಕಿಗೆ ಸಲೂನ್‌ ನಲ್ಲಿ ಲೈಂಗಿಕ ಕಿರುಕುಳ ಆರೋಪ

Kadur: ಅಪ್ರಾಪ್ತ ವಯಸ್ಕ ಬಾಲಕಿಗೆ ಸಲೂನ್‌ ನಲ್ಲಿ ಲೈಂಗಿಕ ಕಿರುಕುಳ ಆರೋಪ

ಹಿಂದೂ ಕಾರ್ಯಕ್ರಮಗಳಿಗೆ ಹಿಂದೂ ಕಾರ್ಯಕರ್ತರಿಂದ ಕತ್ತಿ ಹಿಡಿದು ಕಾವಲು: ಶ್ರೀರಾಮಸೇನೆ

ಹಿಂದೂ ಕಾರ್ಯಕ್ರಮಗಳಿಗೆ ಹಿಂದೂ ಕಾರ್ಯಕರ್ತರಿಂದಲೇ ಕತ್ತಿ ಹಿಡಿದು ಕಾವಲು: ಶ್ರೀರಾಮಸೇನೆ

Karki Movie Review: ಪ್ರೀತಿ ಅರಮನೆಯಲ್ಲಿ ಜಾತಿ ಸಂಘರ್ಷ

Karki Movie Review: ಪ್ರೀತಿ ಅರಮನೆಯಲ್ಲಿ ಜಾತಿ ಸಂಘರ್ಷ

Shimoga; ಎಲ್ಲರ ಮನ ಗೆದ್ದಿದ್ದ ಇಟ್ಟಿಗೆ ಹಳ್ಳಿಯ ʼ108 ಆಂಬುಲೆನ್ಸ್ʼ ಹೋರಿ ಇನ್ನಿಲ್ಲ…!

Shimoga; ಎಲ್ಲರ ಮನ ಗೆದ್ದಿದ್ದ ಇಟ್ಟಿಗೆ ಹಳ್ಳಿಯ ʼ108 ಆಂಬುಲೆನ್ಸ್ʼ ಹೋರಿ ಇನ್ನಿಲ್ಲ…!

11

KS Eshwarappa: ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೋ,ಇಲ್ಲ ಜೈಲಿಗೆ ಹೋಗುತ್ತಾರೋ ಗೊತ್ತಿಲ್ಲ

Cm Siddaramaiah: ಅರ್ಕಾವತಿ ವಿಚಾರದಲ್ಲಿ ರಿಡೂ ಎಂದಿದ್ದು ನಾನಲ್ಲ ಸುಪ್ರೀಂ ಕೋರ್ಟ್

Cm Siddaramaiah: ಅರ್ಕಾವತಿ ವಿಚಾರದಲ್ಲಿ ರಿಡೂ ಎಂದಿದ್ದು ನಾನಲ್ಲ, ಸುಪ್ರೀಂ ಕೋರ್ಟ್

Kaup: ಪಾಂಗಾಳದಲ್ಲಿದೆ ಕೋಟಿ ಚೆನ್ನಯರು ಈಜಿದ ಕಟ್ಟಿಕೆರೆ

Kaup: ಪಾಂಗಾಳದಲ್ಲಿದೆ ಕೋಟಿ ಚೆನ್ನಯರು ಈಜಿದ ಕಟ್ಟಿಕೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

pejawara

Tirupati Laddu Case; ದೇವಳಗಳನ್ನು ಸರ್ಕಾರದ ಸ್ವಾಧೀನದಿಂದ ಮುಕ್ತಗೊಳಿಸಿ: ಪೇಜಾವರ ಶ್ರೀ

Colera

Udupi: ಜಿಲ್ಲೆಯಲ್ಲಿ ಕಾಲರಾ 8 ಪ್ರಕರಣ ಸಕ್ರಿಯ

Puttige-Shree

Thirupathi: ಲಡ್ಡು ಪ್ರಸಾದಕ್ಕೆ ಕಲಬೆರಕೆ ತುಪ್ಪ ಬಳಸಿ ಅಪಚಾರ: ಪರ್ಯಾಯ ಪುತ್ತಿಗೆ ಶ್ರೀ

Muloor: ಮಹಿಳೆಗೆ ರಿಕ್ಷಾ ಢಿಕ್ಕಿ ; ಗಾಯ

Muloor: ಮಹಿಳೆಗೆ ರಿಕ್ಷಾ ಢಿಕ್ಕಿ ; ಗಾಯ

12

Udupi: ಮದ್ಯ ಸೇವಿಸಿ ಬಸ್‌ ಚಾಲನೆ: ಪ್ರಕರಣ ದಾಖಲು

MUST WATCH

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

ಹೊಸ ಸೇರ್ಪಡೆ

Kadur: ಅಪ್ರಾಪ್ತ ವಯಸ್ಕ ಬಾಲಕಿಗೆ ಸಲೂನ್‌ ನಲ್ಲಿ ಲೈಂಗಿಕ ಕಿರುಕುಳ ಆರೋಪ

Kadur: ಅಪ್ರಾಪ್ತ ವಯಸ್ಕ ಬಾಲಕಿಗೆ ಸಲೂನ್‌ ನಲ್ಲಿ ಲೈಂಗಿಕ ಕಿರುಕುಳ ಆರೋಪ

(Expiry Date)ಔಷಧಗಳ ಅವಧಿ ಮುಗಿಯುವ ದಿನಾಂಕ; ರಾಷ್ಟ್ರೀಯ ಫಾರ್ಮಕೋವಿಜಿಲೆನ್ಸ್‌ ಸಪ್ತಾಹ

Expiry Date; ಔಷಧಗಳ ಅವಧಿ ಮುಗಿಯುವ ದಿನಾಂಕ; ರಾಷ್ಟ್ರೀಯ ಫಾರ್ಮಕೋವಿಜಿಲೆನ್ಸ್‌ ಸಪ್ತಾಹ

ಹಿಂದೂ ಕಾರ್ಯಕ್ರಮಗಳಿಗೆ ಹಿಂದೂ ಕಾರ್ಯಕರ್ತರಿಂದ ಕತ್ತಿ ಹಿಡಿದು ಕಾವಲು: ಶ್ರೀರಾಮಸೇನೆ

ಹಿಂದೂ ಕಾರ್ಯಕ್ರಮಗಳಿಗೆ ಹಿಂದೂ ಕಾರ್ಯಕರ್ತರಿಂದಲೇ ಕತ್ತಿ ಹಿಡಿದು ಕಾವಲು: ಶ್ರೀರಾಮಸೇನೆ

Karki Movie Review: ಪ್ರೀತಿ ಅರಮನೆಯಲ್ಲಿ ಜಾತಿ ಸಂಘರ್ಷ

Karki Movie Review: ಪ್ರೀತಿ ಅರಮನೆಯಲ್ಲಿ ಜಾತಿ ಸಂಘರ್ಷ

Shimoga; ಎಲ್ಲರ ಮನ ಗೆದ್ದಿದ್ದ ಇಟ್ಟಿಗೆ ಹಳ್ಳಿಯ ʼ108 ಆಂಬುಲೆನ್ಸ್ʼ ಹೋರಿ ಇನ್ನಿಲ್ಲ…!

Shimoga; ಎಲ್ಲರ ಮನ ಗೆದ್ದಿದ್ದ ಇಟ್ಟಿಗೆ ಹಳ್ಳಿಯ ʼ108 ಆಂಬುಲೆನ್ಸ್ʼ ಹೋರಿ ಇನ್ನಿಲ್ಲ…!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.