Kaup: ಪಾಂಗಾಳದಲ್ಲಿದೆ ಕೋಟಿ ಚೆನ್ನಯರು ಈಜಿದ ಕಟ್ಟಿಕೆರೆ

ಕಳರಿ ತುಳುನಾಡ ಕಲೆ: ಹಲವು ಪುರಾವೆಗಳು ಲಭ್ಯ; ಗದ್ದೆ ನಡುವೆ ಇದೆ ನಾನಯರ ಸಮಾಧಿ

Team Udayavani, Sep 22, 2024, 1:39 PM IST

Kaup: ಪಾಂಗಾಳದಲ್ಲಿದೆ ಕೋಟಿ ಚೆನ್ನಯರು ಈಜಿದ ಕಟ್ಟಿಕೆರೆ

ಕಾಪು: ಪಾಂಗಾಳದ ನಾನಯರ ಗರಡಿಯಲ್ಲಿ  ಕಳರಿ ಸೇರಿದಂತೆ ಸಮರ ಕಲೆಗಳನ್ನು ಅಧ್ಯಯನ ಮಾಡಿದ್ದ  ತುಳುನಾಡಿನ ಅವಳಿ ವೀರರಾದ ಕೋಟಿ-ಚೆನ್ನಯರು ಈಜುತ್ತಿದ್ದರು ಎಂದು ಹೇಳಲಾದ ಕಟ್ಟಿಕೆರೆ ಮತ್ತು ನಾನಯರ ಸಮಾಧಿಗಳು ಈಗಲೂ ಇವೆ. ಇದರ ಜತೆಗೆ  ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಪ್ರಸಿದ್ಧಿ ಪಡೆದಿರುವ ಕಳರಿ ಸಮರಾಭ್ಯಾಸ ಕಲೆಗೆ ತುಳುನಾಡು ಮೂಲವಾಗಿತ್ತು ಎಂಬುದಕ್ಕೆ ಪೂರಕವಾಗಿಯೂ ಕೆಲವು ದಾಖಲೆಗಳು  ಒದಗಿವೆ.

16ನೇ ಶತಮಾನದಲ್ಲಿ ಪಾಂಗಾಳದ ನಾನಯರ ಗುರುಮಠದ ಗುರುಗಳಾದ ಕಿನ್ನಿಂಗದೇವ ನಾನಯರ ಸಲಹೆಯಂತೆ ಅವರ ಶಿಷ್ಯಂದಿರಾದ ಬಲಿಪ ನಾನಯ ಮತ್ತು ಪಿಲಿಪ ನಾನಯ ಅವರು, ಕೋಟಿ-ಚೆನ್ನಯರಿಗೆ  ಯುದ್ಧ ವಿದ್ಯೆಗಳನ್ನು ಕಲಿಸಿದ್ದರು. ತುಳುನಾಡಿನಲ್ಲಿ ಮಲ್ಲ ವಿದ್ಯೆಯನ್ನು ಕಲಿಸುವ ಹಲವಾರು ಗರಡಿಗಳಿದ್ದವು. ಇಲ್ಲಿ ಮೂರು ವರ್ಷದ ತರಬೇತಿ ನೀಡುತ್ತಿದ್ದು ಇದನ್ನು ಕೇರಳದಲ್ಲಿ ತುಳುನಾಡನ್‌ ವಿದ್ಯೆ ಎಂದು ಕರೆಯುತ್ತಿದ್ದರು. ಈ ಮಲ್ಲ ವಿದ್ಯೆಗಳಿಗಾಗಿ ಮಲ್ಲಕಂಬಗಳನ್ನು ಬಳಸಲಾಗುತ್ತಿತ್ತು. ತುಳುನಾಡಿನ ಹಲವಾರು ಗರೋಡಿಗಳಲ್ಲಿ ಕಾಣಸಿಗುವ ಗುರು ಕಂಬಗಳಿಗೂ, ಕಳರಿ ಸಮರಾಭ್ಯಾಸದ ಮಲ್ಲ ಕಂಬಗಳಿಗೂ ಪರಸ್ಪರ ಸಂಬಂಧಗಳಿವೆ.

ಮಲಯಾಳಿ ಸಾಹಿತ್ಯದಲ್ಲೂ ಉಲ್ಲೇಖ: ಮಾರ್ಷಲ್‌ ಆರ್ಟ್‌ಗೆ ಸಮಾನವಾಗಿರುವ ಕಳರಿ ಸಮರ ಕಲೆಯು ನಮ್ಮ ತುಳುನಾಡಿನ ಮೂಲ ಕಲೆ ಎನ್ನುವುದನ್ನು ವಿದೇಶಿ ಸಂಶೋಧಕರೂ ಒಪ್ಪಿಕೊಂಡಿದ್ದಾರೆ. ತುಳುನಾಡಿನಿಂದ ಉತ್ತರ ಕೇರಳಕ್ಕೆ ಹೋಗಿ, ಅಲ್ಲಿಂದ ದಕ್ಷಿಣ ತಮಿಳುನಾಡಿನವರೆಗೂ ವ್ಯಾಪಿಸಿರುವ ಕಳರಿ ಕಲೆಯ ಬಗ್ಗೆ ಈಗಾಗಲೇ ಹಲವಾರು ರೀತಿಯ ಅಧ್ಯಯನಗಳು ನಡೆದಿವೆ. ಬಹುತೇಕ ರಾಜ್ಯಗಳ ಸಂಗಮ ಸಾಹಿತ್ಯಗಳಲ್ಲಿ ಕಳರಿ ವಿದ್ಯೆಗಳ ಬಗ್ಗೆ ಉಲ್ಲೇಖವಿದ್ದು ಮಲಯಾಳಿ ಸಾಹಿತ್ಯಗಳಲ್ಲೂ ಇದರ ಬಗ್ಗೆ ಉಲ್ಲೇಖವಿದೆ ಎನ್ನುತ್ತಾರೆ ಕಳರಿ ಸಮರಾಭ್ಯಾಸದ ಬಗ್ಗೆ ಅಧ್ಯಯನಶೀಲರಾಗಿರುವ ಪತ್ರಕರ್ತ, ಚಿಂತಕ ಶ್ರೀಕಾಂತ್‌ ಶೆಟ್ಟಿ ಕಾರ್ಕಳ. ಈ ನಡುವೆ, ಕಳರಿ ಕಲೆಯೇ ಕರಾಟೆ ಆಗಿರಬಹುದು ಎನ್ನುವ ಒಂದು ವಾದ ಶಶಿಕಾಂತ್‌ ಶೆಟ್ಟಿ ಕಟಪಾಡಿ ಅವರದ್ದು.

ನಾನಯರ ಗರಡಿಯಲ್ಲಿ ಏನೇನಿವೆ?

ಶ್ರೀ ಚಂಡಿಕಾ ಪರಮೇಶ್ವರಿ ದೇವಿ ಇಲ್ಲಿನ ಶಕ್ತಿ ದೇವತೆಯಾಗಿದ್ದು ಗಣಪತಿ, ಬ್ರಹ್ಮ, ವೀರಭದ್ರ, ಈಶ್ವರ, ಕುಮಾರನ್ನೊಳಗೊಂಡ ಪಂಚದೈವಿಕ ಸಾನಿಧ್ಯಗಳಿವೆ. ಕೋಟಿ ಚೆನ್ನಯ್ಯರ ಶಸ್ತ್ರ ತರಬೇತಿ ಗುರುಗಳಾದ ಬಲಿಪ ನಾನಯ ಮತ್ತು ಪಿಲಿಪ ನಾನಯರ ಸಮಾಧಿ, ಕೋಟಿ ಚೆನ್ನಯ್ಯರ ಸಹಿತವಾಗಿ ಅನೇಕರು ಸಾಧನೆಗೈಯ್ಯುತ್ತಿದ್ದ ಕಟ್ಟಿಕೆರೆ ಸದ್ಯಕ್ಕೆ ಇಲ್ಲಿ ತೋರಿ ಬರುತ್ತಿರುವ ಪುರಾವೆಗಳು.

ಗುರು ಸ್ಮರಣೆಗಾಗಿ 66 ಗರಡಿ ನಿರ್ಮಾಣ

ಸಾಯನ ಬೈದ್ಯರ ಸೂಚನೆಯಂತೆ ಕೋಟಿ-ಚೆನ್ನಯ್ಯರಿಗೆ ಪಾಂಗಾಳ ನಾನಯರ ಗರಡಿಯಲ್ಲಿ ಬಲಿಪ ನಾನಯ ಮತ್ತು ಪಿಲಿಪ ನಾನಯರೆಂಬ ಅವಳಿ ಪುರುಷರ ಬಳಿ ಕಳರಿ ವಿದ್ಯೆ ಸಹಿತ ಪರಿಪೂರ್ಣ ಅಂಗ ಸಾಧನೆ ಕಲಿಸಲಾಗುತ್ತದೆ. ಅಲ್ಲಿ ಗುರುಕಾಣಿಕೆ ವಿಷಯ ಬಂದಾಗ ಗುರುಗಳು ನಿರಾಕರಿಸುತ್ತಾರೆ. ಅದಕ್ಕೆ ಪ್ರತಿಯಾಗಿ ಗುರು ವಿದ್ಯೆ ಕಲಿತ ಸ್ಮರಣೆಗಾಗಿ 66 ಗರಡಿ ನಿರ್ಮಿಸುವುದಾಗಿ ಬಲಿಪ ಮತ್ತು ಪಿಲಿಪ ನಾನಯರಿಗೆ ವಾಗ್ಧಾನ ನೀಡುತ್ತಾರೆ. ಮರಣ  ಕಾಲಕ್ಕೆ 66 ಗರಡಿ ನಿರ್ಮಾಣ ಮಾಡುವಂತೆ ಬಲ್ಲಾಳರಿಗೆ ಸೂಚನೆ ನೀಡಿದ್ದು, ಪಾಂಗಾಳ ನಾನಯರ ಗರಡಿಯ ಆಯವನ್ನು ಮಾದರಿಯನ್ನಾಗಿಸಿಕೊಂಡು 66 ಗರಡಿ ನಿರ್ಮಾಣವಾಗಿರುವುದನ್ನು ಸ್ಮರಿಸಿಕೊಳ್ಳಬಹುದಾಗಿದೆ.
-ಸುಧಾಕರ್‌ ಡಿ. ಅಮೀನ್‌, ಪಾಂಗಾಳ ಗುಡ್ಡೆ ಗರಡಿಮನೆ

ಕೇರಳದಲ್ಲಿ 14 ಗ್ರಾಮಗಳು ಉಂಬಳಿ!

ಪಾಂಗಾಳ ನಾನಯರ ಗರಡಿಯಲ್ಲಿ ಕೇರಳದ ವಿದ್ಯಾರ್ಥಿಗಳು ಕೂಡಾ ಕಳರಿ ಕಲಿಯಲು ಬರುತ್ತಿದ್ದರು. ಇದಕ್ಕೆ ಪ್ರತಿಯಾಗಿ ಕೇರಳದ ಅಲೆಪ್ಪಿ ಜಿಲ್ಲೆಯ ಮುದ್ದು ಕುಳಂ, ಚಂಬ ಕುಳಂ ಸಹಿತ 14 ಗ್ರಾಮಗಳನ್ನು ಗುರುದಕ್ಷಿಣೆ ರೂಪದಲ್ಲಿ ನಾನಯರ ಕುಟುಂಬಸ್ಥರಿಗೆ ಉಂಬಳಿ ರೂಪದಲ್ಲಿ ಬಿಡಲಾಗಿತ್ತು. ಅದರಲ್ಲಿ ಮುದ್ದು ಕುಳಂ, ಚಂಬ ಕುಳಂನ ಜಮೀನು ಉಳುವನೇ ಹೊಲದೊಡೆಯ ಕಾನೂನಿನಲ್ಲಿ ಕಳೆದುಹೋಗಿದೆ, ಮುದ್ದು ಕುಳಂನಲ್ಲಿ ಗುರು ಮಠ, ಮನೆ ಮತ್ತು ಪಾಂಗಾಳದಿಂದ ಕೊಂಡೊಯ್ದು ಪ್ರತಿಷ್ಠಾಪಿಸಲಾಗಿರುವ ವೀರಭದ್ರ ದೇವಸ್ಥಾನದಲ್ಲಿ ಈಗಲೂ ಆರಾಧನೆ ನಡೆಯುತ್ತಿದೆ. ನಾನಯ ಕುಟುಂಬದ ಸದಸ್ಯರು ಈಗಲೂ ಮಠದಲ್ಲಿ ವಾಸವಿದ್ದಾರೆ ಎನ್ನುತ್ತಾರೆ ಪಾಂಗಾಳದ ನಾನಯರ ಗರಡಿಯ ಕರುಣಾಕರ ಶೆಟ್ಟಿ.

-ರಾಕೇಶ್‌ ಕುಂಜೂರು

ಟಾಪ್ ನ್ಯೂಸ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

5

Kaup: ಶಿಲಾಮಯ ಗುಡಿಯ ಮೆರುಗು ಹೆಚ್ಚಿಸಿದ ಕಾರ್ಕಳ, ಸಿರಾದ ಕಲ್ಲು

4(1

Manipal: ನಮ್ಮ ಸಂತೆಯಲ್ಲಿ ಜನ ಸಾಗರ

Namma-SANTHE-1

Manipal: ನಮ್ಮ ಸಂತೆಗೆ ಎರಡನೇ ದಿನವೂ ಅಭೂತಪೂರ್ವ ಸ್ಪಂದನೆ: ಇಂದೇ ಕೊನೆಯ ದಿನ

8

Karkala: ಚಾರ್ಚ್‌ಗಿಟ್ಟ ಮೊಬೈಲ್‌ ಸ್ಫೋ*ಟ; ಮನೆಗೆ ಬೆಂಕಿ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.