“ಕೆಟಮಿನ್’ನಿಂದ ಖಿನ್ನತೆ ಶಮನ? ಮಾನಸಿಕ ಸಮಸ್ಯೆಗೆ ಅರಿವಳಿಕೆ ಔಷಧದಿಂದ ಚಿಕಿತ್ಸೆ
ಮ್ಯಾಡಿಸನ್ ವಿವಿ ಸಂಶೋಧಕರ ಅಧ್ಯಯನ
Team Udayavani, Feb 6, 2022, 7:40 AM IST
ವಾಷಿಂಗ್ಟನ್: ಖಿನ್ನತೆ, ಛಿದ್ರಮನಸ್ಕತೆ ಮುಂತಾದ ಮನೋವ್ಯಾಧಿಗಳಿಗೆ ಅರಿವಳಿಕೆ ಔಷಧ “ಕೆಟಮಿನ್’ ರಾಮಬಾಣವಾಗಲಿದೆಯೇ? ಅಮೆರಿಕದ ವಿಸ್ಕನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾನಿಲಯದ ಸಂಶೋಧಕರು ನಡೆಸಿದ ಅಧ್ಯಯನವು ಇಂಥದ್ದೊಂದು ನಿರೀಕ್ಷೆಯನ್ನು ಹುಟ್ಟುಹಾಕಿದೆ.
ಸಾಮಾನ್ಯವಾಗಿ ಊಹೆಗಳು ನಮ್ಮ ವರ್ತನೆಯನ್ನು ಬದಲಾಯಿಸುತ್ತವೆ. ಬೊಗಳುವ ಶಬ್ದ ಕೇಳಿದೊಡನೆ, ನಮ್ಮ ಕಣ್ಣಮುಂದೆ ನಾಯಿಯ ಆಕೃತಿ ಕಾಣಿಸುತ್ತದೆ. ಮಾನವನ ಮೆದುಳು ಕಾರ್ಯನಿರ್ವಹಿಸುವ ಬಗೆಯೇ ಹೀಗೆ.
ಊಹೆಯು ಹೇಗೆ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಅರಿಯಲು 32 ಮಂದಿಯ ಮೇಲೆ ಅಧ್ಯಯನ ನಡೆಸಲಾಗಿದೆ. ನಂತರ, ಅರಿವಳಿಕೆ ಔಷಧವಾದ ಕೆಟಮಿನ್ ಡೋಸ್ ಅನ್ನು ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಅವರಿಗೆ ನೀಡಿದಾಗ, ಅವರ ಊಹೆಯ ಮಟ್ಟ ಹೇಗೆ ಬದಲಾಗುತ್ತದೆ ಎಂಬುದನ್ನು ಕಂಡುಕೊಳ್ಳಲಾಗಿದೆ.
ಇದನ್ನೂ ಓದಿ:ಅಕ್ರಮ ಸ್ಪಾಗಳ ಮೇಲೆ ಸಿಸಿಬಿ ದಾಳಿ : ಇಬ್ಬರ ಬಂಧನ, 13 ಮಹಿಳೆಯರ ರಕ್ಷಣೆ
ಖಿನ್ನತೆ ಮತ್ತು ಸ್ಕಿಝೋಫ್ರೆನಿಯಾ ಸೇರಿದಂತೆ ಕೆಲವು ಮಾನಸಿಕ ಕಾಯಿಲೆಗಳು ಇರುವವರಲ್ಲಿ ಊಹೆಯ ಸಾಮರ್ಥ್ಯ ತಗ್ಗಿರುತ್ತದೆ. ಹೀಗಾಗಿ, ತಮಗೇನೋ ಕೆಟ್ಟದಾಗುತ್ತದೆ ಅಥವಾ ಅನಾಹುತವೊಂದು ನಡೆಯುತ್ತದೆ ಎಂಬಂಥ ಭ್ರಮೆ ಅವರನ್ನು ಆವರಿಸಿರುತ್ತದೆ. ಇಂತಹ ಬ್ರಾಂತಿಯಿಂದ ಅವರನ್ನು ಹೊರತರಲು, ಖಿನ್ನತೆಯನ್ನು ಉಪಶಮನಗೊಳಿಸಲು ಈ ಕೆಟಮಿನ್ ಅನ್ನು ಬಳಸಬಹುದು ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಖಿನ್ನತೆಯುಳ್ಳ ರೋಗಿಗಳಲ್ಲಿನ ನೆಗೆಟಿವ್ ಊಹೆಗಳನ್ನು ಬ್ಲಾಕ್ ಮಾಡುವಲ್ಲಿ ಕೆಟಮಿನ್ ಪ್ರಮುಖ ಪಾತ್ರ ವಹಿಸಲಿದೆ ಎನ್ನುತ್ತಾರೆ ಮ್ಯಾಡಿಸನ್ ವಿವಿಯ ಪ್ರೊಫೆಸರ್ ಯೂರಿ ಸಾಲ್ಮನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Iran ಸರ್ವೋಚ್ಚ ನಾಯಕನ ಕೈಯಲ್ಲಿ ರೈಫಲ್!; ಇಸ್ರೇಲ್ ದೀರ್ಘಕಾಲ ಉಳಿಯುವುದಿಲ್ಲ..
Hashem Safieddine: ಹಿಜ್ಬುಲ್ಲಾ ಉತ್ತರಾಧಿಕಾರಿಯನ್ನು ಹೊಡೆದುರುಳಿಸಿತಾ ಇಸ್ರೇಲ್?
Hindu ಸಂತರು ಗೋ ಮಾಂಸ ತಿನ್ನುತ್ತಾರೆ: ಪಾಕಿಸ್ಥಾನದಲ್ಲಿ ಝಾಕಿರ್ ನಾಯ್ಕ
Strikes again; ಲೆಬನಾನ್,ಗಾಜಾ ಮೇಲೆ ಮತ್ತೆ ಮುಗಿಬಿದ್ದ ಇಸ್ರೇಲ್:40ಕ್ಕೂ ಹೆಚ್ಚು ಸಾ*ವು
Israel ವೈಮಾನಿಕ ದಾಳಿಗೆ ಗಾಜಾದ ಹಮಾಸ್ ಮುಖ್ಯಸ್ಥ ಮುಶ್ತಾನಾ ಸೇರಿ ಮೂವರು ಸಾವು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Prophet Hate Speech; ಯತಿ ನರಸಿಂಹಾನಂದ ಸರಸ್ವತಿ ಯುಪಿ ಪೊಲೀಸರ ವಶಕ್ಕೆ
Theft Case: ಬ್ಯಾಂಕಿನಿಂದ ಹಣದ ಬ್ಯಾಗ್ ಕಳವು ಪ್ರಕರಣ
Exit poll results; ಹರಿಯಾಣದಲ್ಲಿ ಕೈಗೆ ಅಧಿಕಾರ, ಜಮ್ಮು ಮತ್ತು ಕಾಶ್ಮೀರ ಅತಂತ್ರ?
Manvi: ವಿಪಕ್ಷಗಳ ಬೆದರಿಕೆಗಳಿಗೆ ಜಗ್ಗಲ್ಲ, ಜನರಿಗಾಗಿ ಹೋರಾಟ ಮುಂದುವರಿಸುವೆ: ಸಿದ್ದರಾಮಯ್ಯ
ನಾಡೋಜ ಜಿ. ಶಂಕರ್ 69ನೇ ಹುಟ್ಟು ಹಬ್ಬ: ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.