![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Apr 9, 2022, 6:14 PM IST
ರಬಕವಿ-ಬನಹಟ್ಟಿ : ತಾಲೂಕಿನ ಹಿಪ್ಪರಗಿ ಸೇತುವೆ ಕೆಳಭಾಗದಲ್ಲಿ ಕೃಷ್ಣಾ ನದಿ ಸಂಪೂರ್ಣ ಬರಿದಾಗುತ್ತಿದ್ದು, ನದಿ ಅಕ್ಕಪಕ್ಕದ ಜನರಿಗೆ ನೀರಿನ ಅಭಾವದ ಶಂಕೆ ಮೂಡಿ ಆತಂಕ ಪಡುವಂತಾಗಿದೆ.
ಕೃಷ್ಣೆಯನ್ನೇ ನಂಬಿದ ರಬಕವಿ ಬನಹಟ್ಟಿ, ಜಮಖಂಡಿ ಹಾಗೂ ಅಥಣಿ ತಾಲೂಕಿನ ನೂರಾರು ಹಳ್ಳಿಗಳು ಸಾವಿರಾರು ಏಕರೆ ಜಮೀನಿಗೆ ಈ ನದಿಯೇ ಜೀವನದಿಯಾಗಿದೆ. ಇನ್ನೂ ಖಾಲಿಯಾಗುವ ಲಕ್ಷಣಗಳು ಗೋಚರಿಸುತ್ತಿರುವುದರಿಂದ ಈ ಭಾಗದ ರೈತರಲ್ಲಿ ಆತಂಕದ ಚಾಯೆ ಮೂಡಿದೆ.
ಈಗತಾನೇ ಕಬ್ಬು ಕಟಾವು ಮುಗಿದು ಕುಳೆ ಬೆಳೆಗಳು ಚಿಗುರುತ್ತಿವೆ. ಈಗ ನದಿಯಲ್ಲಿ ನೀರು ಕಡಿಮೆಯಾದರೆ ಬೆಳೆಗಳು ಒಣಗುತ್ತವೆ ಎಂಬ ಭಯ ಶುರುವಾಗಿದೆ. ಆದರೆ ಅಧಿಕಾರಿಗಳು ಹೇಳುವಂತೆ ಈ ಬಾರಿ ಬೇಸಿಗೆಯಲ್ಲಿ ನೀರಿನ ಯಾವುದೇ ಅಭಾವವಾಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಆದರೂ ಬೆಸಿಗೆಯಲ್ಲಿನ ಬೆಳೆಗಳಾದ ಶೇಂಗಾ, ಮೆಕ್ಕೆಜೋಳ ಈಗ ತೆನೆಗಟ್ಟುತ್ತಿವೆ ಈಗ ನೀರಿನ ತೊಂದರೆಯಾದರೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗುತ್ತದೆ.
ಹಿಪ್ಪರಗಿ ಸೇತುವೆಯ ಒಟ್ಟು ನೀರಿನ ಸಾಮರ್ಥ್ಯ 6 ಟಿಎಂಸಿ. ಆದರೆ ಈಗ 5.16 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಸೇತುವೆ ಮೇಲ್ಬಾಗದ ಜನರಿಗೆ ಬೇಸಿಗೆ ಮುಗಿಯುವ ವರೆಗೂ ನಿರಿನ ಅಭಾವವಾಗಲು ಸಾಧ್ಯವಿಲ್ಲ ಎನ್ನುತ್ತಾರೆ ನೀರಾವರಿ ಇಲಾಖೆಯ ಅಧಿಕಾರಿ ವಿಠ್ಠಲ ನಾಯಕ್.
ಇದನ್ನೂ ಓದಿ : ಕೆನಡಾದಲ್ಲಿ ನಡೆದ ಗುಂಡಿನ ದಾಳಿಗೆ ಭಾರತೀಯ ವಿದ್ಯಾರ್ಥಿ ಸಾವು
ಜಲಾಶಯದ ಮುಂಬದಿಯಲ್ಲಿ ನೀರು ಖಾಲಿಯಾದ ಕಾರಣ ಈ ಭಾಗದ ಹಳ್ಳಿಗಳ ರೈತರು ಜಲಾಶಯದಿಂದ 1 ಟಿಎಂಸಿ ಯಷ್ಟಾದರೂ ನೀರನ್ನು ಕೆಳಾಬಾಗಕ್ಕೆ ಬಿಡಲು ಮನವಿ ಮಾಡಲಾಗಿದೆ. ನೀರು ಬಿಟ್ಟರೆ ಅದು ಚಿಕ್ಕಪಡಸಲಗಿ ಬ್ಯಾರೇಜ್ವರೆಗೂ ಹೋಗಿ ಸಂಗ್ರಹವಾಗುತ್ತದೆ. ಇದರಿಂದ ಈ ಭಾಗದ ರೈತರಿಗೂ ನೀರಿನ ಯಾವುದೇ ತೊಂದರೆಯಾಗುವುದಿಲ್ಲ ಎನ್ನುತ್ತಾರೆ ತುಬಚಿ ಗ್ರಾಮದ ರೈತರಾದ ಸುರೇಶಗೌಡ ಪಾಟೀಲ.
ರಬಕವಿ ಬನಹಟ್ಟಿ ನಗರಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಜಕ್ವೆಲ್ ಇರುವ ಮಹೀಷವಾಡಗಿ ಸೇತುವೆಯಲ್ಲಿ ಎರಡು ಟಿಎಂಸಿ ನೀರು ಸಂಗ್ರಹವಿದ್ದು, ಬೇಸಿಗೆ ಕಾಲ ಮುಗಿಯುವವರೆಗೂ ಈ ಬಾರಿ ಕುಡಿಯುವ ನೀರಿನ ಯಾವುದೇ ತೊಂದರೆಯಾಗುವುದಿಲ್ಲ ಎಂದು ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ ತಿಳಿಸಿದರು.
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.