Krishna Story: ಕೃಷ್ಣ-ಕುಚೇಲರ ಬಂಧುತ್ವ-ಗುರು ಸ್ಮರಣೆ

ಮನೆಗೆ ಬಂದ ಗೆಳೆಯ ಕುಚೇಲನನ್ನು ಶ್ರೀ ಕೃಷ್ಣ ವಿವಿಧ ರೀತಿಯಲ್ಲಿ ಉಪಚರಿಸಿ, ಗುರುಕುಲ ವಾಸಾನಂತರದ ವಿವರಗಳನ್ನು ಕೇಳುವನು

Team Udayavani, Aug 26, 2024, 6:11 AM IST

Krishna-Kuchela-

ಎಳೆಯ ವಯಸ್ಸಿನಲ್ಲಿ ಒಡನಾಡಿದವರು ಬಹುಕಾಲ ಕಳೆದ ಮೇಲೆ ಪುನಃ ಪರಸ್ಪರರನ್ನು ಕಾಣುವ ಸಂದರ್ಭ ಬಂದಲ್ಲಿ ಅವರಿಗೆ ಆಗುವ ಸಂತೋಷ ವಿಶೇಷವಾದುದು. ಬಾಲ್ಯದ ಒಡನಾಟದಲ್ಲಿ ಒದಗಿದ ವಿಶೇಷ ವಿಷಯಗಳು ಇಬ್ಬರಿಗೂ ನೆನಪಿಗೆ ಬಂದು ಅವರ ಮನಸ್ಸುಗಳನ್ನು ಆನಂದವಾಗಿಸುತ್ತವೆ-ಆರ್ದ್ರ ವಾಗಿಸುತ್ತವೆ.

ಶ್ರೀ ಕೃಷ್ಣನ ಜೀವನದಲ್ಲೂ ಹೀಗಾಯಿತು… ಭಾಗವತ ಪುರಾಣದಲ್ಲಿ ಅದನ್ನು ಬಲು ಸುಂದರವಾಗಿ ವರ್ಣಿಸಲಾಗಿದೆ.
ಶ್ರೀ ಕೃಷ್ಣ-ಕುಚೇಲರ ಗೆಳೆತನದ ಕಥೆ ನಮಗೆ ತಿಳಿದಿದೆ. ಮನೆಗೆ ಬಂದ ಗೆಳೆಯ ಕುಚೇಲನನ್ನು ಶ್ರೀ ಕೃಷ್ಣ ವಿವಿಧ ರೀತಿಯಲ್ಲಿ ಉಪಚರಿಸಿ, ಗುರುಕುಲ ವಾಸಾನಂತರದ ವಿವರಗಳನ್ನು ಕೇಳುತ್ತಾನೆ. ಮದುವೆ, ಮಡದಿ, ಮಕ್ಕಳು, ನಿತ್ಯಜೀವನದ ಪ್ರಶ್ನೆಗ ಳಾದ ಮೇಲೆ ಕೃಷ್ಣನೇ ಆ ಕಾಲದ ನೆನಪನ್ನು ಕೆದಕಿ ಹೇಳುತ್ತಾನೆ.

“ಮಿತ್ರಾ, ಅದೊಂದು ದಿನ ಗುರುಪತ್ನಿಯ ಮಾತಿನಂತೆ ಸೌದೆ ತರಲು ನಾವು ಕಾಡಿಗೆ ಹೋದೆವಷ್ಟೆ. ನಾವು ಕಾಡಿನಲ್ಲಿರುವಾಗಲೇ ಗಾಳಿ ಮಳೆ ಆರಂಭವಾಗಿ ತೊಯ್ದು ಹೋದೆವು. ದಾರಿ ಕಾಣದಾಯಿತು. ಕತ್ತಲಾಯಿತು. ಮಳೆಯ ಬಿರುಸು ಜೋರಾಗಿ ನಾವಿಬ್ಬರೂ ಕೈ ಕೈ ಹಿಡಿದುಕೊಂಡು ಏನನ್ನೂ ಕಾಣದೆ ತೊಳಲಿದೆವು.

ನೀರಿನಲ್ಲಿ ಮುಳುಗಿ ಏಳುತ್ತಾ ಕೈ ಬಿಡದೇ ದಾರಿ ತಿಳಿಯದೇ ಕಾಡಿನಲ್ಲಿಯೇ ಉಳಿದೆವು. ಆಶ್ರಮದಲ್ಲಿ$ಗುರುಗಳಿಗೆ ಚಿಂತೆಯಾಗಿ ಉದಯಕಾಲದಲ್ಲಿ ನಮ್ಮನ್ನು ಹುಡುಕಿ ಕಾಣದೆ ಬೊಬ್ಬಿ ಟ್ಟು ಕರೆದು ಕೊನೆಗೂ ಕಾಡಿನಲ್ಲಿದ್ದ ನಮ್ಮನ್ನು ಸೇರಿದರು. “ಮಕ್ಕಳೇ ಎಂದು ನಮ್ಮನ್ನು ಪ್ರೀತಿಯಿಂದ ತಬ್ಬಿಕೊಂಡು ಆಶ್ರಮಕ್ಕೆ ಕರೆದುಕೊಂಡು ಬಂದು ಉಪಚರಿಸಿದರು. ನಾವು ಕಾಡಿನಲ್ಲಿದ್ದಾಗ ಅವರಿಗಾಗಿದ್ದ ಚಿಂತೆಯೆಷ್ಟು? ನಾವು ದೊರಕಿದ ಮೇಲಾದ ಸಂತೋಷವೆಷ್ಟು! ಇಂತಹ ಗುರುಗಳೇ ಅಲ್ಲವೆ ನಿಜವಾದ ಪಾಲಕ, ಪೋಷಕ, ಮಾರ್ಗದರ್ಶಕರು?’

ಹನಿಗಣ್ಣಾಗಿ ಕೃಷ್ಣ ಹೇಳಿದ್ದನ್ನು ಅದೇ ಸ್ಥಿತಿಯಲ್ಲಿ ಕುಚೇಲನೂ ಕೇಳಿದನಂತೆ. ಬಾಲ್ಯದ ನೆನಪಿನೊಂದಿಗೆ ಗುರುವಿನ ಮಾತೃ ಹೃದಯದ ಸ್ಮರಣೆಯೂ ಶ್ರೀ ಕೃಷ್ಣನ ಈ ಕಥೆಯಲ್ಲಿದೆ. ಬಾಲ್ಯದ ಸ್ನೇಹಿತ ಕುಚೇಲನಿಂದ ಮುಷ್ಠಿ ಅವಲಕ್ಕಿ ತಿಂದು ಅವನಿಗೆ ತಿಳಿಯದಂತೆಯೇ ಶ್ರೀಮಂತನನ್ನಾಗಿ ಮಾಡಿ ಅನುಗ್ರಹಿಸಿ, ತಾನೂ ಆತನೂ ಗುರುಬಂಧುಗಳಾಗಿದ್ದುಕೊಂಡು ಕಳೆದ ದಿನಗಳನ್ನು ಮೆಲುಕು ಹಾಕಿರುವುದು ಶ್ರೀ ಕೃಷ್ಣನ ಹಿರಿಮೆ. ಶ್ರೀ ಕೃಷ್ಣನ ಮಹಿಮೆ ಜನಜೀವನದಲ್ಲಿಯೂ ಹೇಗೆ ಉಳಿದುಕೊಂಡಿದೆ ಎನ್ನುವುದಕ್ಕೆ ಗುಜರಾತಿನಲ್ಲಿ ಸುಧಾಮ(ಕುಚೇಲ)ನ ಗುಡಿಯಿದೆ. ಅಲ್ಲಿ ಅವಲಕ್ಕಿಯೇ ಪ್ರಸಾದ. ಶ್ರೀ ಕೃಷ್ಣನಿಗೆ ಕುಚೇಲ ನೀಡಿದ್ದು ಅವಲಕ್ಕಿಯೇ ಅಲ್ಲವೆ?!.

-ಡಾ| ಪಾದೇಕಲ್ಲು ವಿಷ್ಣು ಭಟ್ಟ ವಿದ್ವಾಂಸರು, ಉಡುಪಿ

ಟಾಪ್ ನ್ಯೂಸ್

Nagamangala Case ದುಷ್ಕರ್ಮಿಗಳ ರಕ್ಷಣೆ: ತೇಜಸ್ವಿ ಸೂರ್ಯ

Nagamangala Case ದುಷ್ಕರ್ಮಿಗಳ ರಕ್ಷಣೆ: ತೇಜಸ್ವಿ ಸೂರ್ಯ

ಎಚ್‌ಡಿಕೆಯನ್ನೇ ತನಿಖಾಧಿಕಾರಿ ಮಾಡಿ: ಶಾಸಕ ಬಾಲಕೃಷ್ಣ ಲೇವಡಿ

Ramanagara: ಎಚ್‌ಡಿಕೆಯನ್ನೇ ತನಿಖಾಧಿಕಾರಿ ಮಾಡಿ: ಶಾಸಕ ಬಾಲಕೃಷ್ಣ ಲೇವಡಿ

Nagamangala ಅಳಿಯನ ಬಂಧನದ ನೋವಿನಲ್ಲಿ ಸೋದರ ಮಾವ ಸಾವು

Nagamangala ಅಳಿಯನ ಬಂಧನದ ನೋವಿನಲ್ಲಿ ಸೋದರ ಮಾವ ಸಾವು

BJP ಕಾಲದ ಹಗರಣ: ಪರಂ ಸಮಿತಿ ಮೊದಲ ಸಭೆ: 21 ಹಗರಣಗಳ ಜತೆ ಮತ್ತೆ ಏಳೆಂಟು ಸೇರ್ಪಡೆ ಸಾಧ್ಯತೆ

BJP ಕಾಲದ ಹಗರಣ: ಪರಂ ಸಮಿತಿ ಮೊದಲ ಸಭೆ: 21 ಹಗರಣಗಳ ಜತೆ ಮತ್ತೆ ಏಳೆಂಟು ಸೇರ್ಪಡೆ ಸಾಧ್ಯತೆ

bjValmiki Corporation Scam ಯತ್ನಾಳ್‌, ಜಾರಕಿಹೊಳಿ ನೇತೃತ್ವದ ತಂಡ ರಾಜಭವನಕ್ಕೆValmiki Corporation Scam ಯತ್ನಾಳ್‌, ಜಾರಕಿಹೊಳಿ ನೇತೃತ್ವದ ತಂಡ ರಾಜಭವನಕ್ಕೆ

Valmiki Corporation Scam ಯತ್ನಾಳ್‌, ಜಾರಕಿಹೊಳಿ ನೇತೃತ್ವದ ತಂಡ ರಾಜಭವನಕ್ಕೆ

CM ಗಾದಿ ಆಕಾಂಕ್ಷಿಗಳ ಜತೆಗೆ ಸಿದ್ದರಾಮಯ್ಯ ಉಪಾಹಾರ ಕೂಟ

CM ಗಾದಿ ಆಕಾಂಕ್ಷಿಗಳ ಜತೆಗೆ ಸಿದ್ದರಾಮಯ್ಯ ಉಪಾಹಾರ ಕೂಟ

Court-Symbol

Court Order: ಲೈಂಗಿಕ ದೌರ್ಜನ್ಯ ಸಾಬೀತು; 70 ವರ್ಷದ ವೃದ್ಧನಿಗೆ 20 ವರ್ಷ ಜೈಲು ಶಿಕ್ಷೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 9ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 9ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 10ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 10ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 11ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 11ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 12ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 12ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 13ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 13ನೇ ರೀಲ್ಸ್ ಪ್ರಸಾರ

MUST WATCH

udayavani youtube

ಉಡುಪಿ ಕೃಷ್ಣ ಮಠದಲ್ಲಿರುವ ಸುಬ್ರಹ್ಮಣ್ಯ ಸನ್ನಿಧಿ

udayavani youtube

ಕೃಷ್ಣ ಮಠದ ಗಣಪತಿ ವಿಸರ್ಜನೆ ವೇಳೆ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿದ ಭಕ್ತರು|

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

ಹೊಸ ಸೇರ್ಪಡೆ

Nagamangala Case ದುಷ್ಕರ್ಮಿಗಳ ರಕ್ಷಣೆ: ತೇಜಸ್ವಿ ಸೂರ್ಯ

Nagamangala Case ದುಷ್ಕರ್ಮಿಗಳ ರಕ್ಷಣೆ: ತೇಜಸ್ವಿ ಸೂರ್ಯ

ಎಚ್‌ಡಿಕೆಯನ್ನೇ ತನಿಖಾಧಿಕಾರಿ ಮಾಡಿ: ಶಾಸಕ ಬಾಲಕೃಷ್ಣ ಲೇವಡಿ

Ramanagara: ಎಚ್‌ಡಿಕೆಯನ್ನೇ ತನಿಖಾಧಿಕಾರಿ ಮಾಡಿ: ಶಾಸಕ ಬಾಲಕೃಷ್ಣ ಲೇವಡಿ

Nagamangala ಅಳಿಯನ ಬಂಧನದ ನೋವಿನಲ್ಲಿ ಸೋದರ ಮಾವ ಸಾವು

Nagamangala ಅಳಿಯನ ಬಂಧನದ ನೋವಿನಲ್ಲಿ ಸೋದರ ಮಾವ ಸಾವು

BJP ಕಾಲದ ಹಗರಣ: ಪರಂ ಸಮಿತಿ ಮೊದಲ ಸಭೆ: 21 ಹಗರಣಗಳ ಜತೆ ಮತ್ತೆ ಏಳೆಂಟು ಸೇರ್ಪಡೆ ಸಾಧ್ಯತೆ

BJP ಕಾಲದ ಹಗರಣ: ಪರಂ ಸಮಿತಿ ಮೊದಲ ಸಭೆ: 21 ಹಗರಣಗಳ ಜತೆ ಮತ್ತೆ ಏಳೆಂಟು ಸೇರ್ಪಡೆ ಸಾಧ್ಯತೆ

indian-flag

South Asia ಆ್ಯತ್ಲೆಟಿಕ್ಸ್‌ : ರಿಲೇಯಲ್ಲಿ ಭಾರತಕ್ಕೆ ಚಿನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.