Kumbale: ಕೊಲ್ಲಿಗೆ ಪರಾರಿಯಾದ 6 ಮಂದಿ ವಿರುದ್ಧ ರೆಡ್ ಕಾರ್ನರ್ ನೋಟಿಸ್
ಕೊಲ್ಲಿ ಉದ್ಯೋಗಿಯ ಊರಿಗೆ ಕರೆಸಿ, ಅಪಹರಿಸಿ ಕೊಲೆಗೈದ ಪ್ರಕರಣ
Team Udayavani, Oct 23, 2024, 12:23 AM IST
ಕುಂಬಳೆ: ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ತರ್ಕದ ವಿಷಯದಲ್ಲಿ ಕೊಲ್ಲಿ ಉದ್ಯೋಗಿಯನ್ನು ಊರಿಗೆ ಕರೆಸಿ, ಅಪಹರಿಸಿ ಕೊಲೆಗೈದ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮುಖ್ಯ ಆರೋಪಿ ಸಹಿತ ಆರು ಮಂದಿ ವಿರುದ್ಧ ಕ್ರೈಂ ಬ್ರಾಂಚ್ ತನಿಖೆ ತೀವ್ರಗೊಳಿಸಿದೆ.
ಕ್ರೈಂಬ್ರಾಂಚ್ ಕಾಸರಗೋಡು ಯೂನಿಟ್ ಡಿವೈಎಸ್ಪಿ ಪಿ. ಮಧುಸೂದನನ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. ತನಿಖೆ ಅಂಗವಾಗಿ ಯುವಕನನ್ನು ಅಪಹರಿಸಲು ಉಪಯೋಗಿಸಿದ ಕಾರನ್ನು ಪೈವಳಿಕೆಯಿಂದ ಪತ್ತೆ ಹಚ್ಚಲಾಗಿದೆ. ಈ ಕಾರು ಮುಖ್ಯ ಆರೋಪಿ ಅಸ್ಕರ್ ಅಲಿಯ ಮಾಲಕತ್ವದಲ್ಲಿದೆ. ಕಾರಿನ ವಾರಸುದಾರ ಅಸ್ಕರ್ ಅಲಿ ಸಹಿತ ಆರು ಮಂದಿ ಕೊಲ್ಲಿಯಲ್ಲಿರುವುದಾಗಿ ತನಿಖಾ ತಂಡಕ್ಕೆ ಮಾಹಿತಿ ಲಭಿಸಿದೆ. ಇವರನ್ನು ಊರಿಗೆ ತಲುಪಿಸಲು ರೆಡ್ ಕಾರ್ನರ್ ನೋಟಿಸ್ ಕಳುಹಿಸುವ ಅಂತಿಮ ಕ್ರಮದಲ್ಲಿದೆ.
ನೋಟಿಸ್ ಹೊರಡಿಸಿದ ಬಳಿಕ ಇಂಟರ್ಪೋಲ್ ಸಹಾಯದೊಂದಿಗೆ ಆರೋಪಿಯನ್ನು ಬಂಧಿಸಲು ಸಾಧ್ಯವಾಗಲಿದೆ. 2022ರ ಜೂನ್ 26ರಂದು ಪುತ್ತಿಗೆ ಮುಗು ರೋಡ್ನ ಅಬೂಬಕ್ಕರ್ ಸಿದ್ದಿಕ್ ಅವರನ್ನು ಕೊಲ್ಲಿಯಿಂದ ಕರೆಸಿ ಪೈವಳಿಕೆಯ ಜನವಾಸವಿಲ್ಲದ ಮನೆಯೊಂದರಲ್ಲಿ ಕೂಡಿ ಹಾಕಿ ಕೊಲೆಗೈದಿರುವುದಾಗಿ ಪ್ರಕರಣ ದಾಖಲಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaladevi Temple: ಹೈಕೋರ್ಟ್ ತಡೆಯಾಜ್ಞೆ ಆದೇಶಕ್ಕೆ ಆಡಳಿತ ಮಂಡಳಿಯಿಂದ ಅರ್ಜಿ
Manipal: ಅನ್ನನಾಳ ರಂಧ್ರ ಸಮಸ್ಯೆಗೆ ನವೀನ ಎಂಡೋಸ್ಕೋಪಿಕ್ ಚಿಕಿತ್ಸೆ
Mangaluru: ರೈಲು ಹಳಿ ಮೇಲೆ ಕಲ್ಲಿಟ್ಟ ಆರೋಪಿಗಳ ತಕ್ಷಣ ಬಂಧಿಸಿ: ಸಂಸದ ಕ್ಯಾ. ಚೌಟ ಆಗ್ರಹ
Organaisation: ಅಮೆರಿಕದಲ್ಲಿ ಆರೆಸ್ಸೆಸ್ ಸಂಘಟನೆಗೆ ಉತ್ತಮ ಸ್ಪಂದನೆ: ವಿಪುಲ್ ರೈ
Costal: ಡ್ರಗ್ಸ್ ಮಟ್ಟ ಹಾಕಲು ಕಾನೂನು ಬದಲಾವಣೆ ಚರ್ಚೆ: ಎಂಎಲ್ಸಿ ಮಂಜುನಾಥ ಭಂಡಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.