La Tomatina: ಏನಿದು ಲಾ ಟೊಮಾಟಿನಾ ಹಬ್ಬ…ಈ ಹಬ್ಬದ ವಿಶೇಷತೆ ಏನು ಗೊತ್ತಾ?


Team Udayavani, Oct 18, 2024, 6:35 PM IST

3

ಮೊದಲೆಲ್ಲಾ ಒಂದು ಪದ್ದತಿಯಿತ್ತು. ಊರಲ್ಲಿ ಯಾರಾದರು ಮಾಡಬಾರದ ಅಪರಾಧವನ್ನು ಮಾಡಿದರೆ ಒಂದಾ ಅವರ ತಲೆ ಬೋಳಿಸಿ ಊರಲ್ಲಿ ಮೆರವಣಿಗೆ ನಡೆಸುತ್ತಿದ್ದರು, ಇಲ್ಲಾ ಅವರನ್ನು ಕತ್ತೆಯ ಮೇಲೆ ಕೂರಿಸಿ ಮೊಟ್ಟೆಯಿಂದ ಹೊಡೆಯುತ್ತಿದ್ದರು. ಅಂತಹ ಅವಮಾನ ನಡೆದರೆ ಆ ವ್ಯಕ್ತಿಗೆ ಬದುಕುವುದೇ ಬೇಡವೆನ್ನುವಷ್ಟು ಜೀವನದಲ್ಲಿ ಜಿಗುಪ್ಸೆ ಮೂಡುವುದು ಸಹಜ. ಒಟ್ಟಾರೆ ಟೊಮ್ಯಾಟೋ ಕೂಡಾ ಈ ಅವಮಾನ ಮಾಡೋ ಕಾರ್ಯದಲ್ಲಿ ಒಂದು ಪಾತ್ರ ವಹಿಸುವುದಂತೂ ಸುಳ್ಳಲ್ಲ. ಆದರೆ ಇಲ್ಲೊಂದು ಕಡೆ ಟೊಮೆಟೋ ವನ್ನು ಒಬ್ಬರ ಮೇಲೆ ಮತ್ತೊಬ್ಬರು ಎಸೆಯುವುದನ್ನೇ ಹಬ್ಬವಾಗಿ ಆಚರಿಸುತ್ತಾರೆ. ಇಲ್ಲಿ ಟೊಮೆಟೋ ಹೊಡೆಸಿಕೊಳ್ಳುವುದು ಅಪರಾಧಕ್ಕಲ್ಲಾ, ಇದು ಅವಮಾನವೂ ಅಲ್ಲ. ಹಾಗಾದರೆ ಏನಿದು ಟೊಮೆಟೋ ಎಸೆಯೋ ಹಬ್ಬ?, ಆಚರಿಸುವುದಾದರೂ ಎಲ್ಲಿ? ಎಂಬೆಲ್ಲಾ ಪ್ರಶ್ನೆಗೆ ವಿವರಣೆ ಇಲ್ಲಿದೆ.

ವಯಸ್ಸಿನ ಭೇದವಿಲ್ಲದೆ ಸಿಕ್ಕಸಿಕ್ಕವರಿಗೆ ಮೈಮೇಲೆಲ್ಲಾ ಟೊಮೆಟೋಗಳನ್ನು ಎಸೆಯುತ್ತಾ ನಗುನಗುತ್ತಲ್ಲೇ ಟೊಮೆಟೋಗಳಿಂದ ಹೊಡೆಸಿಕೊಳ್ಳುತ್ತಾ ಆಟವಾಡೋ ಈ ಟೊಮೆಟೋ ಹಬ್ಬವನ್ನು ಲಾ ಟೊಮೆಟಿನಾ (La Tomatina) ಎಂದು ಕರೆಯುತ್ತಾರೆ. ಈ ಹಬ್ಬವನ್ನು ವಿಶ್ವದ ಸಾರ್ವಭೌಮ ರಾಷ್ಟ್ರಗಳಲ್ಲೊಂದು ಸ್ಪೇನ್‌ (Spain) ನ ಬುನೊಲ್‌ ಎಂಬ ಪಟ್ಟಣದಲ್ಲಿ ಆಚರಿಸಲಾಗುತ್ತದೆ. ಈ ಹಬ್ಬವನ್ನು ಪ್ರತೀ ವರ್ಷ ಆಗಸ್ಟ್‌ ತಿಂಗಳ ಕೊನೆಯ ಬುಧವಾರದಲ್ಲಿ ಆಚರಿಸಲಾಗುತ್ತದೆ. ಹಲವಾರು ಊರುಗಳಿಂದ, ದೇಶಗಳಿಂದ ಸುಮಾರು 20,000-30,000 ದಷ್ಟು ಪ್ರವಾಸಿಗರು ಈ ಹಬ್ಬಕ್ಕೆಂದೇ ಆಗಮಿಸುತ್ತಾರೆ.

1945ರಲ್ಲಿ ಈ ಪಟ್ಟಣದಲ್ಲಿ ಮೆರವಣಿಗೆಯ ಸಂದರ್ಭ ಸ್ಥಳೀಯ ನಿಯಮಗಳು ಹಾಗೂ ಅತಿಯಾದ ಸಾಮಾಜಿಕ ಸಾಂಪ್ರದಾಯಗಳಿಗೆ ಬೇಸತ್ತ ಅಲ್ಲಿನ ಯುವಕರು ಪಟ್ಟಣದ ಅಧಿಕಾರಿಗಳ ವಿರುದ್ಧ ಪ್ರತಿಭಟನೆಯನ್ನು ನಡೆಸುವ ಸಲುವಾಗಿ ಮೆರವಣಿಗೆಯಲ್ಲಿ ಭಾಗವಹಿಸಿದವರ ಮೇಲೆ ಸಮೀಪವಿರುವ ತರಕಾರಿ ಅಂಗಡಿಯಲ್ಲಿ ಮಾರಾಟಕ್ಕೆಂದು ಇರಿಸಲಾದ ಟೊಮೆಟೋ ಹಣ್ಣುಗಳನ್ನು ಎಸೆದಿದ್ದರು. ಈ ಟೊಮೆಟೋ ಎಸೆತವನ್ನೇ ಆಟವಾಗಿಸಿಕೊಂಡು, ದೊಡ್ಡ ಹಬ್ಬವನ್ನಾಗಿಸಿ ಆಚರಿಸಿಕೊಂಡು ಬರುತ್ತಿದ್ದಾರೆ ಸ್ಪೇನ್‌ ನ ಜನರು. ಅಲ್ಲಿನ ಯುವಕರು ಟೊಮೆಟೋದಲ್ಲಿ ಆಡಿದ ಜಗಳವು ಇಂದು ದೊಡ್ಡ ಹಬ್ಬವಾಗಿ ನಮ್ಮ ನಡುವೆ ಪ್ರಸಿದ್ಧಿಯನ್ನು ಪಡೆಯುತ್ತಿದೆ.

ಟೊಮೆಟೋಗಳು ವ್ಯರ್ಥವಾಗುವ ಕಾರಣದಿಂದ ಹಾಗೂ ಸಾಮಾಜಿಕ ಹಿತಚಿಂತನೆಯಿಂದಾಗಿ 1950ರಲ್ಲಿ ಈ ಲಾ ಟೊಮಾಟಿನಾ ಹಬ್ಬವನ್ನು ನಿಷೇಧಿಸಲಾಗಿತ್ತು. ಆದರೆ 1980ರ ದಶಕದಲ್ಲಿ ಅಧಿಕೃತವಾಗಿ ನಿಷೇಧವನ್ನು ಹಿಂತೆಗೆಯುವವರೆಗೆ ಸ್ಥಳೀಯರು ರಹಸ್ಯವಾಗಿಯೇ ಟೊಮೆಟೋ ಹಬ್ಬವನ್ನು ಆಚರಿಸುತ್ತಿದ್ದರು.

ಹಬ್ಬವು ಬೆಳಗ್ಗಿನ ತಿಂಡಿಗೆ ಟೌನ್‌ ಹಾಲ್‌ ನಲ್ಲಿ ಆಯೋಜಿಸಲಾದ ಪೇಸ್ಟ್ರೀಸ್‌ ಹಾಗು ರೋಲ್ಸ್‌ ಗಳನ್ನು ಹಂಚುವ ಮೂಲಕ ಪ್ರಾರಂಭವಾಗುತ್ತದೆ. ನಂತರ ಪಟ್ಟಣದಲ್ಲಿ ಒಂದು ಕಂಬದ ತುದಿಯಲ್ಲಿ ಮಾಂಸದ ತುಂಡನ್ನು (ham leg) ಇಟ್ಟು ಕಂಬ ಪೂರ್ತಿ ಗ್ರೀಸ್‌ ಹಾಕುತ್ತಾರೆ. ಜನರು ಮಾಂಸದ ತುಂಡನ್ನು ಪಡೆಯುವ ಸಲುವಾಗಿ ಕಂಬವನ್ನು ಹತ್ತಲು ಪ್ರಯತ್ನಿಸುತ್ತಾರೆ. ಬೆಳಗ್ಗೆ 11 ಗಂಟೆಯ ಸಮಯಕ್ಕೆ ಪ್ರಾರಂಭವಾಗುವ ಟೊಮೆಟೋ ಹಬ್ಬವನ್ನು ಒಂದು ಗಂಟೆಯಷ್ಟು ಹೊತ್ತು ಆಚರಿಸಲಾಗುತ್ತದೆ.

ಸುಮಾರು 1 ಗಂಟೆಯಷ್ಟು ಸಮಯ ಆಚರಿಲಾಗುವ ಈ ಹಬ್ಬಕ್ಕೆಂದೇ ಬರೋಬ್ಬರಿ 150000 ಕೆಜಿ ಗಳಷ್ಟು ಟೊಮೇಟೋವನ್ನು ಬಳಸಲಾಗುತ್ತದೆ. ಸುಮಾರು 6 ಟ್ರಕ್‌ ಗಳಲ್ಲಿ ತರುವ ಟೊಮೆಟೋಗಳನ್ನು ಈ ಆಚರಣೆ ನಡೆಯುವ ದಾರಿಯುದ್ದಕ್ಕೂ ಸಮನಾಗಿ ವಿತರಿಸಲಾಗುತ್ತದೆ. ಬೇಕಾದರೆ ಭಾಗವಹಿಸುವವರು ತೆಗೆದುಕೊಂಡು ಹೋಗಬಹುದು. ಆಟವಾಡುವಾಗ ಅವರವರ ಸುರಕ್ಷತೆಯ ಸಲುವಾಗಿ ಭಾಗವಹಿಸುವವರು ಕನ್ನಡಕವನ್ನು, ತಲೆಗೆ ಬಟ್ಟೆಯನ್ನೋ ಅಥವಾ ಇತರ ಕವರ್‌ ಗಳನ್ನು ಬಳಸಬೇಕಗುತ್ತದೆ.

ಆಚರಣೆಯ ಮೊದಲೂ ಮತ್ತು ಆಚರಣೆಯ ಬಳಿಕವೂ ಆಹಾರ ಹಾಡು, ಕುಣಿತ ಇದ್ದು ಸಾಂಸ್ಕೃತಿಕ ಕಾರ್ಯಕ್ರಮವಾಗಿ ಪರೇಡ್‌, ಜಾನಪದ ಹಾಡು, ಪಟಾಕಿಗಳನ್ನು ಉರಿಸಿ ಸಂಭ್ರಮಿಸಲಾಗುವುದು.

ವಿಶೇಷವೆಂದರೆ ಎಲ್ಲ ಸಂಭ್ರಮ ಆಚರಣೆ ಮುಗಿದ ಬಳಿಕ ಅಲ್ಲಿನ ಸ್ಥಳೀಯರು ಹಾಗೂ ಫೈರ್ ಫೈಟರ್ಸ್ ಸೇರಿಕೊಂಡು ಈ ಪ್ರದೇಶವನ್ನು ಶುಚಿಗೊಳಿಸುತ್ತಾರೆ.

-ಪೂರ್ಣಶ್ರೀ. ಕೆ

ಟಾಪ್ ನ್ಯೂಸ್

Budget 2025: A huge gift to Bihar before the assembly elections; What did it get?

Budget 2025: ವಿಧಾನಸಭೆ ಚುನಾವಣೆಗೆ ಮುನ್ನ ಬಿಹಾರಕ್ಕೆ ಭರ್ಜರಿ ಗಿಫ್ಟ್; ಸಿಕ್ಕಿದ್ದೇನು?

Budget 2025: UDAN scheme to connect 120 new destinations

Budget 2025: 120 ಹೊಸ ತಾಣಗಳನ್ನು ಸಂಪರ್ಕಿಸುವ ಉಡಾನ್ ಯೋಜನೆ

9-fir

Prashanth Sambargi ವಿರುದ್ಧ ದೂರು ನೀಡಿದ ನಟ ಪ್ರಕಾಶ್ ರೈ

Budget 2025: ತೆರಿಗೆ ಪಾವತಿದಾರರಿಗೆ ಬಂಪರ್‌- 12 ಲಕ್ಷದವರೆಗೂ ತೆರಿಗೆ ವಿನಾಯ್ತಿ

Budget 2025: ತೆರಿಗೆ ಪಾವತಿದಾರರಿಗೆ ಬಂಪರ್‌- 12 ಲಕ್ಷದವರೆಗೂ ತೆರಿಗೆ ವಿನಾಯ್ತಿ

8-bng

Bengaluru: ಫೇಸ್‌ಬುಕ್‌ನಲ್ಲಿ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿ 1.5 ಲಕ್ಷ ರೂ. ವಂಚನೆ

Union Budget 2025: Emphasis on education sector, internet connectivity for government schools

Union Budget2025: ಶಿಕ್ಷಣ ಕ್ಷೇತ್ರಕ್ಕೆ ಒತ್ತು, ಸರ್ಕಾರಿ ಶಾಲೆಗಳಿಗೆ ಇಂಟರ್ನೆಟ್‌ ಸಂಪರ್ಕ

Support for fruit and vegetable crop, Dhan Dhanya Krishi Yojana announced in Union Budget 2025

Union Budget 2025: ಹಣ್ಣು-ತರಕಾರಿ ಬೆಳೆಗೆ ಬೆಂಬಲ, ಧನ್ ಧಾನ್ಯ ಕೃಷಿ ಯೋಜನೆ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kollywood: 2024ರಲ್ಲಿ ಬರೋಬ್ಬರಿ 1000 ಕೋಟಿ ರೂ. ನಷ್ಟ ಕಂಡ ಕಾಲಿವುಡ್: ಎಡವಿದ್ದೆಲ್ಲಿ?

Kollywood: 2024ರಲ್ಲಿ ಬರೋಬ್ಬರಿ 1000 ಕೋಟಿ ರೂ. ನಷ್ಟ ಕಂಡ ಕಾಲಿವುಡ್: ಎಡವಿದ್ದೆಲ್ಲಿ?

Story of Karnataka Cricketer Smaran Ravichandran

Smaran Ravichandran: ತಾಯಿಯ ಒತ್ತಾಯಕ್ಕೆ ಬ್ಯಾಟ್‌ ಹಿಡಿದವ ಇಂದು ಕರ್ನಾಟಕದ ರನ್‌ ಮಶಿನ್

MahaKumbh Mela: 27 ವರ್ಷದ ಹಿಂದೆ ನಾಪತ್ತೆಯಾದ ವ್ಯಕ್ತಿ ಮಹಾಕುಂಭದಲ್ಲಿ ಅಘೋರಿಯಾಗಿ ಪತ್ತೆ!

MahaKumbh Mela: 27 ವರ್ಷದ ಹಿಂದೆ ನಾಪತ್ತೆಯಾದ ವ್ಯಕ್ತಿ ಮಹಾಕುಂಭದಲ್ಲಿ ಅಘೋರಿಯಾಗಿ ಪತ್ತೆ!

6-hair-health

Hair Health: ಚಳಿಗಾಲದಲ್ಲಿ ಕೂದಲ ಆರೈಕೆಗೆ ಅಗತ್ಯ ಸಲಹೆಗಳು

kumbhhhhhh

Kumbh; 1954 ರ ಕುಂಭ ಮೇಳದಲ್ಲೂ ಸಂಭವಿಸಿತ್ತು ಘೋರ ದುರಂತ

MUST WATCH

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

ಹೊಸ ಸೇರ್ಪಡೆ

Budget 2025: A huge gift to Bihar before the assembly elections; What did it get?

Budget 2025: ವಿಧಾನಸಭೆ ಚುನಾವಣೆಗೆ ಮುನ್ನ ಬಿಹಾರಕ್ಕೆ ಭರ್ಜರಿ ಗಿಫ್ಟ್; ಸಿಕ್ಕಿದ್ದೇನು?

Budget 2025: UDAN scheme to connect 120 new destinations

Budget 2025: 120 ಹೊಸ ತಾಣಗಳನ್ನು ಸಂಪರ್ಕಿಸುವ ಉಡಾನ್ ಯೋಜನೆ

9-fir

Prashanth Sambargi ವಿರುದ್ಧ ದೂರು ನೀಡಿದ ನಟ ಪ್ರಕಾಶ್ ರೈ

Budget 2025: ತೆರಿಗೆ ಪಾವತಿದಾರರಿಗೆ ಬಂಪರ್‌- 12 ಲಕ್ಷದವರೆಗೂ ತೆರಿಗೆ ವಿನಾಯ್ತಿ

Budget 2025: ತೆರಿಗೆ ಪಾವತಿದಾರರಿಗೆ ಬಂಪರ್‌- 12 ಲಕ್ಷದವರೆಗೂ ತೆರಿಗೆ ವಿನಾಯ್ತಿ

8-bng

Bengaluru: ಫೇಸ್‌ಬುಕ್‌ನಲ್ಲಿ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿ 1.5 ಲಕ್ಷ ರೂ. ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.