2ನೇ ಅಲೆಯಿಂದ ಕಲಿತ ಪಾಠಗಳನ್ನು ಮರೆಯಬಾರದು


Team Udayavani, Jun 7, 2021, 6:55 AM IST

2ನೇ ಅಲೆಯಿಂದ ಕಲಿತ ಪಾಠಗಳನ್ನು ಮರೆಯಬಾರದು

ಆಸ್ಪತ್ರೆಗಳಲ್ಲಿ ಕೊರೊನಾದ ರೋಗಿಗಳಿಗೆ ನ್ಯೂನತೆ ಇಲ್ಲದೆ ಚಿಕಿತ್ಸೆಯ ದೊರೆಯುವಂತೆ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಬೇಕಿದೆ. ಹಾಸಿಗೆಗಳಿಗಾಗಿ, ಆಮ್ಲಜನಕಕ್ಕೆ ಅಥವಾ ವೆಂಟಿಲೇಟರ್‌ಗಳಿಗಾಗಿ ರೋಗಿಗಳು ಪರದಾಡುವಂತಾಗಬಾರದು. ಹೆಚ್ಚಿನ ಕಡೆ ಸರಕಾರಗಳು ಇವುಗಳ ಸಿದ್ಧತೆಯಲ್ಲಿವೆ.

ನಮ್ಮಲ್ಲಿ ಕೊರೊನಾದ ಎರಡನೇ ಅಲೆಯ ತೀವ್ರತೆಯು ಕಡಿಮೆ ಯಾಗುತ್ತಿದೆ. ಜುಲೈ ತಿಂಗಳ ಕೊನೆಗೆ ಇದರ ಪ್ರಭಾವ ನಮ್ಮ ದೇಶದಲ್ಲಿ ಕೊನೆಗೊಳ್ಳಬಹುದೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದಾದ 6 ರಿಂದ 8 ತಿಂಗಳ ಬಳಿಕ ಮೂರನೇ ಅಲೆ ಕಾಣಿಸಿಕೊಳ್ಳಬಹುದೆಂದು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲು ಸಲಹೆ ನೀಡಲಾಗಿದೆ. ಈ ಎರಡನೇ ಅಲೆಯು ನಮಗೆ ಕಲಿಸಿರುವ ಪಾಠಗಳನ್ನು ಎಂದಿಗೂ ಮರೆಯಬಾರದು.

ಕಳೆದ ಸೆಪ್ಟಂಬರ್‌ ತಿಂಗಳ ಮಧ್ಯ ಭಾಗದಿಂದ ದೇಶದಲ್ಲಿ ಕೊರೊನಾದ ಮೊದಲನೇ ಅಲೆ ಇಳಿಮುಖವಾಗಿ ಡಿಸೆಂಬರ್‌ ತಿಂಗಳ ಕೊನೆಗೆ ಕೊರೊನಾ ದಿಂದ ನಾವು ಶಾಶ್ವತವಾಗಿ ಮುಕ್ತ ರಾದೆವೆಂದು ಭಾವಿಸಿದ್ದೆವು. ಆ ಸಮಯದಲ್ಲಿ ವಿದೇಶಗಳಲ್ಲಿ ಎರಡನೇ ಅಲೆಯು ಉತ್ತುಂಗದಲ್ಲಿದ್ದು, ಮೊದಲನೇ ಅಲೆಗಿಂತ ಕ್ರೂರವಾಗಿ ಉಪಟಳ ಕೊಡುತ್ತಿದ್ದರೂ ನಮ್ಮನ್ನು ಅದು ಎಚ್ಚರಿಸಲಿಲ್ಲ. ಎರಡನೇ ಅಲೆ ನಮ್ಮನ್ನು ಆವರಿಸಿಕೊಳ್ಳಲಾರದೆಂಬ ಭ್ರಮೆ ನಮ್ಮನ್ನು ಪೂರ್ತಿಯಾಗಿ ಕತ್ತಲೆಯಲ್ಲಿ ಇರಿಸಿತು. ನಾವು ಯಾವುದೇ ತಯಾರಿ ಮಾಡಿರಲಿಲ್ಲ. ಮಾಸ್ಕ್ ಧರಿಸುವುದು, ಬಹಳ ಜನ ಸೇರದಿರುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಇತ್ಯಾದಿ ಮೂಲ ಸೂತ್ರಗಳನ್ನು ಮರೆತೇ ಬಿಟ್ಟೆವು. ಹಾಗಾಗಿ ಸಂಕಷ್ಟ ಅನುಭವಿಸಬೇಕಾಯಿತು. ವಿದೇಶಗಳಲ್ಲಿ ಮೂರನೇ ಅಲೆಯು ಕೊರೊನಾದ ಎರಡನೇ ಅಲೆಗಿಂತ ಮಾರಕವಾಗಿತ್ತು. ವಿದೇಶಗಳಲ್ಲಿ ಅದೂ ಈಗ ಕುಗ್ಗತೊಡಗಿದೆ. ಕೊರೊನಾ ವೈರಾಣುವಿನ ಈ ಸಾಂಕ್ರಾಮಿಕ ಪಿಡುಗು ಮೂರನೇ ಅಲೆಗೆ ಕೊನೆಗೊಳ್ಳುತ್ತದೆಯೋ ಅಥವಾ ಮುಂದೆಯೂ ಅಲೆ ಅಲೆಯಾಗಿ ಕಾಡಬಹುದೋ ಎಂಬುದನ್ನು ಇನ್ನೂ ಕಾದು ನೋಡಬೇಕಿದೆ.

ಇದುವರೆಗೆ ಅಷ್ಟೊಂದು ಬಾಧಿಸದ 18 ವರ್ಷ ವಯಸ್ಸಿಗಿಂತ ಕೆಳಗಿನವರನ್ನು ಮೂರನೇ ಅಲೆ ಕಾಡೀತೆಂಬ ಭೀತಿ ಇದೆ. ಅವರಿಗೆ ಸೋಂಕಿನಿಂದ ತೊಂದರೆಯಾಗುವುದಕ್ಕಿಂತ ಅವರು ಇತರರಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ. ಪರೋಕ್ಷವಾಗಿ ಎಲ್ಲ ವಯಸ್ಸಿನವರಿಗೂ ನೋವು ಬಾಧಿಸಬಹುದು.

ಈ ಹಿನ್ನೆಲೆಯಲ್ಲಿ ನಾವೀಗ ಸೂಕ್ತವಾದ ತಯಾರಿ ಮಾಡಬೇಕಿದೆ. ಆಸ್ಪತ್ರೆಗಳಲ್ಲಿ ಕೊರೊನಾದ ರೋಗಿಗಳಿಗೆ ನ್ಯೂನತೆ ಇಲ್ಲದೆ ಚಿಕಿತ್ಸೆಯು ದೊರೆಯುವಂತೆ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಬೇಕಿದೆ. ಹಾಸಿಗೆಗಳಿಗಾಗಿ, ಆಮ್ಲಜನಕಕ್ಕೆ ಅಥವಾ ವೆಂಟಿಲೇಟರ್‌ಗಳಿಗಾಗಿ ರೋಗಿಗಳು ಪರದಾಡುವಂತಾಗಬಾರದು. ಹೆಚ್ಚಿನ ಕಡೆ ಸರಕಾರಗಳು ಇವುಗಳ ಸಿದ್ಧತೆಯಲ್ಲಿವೆ.

ಕೊರೊನಾ ವೈರಾಣುವಿನ ವಿರುದ್ಧ ಈಗ ಲಸಿಕೆ ಲಭ್ಯವಿದೆ. ವಿದೇಶಗಳಲ್ಲಿ ಕೊರೊನಾದ ಮೂರನೇ ಅಲೆಯು ಶೀಘ್ರವಾಗಿ ಕೊನೆಗೊಳ್ಳಲು ಲಸಿಕೆಯ ಬಳಕೆ ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ. ನಮ್ಮಲ್ಲೂ ಕೊರೊನಾದ ಮೊದಲನೇ ಅಲೆಯ ಅನಂತರ ಲಸಿಕೆ ಪಡೆದವರಲ್ಲಿ ಹೆಚ್ಚಿನವರಿಗೆ ಎರಡನೇ ಅಲೆಯಲ್ಲಿ ಹಾನಿಯಾಗಲಿಲ್ಲ. ಕರ್ನಾಟಕದಲ್ಲಿ ಕಳೆದ ಡಿಸೆಂಬರ್‌ ಕೊನೆಗೆ 12,585 ಮಂದಿ ಕೊರೊನಾದಿಂದ ಅಸುನೀಗಿದ್ದು ಅವರಲ್ಲಿ 329 ಮಂದಿ ವೈದ್ಯರಿದ್ದರು. ಎರಡನೇ ಅಲೆಯ ಪ್ರಭಾವ ಆರಂಭವಾಗುವ ಮೊದಲೇ ವೈದ್ಯರಿಗೆ ಕೊರೊನಾ ಲಸಿಕೆ ಪಡೆಯಲು ಸಾಧ್ಯವಾಯಿತು. ಎರಡನೇ ಅಲೆಯಲ್ಲಿ ಕರ್ನಾಟಕದಲ್ಲಿ 17,946 ಮಂದಿ ಇಂದಿನವರೆಗೆ ಮೃತಪಟ್ಟಿದ್ದು ಇವರಲ್ಲಿ ವೈದ್ಯರು 8 ಮಂದಿ ಮಾತ್ರ. ಸೂಕ್ತ ಸಮಯದಲ್ಲಿ ಲಸಿಕೆ ಹಾಕಿಸಿಕೊಂಡದ್ದೇ ಇದಕ್ಕೆ ಕಾರಣ. ಲಸಿಕೆ ಪಡೆದ ವೈದ್ಯರಲ್ಲಿ ಹಲವರಿಗೆ ಸೋಂಕು ತಗಲಿತ್ತಾ ದರೂ ತೀವ್ರವಾದ ಕಾಯಿಲೆಗೆ ತುತ್ತಾದವರು ಕೆಲವೇ ಮಂದಿ. ಲಸಿಕೆಯು ಪ್ರಭಾವಶಾಲಿ ಎಂಬುದಕ್ಕೆ ಇದೊಂದೇ ಉದಾಹರಣೆ.

ಪ್ರಸ್ತುತ 18 ವಯಸ್ಸಿನ ಮೇಲಿನವರಿಗೆಲ್ಲ ಲಸಿಕೆ ಕೊಡಲಾಗುತ್ತದೆ. ಮುಂದೆ ಮಕ್ಕಳಿಗೂ ಲಸಿಕೆ ದೊರೆಯಲಿದೆ. ಲಸಿಕೆಯ ಬಗ್ಗೆ ಇಲ್ಲ-ಸಲ್ಲದ ಮಾಹಿತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಕಾರಣ, ಅನೇಕರು ಲಭ್ಯವಿದ್ದರೂ ಹಾಕಿಸಿಕೊಳ್ಳಲಿಲ್ಲ. ನಮ್ಮ ದೇಶದಲ್ಲಿ ಈಗ ಕೊಡಲಾಗುತ್ತಿರುವ ಲಸಿಕೆಗಳು ಉತ್ತಮ ವಾಗಿದ್ದು, ಸದ್ಯಕ್ಕೆ ಕೊರೊನಾ ಸೋಂಕಿನ ಅನಾಹುತಗಳಿಂದ ರಕ್ಷಣೆ ಕೊಡುತ್ತವೆ ಎಂಬುದು ಸಾಬೀತಾಗಿದೆ. ನಮ್ಮ ಜಿಲ್ಲೆಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ, ಮೆಡಿಕಲ್‌ ಕಾಲೇಜುಗಳಲ್ಲಿ ಲಸಿಕೆಯನ್ನು ಕೊಡಲಾಗುತ್ತದೆ.

ಆರೋಗ್ಯದ ಸಮಸ್ಯೆ ಇದ್ದವರಿಗೆ ಕೊರೊನಾ ಸೋಂಕು ಹೆಚ್ಚು ಅಪಾಯ ಕಾರಿ. ಆದುದರಿಂದ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಹೃದಯ, ಮೂತ್ರ ಜನಕಾಂಗ ನಮಸ್ಯೆ ಮುಂತಾದ ಕಾಯಿಲೆಗಳಿಂದ ಬಳಲುತ್ತಿರುವವರು ಯಾವುದೇ ಹಿಂಜರಿಕೆ ಇಲ್ಲದೆ ಮೊದಲು ಲಸಿಕೆ ಪಡೆಯಬೇಕು. ನಮ್ಮ ಜಿಲ್ಲೆಗಳಲ್ಲಿ ಸಾವಿರಾರು ಮಂದಿ ಲಸಿಕೆ ಹಾಕಿಸಿ ಕೊಂಡಿದ್ದಾರೆ. ಇವರಲ್ಲಿ ಆರೋಗ್ಯದ ಸಮಸ್ಯೆ ಇದ್ದವರು ಅನೇಕ ಮಂದಿ ಇದ್ದರೂ ಯಾರಿಗೂ ಅನಾಹುತವಾಗಿಲ್ಲ.

ನಾವು ಮೂರನೇ ಅಲೆಯ ನಿರೀಕ್ಷಣೆಯಲ್ಲೇ ಮುಂದಿನ ಕೆಲವು ತಿಂಗಳು ಇರಬೇಕಾಗಿದೆ. ಮೂರನೇ ಅಲೆಯು ಯಾವುದೇ ಮುನ್ಸೂಚನೆ ಇಲ್ಲದೆ ಬರಬಹುದು. ತಜ್ಞರು ಸೂಚಿಸುವವರೆಗೆ ನಾವು ನಮ್ಮ ರಕ್ಷಣೆಯನ್ನು ಮಾಡಬೇಕಾಗಿದೆ. ಮುಖ್ಯವಾಗಿ ಮನೆಯಲ್ಲೇ ಇರುವುದು, ಮನೆಯಿಂದ ಹೊರಗೆ ಹೋಗಲೇ ಬೇಕಾದಾಗ ಮಾಸ್ಕ್ ಧರಿಸುವುದು, ಅನೇಕ ಮಂದಿ ಸೇರುವಂತಹ ಸನ್ನಿವೇಶಗಳನ್ನು ತಪ್ಪಿಸುವುದು, ಮಾರ್ಕೆಟ್‌, ಮಾಲ್‌, ಅಂಗಡಿ ಮುಂತಾದ ಜನ ಸೇರುವ ಪ್ರದೇಶಗಳಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಅಗತ್ಯವಾಗಿದೆ. ಕೊರೊನಾ ವೈರಸ್‌ನ ಹಾವಳಿ ಕಡಿಮೆಯಾಗುವ ತನಕ ನಾವು ಮುಂಜಾಗ್ರತೆ ವಹಿಸಬೇಕಾಗಿದೆ. ಸ್ವಲ್ಪ ಅಜಾಗರೂಕತೆಗೆ ಬಹಳ ಬೆಲೆ ತೆರ ಬೇಕಾಗಬಹುದೆಂಬ ಎಚ್ಚರ ನಮಗಿರಲಿ.

- ಡಾ| ಎಡ್ವರ್ಡ್‌ ಎಲ್‌. ನಜ್ರೆತ್‌, ಆಥೊìಪೆಡಿಕ್‌ ಸರ್ಜರಿ ವಿಭಾಗದ ಪ್ರೊಫೆಸರ್‌, ಕಣಚೂರು ಮೆಡಿಕಲ್‌ ಕಾಲೇಜು, ನಾಟೆಕಲ್‌, ಮಂಗಳೂರು

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.