Lokasabha Session: ವಕ್ಫ್ ಕಾಯ್ದೆ ತಿದ್ದುಪಡಿಗೆ ವಿಪಕ್ಷಗಳಿಂದ ಆಕ್ಷೇಪ
ಪಾರದರ್ಶಕತೆಯೇ ಉದ್ದೇಶ: ಬಿಜೆಪಿಗರ ಸಮರ್ಥನೆ
Team Udayavani, Aug 6, 2024, 6:45 AM IST
ಹೊಸದಿಲ್ಲಿ: ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರಕಾರ ಮುಂದಾಗಿದೆ ಎಂಬ ಸುದ್ದಿಗಳು ಹರಿದಾಡಿದ ಬೆನ್ನಲ್ಲೇ ಈ ಕ್ರಮವನ್ನು ಬಿಜೆಪಿ ನಾಯಕರು ಸಮರ್ಥಿಸಿಕೊಂಡಿದ್ದರೆ, ವಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.
ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆ ಸೋಮವಾರವೇ ಲೋಕಸಭೆಯಲ್ಲಿ ಮಂಡನೆಯಾಗಲಿದೆ ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಮಾತನಾಡಿದ್ದ ಹಲವು ಬಿಜೆಪಿ ನಾಯಕರು, “ಮೋದಿ ಸರಕಾರವು ಪ್ರತಿಯೊಂದು ವಲಯದಲ್ಲೂ ಪಾರದರ್ಶಕತೆ ತರುವ ಉದ್ದೇಶದಿಂದ ಕೆಲಸ ಮಾಡುತ್ತಿದೆ. ಅಲ್ಲದೆ ಮುಸ್ಲಿಂ ಸಮುದಾಯದ ಆಗ್ರಹದ ಮೇರೆಗೆ ಈ ತಿದ್ದುಪ ಡಿ ಯನ್ನು ತರಲಾಗುತ್ತಿ ದೆ’ ಎಂದಿದ್ದಾರೆ.
ಇನ್ನೊಂದೆಡೆ, ಸಮಾಜದಲ್ಲಿ ವಿಭಜನೆ ತರುವ ಉದ್ದೇಶದಿಂದಲೇ ಬಿಜೆಪಿ ಇಂಥ ನಿರ್ಧಾರ ಕೈಗೊಂಡಿದೆ ಎಂದು ಆರೋಪಿಸಿರುವ ವಿಪಕ್ಷ ಗಳು, ಈ ವಿಧೇಯಕವನ್ನು ವಿರೋಧಿಸುವುದಾಗಿ ಘೋಷಿಸಿವೆ. ಎಸ್ಪಿ ನಾಯಕ ಅಖೀಲೇಶ್ ಮಾತನಾಡಿ, “ಬಿಜೆಪಿ ಮುಸ್ಲಿಮರ ಹಕ್ಕುಗಳನ್ನು ಕಿತ್ತುಕೊಳ್ಳಲು ಯತ್ನಿಸುತ್ತಿದೆ ಎಂದಿದ್ದಾರೆ. ಶಿವ ಸೇನೆ ಉದ್ಧವ್ ಬಣ, ಸಿಪಿಎಂ, ಐಯು ಎಂಎಲ್, ಎಐಎಂಪಿಎಲ್ಬಿ ಕೂಡ ಇದಕ್ಕೆ ಧ್ವನಿಗೂಡಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train; ಕೆಟ್ಟು ನಿಂತ ‘ವಂದೇ ಭಾರತ್’ ಎಳೆದು ತಂದ ಗೂಡ್ಸ್ ರೈಲಿನ ಎಂಜಿನ್!
Ram Janmabhoomi Trust President ನೃತ್ಯ ಗೋಪಾಲ್ ದಾಸ್ ಆರೋಗ್ಯ ಗಂಭೀರ
HAL ಸಂಸ್ಥೆಯ ನೂತನ ಸಿಎಂಡಿ ಸ್ಥಾನಕ್ಕೆ ಡಾ| ಸುನಿಲ್ ನೇಮಕ
AAP; ಹಣಕಾಸು ಅಕ್ರಮ: ಆಪ್ ಶಾಸಕ ಖಾನ್ಗೆ ನ್ಯಾಯಾಂಗ ಬಂಧನ
Mallikarjun Kharge ಕಿಡಿ: ಮಣಿಪುರ ವಿಚಾರದಲ್ಲಿ ಮೋದಿಯ ಹೀನಾಯ ವೈಫಲ್ಯ ಅಕ್ಷಮ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.