![Chikkamagaluru: ಮಹಾಮಾರಿ ಡೆಂಗ್ಯೂಗೆ ಬಾಲಕಿ ಬಲಿ, ಸರ್ಕಾರಕ್ಕೆ ಛೀಮಾರಿ ಹಾಕಿದ ಪೋಷಕರು](https://www.udayavani.com/wp-content/uploads/2024/06/chk-3-415x293.jpg)
Lokasabha: ತುರ್ತು ಪರಿಸ್ಥಿತಿ ಅವಧಿ ಕರಾಳವೆಂದ ಸ್ಪೀಕರ್ ಓಂ ಬಿರ್ಲಾ; ವಿಪಕ್ಷಗಳ ಆಕ್ಷೇಪ
ಸದನದಲ್ಲಿ 2 ನಿಮಿಷ ಮೌನಾಚರಣೆ ಪ್ರಸ್ತಾಪಕ್ಕೆ ವಿರೋಧಿಸಿ ಘೋಷಣೆ ಕೂಗಿದ ಕಾಂಗ್ರೆಸ್ ಸದಸ್ಯರು
Team Udayavani, Jun 26, 2024, 7:54 PM IST
![OM-Birla](https://www.udayavani.com/wp-content/uploads/2024/06/OM-Birla-620x372.jpg)
ನವದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ 1975ರಲ್ಲಿ ದೇಶದಲ್ಲಿ ಹೇರಿದ್ದ ತುರ್ತು ಪರಿಸ್ಥಿತಿಯನ್ನು ಖಂಡಿಸಿ ಅಂದಿನ ಆ ಅವಧಿಯನ್ನು ಕರಾಳ ದಿನಗಳೆಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹೇಳಿದರು.
ಲೋಕಸಭೆಗೆ ಸತತ ಎರಡನೇ ಬಾರಿಗೆ ಸ್ಪೀಕರ್ ಆಗಿ ಆಯ್ಕೆಯಾದ ರಾಜಸ್ಥಾನದ ಕೋಟಾ ಕ್ಷೇತ್ರದ ಸಂಸದ ಓಂ ಬಿರ್ಲಾ ಮಾತನಾಡಿ ಸದನದ ಸದಸ್ಯರು ದೇಶಕ್ಕಾಗಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ಕಲಾಪಗಳಿಗೆ ಸದಸ್ಯರು ಗೈರಾಗದೆ ಚರ್ಚೆಯಲ್ಲಿ ಪಾಲ್ಗೊಳ್ಳುವ ಜೊತೆಗೆ ಸಂಸತ್ತು ಮತ್ತು ಬೀದಿಯಲ್ಲಿ ಪ್ರತಿಭಟಿಸುವುದರ ನಡುವಿನ ವ್ಯತ್ಯಾಸ ತಿಳಿದಿರಬೇಕು ಎಂದು ಹೇಳಿದರು.
ಬಳಿಕ ತುರ್ತು ಪರಿಸ್ಥಿತಿಯ ಕರಾಳ ದಿನದ 50ನೇ ವರ್ಷಾಚರಣೆ ಕುರಿತು ಮಾತನಾಡಿ ತುರ್ತು ಪರಿಸ್ಥಿತಿಯ “ಕರಾಳ ಅವಧಿಯಲ್ಲಿ”ಭಾರತದ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಹತ್ತಿಕ್ಕಿ ಅಭಿವ್ಯಕ್ತಿ ಸ್ವಾತಂತ್ರ್ಯದ ಕತ್ತು ಹಿಸುಕಲಾಯಿತು. ತುರ್ತು ಪರಿಸ್ಥಿತಿಯು ಭಾರತದ ಹಲವಾರು ನಾಗರಿಕರ ಜೀವನವನ್ನು ನಾಶ ಮಾಡಿದೆ. ಹಲವಾರು ಜನರು ಸಾವನ್ನಪ್ಪಿದ್ದಾರೆ. ತುರ್ತು ಪರಿಸ್ಥಿತಿಯ ಕರಾಳ ಅವಧಿಯಲ್ಲಿ ಕಾಂಗ್ರೆಸ್ನ ಸರ್ವಾಧಿಕಾರಿ ಸರ್ಕಾರದ ಕೈಯಲ್ಲಿ ಪ್ರಾಣ ಕಳೆದುಕೊಂಡ ಭಾರತದ ಅಂತಹ ಕರ್ತವ್ಯನಿಷ್ಠ ಮತ್ತು ದೇಶಭಕ್ತಿಯ ನಾಗರಿಕರ ಸ್ಮರಣೆಗಾಗಿ ನಾವು 2 ನಿಮಿಷಗಳ ಮೌನವನ್ನು ಆಚರಿಸುತ್ತೇವೆʼ ಎಂದು ಬಿರ್ಲಾ ಹೇಳಿದರು.
ಸ್ಪೀಕರ್ ಓಂ ಬಿರ್ಲಾ ತುರ್ತು ಪರಿಸ್ಥಿತಿಯನ್ನು ಕರಾಳ ಅವಧಿಯೆಂದು ಕರೆದಿದ್ದಕ್ಕೆ ವಿಪಕ್ಷದವರಿಂದ ತೀವ್ರ ಪ್ರತಿಭಟನೆ, ಘೋಷಣೆಗಳ ಕೂಗು ಕೇಳಿ ಬಂದವು. ಕಾಂಗ್ರೆಸ್ ಸಂಸದರು ಸದನದ ಬಾವಿಗೆ ಇಳಿದರೆ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಸದಸ್ಯರು ಆಸನದಲ್ಲೇ ಕುಳಿತಿದ್ದರು.
ತುರ್ತುಪರಿಸ್ಥಿತಿಯ ಕರಾಳ ಅವಧಿಯಲ್ಲಿ ಸರ್ವಾಧಿಕಾರಿ ಕಾಂಗ್ರೆಸ್ ಸರ್ಕಾರದ ಧೋರಣೆಯಿಂದಾಗಿ ಪ್ರಾಣ ಕಳೆದುಕೊಂಡವರ ಸ್ಮರಣೆಗಾಗಿ 2 ನಿಮಿಷ ಮೌನ ಪ್ರಾರ್ಥನೆಗೆ ಲೋಕಸಭಾ ಸ್ಪೀಕರ್ ಶ್ರೀ @ombirlakota ಅವರು ಮನವಿ ಮಾಡಿದರೂ ಇಂಡಿ ಮೈತ್ರಿಕೂಟದವರು ಇದನ್ನು ಪರಿಗಣಿಸದೆ, ಗದ್ದಲವೆಬ್ಬಿಸಿ ಹುತಾತ್ಮರನ್ನು ಗೇಲಿ ಮಾಡುವ ಮೂಲಕ ದೇಶ ಮತ್ತು ಸಂವಿಧಾನದ… pic.twitter.com/AbZQgoc0wv
— BJP Karnataka (@BJP4Karnataka) June 26, 2024
ಸ್ಪೀಕರ್ ಭಾಷಣಕ್ಕೆ ಮೋದಿ ಮೆಚ್ಚುಗೆ
ತುರ್ತು ಪರಿಸ್ಥಿತಿ ಖಂಡಿಸಿ ಸ್ಪೀಕರ್ ಓಂ ಬಿರ್ಲಾ ಮಾಡಿದ ಭಾಷಣಕ್ಕೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿ, ಘೋಷಣೆಗಳ ಕೂಗಿದರೆ, ಪ್ರಧಾನಿ ನರೇಂದ್ರ ಮೋದಿ ಓಂ ಬಿರ್ಲಾರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಪಕ್ಷಗಳ ಘೋಷಣೆಯ ಖಂಡಿಸಿದ ಬಿಜೆಪಿ ಸಂಸದ, ಪಕ್ಷದ ವಕ್ತಾರ ಸಂಬಿತ್ ಪಾತ್ರ ಮಾತನಾಡಿ ತುರ್ತು ಪರಿಸ್ಥಿತಿ ವಿರುದ್ಧ ಸ್ಪೀಕರ್ ಓಂ ಬಿರ್ಲಾ ಪ್ರಸ್ತಾಪಸಿದ ನಿಲುವಳಿಯ ಖಂಡಿಸಿ . ಕಾಂಗ್ರೆಸ್ ಸಂಸದರು ಸದನದ ಬಾವಿಗೆ ಇಳಿದರೆ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಸದಸ್ಯರು ಆಸನದಲ್ಲೇ ಕುಳಿತಿದ್ದರು. ಕಾಂಗ್ರೆಸ್ ಸಂವಿಧಾನದ ಪುಸ್ತಕ ಕೈಯಲ್ಲಿ ಹಿಡಿದು ಬಂದ ಕೂಡಲೇ ಸಂವಿಧಾನ ರಕ್ಷಕರು ಆಗಲ್ಲ, ಹೃದಯಪೂರ್ವಕವಾಗಿ ಸಂವಿಧಾನಕ್ಕೆ ಗೌರವ ಕೊಡಬೇಕು ಎಂದು ಹೇಳಿದರು.
ಟಾಪ್ ನ್ಯೂಸ್
![Chikkamagaluru: ಮಹಾಮಾರಿ ಡೆಂಗ್ಯೂಗೆ ಬಾಲಕಿ ಬಲಿ, ಸರ್ಕಾರಕ್ಕೆ ಛೀಮಾರಿ ಹಾಕಿದ ಪೋಷಕರು](https://www.udayavani.com/wp-content/uploads/2024/06/chk-3-415x293.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Gujarat: ಭಾರೀ ಮಳೆಗೆ ರಾಜ್ ಕೋಟ್ ಏರ್ ಪೋರ್ಟ್ ಟರ್ಮಿನಲ್ ನ ಕೆನೋಪಿ ಕುಸಿತ](https://www.udayavani.com/wp-content/uploads/2024/06/Kenop-150x90.jpg)
Gujarat: ಭಾರೀ ಮಳೆಗೆ ರಾಜ್ ಕೋಟ್ ಏರ್ ಪೋರ್ಟ್ ಟರ್ಮಿನಲ್ ನ ಕೆನೋಪಿ ಕುಸಿತ
![Ayodhya: ರಾಮಪಥದ ಕಳಪೆ ಕಾಮಗಾರಿ-6 ಅಧಿಕಾರಿಗಳನ್ನು ಅಮಾನತುಗೊಳಿಸಿದ ಸಿಎಂ ಯೋಗಿ](https://www.udayavani.com/wp-content/uploads/2024/06/Leakage-150x100.jpg)
Ayodhya: ರಾಮಪಥದ ಕಳಪೆ ಕಾಮಗಾರಿ-6 ಅಧಿಕಾರಿಗಳನ್ನು ಅಮಾನತುಗೊಳಿಸಿದ ಸಿಎಂ ಯೋಗಿ
![tamilnadu](https://www.udayavani.com/wp-content/uploads/2024/06/tamilnadu-150x83.jpg)
Tamil Nadu: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ… ನಾಲ್ವರು ಮೃತ್ಯು, ನೆರವು ಘೋಷಿಸಿದ ಸಿಎಂ
![Flash Floods: ಸೇನಾ ತರಬೇತಿ ವೇಳೆ ಹಠಾತ್ ಪ್ರವಾಹ.. ಓರ್ವ ಯೋಧ ಹುತಾತ್ಮ, ನಾಲ್ವರು ನಾಪತ್ತೆ](https://www.udayavani.com/wp-content/uploads/2024/06/ladak1-150x99.jpg)
Flash Floods: ಸೇನಾ ಸಮರಾಭ್ಯಾಸದ ವೇಳೆ ಹಠಾತ್ ಪ್ರವಾಹ… ಐವರು ಯೋಧರು ಹುತಾತ್ಮ
![Dharmapuri Srinivas: ಹೃದಯಾಘಾತದಿಂದ ಕಾಂಗ್ರೆಸ್ ಹಿರಿಯ ನಾಯಕ ಧರ್ಮಪುರಿ ಶ್ರೀನಿವಾಸ್ ನಿಧನ](https://www.udayavani.com/wp-content/uploads/2024/06/dharmapuri-150x84.jpg)
Dharmapuri Srinivas: ಹೃದಯಾಘಾತದಿಂದ ಕಾಂಗ್ರೆಸ್ ಹಿರಿಯ ನಾಯಕ ಧರ್ಮಪುರಿ ಶ್ರೀನಿವಾಸ್ ನಿಧನ
MUST WATCH
ಹೊಸ ಸೇರ್ಪಡೆ
![Chikkamagaluru: ಮಹಾಮಾರಿ ಡೆಂಗ್ಯೂಗೆ ಬಾಲಕಿ ಬಲಿ, ಸರ್ಕಾರಕ್ಕೆ ಛೀಮಾರಿ ಹಾಕಿದ ಪೋಷಕರು](https://www.udayavani.com/wp-content/uploads/2024/06/chk-3-150x106.jpg)
Chikkamagaluru: ಮಹಾಮಾರಿ ಡೆಂಗ್ಯೂಗೆ ಬಾಲಕಿ ಬಲಿ, ಸರ್ಕಾರಕ್ಕೆ ಛೀಮಾರಿ ಹಾಕಿದ ಪೋಷಕರು
![what if rain interrupts to icc t20 world cup final? What does the rule say?](https://www.udayavani.com/wp-content/uploads/2024/06/final-150x83.jpg)
ICC T20 World Cup; ಫೈನಲ್ ಪಂದ್ಯಕ್ಕೆ ಮಳೆ ಬಂದರೆ ಏನು ಗತಿ? ನಿಯಮ ಏನು ಹೇಳುತ್ತದೆ?
![13-tn-sitharama](https://www.udayavani.com/wp-content/uploads/2024/06/13-tn-sitharama-150x90.jpg)
T. N. Seetharam: ಧಾರಾವಾಹಿಗಳಿಗೆ ಹೊಸ ಭಾಷ್ಯ ನೀಡಿದ ನಿರ್ದೇಶಕ ಟಿ.ಎನ್. ಸೀತಾರಾಮ
![Gujarat: ಭಾರೀ ಮಳೆಗೆ ರಾಜ್ ಕೋಟ್ ಏರ್ ಪೋರ್ಟ್ ಟರ್ಮಿನಲ್ ನ ಕೆನೋಪಿ ಕುಸಿತ](https://www.udayavani.com/wp-content/uploads/2024/06/Kenop-150x90.jpg)
Gujarat: ಭಾರೀ ಮಳೆಗೆ ರಾಜ್ ಕೋಟ್ ಏರ್ ಪೋರ್ಟ್ ಟರ್ಮಿನಲ್ ನ ಕೆನೋಪಿ ಕುಸಿತ
![No problem anyone comes in front of Martin…: Producer Uday Mehta](https://www.udayavani.com/wp-content/uploads/2024/06/martin-150x83.jpg)
Martin ಮುಂದೆ ಯಾರೇ ಬರಲಿ ನೋ ಪ್ರಾಬ್ಲಂ…: ನಿರ್ಮಾಪಕ ಉದಯ್ ಮೆಹ್ತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.