Lord Jagannath: ಭಗವಾನ್ ಜಗನ್ನಾಥನ ಕೃಪೆಯಿಂದ ಟ್ರಂಪ್ ಜೀವ ಉಳಿಯಿತು: ಇಸ್ಕಾನ್!
ದೇಶ, ವಿದೇಶಗಳಲ್ಲಿ ಶಾಖೆ ಹೊಂದಿದ್ದು, ಅಪಾರ ಪ್ರಮಾಣದ ಭಕ್ತ ವರ್ಗವನ್ನು ಹೊಂದಿದೆ.
Team Udayavani, Jul 15, 2024, 10:38 AM IST
ವಾಷಿಂಗ್ಟನ್: ಭಗವಾನ್ ಜಗನ್ನಾಥನ ಕೃಪೆಯಿಂದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (78ವರ್ಷ) ಸಣ್ಣ, ಪುಟ್ಟ ಗಾಯದೊಂದಿಗೆ ಗುಂಡಿನ ದಾಳಿಯಿಂದ ಬದುಕುಳಿದಿದ್ದಾರೆ ಎಂದು ಇಸ್ಕಾನ್ ಹೇಳಿದೆ.
48 ವರ್ಷಗಳ ಹಿಂದೆ ನ್ಯೂಯಾರ್ಕ್ ನಲ್ಲಿ ನಡೆದ ಭಗವಾನ್ ಜಗನ್ನಾಥನ ಮೊದಲ ರಥಯಾತ್ರೆಗೆ ಆಗಮಿಸಿದ್ದ ಭಕ್ತರಿಗೆ ಡೊನಾಲ್ಡ್ ಟ್ರಂಪ್ ನೆರವು ನೀಡಿದ್ದರು. ಟ್ರಂಪ್ ನೀಡಿರುವ ಸೇವೆಗಾಗಿ ಜಗನ್ನಾಥ್ ದೇವರು ಅವರ ಪ್ರಾಣವನ್ನು ರಕ್ಷಿಸಿರುವುದಾಗಿ ಇಸ್ಕಾನ್ (ISKCON) ವಕ್ತಾರ ತಿಳಿಸಿರುವುದಾಗಿ ವರದಿಯಾಗಿದೆ.
ಹೌದು, ನಿಜವಾಗಿಯೂ ಇದೊಂದು ಅಲೌಕಿಕವಾದ ಘಟನೆಯಾಗಿದೆ. ಬರೋಬ್ಬರಿ 48 ವರ್ಷಗಳ ಹಿಂದೆ ಡೊನಾಲ್ಡ್ ಟ್ರಂಪ್ ಅವರು ಜಗನ್ನಾಥ ರಥಯಾತ್ರೆ ಉತ್ಸವವನ್ನು ಉಳಿಸಿದ್ದರು. ಇದೀಗ ಪ್ರಪಂಚದಾದ್ಯಂತ ಜಗನ್ನಾಥ ರಥಯಾತ್ರೆಯ ಸಂಭ್ರಮ ನಡೆಯುತ್ತಿರುವ ಸಂದರ್ಭದಲ್ಲಿ ಟ್ರಂಪ್ ಮೇಲೆ ದಾಳಿಯಾಗಿದ್ದು, ಭಗವಾನ್ ಜಗನ್ನಾಥ್ ಅವರ ಪ್ರಾಣವನ್ನು ರಕ್ಷಿಸುವ ಮೂಲಕ ಋಣ ಸಂದಾಯ ಮಾಡಿರುವುದಾಗಿ ಇಸ್ಕಾನ್ ವಕ್ತಾರ ರಾಧಾರಮಣ ದಾಸ್ ತಿಳಿಸಿದ್ದಾರೆ.
ಇಸ್ಕಾನ್ (ಹರೇ ಕೃಷ್ಣ ಪಂಥ) ದೇಶ, ವಿದೇಶಗಳಲ್ಲಿ ಶಾಖೆ ಹೊಂದಿದ್ದು, ಅಪಾರ ಪ್ರಮಾಣದ ಭಕ್ತ ವರ್ಗವನ್ನು ಹೊಂದಿದೆ. 1976ರ ಜುಲೈನಲ್ಲಿ ಇಸ್ಕಾನ್ ಭಕ್ತರು ಜಗನ್ನಾಥ ರಥಯಾತ್ರೆಯನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ರಥ ನಿರ್ಮಾಣಕ್ಕಾಗಿ ಟ್ರಂಪ್ ಅವರು ತಮ್ಮ ಟ್ರೈನ್ ಯಾರ್ಡ್ ಸ್ಥಳವನ್ನು ಉಚಿತವಾಗಿ ನೀಡಿದ್ದರು. ಇಂದು ಜಗತ್ತಿನಾದ್ಯಂತ 9 ದಿನಗಳ ಕಾಲ ಜಗನ್ನಾಥ ರಥಯಾತ್ರೆ ಸಂಭ್ರಮ ನಡೆಯುತ್ತಿರುವಾಗಲೇ ಟ್ರಂಪ್ ಅವರ ಮೇಲೆ ಮಾರಣಾಂತಿಕ ದಾಳಿ ನಡೆದಿದ್ದರೂ, ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದಕ್ಕೆ ಭಗವಾನ್ ಜಗನ್ನಾಥನೇ ಕಾರಣ ಎಂದು ದಾಸ್ ಎಕ್ಸ್ ನಲ್ಲಿ ನೀಡಿರುವ ಪ್ರಕಟನೆಯಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ:Chitradurga: ಕಳವಾಗಿದ್ದ ಮುರುಘಾ ಶ್ರೀಗಳ ಬೆಳ್ಳಿ ಮೂರ್ತಿ ಮಠದ ಆವರಣದಲ್ಲೇ ಪತ್ತೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australia: ಕೆಲಸದ ಅವಧಿ ಬಳಿಕ ಬಾಸ್ ನೌಕರರ ಮಧ್ಯೆ ಸಂಪರ್ಕ ಇಲ್ಲ
Norway ಕಾಯ್ದೆ ಸಡಿಲ: 18ನೇ ವಾರಕ್ಕೂ ಗರ್ಭಪಾತಕ್ಕೆ ಸಮ್ಮತಿ
Modi ಜತೆಗಿನ ಝೆಲೆನ್ಸ್ಕಿ ಇನ್ಸ್ಟಾಗ್ರಾಮ್ ಪೋಸ್ಟ್ಗೆ ಮಿಲಿಯನ್ಗಿಂತಲೂ ಹೆಚ್ಚು ಲೈಕ್ಗಳು
Prime Modi ಉಕ್ರೇನ್ ನೊಂದಿಗೆ ಭಾರತವಿದೆ… : 4 ಒಪ್ಪಂದಗಳಿಗೆ ಸಹಿ
First in history; ಡೆಮಾಕ್ರಾಟ್ ಸಭೆಯಲ್ಲಿ ಕನ್ನಡಿಗನ ವೇದ ಘೋಷ
MUST WATCH
ಹೊಸ ಸೇರ್ಪಡೆ
Karkala Case; ಇನ್ಸ್ಟಾಗ್ರಾಮ್ ಪರಿಚಯ… ಅಪಹರಿಸಿ ನೀಚ ಕೃತ್ಯ; ಕಾರ್ಕಳದಲ್ಲಿ ಆಗಿದ್ದೇನು?
Siruguppa: ನಗರದಲ್ಲಿ ಸ್ವಚ್ಛತೆ ಮಾಯ, ಹೆಚ್ಚಿದ ಅನಾರೋಗ್ಯ ಸಮಸ್ಯೆ, ಡೆಂಗಿ ಪ್ರಕರಣ ಪತ್ತೆ
Thekkatte: ಪ್ರಯಾಣಿಕರ ಬಸ್ ತಂಗುದಾಣ ಸ್ಥಳಾಂತರಕ್ಕೆ ಮಹತ್ವದ ನಿರ್ಣಯ ಕೈಗೊಂಡ ಗ್ರಾ.ಪಂ.!
Karkala: ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ; ಇನ್ನೋರ್ವ ಆರೋಪಿ ಬಂಧನ
Kolkata: ಬೈಕ್ ಸವಾರನಿಂದ ಬೆಂಗಾಲಿ ನಟಿ ಪಾಯೆಲ್ ಮುಖರ್ಜಿ ಮೇಲೆ ಹಲ್ಲೆ, ಕಾರು ಧ್ವಂಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.