Mangaluru: ಚಡ್ಡಿಗ್ಯಾಂಗ್‌ ಸಿಕ್ಕಿಬಿದ್ದರೂ ತಪ್ಪದ ಕಳ್ಳರ ಭೀತಿ!

ಕನಿಷ್ಠ 5 ಮಂದಿ ಆರೋಪಿಗಳ ಬಂಧನ ಇನ್ನೂ ಬಾಕಿ ಇದೆ.

Team Udayavani, Jul 28, 2024, 2:10 PM IST

Mangaluru: ಚಡ್ಡಿಗ್ಯಾಂಗ್‌ ಸಿಕ್ಕಿಬಿದ್ದರೂ ತಪ್ಪದ ಕಳ್ಳರ ಭೀತಿ!

ಮಹಾನಗರ: ನಗರದಲ್ಲಿ ಇತ್ತೀಚೆಗೆ ದರೋಡೆ, ಕಳ್ಳತನಗಳನ್ನು ನಡೆಸಿ ಆತಂಕ ಮೂಡಿಸಿದ್ದ “ಚಡ್ಡಿಗ್ಯಾಂಗ್‌’ನ  ಬಂಧನವಾಗಿದ್ದರೂ ಕಳ್ಳರ ಕುರಿತಾದ ಆತಂಕ ಪೂರ್ಣ ದೂರವಾಗಿಲ್ಲ. ಚಡ್ಡಿಗ್ಯಾಂಗ್‌ನ ನಾಲ್ವರು ಸದಸ್ಯರು ಹಾಗೂ ಇತರ ನಾಲ್ವರು ಕಳ್ಳರ ಬಂಧನವಾದ ಬಳಿಕವೂ ಎರಡು ಕಡೆ ಕಳವು ಯತ್ನ, ಒಂದು ಕಡೆ ಕಳವು ಪ್ರಕರಣ ನಡೆದಿದ್ದು ಅದನ್ನು ಭೇದಿಸುವುದು ಸಾಧ್ಯವಾಗಿಲ್ಲ.

ಮನೆ ಕಳವು ಪ್ರಕರಣ
ಬಿಜೈ ನ್ಯೂರೋಡ್‌ ಮನೆಯೊಂದರಲ್ಲಿ ಮನೆಯವರು ಇಲ್ಲದ ಸಮಯ ಕಳ್ಳತನ ನಡೆದಿತ್ತು. ಇದು ಜು. 14ರಂದು ಗೊತ್ತಾಗಿತ್ತು. ಪೊಲೀಸರ ಪ್ರಕಾರ ಇಲ್ಲಿನ ಕೃತ್ಯಕ್ಕೂ ಚಡ್ಡಿಗ್ಯಾಂಗ್‌ ಇತರ ಕೆಲವೆಡೆ ಕೃತ್ಯಕ್ಕೂ ಸಾಮ್ಯತೆ ಇರಲಿಲ್ಲ. ಈ ಪ್ರಕರಣ ಭೇದಿಸಲು ಸಾಧ್ಯವಾಗಿಲ್ಲ.

ಎರಡು ಕಡೆ ಕಳವು ಯತ್ನ
ಜು. 20ರ ತಡರಾತ್ರಿ ಪದವಿನಂಗಡಿ ಸಮೀಪದ ಮನೆಯೊಂದರಲ್ಲಿ ಮನೆಯವರು ಒಳಗೆ ಮಲಗಿದ್ದಾಗ ಕಳ್ಳರ ತಂಡ ಬಾಗಿಲು ಒಡೆಯಲು ಯತ್ನಿಸಿತ್ತು. ಅದೇ ದಿನ ಪದವಿನಂಗಡಿ ಪೆರ್ಲಗುರಿಯಲ್ಲಿ ದೇವಸ್ಥಾನದ ಪರಿಸರದಲ್ಲಿ ಕಳ್ಳರ ತಂಡ ಕಳವಿಗೆ ಹೊಂಚು ಹಾಕುತ್ತಿರುವುದನ್ನು ಸಾರ್ವಜನಿಕರು ನೋಡಿದ್ದರು.

ಉಳಾಯಿಬೆಟ್ಟು ಪ್ರಕರಣ: ಬಾಕಿ ಉಳಾಯಿಬೆಟ್ಟಿನ ಪೆರ್ಮಂಕಿಯಲ್ಲಿ ಉದ್ಯಮಿಯ ಮನೆಯಲ್ಲಿ ನಡೆದಿದ್ದ ದರೋಡೆ
ಪ್ರಕರಣದಲ್ಲಿ 10 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಆ ಕೃತ್ಯದಲ್ಲಿ ಮತ್ತಷ್ಟು ಮಂದಿ ಪಾಲ್ಗೊಂಡಿದ್ದರು ಎಂಬುದು
ತನಿಖೆ ವೇಳೆ ಗೊತ್ತಾಗಿತ್ತು. ಕನಿಷ್ಠ 5 ಮಂದಿ ಆರೋಪಿಗಳ ಬಂಧನ ಇನ್ನೂ ಬಾಕಿ ಇದೆ.

ಚಡ್ಡಿ ಗ್ಯಾಂಗ್‌ ಹೆಸರಲ್ಲಿ ಬೇರೆ ಕಳ್ಳರ ಕೃತ್ಯ?
ಚಡ್ಡಿಗ್ಯಾಂಗ್‌ನ ನಾಲ್ಕು ಮಂದಿಯನ್ನು ಬಂಧಿಸಿದಾಗ ಆ ಗ್ಯಾಂಗ್‌ನಲ್ಲಿ ಇನ್ನಷ್ಟು ಸದಸ್ಯರಿರುವ ಬಗ್ಗೆ ಗುಮಾನಿ ವ್ಯಕ್ತವಾಗಿತ್ತು. ಇದಕ್ಕೆ ಪೂರಕವಾಗಿ ಚಡ್ಡಿಗ್ಯಾಂಗ್‌ ಕೋಡಿಕಲ್‌ನಲ್ಲಿ ನಡೆಸಿದ್ದ ಕೃತ್ಯದಲ್ಲಿ 5 ಮಂದಿ ಪಾಲ್ಗೊಂಡಿದ್ದು, ಸಿಸಿ ಕೆಮರಾ ದೃಶ್ಯದಲ್ಲಿ ಸೆರೆಯಾಗಿತ್ತು. ಆದರೆ ಅನಂತರ 5ನೇ ವ್ಯಕ್ತಿಯಾಗಲಿ, ಚಡ್ಡಿಗ್ಯಾಂಗ್‌ನ ಇತರ ಸದಸ್ಯರು ಅಥವಾ ಬೇರೊಂದು ತಂಡದ ಪತ್ತೆಯಾಗಿಲ್ಲ.

ಬಂಧಿತವಾಗಿರುವ ಚಡ್ಡಿಗ್ಯಾಂಗ್‌ನ ಇತರ ಸದಸ್ಯರು ಮತ್ತಷ್ಟು ಕೃತ್ಯಗಳನ್ನು ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆಯೇ ಅಥವಾ ಚಡ್ಡಿಗ್ಯಾಂಗ್‌ನ ಇನ್ನೊಂದು ತಂಡ ಕಳವು ಕೃತ್ಯಗಳನ್ನು ಮುಂದುವರಿಸುತ್ತಿದೆಯೇ? ಚಡ್ಡಿಗ್ಯಾಂಗ್‌ ಮೇಲೆ ಪೊಲೀಸರು, ಜನರು ಗಮನ ಕೇಂದ್ರೀಕರಿಸುತ್ತಿರುವ ಈ ಸಂದರ್ಭವನ್ನು ಬಳಸಿಕೊಂಡು ಇತರ ತಂಡಗಳು ಕಳವಿಗೆ ಯತ್ನಿಸುತ್ತಿವೆಯೇ ಎಂಬ ಸಂಶಯಗಳು ಕೂಡ ವ್ಯಕ್ತವಾಗಿದೆ.

ಟಾಪ್ ನ್ಯೂಸ್

police crime

Kolkata; ಟ್ರೈನಿ ವೈದ್ಯೆ ಕೇಸು:1 ಕಿ.ಮೀ. ಬರಲು ಪೊಲೀಸರಿಗೆ 1ತಾಸು!

Priyank Kharge: ಇಂದು ಕಲಬುರಗಿಯಲ್ಲಿ ಸಿಎಂ ಸಿದ್ದು ನೇತೃತ್ವದಲ್ಲಿ ಸಂಪುಟ ಸಭೆ

Priyank Kharge: ಇಂದು ಕಲಬುರಗಿಯಲ್ಲಿ ಸಿಎಂ ಸಿದ್ದು ನೇತೃತ್ವದಲ್ಲಿ ಸಂಪುಟ ಸಭೆ

Census

Census ಈ ಬಾರಿ ಜಾತಿ ಕಾಲಂ ಸೇರ್ಪಡೆಗೆ ಕೇಂದ್ರ ಸರಕಾರ‌ ಚಿಂತನೆ?

Namma-clinic

Karnataka; ಬಸ್‌ ನಿಲ್ದಾಣಗಳಲ್ಲಿ ನಮ್ಮ ಕ್ಲಿನಿಕ್‌ ಸಮುಚಿತ ನಿರ್ಧಾರ

Dinesh-Meeting

Bengaluru: ನಿಫಾಗೆ ಬಲಿಯಾದ ವಿದ್ಯಾರ್ಥಿಯ ಸಂಪರ್ಕದಲ್ಲಿದ್ದ 25 ಮಂದಿ ಪತ್ತೆ

PUNJALAKATTE

Punjalkatte: ಆರ್‌ಎಎಫ್ ಪೊಲೀಸರಿದ್ದ ಲಾರಿ ಪಲ್ಟಿ , ಇಬ್ಬರಿಗೆ ಗಾಯ

-archana-kamath

Liver transplant: ಲಿವರ್‌ ದಾನದ ಬಳಿಕ ಉಪನ್ಯಾಸಕಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

water

Mudubidire: 77 ಕೋ.ರೂ. ವೆಚ್ಚದ ಅಮೃತ್‌ 2.0 ನೀರಿನ ಯೋಜನೆಗೆ ಚಾಲನೆ

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Surathkal: ಕಾಟಿಪಳ್ಳ ಮಸೀದಿ ಕಲ್ಲು ತೂರಾಟ ವಿಚಾರ; ನಾಲ್ವರನ್ನು ಬಂಧಿಸಿದ ಪೊಲೀಸರು

Surathkal: ಕಾಟಿಪಳ್ಳ ಮಸೀದಿಗೆ ಕಲ್ಲು: 6 ಮಂದಿ ಸೆರೆ

Suratkal: ಕಿಡಿಗೇಡಿಗಳಿಂದ ಮಸೀದಿಗೆ ಕಲ್ಲು ತೂರಾಟ, ಪ್ರಕರಣದಾಖಲು

Surathkal: ಬೈಕ್ ನಲ್ಲಿ ಬಂದು ಮಸೀದಿಗೆ ಕಲ್ಲು ಬಿಸಾಡಿದ ಕಿಡಿಗೇಡಿಗಳು… ಪ್ರಕರಣ ದಾಖಲು

DK-Human-Chian

Democracy Day: ದಕ್ಷಿಣ ಕನ್ನಡ: 130 ಕಿ.ಮೀ. ವ್ಯಾಪ್ತಿಯಲ್ಲಿ 84,200 ಮಂದಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

police crime

Kolkata; ಟ್ರೈನಿ ವೈದ್ಯೆ ಕೇಸು:1 ಕಿ.ಮೀ. ಬರಲು ಪೊಲೀಸರಿಗೆ 1ತಾಸು!

Priyank Kharge: ಇಂದು ಕಲಬುರಗಿಯಲ್ಲಿ ಸಿಎಂ ಸಿದ್ದು ನೇತೃತ್ವದಲ್ಲಿ ಸಂಪುಟ ಸಭೆ

Priyank Kharge: ಇಂದು ಕಲಬುರಗಿಯಲ್ಲಿ ಸಿಎಂ ಸಿದ್ದು ನೇತೃತ್ವದಲ್ಲಿ ಸಂಪುಟ ಸಭೆ

Census

Census ಈ ಬಾರಿ ಜಾತಿ ಕಾಲಂ ಸೇರ್ಪಡೆಗೆ ಕೇಂದ್ರ ಸರಕಾರ‌ ಚಿಂತನೆ?

1-eewqe

‘Wrestling Champions Super League’: ಅನುಮತಿ ನೀಡಲು ನಕಾರ

1-gread

Manipur ಸಚಿವ ಖಶಿಮ್‌ ಮನೆ ಮೇಲೆ ಗ್ರೆನೇಡ್‌ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.